Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸರಕಾರಿ ಶಾಲೆಗಳು ಮುಚ್ಚುವ ಭೀತಿ : ಕೊಡಗಿನಲ್ಲಿ ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ*
  • *ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*
  • *ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*
  • *ಕರ್ನಾಟಕ ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜು ಸ್ಥಿತಿಗತಿ : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್‌ಪಿಜಿ ಸರಬರಾಜು*
  • *ಸುಂಟಿಕೊಪ್ಪದಲ್ಲಿ ಕೈಸ್ತ ಬಾಂಧವರಿಂದ ಪವಿತ್ರ ವಾರದ ಸಂಕೇತ ಗರಿಗಳ ಭಾನುವಾರ ಆಚರಣೆ : 40 ದಿನಗಳ ಉಪವಾಸ*
  • *ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ*
  • *ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*
  • *ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*
  • *ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*
  • *ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೆಸರಿನಲ್ಲಿ ಜಂಜಾಟ ಮರೆತ ಪತ್ರಕರ್ತರು :  ಓಟ, ಹ್ಯಾಂಡ್‌ಬಾಲ್, ಜಗ್ಗಜಗ್ಗಾಟದಲ್ಲಿ ಭಾಗಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೆಸರಿನಲ್ಲಿ ಜಂಜಾಟ ಮರೆತ ಪತ್ರಕರ್ತರು :  ಓಟ, ಹ್ಯಾಂಡ್‌ಬಾಲ್, ಜಗ್ಗಜಗ್ಗಾಟದಲ್ಲಿ ಭಾಗಿ*

ಜುಲೈ 25, 20244 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಗೋಣಿಕೊಪ್ಪ ಜು.25 NEWS DESK  : ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್‌ಕ್ಲಬ್ ಸಹಯೋಗದಲ್ಲಿ ನಲ್ಲೂರು ಗ್ರಾಮದ ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಪತ್ರಕರ್ತರ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಜಿಲ್ಲೆಯ ಪತ್ರಕರ್ತರು ಕೆಸರಿನಲ್ಲಿ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಹ್ಯಾಂಡ್‌ಬಾಲ್, ಹಗ್ಗಜಗ್ಗಾಟ, ಓಟ, ಏಡಿ ಹಿಡಿಯುವ ಸ್ಪರ್ಧೆ, ಮಹಿಳೆಯರಿಗೆ ಆಯೋಜಿಸಿದ್ದ ಲೆಮೆನ್ ವಿತ್ ಸ್ಪೂನ್ ನಡಿಗೆ ಸ್ಪರ್ಧೆಯಲ್ಲು ಸುಮಾರು 70ಕ್ಕೂ ಹೆಚ್ಚು ಪತ್ರಕರ್ತರು ಮಿಂದೆದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಕ್ರೀಡಾಕೂಟವನ್ನು ಗೋಲ್ ಪೋಸ್ಟೆ÷್ಗ ಚೆಂಡು ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ನಾವು ಕೆಸರು ಎಂಬ ಅನುಭವನ್ನೇ ಇನ್ನೂ ಅನುಭವಿಸಿಲ್ಲ. ಮಳೆ, ಚಳಿ, ಗಾಳಿಯ ನಡುವೆ ಭತ್ತದ ಗದ್ದೆಯಲ್ಲಿ ಹೊತ್ತು ಕಳೆಯುವುದೇ ಸವಾಲು. ಇದರ ನಡುವೆ ಗದ್ದೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ದೈಹಿಕ ಮತ್ತು ಮಾನಸಿಕ ಸಮಪತೋಲನದ ಸಂದೇಶವನ್ನು ಸಾರುತ್ತದೆ. ಉತ್ತಮ ಆರೋಗ್ಯಕ್ಕೆ ಗದ್ದೆಯಲ್ಲಿ ಕೃಷಿ ಮಾಡುತ್ತದೆ. ಇವೆಲ್ಲವನ್ನೂ ಅನುಭವಿಸುವುದೇ ರೋಮಾಂಚಲ ಅನುಭವ. ಸ್ವಚ್ಚ ಪರಿಸರ ಕೂಡಿರುವ ಕೊಡಗು ಇದೇ ರೀತಿ ಉಳಿದುಕೊಳ್ಳಬೇಕು. ಪತ್ರಕರ್ತರ ಒಡನಾಟ, ಒಗ್ಗಟ್ಟು, ಸಹಭಾಳ್ವೆಗೆ ಕ್ರೀಡಾಕೂಟ ಸಹಕಾರಿಯಾಗುತ್ತಿದೆ ಎಂದರು.
ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಭತ್ತ ಕೃಷಿಯಿಂದ ಆಹಾರ ಉತ್ಪಾದನೆಯೊಂದಿಗೆ ವೃದ್ಧಿಯಾಗುವ ಮೂಲ ಕೂಡ ಇದೆ. ಇದರಿಂದಾಗಿ ಭತ್ತ ಕೃಷಿಯಿಂದ ಯಾರೂ ಹಿಂದೆ ಸರಿಯಬಾರದು ಎಂದು ಮನವಿ ಮಾಡಿಕೊಂಡರು. ಕಕ್ಕಡ ತಿಂಗಳಲ್ಲಿ ಗದ್ದೆಯಲ್ಲಿನ ಕೆಸರು ದೇಹದ ಆರೋಗ್ಯಕ್ಕೆ ಚೈತನ್ಯ ತರುತ್ತದೆ. ದೇಹದ ನಾನಾ ರೋಗಗಳಿಗೂ ರಾಮಬಾಣವಾಗಿದೆ. ಈ ನಿಟ್ಟಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಕೂಡ ನಮ್ಮ ಆರೋಗ್ಯದ ದೃಷ್ಠಿಯಿಂದ ಹೆಚ್ಚು ಆಯೋಜನೆಯಾಗಬೇಕಿದೆ ಎಂದರು.
ಗದ್ದೆಯಲ್ಲಿ ಭತ್ತಕೃಷಿಯೊಂದಿಗೆ ಮಿಶ್ರಬೆಳೆ ಬೆಳೆಯಲು ಉತ್ಸುಕತೆ ತೋರಬೇಕಿದೆ. ಕೆರೆಗಳ ಸಂರಕ್ಷಣೆಯಿ0ದ ಭವಿಷ್ಯದಲ್ಲಿ ನೀರಿನ ಬವಣೆ ನೀಗಿಸಲು ಸಾಧ್ಯವಿದೆ. ಅನಾವಶ್ಯಕ ನೀರು ಪೋಲಾಗದಂತೆ ಎಚ್ಚರವಹಿಸಲು ಉಳುಮೆ ಸಹಕಾರಿಯಾಗಿದೆ. ಸರ್ಕಾರ ಕೂಡ ಭತ್ತ ಬೆಳೆಯುವ ಕೃಷಿಕನಿಗೆ ಉತ್ತೇಜನ ನೀಡುವ ಯೋಜನೆ ರೂಪಿಸಬೇಕಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ರೈತನಿಗೆ ಪ್ರಯೋಜನ ಇಲ್ಲದಂತಾಗಿದೆ. ರೈತರಿಗೆ ವಿಶೇಷವಾಗಿ ಗ್ಯಾರಂಟಿ ಯೋಜನೆ ಜಾರಿಗೆ ತರಬೇಕಿದೆ ಎಂದು ಒತ್ತಾಯಿಸಿದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಭತ್ತ ಬೆಳೆಯುವ ಗದ್ದೆ ಬರಡಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಗದ್ದೆಯಲ್ಲಿ ವಿವಿಧ ಪ್ರಯೋಗದ ಮೂಲಕ ಬೆಳೆ ಬೆಳೆಯುವ ಮೂಲಕ ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾದರಿಯಾಗಿದ್ದಾರೆ. ಇವರ ಉತ್ಸಾಹದಿಂದ ಪತ್ರಕರ್ತರು ಒಂದೆಡೆ ಕೆಸರಿನಲ್ಲಿ ಕ್ರೀಡೆ ಆಯೋಜಿಸಲು ಸಹಕಾರಿಯಾಗಿದೆ ಎಂದರು.

ಸAಘದ ಜಿಲ್ಲಾಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಸಂಘಟನೆ ಬಲವರ್ಧನೆಗೆ ಕ್ರೀಡೆ ಸಹಕಾರಿಯಾಗಿದೆ. ಉತ್ತಮ ಪರಿಸರ ಮನ ತಣಿಸುತ್ತಿದೆ ಎಂದರು.
ಪೊನ್ನAಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಜಿಲ್ಲೆಯ ಪತ್ರಕರ್ತರು ಕೆಸರು ಗದ್ದೆಯ ಕ್ರೀಡಾಕೂಟದ ವಿಶೇಷ ಅನುಭವಕ್ಕೆ ಸಾಕ್ಷಿಯಾಗುವ ಮೂಲಕ ಜಿಲ್ಲೆಯ ಸಂಸ್ಕöÈತಿ, ಕ್ರೀಡೆಯ ಅನುಭವ ಪಡೆಯುವಂತಾಗಿದೆ ಎಂದರು.
ಉದ್ಯಮಿ ಬಿ.ಬಿ.ನಾಗರಾಜು ಬಹುಮಾನ ವಿತರಣೆ ಮಾಡಿದರು. ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟಕ್ಕೆ ಉತ್ತೇಜನ ನೀಡುತ್ತಿರುವ ಬಿ.ಬಿ.ನಾಗರಾಜು ಅವರನ್ನು ಕ್ರೀಡಾಕೂಟದ ಪ್ರಯುಕ್ತ ಸನ್ಮಾನಿಸಲಾಯಿತು.
ಸಮಾರೋಪ ಕಾರ್ಯಕ್ರಮವು ಕ್ರೀಡಾಕೂಟ ಸಂಚಾಲಕ ಚಿಮ್ಮಣಮಾಡ ದರ್ಶನ್ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ ಅವಂಟಿ, ಉದ್ಯಮಿ ವಿಷ್ಣು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ರಾಜ್ಯ ಸಮಿತಿ ಸದಸ್ಯ ಟಿ.ಎನ್.ಮಂಜುನಾಥ್ ಬಹುಮಾನ ವಿತರಿಸಿದರು.
ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್‌ಕುಮಾರ್ ಗುಹ್ಯ ನಿರೂಪಣೆ ಮಾಡಿದರು. ಉಪಾಧ್ಯಕ್ಷ ಸುಬ್ರಮಣಿ ಸ್ವಾಗತಿಸಿದರು. ಚನ್ನನಾಯಕ ಉಪಸ್ಥಿತರಿದ್ದರು. ಪೊನ್ನಂಪೇಟೆ ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ.ವಿ.ಅರುಣ್‌ಕುಮಾರ್, ನಿರ್ದೇಶಕ ಸಿಂಗಿ ಸತೀಶ್ ಇದ್ದರು. ತೀರ್ಪುಗಾರರಾಗಿ ರಘು, ಮಹೇಶ್ ಕಾರ್ಯನಿರ್ವಹಿಸಿದರು.
ವಿಜೇತರ ಪಟ್ಟಿ : ಹ್ಯಾಂಡ್‌ಬಾಲ್‌ನಲ್ಲಿ ಇಸ್ಮಾಯಿಲ್ ಕಂಡಕೆರೆ ನಾಯಕತ್ವದ ಚನ್ನನಾಯಕ, ಸ್ಟಾö್ಯನ್ಲಿ, ಪ್ರದೀಪ್ ಕುಮಾರ್, ವಿ.ವಿ. ಅರುಣ್‌ಕುಮಾರ್, ಕುಡೆಕಲ್ ಗಣೇಶ್, ಜಯಪ್ರಕಾಶ್, ಕುಪ್ಪಂಡ ದತ್ತಾತ್ರಿ, ಜಾಕಿ ದಿವಾಕರ್ ಒಳಗೊಂಡ ನಾಟಿ ಬಾಯ್ಸ್ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿತು. ನವೀನ್ ಡಿಸೋಜಾ ನಾಯಕತ್ವದ ನವೀನ್ ಸರ‍್ಣ, ಮಂಡೇಡ ಅಶೋಕ್, ರೆಜಿತ್‌ಕುಮಾರ್, ಕೃಷ್ಣ, ಮುಸ್ತಫಾ, ಪ್ರಭುದೇವ್, ಎನ್.ಎನ್. ದಿನೇಶ್, ರವಿಕುಮಾರ್, ದಮಯಂತಿ, ವರುಣ್ ಆಟಗಾರರನ್ನು ಒಳಗೊಂಡಿರುವ ಮಡ್ ವಾರರ‍್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಹಗ್ಗಜಗ್ಗಾಟದಲ್ಲಿ ಚಿಮ್ಮಣಮಾಡ ದರ್ಶನ್ ದೇವಯ್ಯ ನಾಯಕತ್ವದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಲೋಹಿತ್, ಪ್ರಸಿನ್ ಗೌಡ, ಸಂಶುದ್ದೀನ್, ಆಂಥೋನಿ, ಸಣ್ಣುವಂಡ ಕಿಶೋರ್ ನಾಚಪ್ಪ, ಸವಿತಾ ರೈ, ರ‍್ಷಿತ್ ಆಟಗಾರರನ್ನು ಒಳಗೊಂಡ ಏಡಿ ಬಾಯ್ಸ್ ಪ್ರಥಮ ಸ್ಥಾನ ಪಡೆದುಕೊಂಡಿತು.
ಗೋಪಾಲ್ ಸೋಮಯ್ಯ ನಾಯಕತ್ವದ ಕೆ.ಎಂ.ವಿನೋದ್, ಶಿವರಾಜ್, ಮನು, ಆರ್. ಸುಬ್ರಮಣಿ, ಮೊಹಮ್ಮದ್ ಮುಸ್ತಫಾ, ಚೆಪುö್ಪಡೀರ ರೋಶನ್, ಮಚ್ಚಮಾಡ ಅನೀಶ್ ಮಾದಪ್ಪ, ಕಿಶೋರ್ ಶೆಟ್ಟಿ, ಪುತ್ತಮ್ ಪ್ರದೀಪ್ ಆಟಗಾರನ್ನು ಒಳಗೊಂಡಿರುವ ಮಣ್ಣಿನ ಮಕ್ಕಳು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
1 ನಿಮಿಷ ಜೂಕಾಲೆ : ಏಡಿ ಬಾಯ್ಸ್ ಮತ್ತು ಮಣ್ಣಿನ ಮಕ್ಕಳು ತಂಡಗಳು ನಡುವಿನ ಹಗ್ಗಜಗ್ಗಾಟದಲ್ಲಿ ಒಂದು ನಿಮಿಷಗಳ ಕಾಲ ವಿಜಯಮಾಲೆ ಯಾರಿಗೆ ಎಂಬ ಕುತೂಹಲ ಕಾಡಿತು. 1 ನಿಮಿಷಗಳ ಕಾಲ ಉಭಯ ತಂಡಗಳು ಸೋಲಿಗೆ ಶರಣಾಗದೆ ಹಗ್ಗವನ್ನು ಬಿಗಿಯಾಗಿಸುವಲ್ಲಿ ಯಶಸ್ವಿಯಾಯಿತು. ಏಡಿಬಾಯ್ಸ್ ಸೋಲಿಗೆ ಜಾರದಂತೆ ತನ್ನತ್ತ ಹಗ್ಗವನ್ನು ಎಳೆದುಕೊಂಡು ಗೆದ್ದು ಬೀಗಿತು. ರೋಚಕ ಹಣಾಗಣಿ ಇಡೀ ಪಂದ್ಯಾವಳಿಯ ಜಿದ್ದಾಜಿದ್ದಿಗೆ ಕಾರಣವಾಯಿತು.
ಮಹಿಳೆಯರ ಲೆಮನ್ ವಿತ್ ಸ್ಪೂನ್ ನಡಿಗೆಯಲ್ಲಿ ಚಂಪಾ ಗಗನ್ ಪ್ರಥಮ, ವಿಶ್ಮಾ ಪೆಮ್ಮಯ್ಯ ದ್ವಿತೀಯ, ದಮಯಂತಿ ತೃತೀಯ ಸ್ಥಾನ ಪಡೆದುಕೊಂಡರು. ಓಟದಲ್ಲಿ ವಿಶ್ಮಾ ಪೆಮ್ಮಯ್ಯ ಪ್ರಥಮ, ಚಂಪಾ ಗಗನ್ ದ್ವಿತೀಯ, ದಮಯಂತಿ ತೃತೀಯ, 40 ವರ್ಷದೊಳಗಿನ ಪುರುಷರ ಓಟದಲ್ಲಿ ಇಸ್ಮಾಯಿಲ್ ಕಂಡಕೆರೆ ಪ್ರಥಮ, ಆದರ್ಶ್ ದ್ವಿತೀಯ, ನವೀನ್ ಡಿಸೋಜಾ ತೃತೀಯ, 40 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಗೋಪಾಲ್ ಸೋಮಯ್ಯ ಪ್ರಥಮ, ಪಾರ್ಥ ಚಿಣ್ಣಪ್ಪ ದ್ವಿತೀಯ, ಚನ್ನನಾಯಕ ತೃತೀಯ ಸ್ಥಾನ ಪಡೆದರು.
ಏಡಿ ಇಡಿಯುವ ಸ್ಪರ್ಧೆಯಲ್ಲಿ ಆಂಥೋನಿ-ವಿನೋದ್ ಮೂಡಗದ್ದೆ ಜೋಡಿ ಪ್ರಥಮ, ರೆಜಿತ್‌ಕುಮಾರ್ ಗುಹ್ಯ-ಪುತ್ತಮ್ ಪ್ರದೀಪ್ ಜೋಡಿ ದ್ವಿತೀಯ ಸ್ಥಾನ ಪಡೆದರು. ಮನರಂಜನೆಯಲ್ಲಿ ಸಿದ್ದಾಪುರದ ಕೃಷ್ಣ ಪ್ರಥಮ ಬಹುಮಾನ ಪಡೆದರು. ವಿಜೇತರಿಗೆ ನಗದು ಮತ್ತು ಪದಕ ನೀಡಲಾಯಿತು.
ವಿಶೇಷ ಆಹಾರ ಸವಿದ ಪತ್ರಕರ್ತರು : ಕಕ್ಕಡ ಮಾಸದಲ್ಲಿ ಸ್ಥಳೀಯವಾಗಿ ದೊರೆಯುವ ವಿಶೇಷ ಖಾಧ್ಯಗಳನ್ನು ಪತ್ರಕರ್ತರು ಸವಿದರು. ಕಾಡು ಮಾವು, ಹಲಸಿನ ಹಣ್ಣು, ಚಕೋತ್ತ ರ‍್ಮೆ ಸೊಪುö್ಪ, ಬೆಲ್ಲ ಕಾಫಿ, ಮರ ಗೆಣಸು, ಬೆಲ್ಲ ಗೆಣಸು, ಅಣಬೆ, ಕಣಲೆ, ಹಲಸಿನ ಬೀಜದ ಪಲ್ಯ ಸೇರಿದಂತೆ ಸುಮಾರು 20 ಬಗೆಯ ತಿನಿಸುಗಳನ್ನು ಬಡಿಸಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸರಕಾರಿ ಶಾಲೆಗಳು ಮುಚ್ಚುವ ಭೀತಿ : ಕೊಡಗಿನಲ್ಲಿ ಕೆಪಿಎಸ್ ಮ್ಯಾಗ್ನೇಟ್ ಯೋಜನೆಗೆ ವಿರೋಧ*

ಮಾರ್ಚ್ 29, 2026

*ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*

ಮಾರ್ಚ್ 29, 2026

*ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*

ಮಾರ್ಚ್ 29, 2026

*ಕೂಡಿಗೆ ಸೈನಿಕ ಶಾಲೆಯಲ್ಲಿ ಸಾಂಸ್ಕೃತಿಕ ವೈಭವದ ಅನಾವರಣ : 12ನೇ ತರಗತಿ ಕೆಡೆಟ್‌ಗಳಿಗೆ ಬೀಳ್ಕೊಡುಗೆ*

ಮಾರ್ಚ್ 29, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಮಡಿಕೇರಿ NEWS DESK ಮಾ.29 : ಕೂಡಿಗೆಯ ಸೈನಿಕ ಶಾಲೆ ಕೊಡಗು ತನ್ನ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ 2025–26ನೇ ಶೈಕ್ಷಣಿಕ…

*ಅಶುಭ ಭಾನುವಾರ : ಈಜಲು ಹೋದ ನಾಲ್ವರು ಮಕ್ಕಳ ದುರಂತ ಅಂತ್ಯ*

ಮಾರ್ಚ್ 29, 2026

*ಕರ್ನಾಟಕ ರಾಜ್ಯದಲ್ಲಿ ಆಟೋ ಎಲ್‌ಪಿಜಿ ಸರಬರಾಜು ಸ್ಥಿತಿಗತಿ : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್‌ಪಿಜಿ ಸರಬರಾಜು*

ಮಾರ್ಚ್ 29, 2026

*ಸುಂಟಿಕೊಪ್ಪದಲ್ಲಿ ಕೈಸ್ತ ಬಾಂಧವರಿಂದ ಪವಿತ್ರ ವಾರದ ಸಂಕೇತ ಗರಿಗಳ ಭಾನುವಾರ ಆಚರಣೆ : 40 ದಿನಗಳ ಉಪವಾಸ*

ಮಾರ್ಚ್ 29, 2026

*ಕೊಡಗಿನ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ*

ಮಾರ್ಚ್ 28, 2026

*ಕೊಡಗಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ : ಮರ ಬಿದ್ದು ಸಂಚಾರ ವ್ಯತ್ಯಯ : ಹೊತ್ತಿ ಉರಿದ ತೆಂಗಿನ ಮರ*

ಮಾರ್ಚ್ 28, 2026

*ಸಹಾಯ ಧನ ಮತ್ತು ವಸತಿಗಾಗಿ ಒತ್ತಾಯಿಸಿ ಎಸ್‌ಡಿಟಿಯು ಮನವಿ*

ಮಾರ್ಚ್ 28, 2026

*ಮಂದಗತಿಯಲ್ಲಿ ಸಾಗುತ್ತಿರುವ ಅಮೃತ್ ಕಾಮಗಾರಿ : ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ*

ಮಾರ್ಚ್ 28, 2026

*ಪೊಲೀಸ್ ವಸತಿ ಗೃಹ, ಸಮುದಾಯ ಭವನಗಳಿಗೆ ಕೊಡಗು ಎಸ್‌ಪಿ ಬಿಂದುಮಣಿ ಭೇಟಿ : ಪರಿಶೀಲನೆ*

ಮಾರ್ಚ್ 28, 2026

*ಏ.1 ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಮಾವೇಶ*

ಮಾರ್ಚ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.