
ಮಡಿಕೇರಿ NEWS DESK ಆ.8 : ಚೇರಂಬಾಣೆ ಬೇಂಗ್ ನಾಡ್ ಕೊಡವ ಸಮಾಜಕ್ಕೆ 2025 ರಿಂದ 2030 ರವರೆಗಿನ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಬಾಚರಣಿಯಂಡ ದಿನೇಶ್ ಗಣಪತಿ, ಕಾರ್ಯದರ್ಶಿಯಾಗಿ ಕೇಕಡ ರೋಮಿ ಮೊಣ್ಣಪ್ಪ, ಉಪಾಧ್ಯಕ್ಷರಾಗಿ ಖಾಯಂ ನಿರ್ದೇಶಕರಾದ ಪಟ್ಟಮಾಡ ಮಂಜು ಪೊನ್ನಪ್ಪ, ನಿರ್ದೇಶಕರುಗಳಾಗಿ ನಾಪಂಡ ದೇವಯ್ಯ, ಬೊಳಂದಂಡ ಮುತ್ತಪ್ಪ, ಕುಂಚೆಟ್ಟಿರ ಪೆಮ್ಮಯ್ಯ, ಕಲ್ಲುಮಾಡಂಡ ಕಾರ್ಯಪ್ಪ, ಪೊಡನೋಳಂಡ ರೇಷ್ಮ ತೇಜ, ನಾಟೋಳಂಡ ಕುಶಾಲಪ್ಪ, ಅಜ್ಜಿನಂಡ ಚೀಯಣ್ಣ, ಅಯ್ಯಂಡ ಅಯ್ಯಪ್ಪ, ಬೊಪ್ಪಡತಂಡ ಕಿಶೋರ್, ಕೇಕಡ ಸುಗುಣ, ಚಡಿಯಂಡ ಬೋಪಯ್ಯ, ತೇಲಪಂಡ ಲಕ್ಷಿö್ಮ ಪೆಮ್ಮಯ್ಯ, ತೇಲಪಂಡ ಬೋಪಯ್ಯ, ಕೊಟ್ಟುಕತ್ತೀರ ಪೊನ್ನಣ್ಣ, ಮಂಗೇರಿರ ಸುಮಿತ ಗಂಗಮ್ಮ, ಮಹಿಳಾ ನಿರ್ದೇಶಕರಾಗಿ ಬಡ್ಡಿರ ನಳಿನಿ ಪೂವಯ್ಯ ಹಾಗೂ ಚಿಯೇಬೇರ ರೇಖಾ ಮುದ್ದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಖಾಯಂ ನಿರ್ದೇಶಕರಾಗಿ ಪಟ್ಟಮಾಡ ಅಶೋಕ ತಿಮ್ಮಣ್ಣ ಮುಂದುವರೆಯಲಿದ್ದಾರೆ.








