
ಚೆಟ್ಟಳ್ಳಿ ಅ.15 NEWS DESK : ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆ ಚೆಟ್ಟಳ್ಳಿ ಶ್ರೀಮಂಗಲ ಶ್ರೀಭಗವತಿ ದೇವಾಲಯದಲ್ಲಿ ಸಂಕ್ರಮಣ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ವಿಘ್ನೇಶ್ವರ, ಕ್ಷೇತ್ರಪಾಲಕ, ನಾಗದೇವರಿಗೆ ಅರ್ಚಕರು ಪೂಜೆ ಸಲ್ಲಿಸಿ ಶ್ರೀ ಭಗವತಿ ದೇವರಿಗೆ ವಿಶೇಷ ಸಂಕ್ರಮಣ ಧಾರೆ ಪೂಜೆಯನ್ನು ಸಲ್ಲಿಸಿದರು. ಹಿರಿಯರಾದ ನಿವೃತ್ತ ಕ್ಯಾಪ್ಟನ್ ಮುಳ್ಳಂಡ ಪ್ರಭ ತಿಮ್ಮಯ್ಯ ಮಾತನಾಡಿ, ಹಿಂದಿನ ನಡೆದು ಬಂದ ಸಂಪ್ರದಾಯದಂತೆ ಕಾವೇರಿ ಸಂಕ್ರಮಣಕ್ಕೆ ಮುಂಚಿತವಾಗಿ ದೇವಾಲಯದಲ್ಲಿ ಸಂಕ್ರಮಣ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದು ಊರಿಗೆ ಒಳಿತನ್ನು ಮಾಡಲೆಂದು ಬೇಡಿಕೊಂಡರು. ಮಹಾಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.









