ಮಡಿಕೇರಿ ಜ.19 NEWS DESK : ತುಮಕೂರಿನಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟದಲ್ಲಿ ಟೆಕ್ವಾಂಡೋ ವಿಭಾಗದಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೋ ಕ್ಲಬ್ನ ವಿದ್ಯಾರ್ಥಿ ಎನ್.ಕೆ.ಪ್ರಜ್ಞಾ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾಳೆ. ಕರ್ನಾಟಕ ಸರಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಸಂಸ್ಥೆಯ ಸಹಯೋಗದಲ್ಲಿ ಆರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಅಂಡರ್ 73 ಕೆ.ಜಿ ವಿಭಾಗದಲ್ಲಿ ಎನ್.ಕೆ.ಪ್ರಜ್ಞಾ ಕೊಡಗನ್ನು ಪ್ರತಿನಿಧಿಸಿದ್ದಳು. ಮಂಗಳೂರಿನ ಶ್ರೀಚೈತ್ಯನ್ಯ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪ್ರಜ್ಞಾ ಮಡಿಕೇರಿ ನಗರದ ದೇಚೂರು ನಿವಾಸಿ ಎನ್.ಎನ್.ಕುಶಾಲ್ ಕುಮಾರ್ ಹಾಗೂ ಸಿ.ಪುಷ್ಪಲತ ದಂಪತಿಯ ಪುತ್ರಿ. ಈಕೆ ಟೆಕ್ವಾಂಡೋ ಕ್ಲಬ್ ನ ಮಾಸ್ಟರ್ ಕುಶಾಲ್ ಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ಲೇಖಕ: admin
ಮಡಿಕೇರಿ ಜ.19 NEWS DESK : ಮಡಿಕೇರಿ ಜಾಮಿಯಾ ಮಸೀದಿ ಆಡಳಿತ ಮಂಡಳಿಯ ಪ್ರಮುಖರು ಶಾಸಕ ಡಾ.ಮಂತರ್ ಗೌಡ ಅವರನ್ನು ಭೇಟಿಯಾಗಿ ಮಸೀದಿಗೆ ಸೇರಿದ ಆಸ್ತಿಯ ಕುರಿತು ಚರ್ಚಿಸಿದರು. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಭೇಟಿಯಾದ ಮಸೀದಿಯ ಪ್ರಮುಖರಾದ ನಜೀóರ್ ಖುರೇಶಿ, ಬಾಷಾ ಮತ್ತಿತರರು ಜಾಮಿಯಾ ಮಸೀದಿಗೆ ಸೇರಿದ ಆಸ್ತಿ ಒತ್ತುವರಿಯಾಗುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಸೋಮಶೇಖರ್ ಎಸ್.ಜೆ ಅವರೊಂದಿಗೂ ಚರ್ಚಿಸಿದರು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಪ್ರಧಾನ ಕಾರ್ಯದರ್ಶಿ ರಾವೋಫ್ ಎಂ.ಎನ್, ಪ್ರಚಾರ ಸಮಿತಿಯ ಅಧ್ಯಕ್ಷ ವಿ.ಜಿ.ಮೋಹನ್, ಪ್ರಮುಖರಾದ ಹರಿಪ್ರಸಾದ್ ಕೋಚನ ಹಾಗೂ ಕಾರ್ಯಕರ್ತರು ಹಾಜರಿದ್ದರು.
ಮಡಿಕೇರಿ ಜ.19 NEWS DESK : ಕೊಡಗು ಪತ್ರಕತ೯ರ ಸಂಘ ಮತ್ತು ಪತ್ರಕತ೯ರ ಕ್ಷೇಮಾಭಿವೖದ್ದಿ ಸಮಿತಿ ವತಿಯಿಂದ ಆಯೋಜಿತವಾಗಿದ್ದ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಗ್ಗಿ ತಂಡವು ಸಿರಿ ತಂಡದ ವಿರುದ್ಧ ಜಯಗಳಿಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದ ಪ್ರದಶ೯ನ ಪಂದ್ಯದಲ್ಲಿ, ಉಪವಿಭಾಗಾಧಿಕಾರಿ ನಿತಿನ್ ಚಿಕ್ಕಿ, ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂತಿ೯ ನೇತೃತ್ವದ ಅಧಿಕಾರಿಗಳ ತಂಡವು, ಮಹೇಶ್ ಜೈನಿ ನಾಯಕತ್ವದ ಜನಪ್ರತಿನಿಧಿಗಳ ತಂಡದ ವಿರುದ್ಧ 45 ರನ್ ಗಳ ಅಂತರದ ಗೆಲವು ಗಳಿಸಿತು. ನಿತಿನ್ ಚಿಕ್ಕಿ ಆಲ್ ರೌಂಡರ್ ಆಟಗಾರನಾಗಿ ವಿಜ್ರಂಭಿಸಿದರೆ ಮಹೇಶ್ ಜೈನಿ ಬ್ಯಾಟಿಂಗ್ , ಉದ್ಯಮಿ ಎಡಿಕೇರಿ ಪ್ರಸನ್ನ ಬೌಲಿಂಗ್ ನಲ್ಲಿ ಗಮನ ಸೆಳೆದರು. ನಂತರ ಪತ್ರಕತ೯ರ ತಂಡಗಳಾದ ಸಿರಿ, ಸುಗ್ಗಿ, ಹೊನ್ನು ಮತ್ತು ಸಮೖದ್ದಿ ತಂಡಗಳ ನಡುವೆ ಕ್ರಿಕೆಟ್ ಲೀಗ್ ಪಂದ್ಯಾಟ ಜರುಗಿತು. ಸುರೇಶ್ ಬಿಳಿಗೇರಿ ನಾಯಕತ್ವದ ಸುಗ್ಗಿ ತಂಡವು ಕುಡೆಕಲ್ ಸಂತೋಷ್ ನಾಯಕತ್ವದ ಸಿರಿ ತಂಡದ…
ಕುಶಾಲನಗರ ಜ.19 NEWS DESK : ಈ ಶತಮಾನ ಕಂಡ ಕಾಯಕ ಯೋಗಿ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ವಿಶ್ವಶ್ರೇಷ್ಠ ಸಂತ. ಬಡವರು ದೀನರು ಶೋಷಿತರಿಗೆ ತ್ರಿವಿಧ ದಾಸೋಹ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳಲ್ಲಿ ಆರದ ಹಣತೆಯಾಗಿ ಬೆಳಗುತ್ತಿರುವ ಮಹಾಜ್ಯೋತಿ ಎಂದು ಸೋಮವಾರಪೇಟೆ – ಕುಶಾಲನಗರ ಅವಳಿ ತಾಲ್ಲೂಕುಗಳ ಪೋಲಿಸ್ ಉಪ ಅಧೀಕ್ಷಕ ( ಡಿವೈಎಸ್ಪಿ) ಚಂದ್ರಶೇಖರ್ ಬಣ್ಣಿಸಿದರು. ಶ್ರೀ ಸಿದ್ದಗಂಗಾ ಭಕ್ತಮಂಡಳಿ ವತಿಯಿಂದ ಕುಶಾಲನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿಯವರ ಭಕ್ತಿ ಸ್ಮರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಡೆದಾಡಿದ ದೇವರು ಭಕ್ತಜನಕ್ಕೆ ಸಾರಿದ ನೀತಿಯ ಸಂದೇಶಗಳನ್ನು ಎಲ್ಲರೂ ತಪ್ಪದೇ ಪಾಲಿಸುವ ಮೂಲಕ ಅತ್ಯುತ್ತಮ ವಾದ ಜೀವನ ಕಟ್ಟಿಕೊಳ್ಳುವಂತೆ ಕರೆಕೊಟ್ಟರು. ಸಿದ್ದಗಂಗಾ ಭಕ್ತಮಂಡಳಿ ಸಂಚಾಲಕ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 15 ವರ್ಷಗಳಿಂದಲೂ ಎಲ್ಲಾ ಜಾತಿ ಹಾಗೂ ಸಮುದಾಯಗಳ ಭಕ್ತಜನರೊಂದಿಗೆ ಕುಶಾಲನಗರದ ವಿವಿಧೆಡೆಗಳಲ್ಲಿ ಶ್ರೀಗಳ ಭಕ್ತಿಯ ಸ್ಮರಣೆ ಆಚರಿಸುತ್ತಾ ಸಮಾಜದ ಸಾಧಕರನ್ನು ಶ್ರೀಗಳ ಹೆಸರಿನಲ್ಲಿ…
ವಿರಾಜಪೇಟೆ ಜ.19 NEWS DESK : ಗಡಿಯಾರ ಕಂಬದ ಬಳಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ದ್ವಿಮುಖ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸಿ ನಗರದ ವರ್ತಕರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು. ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಿ ಮಾಹಿತಿ ನೀಡಿದ ವರ್ತಕರು, ಗಡಿಯಾರ ಕಂಬದ ಬಳಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಏಕಮುಖ ಸಂಚಾರದ ವ್ಯವಸ್ಥೆ ಬಹಳ ವರ್ಷಗಳಿಂದ ಇತ್ತು. ಅಲ್ಲದೆ ತಿಂಗಳ ಹದಿನೈದು ದಿನ ಒಂದು ಬದಿಯಲ್ಲಿ ಇನ್ನು 15 ದಿನ ಮತ್ತೊಂದು ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ಪುರಸಭೆ ಮತ್ತು ನಗರ ಪೆÇಲೀಸರಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು. ವ್ಯಾಪಾರ ವಹಿವಾಟು ನಡೆಸುವ ಅಂಗಡಿಗಳಿಗೆ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪುರಸಭೆಯು ದ್ವಿಮುಖ ಸಂಚಾರದ ವ್ಯವಸ್ಥೆ ಮಾಡುವುದಾಗಿ ಮಾಹಿತಿ ಬಂದಿದ್ದು ಇದರಿಂದ ವರ್ತಕರಿಗೆ ವ್ಯಾಪಾರ ವಹಿವಾಟು ನಡೆಸಲು ಸಮಸ್ಯೆಯಾಗುತ್ತದೆ. ವಾಹನಗಳ ಪಾರ್ಕಿಂಗ್ಗೆ ಅವಕಾಶ ಮಾಡಿಕೊಡಬೇಕು. ಇದೀಗ ಕಾಫಿ ಸೀಸನ್ ಆಗಿರುವುದರಿಂದ ಜನ ವ್ಯಾಪಾರಕ್ಕೆಂದು…
ಸುಂಟಿಕೊಪ್ಪ ಜ.19 NEWS DESK : ಶ್ರೀಮದ್ಭಗವದ್ಗೀತಾ ಅಧ್ಯಯನದಿಂದ ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಲೌಕಿಕ ಜೀವನದಲ್ಲಿ ಕೂಡ ನಾವು ಯಶಸ್ಸನ್ನು ಸಾಧಿಸಬಹುದು ಎಂದು ಪಂಡಿತ ಲೋಕಾನಂದ ಆರ್ಯ ಹೇಳಿದ್ದಾರೆ. ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅತ್ತೂರು ನಲ್ಲೂರು ಗ್ರಾಮದಲ್ಲಿ ಶ್ರೀ ಬ್ರಹ್ಮಜ್ಞಾನ ಧ್ಯಾನ ಮಂದಿರ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಗೀತಾ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪೋಷಕರಿಗೆ ಮತ್ತು ಆಸಕ್ತರಿಗೆ ಶ್ರೀಮದ್ಭಗವದ್ಗೀತಾ ಗ್ರಂಥವನ್ನು ಉಚಿತವಾಗಿ ನೀಡುವ ಯೋಜನೆಯನ್ನು ಚಾಲನೆಗೊಳಿಸಿ ಮಾತನಾಡಿದರು. ಬ್ರಿಟಿಷರ ಮೆಕಾಲೆ ಶಿಕ್ಷಣದಿಂದ ಭಾರತದಲ್ಲಿ ಗುರುಕುಲ ಪದ್ಧತಿ ಶಿಕ್ಷಣ ಮದ್ಯವಾಗಿದ್ದ ಸಂಸ್ಕøತ ಮತ್ತು ಧರ್ಮ ಶಿಕ್ಷಣ ಹಾಳಾಯಿತು. ಇಂಗ್ಲಿಷ್ ಶಿಕ್ಷಣ ಪಾಶ್ಚಿಮಾತ್ಯ ಬದುಕಿನ ಶೈಲಿಯನ್ನು ನಮ್ಮ ಮೇಲೆ ಏರಿದ್ದು, ನಮ್ಮತನ ಕಳೆದು ಹೋಗಿ ಯಾವುದೇ ರೀತಿಯ ಪದ್ಧತಿ ಪರಂಪರೆ ಆಚಾರ ವಿಚಾರಗಳು ನಮ್ಮಗೆ ಗೊತ್ತಿಲ್ಲದಂತಹ ಪರಿಸ್ಥಿತಿಗೆ ತಲುಪಿದ್ದೇವೆ. ಶ್ರೀಮದ್ಭಗವದ್ಗೀತೆಯು 4 ವೇದಗಳ ಸಾರವಾಗಿದ್ದು, ಇದರ ಅಧ್ಯಯನದಿಂದ ನಮ್ಮ ಆಚಾರ ವಿಚಾರಗಳಲ್ಲಿ ಲೌಕಿಕ ಮತ್ತು…
ಮಡಿಕೇರಿ ಜ.19 NEWS DESK : ಮಡಿಕೇರಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಆಗುವ ಕುಂಡಾಮೇಸ್ತ್ರಿ ಮತ್ತು ಕೂಟುಹೊಳೆ ಜಲಾಶಯಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಪೌರಾಯುಕ್ತರಾದ ಎಚ್.ಆರ್. ರಮೇಶ್, ಎಂಜಿನಿಯರ್ಗಳಾದ ಸತೀಶ್, ಹೇಮಂತ್ ಕುಮಾರ್, ಪ್ರಸನ್ನ ಇತರರು ಇದ್ದರು.
ನಾಪೋಕ್ಲು ಜ.19 NEWS DESK : ಬಲ್ಲಮಾವಟಿ ಗ್ರಾಮ ಪಂಚಾಯಿತಿಯ 2025-26 ಸಾಲಿನ ಗ್ರಾಮ ಸಭೆ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು. ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ಬಿಲ್ ಹಣ ಸಂಗ್ರಹಿಸಲು ತೋರುವ ಆಸಕ್ತಿಯನ್ನು ವಿದ್ಯುತ್ ಸರಬರಾಜು ಮಾಡಲು ತೋರುತ್ತಿಲ್ಲ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ತಲೆದೋ ರಿದೆ. ಮನಬಂದಂತೆ ವಿದ್ಯುತ್ ಕಡಿತ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗೆ ಇಲಾಖೆ ಅಧಿಕಾರಿ ಸಹಾಯಕ ಇಂಜಿನಿಯರ್ ಆಗಮಿಸಿಲ್ಲ. ಇಲಾಖಾ ಸಮಸ್ಯೆಗಳನ್ನು ತೋಡಿಕೊಳ್ಳಲು ಅಧಿಕಾರಿಗಳು ಆಗಮಿಸುತ್ತಿಲ್ಲ ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಬಲ್ಲಮಾವಟಿ, ಪುಲಿಕೋಟು, ಪೇರೂರು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ಅವ್ಯವಹಾರ ಕಂಡು ಬಂದಿದೆ. ಈ ಬಗ್ಗೆ ತನಿಖೆ ಆಗಬೇಕು. ಗ್ರಾಮೀಣ ಕೆಲವು ಭಾಗಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮೀಣ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಅಲ್ಲಲ್ಲಿ ಹೈ ಮಾಸ್ಕ್ ಲ್ಯಾಂಪ್ ಅಳವಡಿಸಬೇಕು ಎಂದು ಮನವಿ ಮಾಡಿದರು. ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ…
ಮಡಿಕೇರಿ, ಜ.19 NEWS DESK : ಮಡಿಕೇರಿ ತಾಲೂಕಿನಾದ್ಯಂತ ಸುಮಾರು 1600 ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರೋಟರಿ ಮಿಸ್ಟಿಹಿಲ್ಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದೊಂದಿಗೆ ಎರಡು ದಿನಗಳ ವಿದ್ಯಾರ್ಥಿಗಳ ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ಶಿಬಿರ ನಡೆಯಿತು. ಮೂರ್ನಾಡು ಹಾಗೂ ಮಡಿಕೇರಿಯಲ್ಲಿ ಶಿಬಿರ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ ಅವರು, ವಿದ್ಯಾರ್ಥಿಗಳು ಆತ್ಮಶಕ್ತಿ ಬೆಳೆಸಿಕೊಂಡು ತಮ್ಮ ಕೌಶಲ್ಯದ ಮೇಲೆ ನಂಬಿಕೆ ಇರಿಸಿ ಗುರಿ ಸಾಧಿಸಬೇಕೆಂದು ಕರೆ ನೀಡಿದರು. ಪೂರ್ಣ ಶ್ರಮ ಹಾಕಿ ಪರೀಕ್ಷೆ ಎದುರಿಸಬೇಕು. ಫಲಿತಾಂಶ ಏನೇ ಬಂದರೂ ಸಮಭಾವದಿಂದ ಎದುರಿಸಬೇಕೆಂದು ಕಿವಿಮಾತು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ನಾಪೋಕ್ಲು ಮತ್ತು ಮೂರ್ನಾಡಿಗೆ ಆಗಮಿಸಿದ ರೋಟರಿ ಜಿಲ್ಲೆಯ ಮಾಜಿ ರಾಜ್ಯಪಾಲ ವಿಕ್ರಂ ದತ್ತ, ಕ.ಭಂಡಾರಿ ಮತ್ತು ಮಡಿಕೇರಿಗೆ ಆಗಮಿಸಿದ ಡಾ. ಜಮೀರ್ ಅಹಮ್ಮದ್ ಮತ್ತು ಡಾ.ಸುದರ್ಶನ್ ಮಾತನಾಡಿ, ಪರೀಕ್ಷೆಯನ್ನು ಒಂದು ಹಬ್ಬ ಎಂದು ಪರಿಗಣಿಸಿ, ಶಿಸ್ತು, ಸಂಯಮದಿಂದ ಹೆಜ್ಜೆ ಇರಿಸಿದರೆ ಯಶಸ್ಸು, ನೆಮ್ಮದಿ ಖಚಿತ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ವೃತ್ತಿ…
ಮಡಿಕೇರಿ ಜ.19 NEWS DESH : ಸುದ್ದಿ-ಸಂದೇಶ ರವಾನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರತಿದಿನವೂ ಕಾರ್ಯನಿರತವಾಗಿರುವ ಪತ್ರಕರ್ತರ ಅರೋಗ್ಯ ಹಾಗೂ ಮನರಂಜನೆಗೆ ಕ್ರೀಡೆ ತುಂಬಾ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಪತ್ರಕರ್ತರ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿಯನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾoಗಣದಲ್ಲಿ ಕ್ರಿಕೆಟ್ ಆಡುವ ಮೂಲಕ ಉದ್ಘಾಟಿಸಿ ಹೇಳಿದರು. ಪತ್ರಕರ್ತರು ಸಮಾಜದ ಕೇಂದ್ರಬಿಂದು. ಪತ್ರಕರ್ತರಿಂದಲೇ ದೇಶ-ವಿದೇಶದಲ್ಲಾಗುವ ವಿವಿಧ ಬದಲಾವಣೆಗಳು ವಿಷಯ-ವಿನಿಮಯ ತಿಳಿಯುತ್ತದೆ, ಪತ್ರಕರ್ತರು ಪತ್ರಕರ್ತರಿಗಿರುವ ಮೂಲಭೂತ ಹಕ್ಕುಗಳನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಸುಸ್ಥಿತಿಯ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಕೊಡುಗೆ ಅಪಾರವಾದುದು. ಅಂತೆಯೇ ಆರ್ಥಿಕ,ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಕೂಡ ಪತ್ರಕರ್ತರದ್ದು ಮುಖ್ಯ ಪಾತ್ರ ಎಂದು ಪತ್ರಕರ್ತರನ್ನು ಉದ್ದೇಶಿಸಿ ಪೊನ್ನಣ್ಣ ನುಡಿದರು. ಪತ್ರಕರ್ತರು ಸಮಾಜವನ್ನು ತಿದ್ದುವ ಮಹತ್ವದ ಜವಾಬ್ದಾರಿ ಯನ್ನು ನಿಭಾಯಿಸುತ್ತಿದ್ದು ಪತ್ರಕರ್ತರ ಕ್ಷೇಮದ ಬಗ್ಗೆ ಸಮಾಜದ ಜನತೆ ಕಾಳಜಿ ವಹಿಸಬೇಕು ಎಂದು ಪೊನ್ನಣ್ಣ ಕರೆ ನೀಡಿದರು. ರಾಜ್ಯ ಸರಕಾರದ…






