ಲೇಖಕ: admin

ಮಡಿಕೇರಿ ಡಿ.27 :  ಲಾರಿ ಮಾಲೀಕರು ಮತ್ತು ಚಾಲಕರ ಸಂಘದ 30ನೇ ವಾರ್ಷಿಕ ಮಹಾಸಭೆಯು ನಗರದ  ಬಾಲ ಭವನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಸಂಘದ ಕಾನೂನು ಸಲಹೆಗಾರ  ಅಚ್ಚಾಂಡಿರ ಪವನ್ ಪೆಮ್ಮಯ್ಯ ಮತ್ತು ಮಡಿಕೇರಿ ನಗರ ಸಭೆಯ ಮಾಜಿ ಸದಸ್ಯ ಸತೀಶ್ ಪೈ  ಪಾಲ್ಗೊಂಡು ಮಾತನಾಡಿ ಸಲಹೆ, ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಸಂಘದ ಅಧ್ಯಕ್ಷ  ಬಾರಿಕೆ ಜಿ ಮೋಹನ್, ಉಪಾಧ್ಯಕ್ಷ ಕೆ.ವಿ.ಮಣಿ, ಕಾರ್ಯದರ್ಶಿ ಮಹಮ್ಮದ್ ಆಲಿ , ಖಜಾಂಚಿ  ಪಿ.ಡಿ .ಚಂದ್ರ ಮತ್ತು ಗೌರವ ಅಧ್ಯಕ್ಷ  ತಿಮ್ಮಣ್ಣ ರೈ ಹಾಗೂ ಸದಸ್ಯರು ಹಾಜರಿದ್ದರು.  ಸದಸ್ಯರಾದ ಶ್ರೀನಿವಾಸ್ ಲೆಕ್ಕ ಪತ್ರ ಮಂಡಿಸಿದರು.    ಸಭೆಯಲ್ಲಿ ಸಂಘದ ನೂತನ ಉಪಾಧ್ಯಕ್ಷರಾಗಿ ವಿನೋದ್ ಅವರನ್ನು ಆಯ್ಕೆ ಮಾಡಲಾಯಿತು.

Read More

ಮಡಿಕೇರಿ ಡಿ.27 : ಹಿಂದೂ ಸಂಘಟನೆಯ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕೊಡಗು ಜಿಲ್ಲಾ ವುಮೆನ್ ಇಂಡಿಯಾ ಮೂವ್ ಮೆಂಟ್ ಸಂಘಟನೆಯ ಅಧ್ಯಕ್ಷೆ ಸಲಿಕತ್ ಎಂ.ಇ ದೂರು ನೀಡಿದ್ದಾರೆ. ಮುಸ್ಲಿಂ ಮಹಿಳೆಯರು ಹಾಗೂ ಯುವತಿಯರನ್ನು ಅವಮಾನಿಸಿದ ಮತ್ತು ಅಶಾಂತಿಗೆ ಪ್ರಚೋದನೆ ನೀಡುತ್ತಿರುವ ಆರೋಪದಡಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲವ್ ಜಿಹಾದ್ ಕುರಿತು ಉಲ್ಲೇಖಿಸಿ ಮುಸ್ಲಿಂ ಯುವತಿಯರನ್ನು ಅವಮಾನಿಸಿದ್ದಾರೆ. ತ್ರಿವಳಿ ತಲಾಕ್ ರದ್ದುಪಡಿಸಿರುವ ಕ್ರಮವನ್ನು ಪ್ರಸ್ತಾಪಿಸಿ ಮಹಿಳೆಯರ ವೈವಾಹಿಕ ಜೀವನದ ಕುರಿತು ಅತ್ಯಂತ ಕೀಳಾಗಿ ಮಾತನಾಡಿದ್ದಾರೆ. ದೇಶದ್ರೋಹದ ಆರೋಪ ಹೊರಿಸುವ ಮೂಲಕ ಮುಸ್ಲಿಂ ಸಮುದಾಯದ ಸಾಂವಿಧಾನಿಕವಾದ ಬದುಕುವ ಹಕ್ಕಿನ ಮೇಲೆ ದಾಳಿಗೆ ಪ್ರಚೋದಿಸುವ ಕೃತ್ಯ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಸಾವಿರ ಕೋಟಿ ರೂ.ಗಳನ್ನು ಮುಸ್ಲಿಮರಿಗೆ ಮೀಸಲಿಟ್ಟಿದ್ದಾರೆ ಎಂದು ಅಪಪ್ರಚಾರ ಮಾಡುವ ಮೂಲಕ ಮುಸಲ್ಮಾನರ ಮೇಲೆ ಇತರ…

Read More

ವಿರಾಜಪೇಟೆ ಡಿ.27 : ವಿಕಲಚೇತನರು ಸರಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಎಚ್ಚರ ವಹಿಸಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಮಂಜುನಾಥ್ ಹೇಳಿದರು. ಅಂತರಾಷ್ಟ್ರಿಯ ವಿಕಲಚೇತನರ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ” ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನದಲ್ಲಿ ಸಾಧನೆಯೇ ಮುಖ್ಯ ಗುರಿಯಾಗಿರಬೇಕು. ಸಂವಿಧಾನ ಹಕ್ಕುಗಳನ್ನು ರಕ್ಷಣೆ ಮಾಡುತ್ತದೆ. ವಿಕಲಚೇತನರನ್ನು ಮುಂದೆ ತರಬೇಕೆನ್ನುವ ಉದ್ದೇಶದಿಂದ ಇಂತ ಕಾರ್ಯಕ್ರಮ ನಡೆಸಲಾಗುತ್ತದೆ. ಹಕ್ಕುಗಳು ಉಲ್ಲಂಘನೆಯಾಗದಂತೆ ಕಾನೂನಿನ ಅರಿವು ಪ್ರತಿಯೋಬ್ಬರು ತಿಳಿದುಕೊಳ್ಳಬೇಕು, ಎಲ್ಲಾ ಜನರಿಗೂ ಸಮಾನ ಹಕ್ಕು ದೊರಕುವಂತಾಗಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಅಧಿಕಾರಿ ರೀತಾ ಮಾತನಾಡಿ, ವಿಕಲಚೇತನರ ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಜ್ಞಾನವನ್ನು ರೂಡಿಸಿಕೊಂಡು ತಮ್ಮ ಹಕ್ಕು ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು.…

Read More

ಮಡಿಕೇರಿ ಡಿ.27 :  ಎಲ್ಲರೂ ಒಗ್ಗೂಡುವ ಮೂಲಕ ಕ್ರೀಡೆಯಿಂದ ಸೌಹಾರ್ದತೆ ಬೆಳೆಯಲಿ ಎಂದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಎಸ್.ಐ ಪಿ.ಜಿ.ರಾಘವೇಂದ್ರ  ಅಭಿಪ್ರಾಯಪಟ್ಟರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲುಗುಂದ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿ ಸಂಘ, ಭಗವತಿ ಯೂತ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್  ಸಂಯುಕ್ತಾಶ್ರಯದಲ್ಲಿ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಗವತಿ ಫುಟ್ಬಾಲ್ ‌ಕಪ್ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡೆಯಲ್ಲಿ ಯಾರೂ ಕೂಡ ದ್ವೇಷ ಬೆಳೆಸಬಾರದು. ಸೌಹಾರ್ದತೆಯಿಂದ  ಭಾಗವಹಿಸಬೇಕೆಂದು  ಸಲಹೆ ನೀಡಿದರು. ವೈಷ್ಣವಿ ಯುವಕ ಸಂಘ ಮರಗೋಡು ಎ ಹಾಗೂ ಚೌಡೇಶ್ವರಿ ಅಮ್ಮತ್ತಿ ತಂಡಗಳ ನಡುವೆ ನಡೆದ  ಉದ್ಘಾಟ ನಾ  ಪಂದ್ಯದಲ್ಲಿ 3-2 ಗೋಲುಗಳ ಅಂತರದಿಂದ ವೈಷ್ಣವಿ ತಂಡ ಗೆಲುವು ಸಾಧಿಸಿತು. ಎರಡನೇ ಪಂದ್ಯವು ಚಾಮುಂಡಿ ಎಫ್.ಸಿ ಒಂಟಿಯಂಗಡಿ ಹಾಗೂ ಸ್ಕಿಪ್ಪರ್ಸ್ ಎಫ್.ಸಿ ಪೊನ್ನಂಪೇಟೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಒಂಟಿಯಂಗಡಿ ತಂಡವು 5-1 ಗೋಲುಗಳ ಅಂತರದಿಂದ ಗೆಲುವು ಪಡೆಯಿತು.ಮೂರನೇ ಪಂದ್ಯವು ಕ್ಯಾಪ್ಟನ್ಸ್…

Read More

ಸುಂಟಿಕೊಪ್ಪ ಡಿ.27 : ನಾಕೂರು, ಶಿರಂಗಾಲ, ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ 2023-24ನೇ ಸಾಲಿನ ಅಧ್ಯಕ್ಷರಾಗಿ ಬಿ.ವಿ.ವಸಂತ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಂ.ಶಂಕರನಾರಾಯಣ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಟಿ.ಕೆ.ಚಂದ್ರು, ಸಹ ಕಾರ್ಯದರ್ಶಿಯಾಗಿ ಎಚ್.ಎಂ.ಹರೀಶ, ಖಜಾಂಚಿಯಾಗಿ ಕೆ.ಎಚ್.ವಿನೋದ್ ನೇಮಕಗೊಂಡಿದ್ದು, ಕ್ರೀಡಾ ಕಾರ್ಯದರ್ಶಿಗಳಾಗಿ ಅಶೋಕ(ದೇವೆಂದ್ರ), ಕೆ.ಟಿ.ವಿಜೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಿ.ಬಿ.ಪ್ರವೀಣ್ ಕುಮಾರ್, ಪಿ.ಕೆ.ದಿನೇಶ್, ಗೌರವಧ್ಯಕ್ಷರಾಗಿ ವಿ.ಟಿ.ಚಂದ್ರಶೇಖರ್(ಚಂದ್ರು), ನಿರ್ದೇಶಕರುಗಳಾಗಿ ಪಿ.ಟಿ.ಪೌಲಸ್, ಪಿ.ಎಸ್.ಅಜಿಕುಮಾರ್, ಕೆ.ಜಿ.ಜಗದೀಶ್, ಕೆ.ಎಸ್.ಮಹಮ್ಮದ್, ಎಂ.ಕೆ.ಕುಂಞಕೃಷ್ಣ, ಕಿಟ್ಟಣ್ಣ ರೈ ಆಯ್ಕೆಯಾಗಿದ್ದಾರೆ.

Read More

ನಾಪೋಕ್ಲು ಡಿ.27 : ಯವಕಪಾಡಿ ಗ್ರಾಮದ ನಿವಾಸಿ ಆದಿವಾಸಿ, ಹೋರಾಟಗಾರ ಕುಡಿಯರ ಮುತ್ತಪ್ಪ ಅವರು ರಾಜ್ಯಮಟ್ಟದ ಕೊರವಂಜಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಡ್ಯ ಜಿಲ್ಲಾ ಕುಳುವ ಸಮಾಜ ಹಾಗೂ ಡ್ರೀಮ್ ಫೌಂಡೇಶನ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಡಿ.28 ರಂದು ಮಂಡ್ಯದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಕೊರವಂಜಿ ಸಂಸ್ಕೃತಿ ಉತ್ಸವದಲ್ಲಿ ಮುತ್ತಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ. ವರದಿ : ದುಗ್ಗಳ ಸದಾನಂದ 

Read More

ನಾಪೋಕ್ಲು ಡಿ.27 : ಹೊದ್ದೂರು ಮತ್ತು ಹೊಸ್ಕೇರಿ ಗ್ರಾಮ ಪಂಚಾಯತಿ ಪಿಡಿಒ ಎ.ಎ.ಅಬ್ದುಲ್ಲ ಅವರಿಗೆ ಅತ್ಯುತ್ತಮ ಪಿಡಿಒ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಬೆಂಗಳೂರು ವತಿಯಿಂದ ಕರ್ನಾಟಕ ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್ ಜನ್ಮ ದಿನದ ಅಂಗವಾಗಿ ನಜೀರ್ ಸಾಬರ ಹುಟ್ಟೂರು ಗುಂಡ್ಲುಪೇಟೆಯಲ್ಲಿ ನಡೆದ ಪಂಚಾಯತ್ ಸಬಲೀಕರಣ ದಿನಾಚರಣೆ ಸಮಾರಂಭದಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ ನಾರಾಯಣಸ್ವಾಮಿ, ಮಾಜಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಡಿ.ಆರ್.ಪಾಟೀಲ್, ವೆಂಕಟರಾವ್ ವೈ ಘೋರ್ಪಡೆ, ಕಾಡ ಶೆಟ್ಟಹಳ್ಳಿ ಸತೀಶ್, ಗಣೇಶ್ ಪ್ರಸಾದ್, ಗುಂಡ್ಲುಪೇಟೆ ಶಾಸಕರು, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪಿಡಿಓ ಗಳಿಗೆ ಕರ್ನಾಟಕ ಪಂಚಾಯತ್ ಪರಿಷತ್ ಡಾ. ಚಿಕ್ಕಕೋಮಾರಿ ಗೌಡ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಸ್ತುತ ಮಡಿಕೇರಿ ತಾಲ್ಲೂಕಿನ ಹೊದ್ದೂರು ಮತ್ತು ಹೊಸ್ಕೇರಿ ಗ್ರಾ.ಪಂ ಪಿಡಿಒ ಆಗಿರುವ ಎ.ಎ.ಅಬ್ದುಲ್ಲ ಅವರು ಈ ಹಿಂದೆ 2010-2019 ರವರಿಗೆ…

Read More

ಮಡಿಕೇರಿ ಡಿ.27 : ಕುಶಾಲನಗರದ ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ  ಕ್ರಿಸ್‌ಮಸ್ ಹಬ್ಬವನ್ನು  ಸಂಭ್ರಮದಿಂದ ಆಚರಿಸಲಾಯಿತು. ಯುವಕ ಸಂಘದಿಂದ  ನಿರ್ಮಿಸಲಾದ  ಗೋದಲಿಯಲ್ಲಿ ಧರ್ಮ ಕೇಂದ್ರದ ಗುರುಗಳಾದ ಎಂ.ಮಾರ್ಟಿನ್  ಬಾಲಯೇಸುವಿನ ಬಾಲಯೇಸುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ,  ಶಾಂತಿಯ ಸಂದೇಶವನ್ನು ಸಾರಿದರು. ಕ್ರಿಸ್ಮಸ್ ಕ್ಯಾರೋಲ್ಸ್ ಮತ್ತು ದಿವ್ಯ ಬಲಿಪೂಜೆಯ ನಂತರ ಗೋದಲಿಯಲ್ಲಿ ಪ್ರತಿಷ್ಠಾಪಿಸಿದ ಬಾಲಯೇಸುವಿಗೆ ಪುಷ್ಪನಮನ ಸಲ್ಲಿಸಿದರು. ಸಾವಿರಾರು ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮೊಂಬತ್ತಿ ಬೆಳಗಿ, ಸಿಹಿ ಹಂಚಿ ಸಂಭ್ರಮಿಸಿದರು.

Read More

ವಿರಾಜಪೇಟೆ ಡಿ.27 : ವಿರಾಜಪೇಟೆಯ ಮಗ್ಗುಲ ಲಿಟಲ್ ಸ್ಕಾಲರ್ರ್ಸ್ ಅಕಾಡೆಮಿ ಆಂಗ್ಲ ಮಾದ್ಯಮ ಶಾಲೆ ವತಿಯಿಂದ ಜ.6 ರಂದು ಬಿಟ್ಟಂಗಾಲದಲ್ಲಿ ಪ್ರಥಮ ಬಾರಿಗೆ ಸಾಂಸ್ಕೃತಿಕ ಉತ್ಸವ ಮತ್ತು ಪ್ರತಿಭಾನ್ವೇಷಣೆ ಕಾರ್ಯಕ್ರಮ “ಚಿಣ್ಣರ ಕಲಾ ಕೂಟ” ನಡೆಯಲಿದೆ ಎಂದು ಲಿಟಲ್ ಸ್ಕಾಲರ್ರ್ಸ್ ಅಕಾಡೆಮಿ ಆಂಗ್ಲ ಮಾದ್ಯಮ ಶಾಲೆ ಅಧ್ಯಕ್ಷರಾದ ಪೂಜಾ ಸಜೇಶ್ ಹೇಳಿದರು. ಶಾಲೆಯ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಲಿಟಲ್ ಸ್ಕಾಲರ್ಸ್ ಅಕಾಡೆಮಿ ಆಂಗ್ಲ ಮಾದ್ಯಮ ಶಾಲೆ ಮತ್ತು ಇಂಟೋಪೀಸ್ ಡಾನ್ಸ್ ಸ್ಟುಡಿಯೊ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಜ.6 ರಂದು ಬಿಟ್ಟಂಗಾಲದಲ್ಲಿರುವ ಯಜ್ನ ಟವರ್ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ಮಕ್ಕಳಲ್ಲಿ ಭಿನ್ನತೆಯಲ್ಲಿ ಏಕತೆಯನ್ನು ಕಾಣುವ ಉದ್ದೇಶದಿಂದ ಆಂಗ್ಲ ಮಾದ್ಯಮ ಶಾಲೆ ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ ಸಮಾನತೆಯ ಚಿತ್ರಣವನ್ನು ಬಿಂಬಿಸುವುದು, ಅಂಗನವಾಡಿ ಶಾಲೆಯಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಯನ್ನು ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಚಿಣ್ಣರ ಕಲರವ-2 ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಎಲ್.ಕೆ.ಜಿಯಿಂದ ಯು.ಕೆ.ಜಿವರೆಗೆ ಪಾಶ್ಚಾತ್ಯ ಫ್ಯಾಷನ್ ಶೋ,…

Read More

ವಿರಾಜಪೇಟೆ ಡಿ.27 :  ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ಅವರ ಆದರ್ಶವನ್ನು ಪಾಲಿಸಬೇಕು ಎಂದು ಸರ್ವೋದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಖಜಾಂಚಿ ಕೆ.ವಾಸಂತಿ ಹೇಳಿದರು. ವಿರಾಜಪೇಟೆ ಪಂಜಾರುಪೇಟೆಯಲ್ಲಿರುವ ಸರ್ವೋದಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಬಿಳಿ ಮಗ್ಗ ಸಮಾಜ ದಕ್ಷಿಣ ಕೊಡಗು’ ಇದರ ನಾಲ್ಕನೇ ವರ್ಷದ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,   ಹೆಣ್ಣು ಮಕ್ಕಳು ಸುಶಿಕ್ಷಿತರಾಗಬೇಕು. ಹೆಣ್ಣೊಂದು ಕಲಿತರೆ ಶಾಲೆಯೋಂದು ತೆರೆದಂತೆ ಪ್ರತಿಯೋಂದು ಹೆಣ್ಣು ಮಗು ವಿದ್ಯಾವಂತರಾಗಿ ಉನ್ನತ ಹುದ್ದೆಗೇರುವ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತಾಗಬೇಕು. ಈ ಹಿಂದೆ ಹಿರಿಯರಾದ ಬಿ.ವಿ.ರಮಣ ಅವರು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸರ್ವೋದಯ ಎಂಬ ಹೆಸರಿಟ್ಟರು ಈ ಸಂಸ್ಥೆಯಲ್ಲಿ ಸಾವಿರಾರು ಹೆಣ್ಣುಮಕ್ಕಳು ವಿದ್ಯೆ ಕಲಿತು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.ಗೋಣಿಕೊಪ್ಪಲು ಚೆಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ಬಿಳಿ ಮಗ್ಗ ಸಮಾಜದ ಸದಸ್ಯರು ಸಂಘಟನೆಯನ್ನು ಉತ್ತಮವಾಗಿ ನಡೆಸಲು ಕಾರ್ಯಪ್ರವೃತ್ತರಾಗಬೇಕು. ಸಂಘಟನೆಯ ಮೂಲಕ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗೆ…

Read More