ಲೇಖಕ: admin

ಮಡಿಕೇರಿ ಮೇ 15 NEWS DESK  : ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡಲಾಗುವ ಕೆಸಿಸಿ ಫಸಲು ಸಾಲಕ್ಕೆ ಫ್ರೂಟ್ ತಂತ್ರಾಂಶದಿಂದ ವಿನಾಯಿತಿ ನೀಡಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2024-25ನೇ ಸಾಲಿಗೆ ರೈತರಿಗೆ ಕೆಸಿಸಿ ಫಸಲು ಸಾಲ ವಿತರಿಸಲಾಗುತ್ತಿದೆ. ಆದರೆ ಸಂಘದ ಕಾರ್ಯವ್ಯಾಪ್ತಿಗೆ ಬರುವ ಶೇ.40 ರಷ್ಟು ಸದಸ್ಯರುಗಳು ಜಂಟಿ ಪಹಣಿ ಹೊಂದಿರುವುದರಿಂದ ಇವರುಗಳು ಹೊಂದಿರುವ ನೈಜ ಆಸ್ತಿಯು ಫ್ರೂಟ್ ತಂತ್ರಾಂಶದಲ್ಲಿ ನಮೂದಾಗಿಲ್ಲ. ಇದರಿಂದ ಸಂಘದಿಂದ ನೀಡಲಾಗುತ್ತಿರುವ ಕೆಸಿಸಿ ಫಸಲು ಸಾಲದಿಂದ ಇವರು ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜಂಟಿ ಪಹಣಿಯಿಂದ ಫ್ರೂಟ್ ತಂತ್ರಾಂಶದಲ್ಲಿ ಆಸ್ತಿ ನಮೂದಾಗದ ಕಾರಣ ಕೃಷಿಕರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಶೂನ್ಯ ಬಡ್ಡಿ ದರದ ಸಾಲವನ್ನು ಕೂಡ ಪಡೆಯಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಫ್ರೂಟ್ ತಂತ್ರಾಂಶ ಪ್ರಕ್ರಿಯೆ ವಿಳಂಬವಾಗುತ್ತಿದೆ. ದಲ್ಲಾಳಿಗಳು ಏಕರೆಗೆ…

Read More

ಕಡಂಗ ಮೇ 15 NEWS DESK : ಮನ್ಶ ಉಲ್ ಉಲೂಂ ಕಡಂಗ ಮದ್ರಸ ವಿದ್ಯಾರ್ಥಿಗಳಿಗೆ ಯೂಸುಫ್ ಮುಸ್ಲಿಯಾರ್ ಕುಟುಂಬದ ವತಿಯಿಂದ ಉಚಿತ ಮದ್ರಸ ಪಠ್ಯ ಪುಸ್ತಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಲ್ಲ್ ಖತೀಬ್ ರಫೀಖ್ ಲತೀಫಿ, ಸದರ್ ಮುಅಲ್ಲಿಂ ಸುಹೈಬ್ ಫೈಝಿ, ಯೂಸುಫ್ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಅಬ್ದುರ್ರಹ್ಮಾನ್, ಸಮಿತಿ ಸದಸ್ಯರಾದ ರಝಾಖ್ ಸಹ ಅಧ್ಯಾಪಕರುಗಳಾದ ಹನೀಫ್ ಮುಸ್ಲಿಯಾರ್, ಮಮ್ಮಿ ಉಸ್ತಾದ್, ನಾಸರ್ ಫೈಝಿ ಹಾಗೂ ಅಹ್ಮದ್ ಹಾಜರಿದ್ದರು. ವರದಿ : ನೌಫಲ್  

Read More

ಮಡಿಕೇರಿ ಮೇ 15 NEWS DESK : ಕೊಡಗು ಜಿಲ್ಲೆಯಲ್ಲಿ ಮರಗಳ ಗಣತಿ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರೆಸಿದ್ದು, ಕೃಷಿಕ ವರ್ಗಕ್ಕೆ ಮಾರಕವಾಗಿರುವ ಆದೇಶವನ್ನು ಸರಕಾರ ಹಿಂಪಡೆಯುವವರೆಗೆ ವಿವಿಧ ಹಂತಗಳಲ್ಲಿ ಹೋರಾಟವನ್ನು ರೂಪಿಸುವುದಾಗಿ ಕೊಡಗು ಜಿಲ್ಲಾ ಬಿಜೆಪಿ ಎಚ್ಚರಿಕೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು, ತೋಟಗಳಲ್ಲಿರುವ ಮರಗಳ ಗಣತಿ ಕಾರ್ಯ ಜಿಲ್ಲೆಗೆ ಮಾರಕವಾಗಿದೆ. ಗಣತಿ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಬೆಳೆಗಾರರ ಪರವಾಗಿ ಬಿಜೆಪಿ ಈ ಹಿಂದೆಯೇ ಆಗ್ರಹಿಸಿದ್ದರೂ ಸರಕಾರ ಯಾವುದೇ ಸ್ಪಂದನೆ ನೀಡಿಲ್ಲ. ಆದ್ದರಿಂದ ಮೇ 17 ರಂದು ಮಡಿಕೇರಿಯ ಅರಣ್ಯ ಭವನದ ಎದುರು ಬಿಜೆಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಬೆಳೆಗಾರರು, ಸಾರ್ವಜನಿಕರು ಹಾಗೂ ದೇವಾಲಯ ಸಮಿತಿಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಜಿಲ್ಲೆಯ ಶಾಸಕರು ಮರಗಳ ಗಣತಿ ಕಾರ್ಯ ಮುಂದುವರೆಯುವುದಿಲ್ಲ ಎಂದು ಭರವಸೆ ನೀಡಿದ ಮಾರನೇಯ ದಿನವೇ ಸಂಪಾಜೆ ಮತ್ತು ಚೆಂಬು ಭಾಗದಲ್ಲಿ ಅರಣ್ಯ ಸಿಬ್ಬಂದಿಗಳು ಮರಗಳ ಸರ್ವೆ ನಡೆಸಿದ್ದಾರೆ. ಅಧಿಕಾರಿಗಳು…

Read More

ಮಡಿಕೇರಿ ಮೇ 15  NEWS DESK : 2023-24 ನೇ ಸಾಲಿನ ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ [ಸಿ.ಬಿ.ಎಸ್.ಇ.] ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ಮಡಿಕೇರಿಯ ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿನಿ ಕೆ.ಕೆ.ಸರ್ವಿಕ ಶೇ. 97.16 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕೆ.ಕೆ.ಸರ್ವಿಕ ಮೂಲತಃ ನಾಪೋಕ್ಲು ಬೇತು ಗ್ರಾಮದ ನಿವಾಸಿ ಪ್ರಸ್ತುತ ಮಡಿಕೇರಿಯ ತಾಳತ್ತಮನೆಯಲ್ಲಿ ವಾಸವಿರುವ ಕೊಂಡಿರ ಕಿಶನ್‌ ಕಾರ್ಯಪ್ಪ ಹಾಗೂ ಕಾವ್ಯ ಕಾವೇರಮ್ಮ[ ತವರುಮನೆ ಮೂಡೆರ] ಅವರ ಪುತ್ರಿ.

Read More

ಮಡಿಕೇರಿ ಮೇ 15 NEWS DESK : ಹುಲಿದಾಳಿಗೆ ಎರಡು ಹಸುಗಳು ಬಲಿಯಾಗಿರುವ ಘಟನೆ ಪೊನ್ನಂಪೇಟೆ ತಾಲೂಕಿನಲ್ಲಿ ನಡೆದಿದೆ. ಹಾತೂರು ಗ್ರಾ.ಪಂ ವ್ಯಾಪ್ತಿಯ ಈಚೂರು ಕುಂದ ಗ್ರಾಮದ ತಾತೀರ ಎಸ್.ದೇವಯ್ಯ ಎಂಬವರ ಮನೆಯ ಮುಂದೆ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಹುಲಿದಾಳಿ ನಡೆಸಿ ಕೊಂಡು ಹಾಕಿದೆ. ಅದೇ ಹುಲಿ ಸುಮಾರು ಎರಡು ಕಿ.ಮೀ ದೂರದಲ್ಲಿರುವ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಣ ಗ್ರಾಮದ ಕಡೆಮಾಡ ಭೀಮಯ್ಯ ಎಂಬವರ ಹಸುವಿನ ಮೇಲೆ ಅದೇ ದಿನ ದಾಳಿ ನಡೆಸಿ ಕೊಂದು ಹಾಕಿದೆ. ಹುಲಿದಾಳಿಯಿಂದ ಹಸು ಕಳೆದಿಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದು, ಅರಣ್ಯ ಇಲಾಖೆ ಶೀಘ್ರವಾಗಿ ನಾಡಿಗೆ ಬಂದಿರುವ ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. ಘಟನೆ ನಡೆದ ಸ್ಥಳಗಳಿಗೆ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ.ಶಂಕರ್, ಉಪ ವಲಯ ಅರಣ್ಯಾಧಿಕಾರಿಗಳಾದ ದಿವಾಕರ್, ಸಚಿನ್ ಹಾಗೂ ಆರ್‍ಆರ್‍ಟಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

ಮಡಿಕೇರಿ ಮೇ 15 NEWS DESK : ಉದಯೋನ್ಮುಖ ಕ್ರೀಡಾ ಪ್ರತಿಭೆ ಕೊಡಗಿನ ಯುವತಿ ಬೊಳ್ಳಂಡ ಉನ್ನತಿ ಅಯ್ಯಪ್ಪ ಇದೀಗ ತಮ್ಮ ಕ್ರೀಡಾ ಸಾಧನೆಗೆ ಹೊಸದೊಂದು ಗರಿ ಮೂಡಿಸಿಕೊಂಡಿದ್ದಾರೆ. 18ರ ವಯೋಮಿತಿಯಲ್ಲಿ ಉನ್ನತಿ ಇದೀಗ ಸೀನಿಯರ್ ವಿಮೆನ್ಸ್ ವಿಭಾಗದಲ್ಲಿ ಸ್ಪರ್ಧಿಸಿ 200 ಮೀಟರ್ ಹರ್ಡಲ್ಸ್‍ನಲ್ಲಿ ಸೀನಿಯರ್ ವಿಭಾಗದಲ್ಲಿ ಚೊಚ್ಚಲ ಚಿನ್ನದ ಪದಕದ ಸಾಧನೆ ಮಾಡಿರುವುದು ವಿಶೇಷವಾಗಿದೆ. ಭುವನೇಶ್ವರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಕಪ್ ಕ್ರೀಡಾಕೂಟದಲ್ಲಿ ಉನ್ನತಿ ಸ್ಪರ್ಧಿಸಿ 200 ಮೀಟರ್ಸ್ ಹರ್ಡಲ್ಸ್‍ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಅಂತರವನ್ನು 23.85 ಸೆಕೆಂಡ್‍ನಲ್ಲಿ ಕ್ರಮಿಸುವ ಮೂಲಕ ವೃತ್ತಿ ಜೀವನದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ 2024ರ ಆಗಸ್ಟ್‍ನಲ್ಲಿ ಪೆರುವಿನಲ್ಲಿ ನಡೆಯಲಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‍ಗೆ ಇವರು ಅರ್ಹತೆಗಳಿಸಿದ್ದು, ದೇಶವನ್ನು ಪ್ರತಿನಿಧಿಸಲಿದ್ದಾರೆ. ಇತ್ತೀಚಿಗೆ ದುಬೈನಲ್ಲಿ ನಡೆದ ಜೂನಿಯರ್ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ 100 ಮೀಟರ್ ಹರ್ಡಲ್ಸ್‍ನಲ್ಲಿ ಇವರು ಕಂಚಿನ ಪದಕಗಳಿಸಿದ್ದರು. ಇದೀಗ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್‍ನಲ್ಲಿ…

Read More

ನಾಪೋಕ್ಲು ಮೇ 14 NEWS DESK : ಪ್ರತಿಯೊಬ್ಬ ಗುರು ತನ್ನ ನೋವನ್ನು ಮರೆತು ತನ್ನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯನ್ನು ಬಯಸುತ್ತಿರುತ್ತಾರೆ. ಅಂತಹ ಗುರುಗಳನ್ನು ವಂದಿಸಿ ಅಭಿನಂದಿಸಿದಾಗ ವಿದ್ಯಾರ್ಥಿಯ ಜೀವನ ಸಾರ್ಥಕವಾಗುತ್ತದೆ ಎಂದು ಮೈಸೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪಟ್ಟಡ ಶಿವಕುಮಾರ್ ಅಭಿಪ್ರಾಯಪಟ್ಟರು. ಮದೆನಾಡು ಗ್ರಾಮದ ಬೆಳಕುಮಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದ ಸಮಾರೋಪ ನುಡಿಗಳನ್ನಾಡಿದರು. ವಿದ್ಯಾರ್ಥಿ ಎಷ್ಟು ಎತ್ತರಕ್ಕೆ ಏರುತಾನೋ ಅಷ್ಟೇ ವಿಧೇಯರಾಗಿ ಗುರುಗಳ ಮುಂದೆ ನಡೆದುಕೊಳ್ಳಬೇಕು. ಗುರುಗಳ ಮಾರ್ಗದರ್ಶನದಿಂದ ಜೀವನದಲ್ಲಿ ಎದುರಾಗುವ ಯಾವುದೇ ಸೋಲುಗಳನ್ನು ಹಿಮ್ಮಟಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಶಾಲೆಯ ಸ್ಥಾಪಕ ಶಿಕ್ಷಕಿ ಗೌರಮ್ಮ ಸಮಾರಂಭವನ್ನು ಉದ್ಘಾಟಿಸಿ, ತಮ್ಮ ಐವತ್ತು ವರ್ಷಗಳ ಹಿಂದಿನ ಸೇವೆಯನ್ನು ಮೆಲುಕು ಹಾಕಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮದೆಮಹೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ.ಆರ್.ಜೋಯಪ್ಪ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದ ಮೇಲೆ ಕ್ರಮೇಣ ಜನರು ಬಡತನದಿಂದ ಹೊರಬಂದು…

Read More

ಸುಂಟಿಕೊಪ್ಪ ಮೇ 15 NEWS DESK  : ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೇರವೇರಿತು. ಎರಡು ದಿನಗಳ ಕಾಲ ದೇವಾಲಯದ ಆವರಣದಲ್ಲಿ ದೇವಾಲಯದ ಅರ್ಚಕರಾದ ಮಂಜುನಾಥ್ ಉಡುಪ ಹಾಗೂ ಕೇರಳದ ತಂತ್ರಿಗಳಾದ ಶಂಕರ ನಂಬೂದರಿ ತಂಡದವರಿಂದ ವಿಶೇಷ ಪೂಜೆ ನಡೆಯಿತು. ಗಣಹೋಮ, ಕಳಶಾಭಿಷೇಕ, ತತ್ವಹೋಮ, ಮೃತ್ಯುಂಜಯ ಹೋಮ, ನವಗ್ರಹಗಳ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಸಮಿತಿ ಅಧ್ಯಕ್ಷರಾದ ಪಟ್ಟೆಮನೆ ಉದಯ, ಖಜಾಂಚಿ ರಮೇಶ್ ಪಿಳ್ಲೆ, ಕಾರ್ಯದರ್ಶಿ ಪಿ.ಸಿ.ಮೋಹನ, ಸಹ ಕಾರ್ಯದರ್ಶಿ ಯಂಕನ ಕೌಶಿಕ್, ಸಲಹೆಗಾರರಾದ ಕೆ.ಪಿ.ಜಗನ್ನಾಥ್, ಜಗದೀಶ್ ರೈ, ದೀನು ದೇವಯ್ಯ, ಜೆ.ಎನ್.ಚಂದ್ರ ಶೇಖರ್, ಬಿ.ವಿ.ಮಹೇಶ್ ರೈ, ಬಿ.ಡಿ. ರಾಜು ರೈ, ವೀಣಾ ಮಹೇಶ್, ರಮ್ಯಾ ಮೋಹನ್, ಪಿ.ಸಿ.ಸಂದರ್, ಶೈಲಾ ಸಂದರ್, ಪೂರ್ಣ ಸತೀಶ್, ಸೌಮ್ಯ ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.

Read More

ಸೋಮವಾರಪೇಟೆ ಮೇ 15 NEWS DESK : ರೋಟರಿ ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿ 100 ಅಂಗನವಾಡಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಎಚ್.ಆರ್.ಕೇಶವ್ ಹೇಳಿದರು. ರೋಟರಿ ಹಾಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ಅಂಗನವಾಡಿಗಳು ಮಗುವಿನ ಮೊದಲ ಪಾಠಶಾಲೆಯಾಗಿವೆ. ಅಂಗನವಾಡಿ ಶಿಕ್ಷಕಿಯೇ ಮೊದಲು ಗುರುವಾಗಿದ್ದಾರೆ. ಪೋಷಕರು ಕೆಲಸದ ಒತ್ತಡದಿಂದ ಒಂದು ವರ್ಷಕ್ಕೆ ಮಗುವನ್ನು ಅಂಗನವಾಡಿಗೆ ಸೇರಿಸುವಂತೆ ಪರಿಸ್ಥಿತಿ ಬಂದಿದ್ದು, ಅಂಗನವಾಡಿಗಳಿಗೆ ಸೌಲಭ್ಯಗಳನ್ನು ಒದಗಿಸಿದರೆ ಮಕ್ಕಳ ಬೆಳವಣಿಗೆಗೆ ಉಪಯೋಗವಾಗಲಿದೆ ಎಂದು ಹೇಳಿದರು. ಅಂಗನವಾಡಿಗಳ ಕಟ್ಟಡ ದುರಸ್ತಿ, ಶೌಚಾಲಯ, ಪೀಠೋಪಕರಣ, ಕ್ರೀಡಾ ಆಟಿಕೆಗಳು, ಅಡಿಗೆಪಾತ್ರೆಗಳನ್ನು ಖರೀದಿಸಿ ಕೊಡಲಾಗುವುದು ಎಂದು ಹೇಳಿದರು. ಸೋಮವಾರಪೇಟೆ ರೋಟರಿ ಹಿಲ್ಸ್ ಅತ್ಯುತ್ತಮ ಕ್ಲಬ್ ಆಗಿದೆ. ಅನೇಕ ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ. ಸಾರ್ವಜನಿಕ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್ ನಿರ್ಮಾಣ ಮಾಡಿದ್ದಾರೆ. ಬಜೆಗುಂಡಿಯಲ್ಲಿ ಪ್ರಯಾಣಿಕರ ತಂಗುದಾಣ ಉದ್ಘಾಟನೆಯಾಗಿದೆ. ಶವಪೆಟ್ಟಿಗೆ(ಐಸ್ ಬಾಕ್ಸ್) ಖರೀದಿಸಿ ಸಾರ್ವಜನಿಕರ ಉಪಯೋಗಕ್ಕೆ ಸರ್ಕಾರಿ ಆಸ್ಪತ್ರೆಗೆ ನೀಡಲಾಗುವುದು ಎಂದು ಹೇಳಿದರು. ರೋಟರಿ ಸಂಸ್ಥೆಗೆ 120…

Read More

ಸೋಮವಾರಪೇಟೆ ಮೇ 14 NEWS DESK : ಕಾಡೆಮ್ಮೆ ದಾಳಿ ಮಾಡಿದ ಪರಿಣಾಮ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಗ್ರಾಮದಲ್ಲಿ ನಡೆದಿದೆ.  ನಾಡ್ನಳ್ಳಿ ಮನೆ ಜೋಯಪ್ಪ ಅವರ ಪತ್ನಿ ಎನ್.ಜೆ.ಮನು ಅವರು ಗಾಯಗೊಂಡಿದ್ದು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತೋಟದಲ್ಲಿ ಕೆಲಸ ಮಾಡುವಾಗ ಕಾಡೆಮ್ಮೆ ದಾಳಿ ಮಾಡಿದ್ದು, ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿದೆ. ಬಡ ಕುಟುಂಬಕ್ಕೆ ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)

Read More