ಸುಂಟಿಕೊಪ್ಪ ನ.4 NEWS DESK : ಐಗೂರು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಐಗೂರು ಕಸಾಪ ಘಟಕದ ಅಧ್ಯಕ್ಷ ಸಂಗಾರು ಕೀರ್ತಿ ಪ್ರಸಾದ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಂತರ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭ ಮಾತನಾಡಿದ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಅಜಿತ್ಕುಮಾರ್, ಕರ್ನಾಟಕದ ಜಲ, ನೆಲ, ಸಂಸ್ಕೃತಿ ಸಂಪ್ರಾದಾಯವನ್ನು ಉಳಿಸಿ ಬೆಳೆಸುವುದು ಕರ್ನಾಟಕದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಐಗೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಟಿ.ಎಸ್.ಪೂರ್ಣಕುಮಾರ್, ಕನ್ನಡ ಭಾಷೆಗೆ ತನ್ನದೆಯಾದ ವಿಶಿಷ್ಠ ಸಂಸ್ಕೃತಿ, ಪರಂಪರೆ, ಆಚಾರ ವಿಚಾರವಿದೆ. ಕನ್ನಡ ಭಾಷೆಯನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸಲು ಕನ್ನಡಾಭಿಮಾನಿಗಳು ಕೈಜೋಡಿಸಬೇಕೆಂದು ಕರೆ ನೀಡಿದರು. ಸೋಮವಾರಪೇಟೆ ತಾಲ್ಲೂಕು ಕಸಾಪ ಸದಸ್ಯ ಶಾಫಿ ಸದಿ ಮಾತನಾಡಿ, ಪ್ರಪಂಚದಲ್ಲೇ ವೈವಿಧ್ಯತೆಯಿಂದ ಕೂಡಿದ ಭಾಷೆ, ಸಂಸ್ಕೃತಿ ಕನ್ನಡದಾಗಿದೆ. ಹೃದಯ ವಿಶಾಲತೆ ಹೊಂದಿದ ಕನ್ನಡಿಗರು ದೇಶದ ಅವಿಭಾಜ್ಯ ಅಂಗವಾಗಿದ್ದಾರೆ ಎಂದು…
ಲೇಖಕ: admin
ಸುಂಟಿಕೊಪ್ಪ ನ.4 NEWS DESK : ಮಕ್ಕಳು ಪರಿಸರಕ್ಕೆ ಮಾರಕವಾಗಿರುವ ಸಿಡಿಮದ್ದುಗಳನ್ನು ಬಿಟ್ಟು, ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವಂತೆ ಸ್ಕೌಟ್ಸ್ ಮತ್ತು ಗೈಡ್ಸ್ನ ಕ್ಲಸ್ಟರ್ ಅಧಿಕಾರಿ ಸೀಮಾ ಹೇಳಿದರು. ಸುಂಟಿಕೊಪ್ಪ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸ್ಕೌಟ್ಸ್, ಗೈಡ್ಸ್, ಬುಲ್ ಬುಲ್, ಕಬ್ಸ್, ಸೇವಾದಳಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದೀಪಾವಳಿ ಹಬ್ಬದಲ್ಲಿ ಸಿಡಿಮದ್ದುಗಳನ್ನು ಸಿಡಿಸದೆ ಮಣ್ಣಿನ ಹಣತೆಗಳನ್ನು ಹಚ್ಚುವ ಮೂಲಕ ದೀಪಾವಳಿಯನ್ನು ಆಚರಿಸುವುದರಿಂದ ಪರಿಸರದಲ್ಲಿರುವ ಅಜೀವ ಸಂಕುಲಗಳ ರಕ್ಷಣೆಗೊಳ್ಳಲಿದೆ. ಪರಿಸರ ಕಲುಷಿತಗೊಳ್ಳುವುದನ್ನು ನಾವು ತಡೆಯಬಹುದಾಗಿದೆ. ಅದರಿಂದ ಮಕ್ಕಳು ಪಟಾಕಿ ಸಿಡಿಮದ್ದುಗಳನ್ನು ತ್ಯಜಿಸುವ ಮೂಲಕ ಪರಿಸರ ಸಂರಕ್ಷಿತ ದೀಪಾವಳಿಯನ್ನು ಆಚರಿಸುವಂತೆ ಸೀಮಾ ಕಿವಿಮಾತು ಹೇಳಿದರು. ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಕೌಟ್ಸ್, ಗೈಡ್, ಬುಲ್ ಬುಲ್, ಕಬ್ ಸೇವಾದಳಗಳ ಶಿಕ್ಷಕರುಗಳಾದ ಪ್ರೀತಿ ಜೋಯ್ಸ್ ಪಿಂಠೋ, ಈವಾ ಜೀತಾ ಬೆನ್ನಿಸ್, ಮಹೇಶ್ ವಿದ್ಯಾರ್ಥಿಗಳೊಂದಿಗೆ ಸೇರಿ ಬಣ್ಣ ಬಣ್ಣದ ರಂಗೋಲಿ ಪುಡಿಯಿಂದ ಆಕರ್ಷಕ ಚಿತ್ರಗಳನ್ನು…
ಮಡಿಕೇರಿ ನ.4 NEWS DESK : ಕನ್ನಡ ಕೇವಲ ಭಾಷೆಯಾಗಿರದೇ ಪ್ರತೀಯೋವ೯ ಕನ್ನಡಿಗನ ಉಸಿರು ಮತ್ತು ಬದುಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಜಾನಪದ ಪರಿಷತ್ ಖಜಾಂಚಿ ಎಸ್.ಎಸ್.ಸಂಪತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಓಂಕರ ಸದನದಲ್ಲಿ ಆಯೋಜಿತ ಸಮಥ೯ ಕನ್ನಡಿಗರು ಸಂಸ್ಥೆಯ ನಿಮ್ಮ ಪ್ರತಿಭೆ – ನಮ್ಮ ವೇದಿಕೆಯ ಸಾಂಸ್ಕೃತಿಕ ಸ್ಪಧೆ೯ಗಳನ್ನು ಉದ್ಘಾಟಿಸಿ ಮಾತನಾಡಿದ ಸಂಪತ್ ಕುಮಾರ್, ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡ ಭಾಷಿಕರನ್ನು ಒಗ್ಗೂಡಿಸಿ 68 ವಷ೯ಗಳ ಮೊದಲು ಕನಾ೯ಟಕ ರಾಜ್ಯವನ್ನಾಗಿ ರೂಪಿಸಿದ ಪರಿಣಾಮವೇ ಕನ್ನಡಿಗರು ಒಟ್ಟಾಗಿ ಕನ್ನಡದ ಕಂಪನ್ನು ಪಸರಿಸಲು ಸಾಧ್ಯವಾಗಿದೆ ಎಂದರು. ಕನ್ನಡ ಎಂದರೆ ಪ್ರೀತಿ, ಸ್ನೇಹ, ಸಹನಾ ಗುಣದ ಪ್ರತೀಕವಾಗಿದ್ದು, ಕನ್ನಡ ಮಾತನಾಡುವುದೇ ಪದ ಕಟ್ಟಿದಂತೆ ಎಂದು ಹೇಳಿದ ಸಂಪತ್ ಕುಮಾರ್, ಕನ್ನಡಪರ ಕಾಯ೯ಕ್ರಮಗಳು ನವಂಬರ್ ಗೆ ಮಾತ್ರ ಸೀಮಿತವಾಗದೇ ವಷ೯ಪೂತಿ೯ ಬೇರೆ ಬೇರೆ ಸಂಸ್ಥೆಗಳಿಂದ ಆಯೋಜಿತವಾಗಬೇಕು, ಪ್ರತೀ ದಿನವೂ ಎಲ್ಲೆಡೆ ಕನ್ನಡದ ಹಬ್ಬದ ಸಂಭ್ರಮ ಕಾಣುವಂತಾಗಬೇಕು ಎಂದು ಆಶಿಸಿದರು. ಕನ್ನಡ ಭಾಷೆ,…
ಮಡಿಕೇರಿ ನ.3 NEWS DESK : ಅಮೇರಿಕಾದಲ್ಲಿ ನೆಲಸಿರುವ ಪ್ರಭಾವತಿ ಫರ್ನಾಂಡಿಸ್ ಅವರು ಮಡಿಕೇರಿಯ ಕೊಡಗು ವಿದ್ಯಾಲಯಕ್ಕೆ 16.ಲಕ್ಷ ಅನುದಾನದಲ್ಲಿ ಚಿಣ್ಣರಿಗಾಗಿ ಕೊಡುಗೆಯಾಗಿ ನೀಡಿದ ಒಳಾಂಗಣ ಕ್ರೀಡಾವನವನ್ನು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್.ಟಿ ಉದ್ಘಾಟಿಸಿದರು. ನಗರದ ಕೊಡಗು ವಿದ್ಯಾಲಯಕ್ಕೆ ಪ್ರಭಾವತಿ ಫರ್ನಾಂಡಿಸ್, 16 ಲಕ್ಷ ರುಪಾಯಿಗಳನ್ನು ಕೊಡುಗೆಯಾಗಿ ನೀಡಿದ್ದು ಇದನ್ನು ಚಿಣ್ಣರ ಒಳಾಂಗಣ ಕ್ರೀಡಾವನಕ್ಕೆ ಬಳಸಿಕೊಂಡು ವೈವಿಧ್ಯಮಯ ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಕೊಡಗು ವಿದ್ಯಾಲಯದ ನಿದೇ೯ಶಕ ಸಿ.ಎಸ್.ಗುರುದತ್ ಮಾಹಿತಿ ನೀಡಿದರು. ಕ್ರೀಡಾವನ ಉದ್ಘಾಟಿಸಿದ ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್ ಟಿ, ಒಂದು ಸಂಸ್ಥೆ ಉತ್ತಮವಾಗಿ ಕಾಯ೯ ನಿವ೯ಹಿಸುತ್ತಿದ್ದಾಗ ಮಾತ್ರ ಅಂಥ ಸಂಸ್ಥೆಗೆ ದಾನಿಗಳು ಕೂಡ ಆಥಿ೯ಕ ನೆರವಿನ ಮೂಲಕ ಮತ್ತಷ್ಟು ಸೌಲಭ್ಯಗಳಿಗೆ ಕಾರಣರಾಗುತ್ತಾರೆ. ನಾಲ್ಕೂವರೆ ದಶಕಗಳ ಅಥ೯ಪೂಣ೯ ಸೈಕ್ಷಣಿಕ ಸಾಧನೆ ಹೊಂದಿರುವ ಕೊಡಗು ವಿದ್ಯಾಲಯ ಇಂಥ ಅನೇಕ ದಾನಿಗಳ ಮೂಲಕ ಸಾಕಷ್ಟು ಉನ್ನತ ಸೌಲಭ್ಯಗಳನ್ನು ತನ್ನ ವಿದ್ಯಾಥಿ೯ಗಳಿಗೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು…
ಮಡಿಕೇರಿ ನ.4 NEWS DESK : ಕೊಡಗಿನ ಸೈನಿಕ ಶಾಲೆಯ 12ನೇ ತರಗತಿಯ 60 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು 2024ನೇ ಸಾಲಿನ ಕೇಂದ್ರ ಲೋಕ ಸೇವಾ ಆಯೋಗದ(ಯು.ಪಿ.ಎಸ್.ಸಿ) ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್.ಡಿ.ಎ) ಪರೀಕ್ಷೆಯಲ್ಲಿ (ಎನ್ ಡಿ ಎ 154ನೇ ಮತ್ತು ಐ ಎನ್ ಎ116ನೇ ಕೋರ್ಸ್) ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಈ ಕುರಿತು ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ, ಈ ಸಾಧನೆಯು ನಮ್ಮ ವಿದ್ಯಾರ್ಥಿಗಳು ತೋರಿದ ಕಠಿಣ ಪರಿಶ್ರಮ ಮತ್ತು ನಿರಂತರ ತರಬೇತಿಯ ಪ್ರತೀಕವಾಗಿದೆ. ಶಾಲೆಯ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರಸ್ತುತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಶೇಕಡವಾರು 31.67ರಷ್ಟು ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು. ಶಾಲೆಯಲ್ಲಿ ಒದಗಿಸಲಾದ ಧನಾತ್ಮಕ ಮತ್ತು ಪ್ರೇರಣಾದಾಯಕವಾದ ಶೈಕ್ಷಣಿಕ ವಾತಾವರಣದ ಪ್ರತಿಬಿಂಬಿವಾಗಿದೆ. ಶಾಲೆಯು ನಿರಂತರವಾಗಿ ಶೈಕ್ಷಣಿಕ ಉತ್ಕೃಷ್ಟತೆಗೆ ಆದ್ಯತೆ ನೀಡುವುದರೊಂದಿಗೆ, ಭಾರತೀಯ ಸಶಸ್ತ್ರ ಪಡೆಗಳಿಗೆ ಶಾಲಾ ವಿದ್ಯಾರ್ಥಿಗಳನ್ನು ಅಧಿಕಾರಿಗಳಾಗಿ ಸೇರ್ಪಡೆಗೊಳಿಸುವ ಸಿದ್ಧತೆಯನ್ನು ನಿರಂತರವಾಗಿ ನಡೆಸುತ್ತಿದೆ. ಪ್ರಸ್ತುತ ವರ್ಷ ಎನ್…
ಮಡಿಕೇರಿ ನ.4 NEWS DESK : ಹೆಚ್.ಐ.ವಿ ಅರಿವಿನ ಮಾಸಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್ಎಸ್ಎಸ್ ಮತ್ತು ಆರ್.ಆರ್.ಸಿ ಘಟಕ ಸ್ವಯಂ ಸೇವಕರು ಹೆಚ್.ಐ.ವಿ ಏಡ್ಸ್ ಕುರಿತು ಬೀದಿ ನಾಟಕ ಹಾಗೂ Flash Mob ಕಾರ್ಯಕ್ರಮದ ಮೂಲಕ ಹೆಚ್.ಐ.ವಿ.ಏಡ್ಸ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘವ ಹಾಗೂ ಉದ್ಘಾಟಕರಾದ ಡಾ. ಎಂ.ಪಿ.ಕೃಷ್ಣ ಹೆಚ್.ಐ.ವಿ ಬಗ್ಗೆ ಮಾತನಾಡಿ, ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ICTC ಜಿಲ್ಲಾ ಆಸ್ಪತ್ರೆ ಮಡಿಕೇರಿಯ ಆಪ್ತಸಮಾಲೋಚಕಿ ಅನಿತಾ ಕುಮಾರಿ, ಅಧ್ಯಾಪಕರಾದ ಡಾ.ಎ.ಗಾಯತ್ರಿ ದೇವಿ, ಡಾ.ಆರ್.ರಾಜೇಂದ್ರ, ಡಾ.ಪಿ.ಎ.ಗೀತಾಂಜಲಿ, ಡಾ.ಪ್ರದೀಪ್ ಆರ್ ಭಂಡಾರಿ, ಡಾ. ಹೆಚ್.ಕೆ.ರೇಣುಶ್ರೀ, ಕಾಲೇಜಿನ ಎನ್ಎಸ್ಎಸ್ ಘಟಕದ ಎಲ್ಲಾ ಸ್ವಯಂಸೇವಕರು ಹಾಜರಿದ್ದರು. ಹೆಚ್.ಐ.ವಿ ಚಿಕಿತ್ಸೆ ಗೆ ಸಕಾರ್ಯರದಿಂದ ಸಿಗುವ ಸೇವಾ ಸೌಲಭ್ಯದ ಬಗ್ಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್, ಐಟಿಐ ಜಂಕ್ಷನ್ ಹಾಗೂ…
ಗೋಣಿಕೊಪ್ಪ, ನ.4 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆ ( ಕಾಪ್ಸ್ ) ಯಲ್ಲಿ ಗೋ ಗ್ರೀನ್ ಅಭಿಯಾನ: 2024 ದಡಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಲಾಯಿತು. ಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಣತೆ ಬೆಳಗಿಸುವ ಮೂಲಕ ದೀಪಾವಳಿ ಆಚರಿಸುವ ಮೂಲಕ ಸಂಭ್ರಮಿಸಿದರು. ಪರಿಸರಸ್ನೇಹಿ ದೀಪಾವಳಿ ಆಚರಿಸುವ ಕುರಿತು ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಹಸಿರು ದೀಪಾವಳಿ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಗೈಡ್ ಕ್ಯಾಪ್ಟನ್ ಬಿ.ಎಸ್.ಕಾವೇರಿ, ನಾವು ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯವನ್ನುಂಟು ಮಾಡದೆ ನಮ್ಮ ಪರಿಸರ ಮತ್ತು ನಾಗರಿಕರ ಆರೋಗ್ಯಕ್ಕೆ ನೀಡಬೇಕು. ಇದು ನಮ್ಮ ಪರಿಸರ ಜವಾಬ್ದಾರಿಯ ಅಗತ್ಯತೆ ಎಂದರು. ಪಟಾಕಿ ಸಿಡತವು ನೆಲ, ಜಲ, ಗಾಳಿಯನ್ನು ವಿಕಾರಗೊಳಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ ಎಂದರು. ವಿದ್ಯಾರ್ಥಿಗಳು ಹಣತೆ ಬೆಳಗಿಸಿ ದೀಪಾವಳಿ ಆಚರಿಸಿ, ಪಟಾಕಿ…
ಮಡಿಕೇರಿ ಅ.4 NEWS DESK : ‘ಆರೋಗ್ಯವೇ ಭಾಗ್ಯ’ ಎಂಬ ನುಡಿಯಂತೆ ಆರೋಗ್ಯವೊಂದಿದ್ದರೆ ಎಲ್ಲವನ್ನೂ ಸಂಪಾದಿಸಬಹುದು. ಆದ್ದರಿಂದ ಇಂದಿನ ಮಕ್ಕಳು ತಮ್ಮ ದೈನಂದಿನ ಶಿಕ್ಷಣದೊಂದಿಗೆ ಆಯ್ದ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಾಗಬೇಕು ಎಂದು ಹಿರಿಯ ಕ್ರೀಡಾಪಟು, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ. ದೇವಯ್ಯ (ಚುಮ್ಮಿ) ಕರೆ ನೀಡಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್ ನ 23ನೇ ವಾರ್ಷಿಕೋತ್ಸವದ ಅಂಗವಾಗಿ ಅ.3 ರಂದು ಪತ್ರಿಕಾ ಭವನದಲ್ಲಿ ಪತ್ರಕರ್ತರು ಹಾಗೂ ಪತ್ರಕರ್ತರ ಕುಟುಂಬದವರಿಗೆ ಆಯೋಜಿಸಿದ್ದ ಒಳಾಂಗಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಕೆಗಳಲ್ಲಿ ಪಾಲೊಳ್ಳುವುದು ಅತ್ಯವಶ್ಯವಾಗಿದೆ ಎಂದು ಅವರು ಹೇಳಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಕ್ರೀಡೆಗಳು ಸಹಕಾರಿಯಾಗುತ್ತವೆ. ಪತ್ರಕರ್ತರ ಕುಟುಂಬಗಳು ಇಂತಹ ಕ್ರೀಡಾಕೂಟಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸಂಸ್ಥಾಪಕ ಟ್ರಸ್ಟಿ ಟಿ.ಪಿ.…
ಮಡಿಕೇರಿ NEWS DESK ನ.2 : ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನ.6 ರಂದು ಬುಟ್ಟಂಗಾಲದಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ 10.30 ಗಂಟೆಗೆ ಬುಟ್ಟಂಗಾಲ ಜಂಕ್ಷನ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೊಡವ ಲ್ಯಾಂಡ್ ನ ಸಂರಕ್ಷಣೆಗಾಗಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಪ್ರತಿಜ್ಞಾವಿಧಿ ಸ್ವೀಕರಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕೊಡಗಿನಲ್ಲಿ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ ವ್ಯಾಪಕವಾಗಿ ದುರುಪಯೋಗವಾಗುತ್ತಿದೆ. ಬೃಹತ್ ನಗರ ನಿರ್ಮಿಸುವ ಹುನ್ನಾರದೊಂದಿಗೆ ಬರಪೊಳೆ, ಕೊಂಗಣಪೊಳೆ ಸೇರಿದಂತೆ ಕಾವೇರಿ ನದಿಯ ಹಲವು ಉಪ ನದಿಗಳಿಗೆ ಜೀವ ಸೆಲೆಯಾಗಿರುವ ಪೆರುಂಬಾಡಿ, ಬಾಳುಗೋಡು, ನಾಂಗಾಲ, ಬುಟ್ಟಂಗಾಲ ಭಾಗದಲ್ಲಿ ಭೂಮಿ ಕಬಳಿಸಲು ಬಂಡವಾಳಶಾಹಿಗಳು ಹವಣಿಸುತ್ತಿದ್ದಾರೆ. ಬಂಡವಾಳಶಾಹಿ ಆರ್ಥಿಕ ಅಪರಾಧಿಗಳು, ರೆಸಾರ್ಟ್ ಮಾಫಿಯಾ, ಟೌನ್ಶಿಪ್ ಧಣಿಗಳು, ಹವಾಲ ದಂಧೆಕೋರರು ತಮ್ಮ ಕರಾಳ ವಿಷ ವರ್ತುಲಗಳ ಮೂಲಕ ಇಡೀ ಪ್ರದೇಶದ…
ಶನಿವಾರಸಂತೆ ನ.2 NEWS DESK : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ರಾಷ್ಟ್ರೀಯ ಹಸಿರು ಪಡೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸಹಯೋಗದೊಂದಿಗೆ ಶನಿವಾರಸಂತೆ ಹೋಬಳಿಯ ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ನ.1 ರಂದು ಶಾಲೆಯ ನಿಸರ್ಗ ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲೆಯಲ್ಲಿ ಜತೆಗೂಡಿ ಹಣತೆ ಬೆಳಗಿಸಿ ಹಸಿರು ದೀಪಾವಳಿ ಆಚರಿಸುವ ಕುರಿತು ಪ್ರತಿಜ್ಞೆ ಸ್ವೀಕರಿಸಿದರು. “ಸ್ವಚ್ಛ ದೀಪಾವಳಿ – ಸ್ವಸ್ಥ ದೀಪಾವಳಿ” ಆಚರಣೆ ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಎಂ.ಸಿ.ನಳಿನಿ, ಪರಿಸರಕ್ಕೆ ಹಾನಿಯುಂಟು ಮಾಡುವ ಮಾಲಿನ್ಯಕಾರಿ ಪಟಾಕಿಗಳನ್ನು ತ್ಯಜಿಸಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು. ಹಸಿರು ದೀಪಾವಳಿ ಆಚರಣೆ ಕುರಿತು ಮಾಹಿತಿ ವಿದ್ಯಾರ್ಥಿಗಳಿಗೆ ನೀಡಿದ ಇಕೋ ಕ್ಲಬ್ ಘಟಕದ ಉಸ್ತುವಾರಿ ಶಿಕ್ಷಕ ಡಿ.ಎಸ್. ಮಧುಕುಮಾರ್ , ಮಾಲಿನ್ಯಕಾರಿಲ ಪಟಾಕಿ ತ್ಯಜಿಸಿ…






