ನಾಪೋಕ್ಲು ಜ.22 : NEWS DESK : ಯೂನಿಯನ್ ಬ್ಯಾಂಕ್ ನ ವತಿಯಿಂದ ಬೆಟ್ಟಗೇರಿಯ ಉದಯ ಶಾಲೆಯ ಸಭಾಂಗಣದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ನಡೆಯಿತು. ಗ್ರಾ.ಪಂ ಅಧ್ಯಕ್ಷ ಚಳಿಯಂಡ ಕಮಲ ಉತ್ತಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸೌಲಭ್ಯಗಳ ಕುರಿತು ಸ್ವಸ್ತಿಕ್ ತುಮಕೂರು, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಬಿನೋದ್ ಬ್ಯಾಂಕ್ ನಲ್ಲಿ ದೊರಕುವ ಸಾಲ ಸೌಲಭ್ಯಗಳು ಹಾಗೂ ವಿಮಾ ಪಾಲಿಸಿಗಳ ಬಗ್ಗೆ ಮಾಹಿತಿ ನೀಡಿದರು. ವಿಜಯ ವಿನಾಯಕ ಗ್ಯಾಸ್ ಎಂಜನ್ಸಿಯ ವ್ಯವಸ್ಥಾಪಕ ಎನ್.ಕೆ.ನಿರ್ಮಲ ಉಜ್ವಲ ಯೋಜನೆಯ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉದಯ ಮಾತನಾಡಿ, ಹಸಿ ಕಸ-ಒಣ ಕಸ ಹಾಗೂ ಸ್ಯಾನಿಟರಿ ಕಸದ ವಿಲೇವಾರಿ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಜನರಿಗೆ ಆಯುಷ್ಮಾನ್ ಭಾರತ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ದೀನ್ ದಯಾಳ್ ಅಂತ್ಯೋದಯ ಯೋಜನೆ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಪ್ರಧಾನಮಂತ್ರಿ ಕಿಸಾನ್…
ಲೇಖಕ: admin
NEWS DESK *ಭಾರತದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ* (ನಾಪಂಡ ರವಿ ಕಾಳಪ್ಪ, ಅಧ್ಯಕ್ಷರು, ಕೊಡಗು ಜಿಲ್ಲಾ ಬಿಜೆಪಿ)
NEWS DESK *ಹಿಂದೂಗಳ ಹೆಮ್ಮೆಯ ಪ್ರತೀಕ : ಜ.22 ರಾಮದಿನ ಮಹಾದಿನ* (ಸುರೇಶ್ ಮುತ್ತಪ್ಪ, ಕಾರ್ಯಾಧ್ಯಕ್ಷರು, ವಿಶ್ವ ಹಿಂದೂ ಪರಿಷತ್, ಕೊಡಗು ಜಿಲ್ಲೆ)
NEWS DESK *ಜ.22 ಕೋಟ್ಯಾಂತರ ಹಿಂದೂಗಳಿಗೆ ಮಹಾ ಸುದಿನ* (ತೇಲಪಂಡ ಶಿವಕುಮಾರ್ ನಾಣಯ್ಯ, ಕಾರ್ಯಕಾರಿ ಸಮಿತಿ ಸದಸ್ಯರು, ಕೊಡಗು ಜಿಲ್ಲಾ ಬಿಜೆಪಿ)
NEWS DESK *ಕೋಟಿ ಕೋಟಿ ಹಿಂದೂಗಳ ಪೂಜೆ ಫಲಿಸಿದೆ* (ಚೆಪ್ಪುಡಿರ ರಾಕೇಶ್ ದೇವಯ್ಯ, ಅಧ್ಯಕ್ಷರು, ಬಿಜೆಪಿ ಕೃಷಿ ಮೋರ್ಚಾ, ಕಿರುಗೂರು ಘಟಕ)
NEWS DESK *ಶ್ರೀರಾಮ ಅಖಂಡ ಭಾರತದ ಪುರುಷೋತ್ತಮ* (ಸೂದನ ಎಸ್.ಈರಪ್ಪ, ಅಧ್ಯಕ್ಷರು, ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘ)
NEWS DESK *ಶ್ರೀರಾಮನಾಮ ಸ್ಮರಣೆಯೊಂದಿಗೆ ಭವ್ಯ ಭಾರತಕ್ಕಾಗಿ ಸಂಕಲ್ಪ ತೊಡೋಣ*(ಡಾ.ಬಿ.ಸಿ,ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ)
NEWS DESK *ನಾವೆಲ್ಲರೂ ಶ್ರೀರಾಮನಾಮ ಸ್ಮರಣೆಯಲ್ಲಿ ಭಾಗಿಗಳಾಗೋಣ* (ಪ್ರತಾಪ್ ಸಿಂಹ, ಸಂಸದರು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ)
NEWS DESK ಅಯೋಧ್ಯೆಯಲ್ಲಿ ಜ.22ರಂದು ಶ್ರೀಬಾಲರಾಮ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದ್ದು, ಇದು ಭಾರತ ದೇಶದ ಐತಿಹಾಸಿಕ ಕ್ಷಣವಾಗಿದೆ. ಸುಮಾರು 500 ವರ್ಷಗಳ ಹೋರಾಟದ ಫಲವಾಗಿ ಇಂದು ರಾಮನ ಭವ್ಯ ಮಂದಿರ ನಿರ್ಮಾಣವಾಗಿದೆ. ದೇಶದ ಕೋಟ್ಯಾಂತರ ಹಿಂದೂಗಳ ಹಲವು ವರ್ಷಗಳ ಪ್ರಾರ್ಥನೆ ಫಲಿಸಿದೆ ಮತ್ತು ರಾಮನೆಲೆಯ ಕನಸು ನನಸಾಗಿದೆ. ಭಾರತೀಯರಿಗೆ ಮರ್ಯಾದ ಪುರುಷ ಶ್ರೀರಾಮನೇ ಸತ್ಯ, ಶ್ರೀರಾಮನೇ ನಿತ್ಯ. ಇದೇ ಕಾರಣಕ್ಕೆ ಅಯೋಧ್ಯೆಯಲ್ಲೊಂದು ಭವ್ಯ ಮಂದಿರ ನಿರ್ಮಾಣವಾಗಲೇಬೇಕೆಂದು ಸಹಸ್ರ ಸಹಸ್ರ ಮಂದಿ ತನು, ಮನ, ಧನವನ್ನು ತ್ಯಾಗ ಮಾಡಿದ್ದಾರೆ, ಬಲಿದಾನ ಗೈದಿದ್ದಾರೆ. 1989 ರ ನಂತರ ರಾಮಜನ್ಮ ಭೂಮಿ ಹೋರಾಟ ತೀವ್ರಗೊಂಡಿತು, ಹಳ್ಳಿಗಳಲ್ಲಿ ರಾಮನಾಮ ಜಾಗೃತಿ ಕಾರ್ಯಕ್ರಮಗಳು ನಡೆದವು. ಸುಮಾರು 2ಲಕ್ಷಕ್ಕೂ ಅಧಿಕ ಗ್ರಾಮಗಳಿಂದ ರಾಮನಾಮದ ಇಟ್ಟಿಗೆಗಳನ್ನು ಸಂಗ್ರಹಿಸಿ ಅಯೋಧ್ಯೆಗೆ ಕಳುಹಿಸಲಾಯಿತು. ಈ ಹೋರಾಟದಲ್ಲಿ ಕೊಡಗು ಜಿಲ್ಲೆಯ ಜನ ಕೂಡ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೋಟಿ ಕೋಟಿ ಹಿಂದೂಗಳ ಭಕ್ತಿಯ ಪ್ರತೀಕವಾಗಿ ಇಂದು ಎರಡು ಅಂತಸ್ತಿನ ಭವ್ಯ ರಾಮಮಂದಿರ ನಿರ್ಮಾಣಗೊಂಡಿದೆ. ಶ್ರೀಬಾಲರಾಮನ ಪ್ರತಿಷ್ಠಾಪನೆಯಾಗುತ್ತಿದೆ,…
ಸೋಮವಾರಪೇಟೆ ಜ.21 NEWS DESK : ದಿ.ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಸ್ಥಳೀಯ ಸಾಕಮ್ಮನ ಬಂಗಲೆ ಮೈದಾನದಲ್ಲಿ ನಡೆದ 37ನೇ ವರ್ಷದ ರಾಜ್ಯ ಮ್ಟಟದ ಕಬಡ್ಡಿ ಪ್ರಶಸ್ತಿಯನ್ನು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ತಂಡ ಪಡೆದುಕೊಂಡಿತು. ನಗದು ಮತ್ತು ಪ್ರತಿಷ್ಠಿತ ಟ್ರೋಫಿಯನ್ನು ಪ್ರದಾನ ಮಾಡಲಾಯಿತು. ದ್ವಿತೀಯ ಸ್ಥಾನವನ್ನು ವಾಲ್ನೂರು ಅಜಿತ್ ಫ್ರೆಂಡ್ಸ್ ತಂಡ ಹಾಗು ತೃತೀಯ ಸ್ಥಾನವನ್ನು ಅರುಣ್ ಫ್ರೆಂಡ್ಸ್ ತಂಡ ಪಡೆಯಿತು. 20 ವರ್ಷದೊಳಗಿನ ವಿಭಾಗದಲ್ಲಿ ಸೋಮವಾರಪೇಟೆ ಜೀವನ್ ಫ್ರೆಂಡ್ಸ್ ತಂಡ ಪ್ರಥಮ, ಸೋಮವಾರಪೇಟೆ ರಾಮದೂತ ಬಿ ತಂಡ ದ್ವಿತೀಯ, ಶನಿವಾರಸಂತೆ ಅಜಿತ್ ಫ್ರೆಂಡ್ಸ್ ತಂಡ ತೃತೀಯ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಗುತ್ತಿಗೆದಾರ ರವಿ ತಲ್ತಾರೆ, ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಬಹುಮಾನ ವಿತರಿಸಿದರು. ಪ್ರಮುಖರಾದ ಮಧುಸೂದನ, ಎಚ್.ಪಿ.ರಾಜಪ್ಪ ಪುನಿತ್, ಮನೋಜ್, ಮಣೀಕಂಠ ಇದ್ದರು.






