
ಮಡಿಕೇರಿ ಅ.15 NEWS DESK : ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನದ ಅಂಗವಾಗಿ ಮಡಿಕೇರಿ ವಿಪತ್ತು ನಿರ್ವಾಹಣ ಘಟಕದ ಶೌರ್ಯ ತಂಡದಿಂದ ಸ್ವಚ್ಛತಾ ಶ್ರಮದಾನ ನಡೆಯಿತು. ಮಡಿಕೇರಿ ಭಗವತಿ ನಗರದ ಅಂಗನವಾಡಿ ಕೇಂದ್ರದ ಸುತ್ತ ಬೆಳೆದಿದ್ದ ಗಿಡ ಗಂಟಿಗಳನ್ನು ತಂಡದ ಪ್ರಮುಖರು ಹಾಗೂ ಪದಾಧಿಕಾರಿಗಳು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭ ಶೌರ್ಯ ತಂಡದ ಸಂಯೋಜಕಿ ಲೀಲಾ ಶೇಷಮ್ಮ, ಪ್ರೇಮಾ, ಸದಸ್ಯರಾದ ಹರಿಣಾಕ್ಷಿ, ಲತಾ ರಘು, ತಾಜುನೀಸ, ಬಾನು, ತಾರಮಣಿ, ವೀಣಾ, ಶಕ್ತಿಸಂಘದ ಇಂದಿರಾ, ಸರಸ್ವತಿ, ಲೀಲಾವತಿ ರೈ, ಅಂಗನವಾಡಿ ಶಿಕ್ಷಕಿ ಶಶಿ, ಸಹಾಯಕಿ ಮೋಹಿನಿ ಪಾಲ್ಗೊಂಡಿದ್ದರು.









