ಲೇಖಕ: admin

ಮಡಿಕೇರಿ ಆ.28 NEWS DESK :  ಚೆಟ್ಟಳ್ಳಿ ವಿನಾಯಕ ಯುವಕ ಸಂಘದ ವತಿಯಿಂದ  ಶ್ರೀ ಗೌರಿ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪಟ್ಟಣದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕರಿಂದ ಗಣಪತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಮಹಾಂಗಳಾರತಿ ನಂತರ ಪ್ರಸಾದ ವಿತರಣೆ ನೆರವೇರಿತು.

Read More

ಮಡಿಕೇರಿ ಆ.28 NEWS DESK : ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಪಂಜರಪೇಟೆಯಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಗೌರಿ-ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಶಾಸಕರು  ಪ್ರತಿ ವರ್ಷದಂತೆ ಈ ಸಾಲಿನಲ್ಲಿಯೂ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಈ ಹಬ್ಬವು ನಾಡಿನ ಸರ್ವ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸಿದರು. ಈ ಸಂದರ್ಭ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More

ಮಡಿಕೇರಿ ಆ.28 NEWS DESK : ಹಿರಿಯ ರಾಜಕರಣಿ ದಿ.ಎ.ಕೆ.ಸುಬ್ಬಯ್ಯ ಅವರ  6ನೇ ಪುಣ್ಯಸ್ಮರಣೆ ಅಂಗವಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು, ತಮ್ಮ ತಂದೆಗೆ ಗೌರವ ನಮನ ಸಲ್ಲಿಸಿದರು. ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯ ಬೆಳ್ಳೂರಿನಲ್ಲಿರುವ ತಮ್ಮ ತಂದೆಯವರ ಸಮಾಧಿ ಬಳಿಗೆ ತೆರಳಿದ ಶಾಸಕರು, ಪುಷ್ಪ ನಮನ ಸಲ್ಲಿಸಿ, ಗೌರವಾರ್ಪಣೆ ಸಲ್ಲಿಸಿದರು. ಈ ಸಂದರ್ಭ ಶಾಸಕರ ಹಿರಿಯ ಸಹೋದರರಾದ ಅಜ್ಜಿಕುಟ್ಟಿರ ನರೇನ್ ಎಸ್.ಕಾರ್ಯಪ್ಪ ದಂಪತಿಗಳು, ಶಾಸಕರ ತಾಯಿಯ ಹಿರಿಯ ಸಹೋದರಿ, ಅಜ್ಜಿಕುಟ್ಟಿರ ಕುಟುಂಬದ ಸದಸ್ಯರುಗಳು, ಶಾಸಕರ ಆಪ್ತರು, ಪಕ್ಷದ ಪ್ರಮುಖರು ಹಾಗು ಇತರರು ಉಪಸ್ಥಿತರಿದ್ದರು.

Read More

ಮಡಿಕೇರಿ ಆ.28 NEWS DESK : ವಿರಾಜಪೇಟೆಯ ಕುಂಜಲಗೇರಿ ನಿವಾಸಿಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಅಳವಡಿಸಿದ ನೂತನ ವಿದ್ಯುತ್ ಮಾರ್ಗ ವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಈ ಹಿಂದೆ ಕುಂಜಲಗೇರಿ ನಿವಾಸಿಗಳಿಗೆ/ಗ್ರಾಹಕರಿಗೆ ಪಾರಣೆ-ಬೊಳ್ಳುಮಾಡು 11 ಕೆವಿ HT ಫೀಡರಿನ ಮೂಲಕ ವಿದ್ಯುತ್ ಸರಬರಾಜು ಮಾಡಲಾಗಿತ್ತು. ಆದರೆ ಮಳೆಗಾಲದಲ್ಲಿ ಮತ್ತು ಪಾರಣೆಯಲ್ಲಿ-ಮೂರ್ನಾಡು 33/11 ಕೆವಿ ಉಪಕೇಂದ್ರದಲ್ಲಿ ಅಡಚಣೆಯಾದಾಗ, ಕುಂಜಲಗೇರಿ ಗ್ರಾಹಕರಿಗೆ ಹಲವು ದಿನಗಳ ಕಾಲ ವಿದ್ಯುತ್ ಸಂಪರ್ಕ ಇರುತ್ತಿರಲಿಲ್ಲ. ಇದನ್ನು ಮನಗಂಡ ಶಾಸಕರು ವಿರಾಜಪೇಟೆ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು, ಬೊಳ್ಳುಮಾಡು ಸೇತುವೆಯಿಂದ ಕುಂಜಲಗೇರಿ ಮೊದಲ ಟ್ರಾನ್ಸ್ಫರ್ ವರೆಗೆ ಸುಮಾರು 3 ಕಿಲೋ ಮೀಟರ್ ಉದ್ದಕ್ಕೆ, ಇನ್ಸಲೇಟೆಡ್ ಕವರ್ಡ್ ಕಂಡಕ್ಟರ್ (Insulated Covered Conductor) ಆಳವಡಿಸುವುದರ ಮೂಲಕ ಹಾಗೂ 85 ಹೊಸ ವಿದ್ಯುತ್ ಕಂಬಗಳನ್ನು ಉಪಯೋಗಿಸಿ, ಸುಮಾರು  1 ಕೋಟಿ ವೆಚ್ಚದಲ್ಲಿ ವಿದ್ಯುತ್ ಪೂರೈಸಲು ಕ್ರಮ ಕೈಗೊಂಡಿದ್ದರು. ಸ್ಥಳೀಯ ಗ್ರಾಮಸ್ಥರು ಹಾಗೂ…

Read More

ಚೆಟ್ಟಳ್ಳಿ ಆ.28 NEWS DESK :  ಚೆಟ್ಟಳ್ಳಿ ವೀರಾಂಜನೇಯ ಯುವಕ ಸಂಘದ ವತಿಯಿಂದ 11ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪೂರ್ವಾಹ್ನ ಅರ್ಚಕರಿಂದ ಗಣಪತಿ ಹೋಮ ನಡೆಯಿತು. ನಂತರ ಗಣಪತಿಯ ಉತ್ಸವ ಮೂರ್ತಿಯನ್ನು ಚೆಟ್ಟಳ್ಳಿಯ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ಪ್ರತಿಷ್ಠಾಪಿಸಿ, ಮಹಾಮಂಗಳಾರತಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು.

Read More

ನಾಪೋಕ್ಲು ಆ.28 NEWS DESK : ಕೊಡಗು ಜಿಲ್ಲೆ ತಲತಲಾಂತರ ತನ್ನದೇ ಆದ ವಿಶೇಷ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ ಪರಂಪರೆಯನ್ನು ಹೊಂದಿದೆ. ಇವುಗಳಲ್ಲಿ ಸಾಮೂಹಿಕವಾಗಿ ಭಾಗವಹಿಸಿ ಆಚರಿಸಲ್ಪಡುವ ಕಾವೇರಿ ಸಂಕ್ರಮಣ, ಹುತ್ತರಿ(ಪುತ್ತರಿ) ಪ್ರಮುಖ ಹಬ್ಬಗಳಲ್ಲಿ ಕೈಲ್ ಪೊಳ್ದ್  ಒಂದು. ಇದನ್ನು  ನಾಲ್ಕು ನಾಡು ವ್ಯಾಪ್ತಿಯಲ್ಲಿ ಆ.28 ರಂದು ಈ ಹಬ್ಬವನ್ನು ಆಚರಿಸುವುದು ಸಾಂಪ್ರದಾಯಿಕವಾಗಿ ಬಂದಿದೆ. ಕೈಲ್ ಎಂದರೆ ಆಯುಧ. ಪೊಳ್ದ್ ಎಂದರೆ ಪೂಜೆ ಎಂದರ್ಥ. ಅಂತೆಯೇ “ಕೈಲ್ ಪೊಳ್ದ್ ” ಎಂದರೆ ಆಯಧ ಪೂಜೆ. ಹಿಂದೆ ಪ್ರಾಣಿಗಳ ಬೇಟೆಗೆ ಕೋವಿ ಕತ್ತಿ ವಿವಿಧ ಆಯುಧಗಳನ್ನು ಬಳಸುತ್ತಿದ್ದರು. ಆದರೆ ವ್ಯವಸಾಯದ ಸಂದರ್ಭದಲ್ಲಿ ಅಂದರೆ ಸಿಂಹ ಮಾಸದಲ್ಲಿ ಈ ಆಯುಧಗಳನ್ನು ಉಪಯೋಗಿಸುವುದಿಲ್ಲ. ಕೃಷಿ ಕಾರ್ಯ ಮುಗಿದ ನಂತರ  ಕೃಷಿ ಪರಿಕರಗಳಿಗೆ ಹಾಗೂ ಆಯುಧಗಳಿಗೆ ಪೂಜೆ. ಈ ಕೆಲವು ಆಯುಧಗಳನ್ನು ದೇವರ ಕೋಣೆ (ಕನ್ನಿಕೋಂಬರೆ) ಯಿಂದ ಹೊರ ತೆಗೆದು ಸಾಂಪ್ರದಾಯದೊಂದಿಗೆ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಕೋವಿಯನ್ನು ಪೂಜಿಸಲು ಈ ಸಂದರ್ಭ ವಿಶೇಷವಾಗಿ ಕಾಡಿನಲ್ಲಿ ದೊರಕುವ…

Read More

ಮಾದಾಪುರ NEWS DESK ಆ.27 : ಮಳೆಹಾನಿ ಸಂತ್ರಸ್ತರೊಂದಿಗೆ ಗಣೇಶ ಚತುರ್ಥಿ ಆಚರಿಸಿದ  ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಹಬ್ಬವನ್ನು ಅರ್ಥಪೂರ್ಣಗೊಳಿಸಿದರು. ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಮಾದಾಪುರ ಗ್ರಾಮ ಪಂಚಾಯಿತಿಯ ಗರಗಂದೂರು ಮುರಾರ್ಜಿ ವಸತಿ ಶಾಲೆಯ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಶಾಸಕರು ಭೇಟಿಯಾದರು. ಇಂದು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿದ ಶಾಸಕರು ತಾವೇ ಖುದ್ದು ಸಂತ್ರಸ್ತರಿಗೆ ಊಟ ಬಡಿಸಿ, ತಾವು ಕೂಡ ಊಟ ಮಾಡಿದರು. ಸಿಹಿ ಹಂಚಿ ಅಹವಾಲುಗಳನ್ನು ಆಲಿಸಿ ಧೈರ್ಯ ತುಂಬಿದರು.

Read More

ಮಡಿಕೇರಿ NEWS DESK ಆ.27 : ಕೊಂಡಗೇರಿಯಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.  ಸಣ್ಣುವoಡ ರಶ್ಮಿ ಪೊನ್ನಮ್ಮ, ಬೊಳ್ಳೆ ಪoಡ ದೀಪ್ತಿ ತಂಗಮ್ಮ, ಪಳೆಯಂಡ ಕಾಜಲ್ ಪಿ.ಸಿ, ಸೃಷ್ಟಿ ಬಿ.ಸ್, ಹೈಜಾ ಬಿ.ಐ,ನಿಲ್ಮಾಡ್ ತನ್ಯಾ ರೈ, ಕುಟ್ಟನ ಎo. ಯಶ್ಮಿತ, ಪುಚ್ಚಿ ಮಂಡ ಯು ತನಿಶಾ ವಿಜೇತ ವಿದ್ಯಾರ್ಥಿಗಳಾಗಿದ್ದಾರೆ. ಶಾಲೆಯ ದೈಹಿಕ ಶಿಕ್ಷಕರುಗಳಾದ  ಮೋನಿಕಾ ಬಿ.ಎಸ್ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿದ್ದಾರೆ. ಈ ತಂಡದ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಿಕಿ ಹಾಗೂ ಬೋಧಕ ಬೋಧಕೇತರ ವೃಂದದವರು, ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read More

*ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನುವ ಬೇಧಭಾವವಿಲ್ಲದೆ ಎಲ್ಲರೂ ಒಗ್ಗೂಡಿ ಸೂರ್ಯಕಾಂತಿ ಎಲೆಯಲ್ಲಿ ಮೂಡಿದ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿದ ಪುಟಾಣಿನಗದ ಯುವಕರು* ಮಡಿಕೇರಿ NEWS DESK ಆ.27 : ಗಣೇಶೋತ್ಸವದ ಸಡಗರ ನಾಡಿನಲ್ಲಿ ಮನೆ ಮಾಡಿದೆ. ವಿಘ್ನ ನಿವಾರಕ ವಿನಾಯಕನ ಸ್ಮರಣೆ ಜೋರಾಗುತ್ತಿದ್ದು, ಮಡಿಕೇರಿ ನಗರದಲ್ಲೂ ಹಬ್ಬದ ವಾತಾವರಣವಿದೆ. ಉತ್ಸವದ ವಿಶೇಷ ಆಕರ್ಷಣೆಯಾದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ವಿವಿಧ ಬಡಾವಣೆಗಳಲ್ಲಿ ಮಾಡಲಾಗಿದೆ. ನಗರದ ಪುಟಾಣಿನಗರ ಉದ್ಭವ ವಿನಾಯಕ ಸೇವಾ ಸಮಿತಿಯ ಸದಸ್ಯರು  32ನೇ ವರ್ಷದ ಅದ್ದೂರಿ ಗಣೇಶೋತ್ಸವವನ್ನು ಒಗ್ಗಟ್ಟಿನಿಂದ ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ. ಮಡಿಕೇರಿಯ ಕಲಾವಿದ ರವಿ ಅವರ ಕೈಯಲ್ಲಿ ಅರಳಿದ ಸೂರ್ಯಕಾಂತಿ ಎಲೆಯಲ್ಲಿ ಮೂಡಿದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಮುಂದಿನ 9 ದಿನಗಳ ಕಾಲ ಬಡಾವಣೆಯ ನಿವಾಸಿಗಳ ಮನೆ ಮನೆಯಿಂದಲ್ಲೂ ಗಣಪತಿ ಮೂರ್ತಿಗೆ ಸಂಕಲ್ಪ ಪೂಜೆಗಳು ನಡೆಯಲಿದೆ. ಕೆಲವು ವರ್ಷಗಳ‌ ಹಿಂದೆ ಕೇವಲ ಬೆರಳೆಣಿಕೆಯಷ್ಟು ಸದಸ್ಯರನ್ನು ಹೊಂದಿದ್ದ ಉದ್ಭವ ವಿನಾಯ ಸೇವಾ ಸಮಿತಿಯ ಸದಸ್ಯರು ಪೆಂಡಲ್ ನಲ್ಲಿ ವಿನಾಯಕನ ಅರಾದನೆ ಮಾಡುತ್ತಿದ್ದರು. ಅಂದು…

Read More

ಸೌತಡ್ಕ NEWS DESK ಆ.27 : ಬಯಲು ಆಲಯ ಗಣಪತಿ ಹಾಗೂ ಗಂಟೆ ಗಣಪತಿ ಎಂಬ ಖ್ಯಾತಿಯ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಉತ್ಸವವನ್ನು ಶ್ರದ್ಧಾಭಕ್ತಿ, ವಿಜೃಂಭಣೆಯಿಂದ ಆಚರಿಸಲಾಯಿತು. 108 ಕಾಯಿ ಗಣಹೋಮ, ರಂಗಪೂಜೆ ಮತ್ತು ಮಹಾಪೂಜೆ ನೆರವೇರಿತು. ನಂತರ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದಿನೇಶ್ ಮೆಹಂದಳೆ ಅವರ ನೇತೃತ್ವದಲ್ಲಿ ನೂರು ಮಂದಿ ಬಾಣಸಿಗರ ತಂಡ 600 ತೆಂಗಿನಕಾಯಿ, 230 ಕೆಜಿ ಬೆಲ್ಲ, 50 ಲೀಟರ್ ತುಪ್ಪ ಹಾಗೂ 2.5 ಕ್ವಿಂಟಾಲ್ ಮೈದಾ ಬಳಸಿ 30 ಸಾವಿರ ಮೋದಕಗಳನ್ನು ತಯಾರಿಸಿ, ಶ್ರೀ ಮಹಾಗಣಪತಿಗೆ ನೈವೇದ್ಯವಾಗಿ ಸಲ್ಲಿಸಿದರು. 12 ಸಾವಿರ ಅವಲಕ್ಕಿ ಪಂಚಕಜ್ಜಾಯ, 4 ಕ್ವಿಂಟಾಲ್ ಕಡಲೆ ಪಂಚಕಜ್ಜಾಯ ಹಾಗೂ 5,000 ಲಾಡುಗಳನ್ನು ತಯಾರಿಸಲಾಗಿತ್ತು. ಇದಕ್ಕಾಗಿ 5,000 ತೆಂಗಿನಕಾಯಿ, 3,600 ಕೆಜಿ ಅವಲಕ್ಕಿ ಮತ್ತು 1,200 ಕೆಜಿ ಬೆಲ್ಲ ಬಳಸಲಾಗಿತ್ತು.

Read More