ಲೇಖಕ: admin

ನಾಪೋಕ್ಲು ಸೆ.29 : ನಾಪೋಕ್ಲು ಲಯನ್ಸ್ ಮತ್ತು ಲಿಯೋ ಸಂಸ್ಥೆಗೆ ಪ್ರಾಂತೀಯ ಅಧ್ಯಕ್ಷ ಭೇಟಿ ಸಮಾರಂಭ ನಡೆಯಿತು. ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಸಮಾರಂಭದಲ್ಲಿ ನಿವೃತ್ತ ಉಪ ಪ್ರಾಂಶುಪಾಲೆ ಪಿ.ಕೆ ನಳಿನಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ, ಮಾತನಾಡಿದ ಪಿ.ಕೆ.ನಳಿನಿ ಶಾಲೆಯಲ್ಲಿ ಶಿಕ್ಷಣವೇ ಮುಖ್ಯ ಅಲ್ಲ ಮಕ್ಕಳಿಗೆ ಸಂಬಂಧಗಳು, ಹಣದ ಮೌಲ್ಯ, ಸಮಯಪ್ರಜ್ಞೆ ಇದರ ಬಗ್ಗೆ ಶಿಕ್ಷಕರು ತಿಳಿಯಪಡಿಸಬೇಕು ಎಂದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ನವೀನ್ ಅಂಬೆಕಲ್ ಎಂ ಜೆ ಎಫ್ ಸಂಘದ ಉದ್ದೇಶಗಳ ಬಗ್ಗೆ ಮಾತನಾಡಿದರು. ನಾಪೋಕ್ಲು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕನ್ನಂಬಿರ ಸುದಿ ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಲಿಯೋ ಸಂಸ್ಥೆಯ ಉಪಾಧ್ಯಕ್ಷ ರೋಹನ್ ಮಾಚಯ್ಯ, ಪ್ರಾಂತೀಯ ಪ್ರಥಮ ಮಹಿಳಾ ಸದಸ್ಯೆ ಪ್ರಿಯಾ ನವೀನ್, ಕಾರ್ಯದರ್ಶಿ ಮಾದೆಯಂಡ ಕುಟ್ಟಪ್ಪ, ಖಜಾಂಚಿ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ಪ್ರಾಂತೀಯ ಸಂಪರ್ಕಾಧಿಕಾರಿ ಡಾ.ಕೋಟೆರ ಪಂಚಮ್ ತಿಮ್ಮಯ್ಯ ವಲಯಾಧ್ಯಕ್ಷ ಸತೀಶ್ ಉಪಸ್ಥಿತರಿದ್ದರು. ಕಾಂಡಂಡ ರೇಖಾ ಪೊನ್ನಣ್ಣ ಧ್ವಜ ವಂದನೆ ಸಲ್ಲಿಸಿ ಅಪ್ಪುಮಣಿಯಂಡ ಶೈಲಾ ಭೀಮಯ್ಯ…

Read More

ನಾಪೋಕ್ಲು ಸೆ.29 : ಪಾರಾಣೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ 2023- 24ರ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಅಪ್ಪನೆರವಂಡ ಎಂ.ಪೂವಯ್ಯ, ಉಪಾಧ್ಯಕ್ಷರಾಗಿ ನಾಯಕಂಡ ಸಿ.ಚಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿಗೆ 13 ಸ್ಥಾನಗಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿ ಪೆಬ್ಬಾಟಂಡ ಎ.ಪೆಮ್ಮಯ್ಯ, ಬೊಳ್ಳಚೆಟ್ಟೀರ ಎಂ.ಸುರೇಶ್, ದೇವಜನ ಕೆ.ಪಳಂಗಪ್ಪ, ಬಿದ್ದಂಡ ಎ.ಪೆಮ್ಮಯ್ಯ,ನಾಯಕಂಡ ಟಿ. ಮುತ್ತಪ್ಪ, ಅಂಗೀರ ಎಂ.ಮಾದಪ್ಪ,ಬಲ್ಯಾಟಂಡ ಜಿ.ಕುಟ್ಟಯ್ಯ, ಅಪ್ಪನೆರವಂಡ ಎಂ.ನಯನ, ಮೇಡತನ ಎಸ್ ರಶ್ಮಿ ,ಎಚ್.ಎಸ್ ರಾಜು ಹಾಗೂ ವೈ. ಬಿ ಬಸಪ್ಪ ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ವರದಿ : ದುಗ್ಗಳ ಸದಾನಂದ. 

Read More

ನಾಪೋಕ್ಲು ಸೆ.29 : ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಪ್ರಯುಕ್ತ ಈದ್ ನಾಪೋಕ್ಲುವಿನ ವಿವಿಧೆಡೆ ಸಂಭ್ರಮದ ಈದ್ ಮಿಲಾದ್ ಆಚರಿಸಲಾಯಿತು. ನಾಪೋಕ್ಲು, ಕೊಟ್ಟಮುಡಿ, ಹಳೆತಾಲೂಕು, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ಕೂರುಳಿ, ಪಡಿಯಾನಿ, ಬೆಟ್ಟಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಸೀದಿ ಹಾಗೂ ಮದರಸಗಳ ವತಿಯಿಂದ ಆಚರಿಸಲಾಯಿತು. ಮಿಲಾದ್ ಸಂದೇಶ (ಜಾತ) ಮೆರವಣಿಗೆ ಹಾಗೂ ವಿಶೇಷ ಸಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸುವುದರ ಮೂಲಕ ಪ್ರವಾದಿ ಜನ್ಮದಿನವನ್ನು ಮುಸ್ಲಿಂ ಭಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು. ನಾಪೋಕ್ಲು ಪಟ್ಟಣದಲ್ಲಿರುವ ಮೊಹಿಯದ್ದೀನ್ ಜುಮ್ಮ ಮಸೀದಿ ಹಾಗೂ ಹಿದಾಯತಿಲ್ ಇಸ್ಲಾಂ ಮಾದರಸ ಆಡಳಿತ ಮಂಡಳಿ ವತಿಯಿಂದ ನಾಪೋಕ್ಲು ಮುಖ್ಯ ರಸ್ತೆ ಹಾಗೂ ಬೀದಿಗಳಲ್ಲಿ ಮಳೆಯನ್ನು ಲೆಕ್ಕಿಸದೆ ಸಂದೇಶ ಜಾಥ ನಡೆಯಿತು. ನಾಪೋಕ್ಲು ಮೊಹಿಯದ್ದೀನ್ ಜುಮ್ಮ ಮಸೀದಿ ಯಿಂದ ಪ್ರಾರಂಭಗೊಂಡ ಜಾಥಾ ಮುಖ್ಯ ರಸ್ತೆ ಮೂಲಕ ಪುಟಾಣಿ ಮಕ್ಕಳನ್ನು ಒಳಗೊಂಡಂತೆ ಯುವಕರಿಂದ ದಫ್ ಪ್ರದರ್ಶನ ನೀಡಲಾಯಿತು. ಜನಾಂಗ ಬಾಂಧವರು ಆಕರ್ಷಕ ಸಮವಸ್ತ್ರಗಳನ್ನು ಧರಿಸಿ ಗಮನ ಸೆಳೆದರು. ಮೆರವಣಿಗೆಯಲ್ಲಿ ಪ್ರವಾದಿಯವರ ಶಾಂತಿ,…

Read More

ಮಡಿಕೇರಿ ಸೆ.29 :  ಬದ್ರಿಯ ಜುಮಾ ಮಸೀದಿ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ಮತ್ತು ನುಸ್ರತ್ತುಲ್ ಇಸ್ಲಾಂ ಮದರಸ ಅರಂತೋಡು ಇವುಗಳ ಜಂಟಿ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ ಜನ್ಮ ದಿನಾಚರಣೆಯ ಈದ್ ಮಿಲಾದನ್ನು ಸಂಭ್ರಮದಿಂದ ಆಚರಿಸಲಾಯಿತು. ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಿತು. ಮದರಸ ವಿದ್ಯಾರ್ಥಿಗಳಿಂದ ಪ್ರವಾದಿ ಕುರಿತ ಕೀರ್ತನೆಗಳು, ಆಲಾಪನೆ, ಪ್ಲವರ್ ಶೋ, ದಫ್ ಸ್ಪರ್ದೆ, ಬುರ್ಧಾ ಮಜಲೀಸ್ ಕಾರ್ಯಕ್ರಮವು ಮರ್ ಹೂಮ್ ಡಾ| ಕೆ. ಎಂ. ಶಾಹ್ ಮುಸ್ಲಿಯಾರ್ ವೇದಿಕೆಯಲ್ಲಿ ನಡೆಯಿತು. ಸಮಾರಂಭವನ್ನು ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಇಸಾಕ್ ಬಾಖಾವಿ ಉದ್ಘಾಟಿಸಿ, ಈದ್ ಹಬ್ಬದ ಸಂದೇಶವನ್ನು ನೀಡಿದರು. ಅದ್ಯಕ್ಷತೆಯನ್ನು ಜಮಾತ್ ನ ಅಧ್ಯಕ್ಷ  ಅಶ್ರಫ್ ಗುಂಡಿ ವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಟ್ರೋಫಿಯನ್ನು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ ನ ಗೌರವಾಧ್ಯಕ್ಷ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ವಿತರಿಸಿ, ಅರಂತೋಡಿನ ಯುವಕರ ಶಿಸ್ತಬದ್ದವಾದ ಸಂಘಟನೆ ಮತ್ತು ಕಾರ್ಯಕ್ರಮ…

Read More

ಮಡಿಕೇರಿ ಸೆ.29 :  ಭಾಗಮಂಡಲ ಹೋಬಳಿ ಬಂಟರ ಘಟಕದ ಅಧ್ಯಕ್ಷರಾಗಿ ಬಿ.ಎಸ್.ರಾಜೇಶ್ ರೈ  ಆಯ್ಕೆಯಾಗಿದ್ದಾರೆ. ಭಾಗಮಂಡಲದ ಹೋಟೆಲ್ ದುರ್ಗಾ ಭವನದಲ್ಲಿ  ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ಈ ಸಂದರ್ಭ  ಹೋಬಳಿ ಘಟಕದ  ಉಪಾಧ್ಯಕ್ಷ  ಸದಾಶಿವ ರೈ, ಗೌರವ ಸಲಹೆಗಾರ  ಬಿ.ಸಿ.ಹರೀಶ್ ರೈ, ಕಾರ್ಯದರ್ಶಿಗಳಾದ   ವಿಠಲ ರೈ, ಬಿ.ಡಿ.ಭಾನು ಪ್ರಕಾಶ್ ರೈ, ಬಿ.ಎನ್.ಸಚಿನ್ ರೈ, ಬಿ.ಆರ್.ಸುಶೀಲ ರೈ, ಬಿ.ಕೆ.ರಾಜ ರೈ, ಬಿ.ಎಸ್.ಸೋನೇಶ್ ರೈ, ಬಿ.ಜಿ.ಬಿಂದಿಯ ರೈ, ಬಿ.ವಿ.ಅಶ್ವಥ್ ರೈ, ಭಾರತಿ ರೈ, ಬಿ.ಎಸ್. ಗೌರೀಶ್ ರೈ  ಹಾಜರಿದ್ದರು.

Read More

ಮಡಿಕೇರಿ ಸೆ.28 : ಸೋಮವಾರಪೇಟೆ ಪಟ್ಟಣದಲ್ಲಿ ಸುಮಾರು 1.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿ 10 ವರ್ಷ ಕಳೆದರೂ ಪೂರ್ಣಗೊಂಡಿಲ್ಲವೆಂದು ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟ ಬೇಸರ ವ್ಯಕ್ತಪಡಿಸಿದೆ. ಒಕ್ಕೂಟದ ಪ್ರಮುಖರು ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಒತ್ತಾಯಿಸಿದರು. ದಲಿತ ಹಿತರಕ್ಷಣಾ ಒಕ್ಕೂಟದ ಪರಿಶ್ರಮ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಕಾರದಿಂದ ಭವನದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ 10 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿ ಆಗಿಲ್ಲ. ಕಟ್ಟಡಕ್ಕೆ ಸುಣ್ಣಬಣ್ಣ ಬಳಿದಿಲ್ಲ, ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ. ಇಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಅವಧಿ ಮುಗಿದಿದ್ದರೂ ಸ್ಥಳಾಂತರಿಸಿಲ್ಲ ಎಂದು ಪದಾಧಿಕಾರಿಗಳು ಆರೋಪಿಸಿದರು. ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಭವನವನ್ನು ಅಧಿಕೃತವಾಗಿ ನಮಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ, ಗೌರವಾಧ್ಯಕ್ಷ ಜಯಪ್ಪ ಹಾನಗಲ್ಲು, ಉಪಾಧ್ಯಕ್ಷರಾದ ಹೆಚ್.ಎಂ.ಸೋಮಪ್ಪ, ಎಂ.ಪಿ.ಹೊನ್ನಪ್ಪ…

Read More

ಮಡಿಕೇರಿ ಸೆ.28 : ಮೈಸೂರಿನ ಅರಮನೆ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ನಡೆದ ಜಾಥಾ ಕಾಯ೯ಕ್ರಮದಲ್ಲಿ  ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಕೊಡವ ಕೂಟಾಳಿಯಡ ಕೂಟದ ಸದಸ್ಯರು ಭಾಗವಹಿಸಿದ್ದರು. ಅರಮನೆ ಮೈದಾನದಿಂದ ಬನ್ನಿ ಮಂಟಪದವರೆಗೆ ನಡೆದ ಈ ಮೆರವಣಿಗೆಯಲ್ಲಿ ಕೊಡಗಿನ ಕೊಡವ ಪಡೆಯಾಳಿಗಳು ಎನ್ನುವ ಪರಿಕಲ್ಪನೆಯಲ್ಲಿ ಕೊಡಗಿನ ಸಂಸ್ಕೃತಿ ಯನ್ನು ಪ್ರತಿಬಿಂಬಿಸುವ ತಳಿಯತಕ್ಕಿ ದೀಪ ಹಿಡಿದು, ದುಡಿ ಕೊಟ್ಟ್ ಪಾಟ್, ವಾಲಗತಾಟ್,ನ ಜೊತೆಗೆ ಮತ್ತು  ಕೊಡವ ಸಂಸ್ಕೃತಿಯ ಅಂಗವಾದ ಕೋವಿ, ಒಡಿಕತ್ತಿ, ಬಿಲ್ಲು, ಬಾಣ,ಬಜಿ೯ ಹಿಡಿದು ಜಾಥಾ ನಡೆಯಿತು. ಕೊಡವ ಕೂಟಾಳಿಯಡ ಕೂಟದ  ಅಧ್ಯಕ್ಷರಾದ ಚಂಗುಲಂಡ ಸೂರಜ್, ಗೌರವ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ಕಾಯ೯ದಶಿ೯ ಚೆಟ್ಟೋಳಿರ ಶರತ್ ಸೋಮಣ್ಣ, ಖಜಾಂಚಿ ಕಬ್ಬಚ್ಚಿರ ರಶ್ಮಿಕಾಯ೯ಪ್ಪ ಸಹ ಕಾರ್ಯದರ್ಶಿ ನೂರೇರ ಸರಿತ ಉತ್ತಯ್ಯ, ನಿರ್ದೇಶಕ ಕಾಳಮಂಡ ರಾಬಿನ್ ಕರ್ತುರ ರನ್ನು ಪೆಮ್ಮಯ್ಯ, ಸದಸ್ಯರಾದ ಕೊಟ್ಟಂಗಡ ಕವಿತಾ ವಾಸುದೇವ್, ಬೊಜ್ಜಂಗಡ ಭವ್ಯ, ನಂಬುಡುಮಾಡ ದಿಲನ್ ಅಚ್ಚಯ್ಯ,ನೆಲ್ಲಚಂಡ ದಿಲನ್ ಅಯ್ಯಪ್ಪ, ನಂಬುಡುಮಾಡ ರೀತು ಅಚ್ಚಯ್ಯ, ಚಂಗುಲಂಡ…

Read More

ಮಡಿಕೇರಿ ಸೆ.28 : ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಮಹೋತ್ಸವವನ್ನು ಸಂಭ್ರಮ, ಸಡಗರದಿಂದ ರಾಜ್ಯದಲ್ಲಿ ಮಾದರಿಯಾಗಿ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿgಐ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸೂಚಿಸಿದ್ದಾರೆ. ಭಾಗಮಂಡಲ ಭಗಂಡೇಶ್ವರ ದೇವಾಲಯ ಬಳಿಯ ಮುಡಿ ಕಟ್ಟಡದಲ್ಲಿ ‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರಾ ಮಹೋತ್ಸವದ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಮಹೋತ್ಸವವು ಕೊಡಗು ಜಿಲ್ಲೆಯಲ್ಲಿ ವಿಶಿಷ್ಟವಾದ ಹಬ್ಬವಾಗಿದೆ. ಆ ನಿಟ್ಟಿನಲ್ಲಿ ಉತ್ಸವವಾಗಿ ನಡೆಸುವಂತಾಗಬೇಕು ಎಂದು ಎ.ಎಸ್.ಪೊನ್ನಣ್ಣ ಹೇಳಿದರು. ತಲಕಾವೇರಿ ಜಾತ್ರಾ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಪೊಲೀಸ್, ಸಾರಿಗೆ, ಅರಣ್ಯ, ಲೋಕೋಪಯೋಗಿ, ಪಂಚಾಯತ್ ರಾಜ್, ಸೆಸ್ಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿ…

Read More

ಮಡಿಕೇರಿ ಸೆ.27 : ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ನೆನಪಿನಲ್ಲಿ ಕೊಡಗಿನಲ್ಲಿ ಹಲವಾರು ಯೋಜನೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಅಪ್ಪಚ್ಚಕವಿ ಅಭಿಮಾನಿಗಳ ಬಳಗದ ಅಧ್ಯಕ್ಷ ಉಳ್ಳಿಯಡ.ಎಂ.ಪೂವಯ್ಯ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪಚ್ಚಕವಿ ಕೊಡವ ಭಾಷೆಯ ಆದಿಕವಿ, ವರಕವಿ, ವರ್ಷಂಪ್ರತಿ ಸೆ.21ರಂದು ಅವರ ಜನ್ಮದಿನವನ್ನು ಆಚರಿಸುವುದರ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಪ್ರಸ್ತುತ 155ನೇ ಜನ್ಮದಿನವನ್ನು ಆಚರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಜಿಲ್ಲೆಯ ಜನತೆಯ ಮನದಲ್ಲಿ ಉಳಿಯುವಂತೆ ಮಾಡಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು. ಅಪ್ಪಚ್ಚ ಕವಿಯ ಜನ್ಮಸ್ಥಳ ಕಿರುಂದಾಡು ಗ್ರಾಮದ ಅಪ್ಪನೆರವಂಡ ಐನ್‍ಮನೆಯನ್ನು ಕವಿ ಸ್ಮಾರಕ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು, ಮಡಿಕೇರಿ ಚೌಕಿ ವೃತ್ತಕ್ಕೆ ಹರದಾಸ ಅಪ್ಪಚ್ಚಕವಿ ವೃತ್ತ ಎಂದು ಹೆಸರಿಡಬೇಕು, ಕೊಡಗು ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಹರದಾಸ ಅಪ್ಪಚ್ಚಕವಿ ಸ್ಮಾರಕ ಕನ್ನಡ ವಿಭಾಗ ಎಂದು ನಾಮಕರಣ ಮಾಡಬೇಕು, ಕೊಡವ ಎಂ.ಎ ಕೋರ್ಸ್‍ಗೆ ಕವಿಗಳ ವಿಷಯವನ್ನು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಅಲ್ಲಾರಂಡ ರಂಗ…

Read More

ಮಡಿಕೇರಿ ಸೆ.28 : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಎರಡನೇ ಹಂತದ 2ನೇ ದಿನದ ಪಾದಯಾತ್ರೆ ಪಾಂಡಾನೆ ನಾಡ್ ಮಂದ್, ಕಾಣತ್ತ್ ಮಂದ್ (ಮೂರ್ನಾಡ್-ಐಕೊಳ) ನಲ್ಲಿ ನಡೆಯಿತು. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕೊಡವ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎನ್ ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವರ ಪರವಾದ ಹಕ್ಕೊತ್ತಾಯಗಳ ಕುರಿತು ಪ್ರತಿಪಾದಿಸಿದರು. ಜಿಲ್ಲೆಯ ಎಲ್ಲಾ ಕಡೆ ಪಾದಯಾತ್ರೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ಶಾಂತಿಯುತ ಹೋರಾಟದಲ್ಲಿ ತೊಡಗಿಸಿಕೊಂಡರೆ ನ್ಯಾಯಯುತ ಬೇಡಿಕೆಗಳು ಈಡೇರಲಿವೆ. ಎರಡು ಹಂತಗಳ ಪಾದಯಾತ್ರೆ ಪೂರ್ಣಗೊಳ್ಳುತ್ತಿದ್ದು, ಉಳಿದಿರುವ ಮೂರು ಹಂತಗಳ ಪಾದಯಾತ್ರೆಯಲ್ಲಿ ಸರ್ವ ಕೊಡವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು, ಕೊಡವ ಜನಾಂಗದ ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು, ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26ನೇ ವಿಧಿಗಳ…

Read More