ಮಡಿಕೇರಿ ಜ.22 NEWS DESK : ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಲು ಇಂತಹ ಕಥಾ ಸ್ಪರ್ಧೆಗಳು ದಾರಿದೀಪವಾಗಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೊಡಗಿನ ಗೌರಮ್ಮ ತಮ್ಮ ಸಾಹಿತ್ಯ ಮತ್ತು ಕತೆ, ಕವನ ರಚನೆಗಳನ್ನು ರೂಡಿಸಿಕೊಂಡಿದ್ದರು. ಕೊಡಗಿಗೆ ಗಾಂಧೀಜಿ ಭೇಟಿ ಕೊಟ್ಟ ಸಂದರ್ಭದಲ್ಲಿ ತಮ್ಮ ಮೈ ಮೇಲಿನ ಚಿನ್ನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ದಾನ ನೀಡುವ ಮೂಲಕ ಸ್ವಾತಂತ್ರ ಹೋರಾಟಗಾರರಿಗೆ ಪ್ರೇರಣದಾಯಕರಾಗಿದ್ದರು ಎಂದು ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯನಿ ಕಟ್ಟೆಮನೆ ಅನುಸೂಯ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಗಿನ ಗೌರಮ್ಮ ಅವರ ನೆನಪಿನಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಸಣ್ಣ ಕಥೆಗಳ ಗೌರಮ್ಮ ಕಥಾಸ್ಪರ್ಧೆಯನ್ನು ಬ್ಲಾಸಂ ಶಾಲೆಯ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮುಂದೊಂದು ದಿನ ಸಾಹಿತಿಗಳಾಗಿ ಬೆಳೆಯಲು ಈ ಕಥಾ ಸ್ಪರ್ಧೆಯು ಮೆಟ್ಟಿಲುಗಳಾಗಲಿ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತರವಾದದ್ದು.…
ಲೇಖಕ: admin
ಮಡಿಕೇರಿ ಜ.22 NEWS DESK : ತೀಯಾನ್ ಮಹಾಸಭಾದ ಕೊಡಗು ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎ.ಎನ್.ಪದ್ಮನಾಭ ಕಿರಗಂದೂರು ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಎಸ್.ಆರ್.ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಅರುಣ್, ಸಂಘಟನಾ ಕಾರ್ಯದರ್ಶಿಯಾಗಿ ಎನ್.ಸಿ.ಸುದರ್ಶನ್ ಹಾಗೂ ಖಜಾಂಚಿಯಾಗಿ ಎಂ.ಕೆ.ಮೋಹನ್ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಮಡಿಕೇರಿಯ ಲೆಕ್ಕ ಪರಿಶೋಧಕÀ ಟಿ.ಕೆ.ಸುಧೀರ್, ನಿರ್ದೇಶಕರಾಗಿ ಶಶಿಕುಮಾರ್, ಎನ್.ಸಿ.ಸುನಿಲ್, ಗಣೇಶ್, ವೀಣಾ ಜಯರಾಮ್ ಹಾಗೂ ಕಾನೂನು ಸಲಹೆಗಾರರಾಗಿ ವಿರಾಜಪೇಟೆಯ ಕೆ.ವಿ.ಸುನಿಲ್ ನೇಮಕಗೊಂಡರು. ಇದೇ ಸಂದರ್ಭ ಜಿಲ್ಲಾ ಯೂತ್ ಅಧ್ಯಕ್ಷರನ್ನಾಗಿ ಶಜಿ ಭರತ್ ಹಾಗೂ ಉಪಾಧ್ಯಕ್ಷರನ್ನಾಗಿ ಪ್ರವೀಣ್ ಅವರನ್ನು ಸಭೆಯ ಒಮ್ಮತದ ನಿರ್ಧಾರದಂತೆ ಆಯ್ಕೆ ಮಾಡಲಾಯಿತು. *ಸಭೆ* ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ತೀಯಾನ್ ಮಹಾಸಭಾದ ಜಿಲ್ಲಾ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘಟನೆಯ ಬಲವರ್ಧನೆ ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ನಂತರ ಸರ್ವಾನುಮತದಿಂದ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ…
ನಾಪೋಕ್ಲು ಜ.22 NEWS DESK : ಮೂರ್ನಾಡು ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಗ್ರಾಮ ಪಂಚಾಯತಿ ಹಾಗೂ ಸಂಘ ಸಂಸ್ಥೆಗಳ ಸಹಯೋಗದಿಂದ ನೂತನವಾಗಿ ನಿರ್ಮಿಸಿದ ಸುಸಜ್ಜಿತ ಶೌಚಾಲಯವನ್ನು ಲೋಕಾರ್ಪಣೆಗೊಳಿಸಲಾಯಿತು. ಮೂರ್ನಾಡು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ, ಆಪ್ತಮಿತ್ರ ಬಳಗ, ಗಜಾನನ ಯುವಕ ಸಂಘ ಹಾಗೂ ಕಾಂತೂರ್ ಮೂರ್ನಾಡು ಗ್ರಾಮ ಪಂಚಾಯತ್ ಜೊತೆಗೂಡಿ ಕಟ್ಟಿಸಿ ಸುಸಜ್ಜಿತ ಶೌಚಾಲಯವನ್ನೂ ಗಣ್ಯರು ಉದ್ಘಾಟನೆ ಮಾಡಿ ಶಾಲೆಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯರಾದ ಗುರುರಾಜ್ ಮಾತನಾಡಿ, ಮೂರು ಸಂಘಗಳು ನಮ್ಮ ಶಾಲೆಗೆ ಉಪಯೋಗವಾಗುವಂತ ಕೆಲಸಗಳನ್ನು ಮಾಡಿಕೊಟ್ಟಿದೆ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತಮ್ಮ ಶಕ್ತಿಗೆ ಮೀರಿ ನಮ್ಮ ಶಾಲೆಗೆ ಉಪಯುಕ್ತ ಕೆಲಸಗಳನ್ನು ಮಾಡಿಕೊಟ್ಟಿದನ್ನು ಸ್ಮರಿಸಿ ಇದೇ ರೀತಿ ನಮ್ಮ ಶಾಲೆಗೆ ಬೆಂಬಲವಾಗಿ ಕೈಜೋಡಿಸುತ್ತಾ ನಮ್ಮೊಂದಿಗೆ ಇರಬೇಕೆಂದು ತಿಳಿಸಿದರು. ಎಲ್ಲಾ ಸಂಘದ ಅಧ್ಯಕ್ಷರಿಗೂ ಹಾಗೂ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಪಿಡಿಓ ಹಾಗೂ ಸದಸ್ಯರು ಗಳಿಗೆ ಧನ್ಯವಾದ ತಿಳಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಸ್.ಕುಶಾನ್…
ವಿರಾಜಪೇಟೆ ಜ.22 NEWS DESK : ಎನ್ಎಸ್ಡಿಸಿ ಸ್ಕಿಲ್ ಇಂಡಿಯಾದ ಅನುಮೋದಿತ ತರಬೇತಿ ಪಾಲುದಾರ ಆವಾಸ್(ಎವಿಎಎಸ್)ನಿಂದ ಆಯೋಜಿಸಲ್ಪಟ್ಟ 14ನೇ ರಾಷ್ಟ್ರೀಯ ಮಟ್ಟದ ಚಾಂಪಿಯನ್ಶಿಪ್ 2025 ರಲ್ಲಿ, ರಾಷ್ಟ್ರೀಯ ಮಟ್ಟದ ಅಬ್ಯಾಕಸ್ ಮತ್ತು ವೇದ ಗಣಿತ ಚಾಂಪಿಯನ್ಶಿಪ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ವಿರಾಜಪೇಟೆಯ ಶ್ರೀಹಾ ಸುರೇಶ್ ಹೊರಹೊಮ್ಮಿದ್ದಾರೆ. ಬೀಡ್ಸ್ ಅಂಡ್ ಬ್ರೈನ್ ವಿಭಾಗದಲ್ಲಿ ಅಭ್ಯಾಸಿದ ಶ್ರೀಹಾ ಸುರೇಶ್ 100 ಪ್ರಶ್ನೆಗಳಲ್ಲಿ 100ಕ್ಕೂ 5 ನಿಮಿಷ 14 ಸೆಕೆಂಡ್ನಲ್ಲಿ ಉತ್ತರಿಸಿ ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್ ಆಗಿ ಕೊಡಗಿಗೆ ಕೀರ್ತಿ ತಂದಿದ್ದಾರೆ. ಇವರಿಗೆ ಶಿಕ್ಷಕರಾದ ದೇಚಮ್ಮ ಅವರು ತರಬೇತಿ ನೀಡಿದ್ದಾರೆ. ಐದೂವರೆ ವರ್ಷದ ಈ ಪುಟ್ಟ ಬಾಲಕಿ ವಿರಾಜಪೇಟೆಯ ಸ್ಯಾಪಲಿಂಗ್ ಮಾಂಟೆಸ್ಸರಿಯಲ್ಲಿ ಯುಕೆಜಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಶ್ರೀಹಾ ಸುರೇಶ್ ವಿರಾಜಪೇಟೆಯ ಸಕ್ಸಸ್ ಮೆನ್ಸ್ ಹಬ್ ಮಾಲೀಕ ಸುರೇಶ್ ಹಾಗೂ ಸೌಮ್ಯ ಅವರ ಪುತ್ರಿ.
*ಇಭಾನಿ ಲೇಔಟ್, ಪೆರುಂಬಾಡಿ, ಆರ್ಜಿ, ವಿರಾಜಪೇಟೆ : ಪ್ರಾರಂಭಿಕ ಮಾರಾಟ ರಿಯಾಯಿತಿ ದರದಲ್ಲಿ : ತಕ್ಷಣ ಬುಕ್ ಮಾಡಿ : ಮನೆ ಕಟ್ಟಿಕೊಡಲಾಗುವುದು* *ಸಂಪರ್ಕಿಸಿ : ಎಂ.ಪಿ.ಕೇಶವ ಕಾಮತ್ : 94483 46276, ಎಂ.ಪಿ.ಪ್ರಮೋದ್ ಕಾಮತ್ : 94480 48213, ಚಂದನ್ ಕಾಮತ್ : 88020 85908*
ಸುಂಟಿಕೊಪ್ಪ ಜ.22 NEWS DESK : ಕೇಂದ್ರ ಸರಕಾರವು ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿ ವಿಬಿ ರಾಮ್ ಜಿ ಹೆಸರಿನಲ್ಲಿ ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಸುಂಟಿಕೊಪ್ಪ ಗ್ರಾಮ ಪಂಚಾಯ್ತಿಯ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಂದ್ರ ಸರಕಾರದಿಂದ ಬಂದಿರುವ ಸುತ್ತೋಲೆಯ ಕುರಿತು ಪ್ರಸ್ತಾಪಿಸಿದಾಗ ಪಂಚಾಯಿತಿ ಸದಸ್ಯರಾದ ಹೆಚ್.ಯು.ರಫೀಕ್ ಖಾನ್ ಅವರು ಈ ಕುರಿತು ವಿರೋಧ ವ್ಯಕ್ತಪಡಿಸಿದರಲ್ಲದೆ.ಸಭಾ ನಡುವಳಿಯಲ್ಲಿ ಲಿಖಿತವಾಗಿ ತಮ್ಮ ವಿರೋಧವನ್ನು ಬರೆಸಿದರು. ಸಭಾ ತ್ಯಾಗ ಮಾಡಿದ ಬಳಿಕ ಹೊರಬಂದು ಕೇಂದ್ರ ಸರಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿದ ಬಗ್ಗೆ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಅವರೊಂದಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಾದ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ಪಿ.ಎಫ್.ಸಬಾಸ್ಟೀನ್, ಆಲಿಕುಟ್ಟಿ, ಶಬ್ಬಿರ್, ನಾಗರತ್ನ ಸುರೇಶ್ ಹಾಗೂ ರೇಷ್ಮಾ ಇದ್ದರು.
ಮಡಿಕೇರಿ ಜ.22 NEWS DESK : ಕಡಗದಾಳು ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ ಕ್ಲೋಸ್ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಿಆರ್ಪಿ ನಿಶಾ ಹಾಗೂ ಶಾಲೆ ಮುಖ್ಯಶಿಕ್ಷಕಿ ಎಂ.ಟಿ.ಲಕ್ಷ್ಮೀ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳು ನಡೆದವು. ಮರಗೋಡು, ಅರೆಕಾಡು, ಬೋಯಿಕೇರಿ, ಕಟ್ಟೆಮಾಡು, ಕಡಗದಾಳು ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಶಿಕ್ಷಕಿ ಜೆಸ್ಸಿ ಸ್ವಾಗತಿಸಿದರು. ಉಷಾ ನಿರೂಪಿಸಿದರು. ಶಿಕ್ಷಕಿ ಪ್ರಜ್ಞಾ, ಎಸ್ಡಿಎಂಸಿ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರು, ಪೋಷಕರು ಉಪಸ್ಥಿತರಿದ್ದರು.
ಸುಂಟಿಕೊಪ್ಪ ಜ.22 NEWS DESK : ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬವು ನಡೆಯಿತು. ಸುಂಟಿಕೊಪ್ಪ ಕ್ಲಸ್ಟರ್ ಕೇಂದ್ರದ ವ್ಯಾಪ್ತಿಯ ಸರಕಾರಿ ಮಾದರಿ ಕಲಿಕಾ ಹಬ್ಬ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಭಾಷೆ ಮತ್ತು ಗಣಿತದ ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್.ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜೆ.ಲೋಕೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಯು.ರಫೀಕ್ಖಾನ್, ಶಾಲಾ ಮುಖ್ಯೋಪಾದ್ಯಾಯರಾದ ಪಿ.ಇ.ನಂದ ಸಹಶಿಕ್ಷಕಿ ಸೌಭಾಗ್ಯ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾದ ಸೀಮಾ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಬಾಲಕೃಷ್ಣ ಶಿಕ್ಷಕರು ಪೋಷಕರು ಪಾಲ್ಗೊಂಡಿದ್ದರು.
ಮಡಿಕೇರಿ ಜ.21 NEWS DESK : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ ಎಲ್ ಆಚಾರ್ಯ ಜ್ಯುವೆಲ್ಲಸ್ರ್ ನಲ್ಲಿ ಗಣರಾಜ್ಯೋತ್ಸವ ಹಬ್ಬದ ಪ್ರಯುಕ್ತ ಜ.22 ರಿಂದ 26ರವರೆಗೆ ರಿಪಬ್ಲಿಕ್ ಸೇಲ್ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಚಿನ್ನ ಹಾಗೂ ವಜ್ರಾಭರಣಗಳ ವಿಶೇಷ ಸಂಗ್ರಹವೇ ಗ್ರಾಹಕರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. 24ಕ್ಯಾರೆಟ್ ಚಿನ್ನದ ದರ 15,000 ದಾಟಿದೆ. ಈ ಫೆಸ್ಟಿವ್ ಶಾಪಿಂಗ್ ಸೀಸನ್ನಲ್ಲಿ ಚಿನ್ನದ ದರ ಬೆಲೆ ಏರಿಕೆಯ ಪರಿಣಾಮವನ್ನು ಕಡಿಮೆಮಾಡಲು ಈ ರಿಪಬ್ಲಿಕ್ ಸೇಲ್ ಆಫರ್ ಒಂದು ಸುವರ್ಣಾವಕಾಶ ಚಿನ್ನದ ಆಭರಣಗಳ ತಯಾರಿಕಾ ಶುಲ್ಕದ ಮೇಲೆ ಫ್ಲಾಟ್ ರೂ.3,500/-10 ಗ್ರಾಂಗೆ ರಿಯಾಯಿತಿ ನೀಡಲಾಗಿದೆ. ಚಿನ್ನದ ದರ ಏರಿಕೆಯಿಂದಾಗಿ ಲೈಟ್ವೈಟ್, 18ಕ್ಯಾರೆಟ್ ನಲ್ಲಿ ತಯಾರಿಸಿದಂತಹ ಗ್ಲೋ ಇಲೈಟ್ ವಜ್ರಾಭರಣಗಳು ಈಗ ಕೈಗೆಟಕುವ ದರದಲ್ಲಿ ಲಭ್ಯವಿದ್ದು ಅಷ್ಟೇ ಅಲ್ಲದೆ ವಜ್ರದ ಮೌಲ್ಯದ ಮೇಲೆ 90% ಬೈಬ್ಯಾಕ್ ಹೊಂದಿರುವ ಕಾರಣ ಮುಂದಿನ ದಿನಗಳಲ್ಲಿ ಅದನ್ನು ವಿನಿಮಯ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ ವಜ್ರಾಭರಣಗಳ ಕ್ಯಾರಟ್ ಮೇಲೆ ರೂ.5000/- ಫ್ಲ್ಯಾಟ್…
ಮಡಿಕೇರಿ ಜ.22 NEWS DESK : ಪತ್ರಕರ್ತ ಪ್ರಶಾಂತ್. ಟಿ.ಆರ್ ವಿರಚಿತ ಸೌಪರ್ಣಿಕಾ ಕಾದಂಬರಿಗೆ ಅಕ್ಷರನಾದ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ಏಷ್ಯಾ ಗ್ಲೋಬಲ್ ಅವಾರ್ಡ್ ಸಂದಿದೆ. ಸೌಪರ್ಣಿಕಾ, ಸಾಹಿತ್ಯವನ್ನೇ ಉಸಿರಾಗಿಸಿಕೊಂಡ ಮಹಿಳೆಯ ಯಶೋಗಾಥೆಯನ್ನು ಒಳಗೊಂಡಿದೆ. ಈ ಕಾದಂಬರಿಯನ್ನು ಮೆಚ್ಚಿದ ಕನ್ನಡ ಚಿತ್ರರಂಗದ ಖ್ಯಾತ ನಟಿ, ಡಾ. ಮೇಘನಾ ಗಾಂವ್ಕರ್ ಹಿನ್ನುಡಿ ಬರೆದಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ಪುಟ್ಟಣ ಕಣಗಾಲ್ ಪ್ರಶಸ್ತಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಕೆ. ಶಿವರುದ್ರಯ್ಯ ಮುನ್ನಡಿ ಬರೆದಿದ್ದಾರೆ. ವಿಶೇಷ ಎಂದರೆ ಸೌಪರ್ಣಿಕಾ ಕಾದಂಬರಿ “ಅವಳ ಕಣ್ಣಲಿ” ಶೀರ್ಷಿಕೆಯಲ್ಲಿ ಕಿರುಚಿತ್ರವಾಗಿಯೂ ಮೂಡಿಬರುತ್ತಿದೆ. ಈಗಾಗಲೇ ಚಿತ್ರೀಕರಣವೂ ಆರಂಭವಾಗಿದ್ದು, ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಪ್ರಶಾಂತ್ ಈಗಾಗಲೇ “ಹೊನ್ನಮ್ಮನ ಕನಸು” ಹಾಗೂ “ಬಾಳ ಹಾದಿಯಲಿ ಬೆಳ್ಳಿಚುಕ್ಕಿ” ಕಾದಂಬರಿಗಳನ್ನು ರಚಿಸಿದ್ದಾರೆ. “ಹೊನ್ನಮ್ಮನ ಕನಸು” ಕಾದಂಬರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಂದಿದ್ದು, “ಬಾಳ ಹಾದಿಯಲಿ ಬೆಳ್ಳಿಚುಕ್ಕಿ”ಗೆ ಇಂಡಿಯನ್ ಐಕಾನ್ ಅವಾರ್ಡ್ ಹಾಗೂ ಪ್ರತಿಷ್ಠಿತ ಕೋವೆಂಟ್ರಿ ಅವಾರ್ಡ್ ಕೂಡ ಲಭಿಸಿದೆ.ಅಕ್ಷರನಾದ ಪ್ರತಿಷ್ಠಾನ ಸಾಹಿತ್ಯದಲ್ಲಿ ಸಾಧನೆ ಮಾಡಿದ ಗಣ್ಯರಿಗೆ…






