ಸೋಮವಾರಪೇಟೆ ನ.21 NEWS DESK : ಹೊಸೂರು ಬೆಟ್ಟದ ಮೇಲಿರುವ ಶ್ರೀ ಬಸವೇಶ್ವರ ಮೂರ್ತಿಗೆ 2.8 ಕೆಜಿ ತೂಕದ ಬೆಳ್ಳಿಯ ಮುಖವಾಡವನ್ನು ನೀಡಿದ ಸೋಮವಾರಪೇಟೆ ಉದ್ಯಮಿ ಹೆಚ್.ಬಿ.ಹೃಷಿಕೇಶ್ ಅವರನ್ನು ದೇವಾಲಯದ ಕೌಟೆಕಾಯಿ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ದೇವಾಲಯ ಆಡಳಿತ ಮಂಡಳಿಯ ರಮೇಶ್, ಎಚ್.ಟಿ.ಪುಟ್ಟೇಗೌಡ, ಜಗದೀಶ್ ಗಣ್ಯರಾದ ಪ್ರತಿಭಾ ಮಂಜು, ಮುರುಳಿ ಮೋಹನ್ ಇದ್ದರು.











