
ಸೋಮವಾರಪೇಟೆ NEWS DESK ಆ.27 : ವೀರಭದ್ರೇಶ್ವರ ವರ್ಧಂತಿ ಮಹೋತ್ಸವದ ಅಂಗವಾಗಿ ಸೋಮವಾರಪೇಟೆ ತಾಲ್ಲೂಕಿನ ಕಿರಿಕೊಡ್ಲಿ ಮಠದಲ್ಲಿ ವಿಶೇಷ ಪೂಜೆ ನಡೆಯಿತು. ಭಾದ್ರಪದ ಮಾಸದ ಮೊದಲ ಮಂಗಳವಾರ ವೀರಭದ್ರಸ್ವಾಮಿ ಅವತರಿಸಿದರೆಂದು ಪ್ರತೀಥಿ ಇದ್ದು, ಈ ಭಾರಿ ಗೌರಿಹಬ್ಬದ ದಿನವೇ ಬಂದಿರುವುದು ವಿಶೇಷ. ಮಠದಲ್ಲಿ ಶ್ರೀಸದಾಶಿವ ಸ್ವಾಮೀಜಿ ವೀರಭದ್ರ ದೇವರಿಗೆ ಅಷ್ಟೋತ್ತರ, ಅರ್ಚನೆ ನಂತರ ಮಹಾಮಂಗಳಾರತಿ ನೆರವೇರಿಸಿದರು.








