ಸೋಮವಾರಪೇಟೆ ಮೇ 25 : ಚೌಡ್ಲು-ಗಾಂಧಿನಗರದ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದ ವಾರ್ಷಿಕ ಪೂಜಾ ಕಾರ್ಯವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀ ಆದಿಶಕ್ತಿ ಅಮ್ಮನವರ ಸನ್ನಿದಿಯಲ್ಲಿ ಮುಂಜಾನೆಯಿಂದಲೇ ಶೈವ ಪುಣ್ಯಹ, ಹೋಮ, ದುರ್ಗಾ ಪೂಜೆ, ಗಂಗಾಪೂಜೆ, ಫಲ ಪೂಜಾಮೃತ ಅಭಿಷೇಕ ಹಾಗೂ ಮಹಾ ಮಂಗಳಾರತಿ ನಡೆಯಿತು.
ಸಂಜೆ ಊರಿನ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ವಿವಿಧ ವಾದ್ಯ ವೃಂದದೊಂದಿಗೆ ಗಮನ ಸೆಳೆಯಿತು.
ನಂತರ ಅಮ್ಮನವರಿಗೆ ಹಣ್ಣುಕಾಯಿ ಸಮರ್ಪಣೆ ಮತ್ತು ಹರಕೆ ಸೇವೆ ಹಾಗೂ ಅನ್ನದಾನ ಸೇವೆ ನಡೆಯಿತು.
ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಎಸ್. ರಾಮದಾಸ್, ಉಪಾಧ್ಯಕ್ಷ ಎಚ್.ಪಿ. ಅಯ್ಯಪ್ಪ, ಕಾರ್ಯದರ್ಶಿ ಎಚ್.ಜಿ. ಭರತ್, ಖಜಾಂಚಿ ಎಚ್.ಜೆ. ಶೇಖರ್, ಸಹಕಾರ್ಯದರ್ಶಿ ಎಸ್.ಆರ್. ದೀಪಕ್, ಸಹ ಖಜಾಂಚಿ ಎಚ್.ಎಂ. ಮನೋಜ್ಕುಮಾರ್ ಸೇರಿದಂತೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.









