ಚೆಟ್ಟಳ್ಳಿ ಆ.1 : ಗೋವಾದಲ್ಲಿ ನಡೆದ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ- 2023 ರ್ಯಾಲಿಯಲ್ಲಿ ಕೊಡಗಿನ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಓವರಾಲ್ ನಲ್ಲಿ ದ್ವಿತೀಯ ಹಾಗೂ ಕ್ಯಾಟಗರಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ದೆಹಲಿಯ ಕೂಗರ್ ಮೋಟರ್ಸ್ ವತಿಯಿಂದ ದಕ್ಷಿಣಗೋವಾದಲ್ಲಿ ನಡೆದ ವಿಶ್ವದಲ್ಲೇ 5ನೇ ಕಠಿಣಕರ ಮೋಟಾರ್ ಕ್ರೀಡೆಯ ರ್ಯಾಲಿಯಲ್ಲಿ ಒಂದಾದ ಸಾಹಸಕ್ರೀಡಾ ಪ್ರತೀ ವರ್ಷ ಮಳೆಗಾಲದಲ್ಲಿ ಆಯೋಜಿಸುವ ರೈನ್ ಫಾರೆಸ್ಟ್ ಚಾಲೆಂಜ್ ಇಂಡಿಯಾ- 2023 ರ್ಯಾಲಿಯು ಒಟ್ಟು 26 ಕಠಿಣಕರ ಹಂತಗಳಿದ್ದು, ದಟ್ಟ ಕಾಡಿನೊಳಗೆ ಅತೀ ವೇಗದ ಚಾಲನೆಯಂದಿಂಡಿದು ಕೆಸರಿನೊಳಗೆ ಕಲ್ಲು ಇಳಿಜಾರು ತಿರಿವಿನ ರಸ್ತೆಗಳುತುಂಬಿ ಹರಿಯುವ ನದಿಯೊಳಗೆ ವಾಹನವನ್ನು ಚಾಕಚಕ್ಯತೆಯಿಂದ ನಡೆಸಿ ಮುಂದಿನ ಹಂತವನ್ನು ನಡೆಸಬೇಕಿತ್ತು. ಅರುಣಾಚಲಪ್ರದೇಶ, ಚಂಡಿಗಡ್, ದೆಹಲಿ, ಹೈದರ ಬಾದ್, ತೆಂಗಾಣ, ಗೋವಾ, ಕೇರಳ, ಕರ್ನಾಟಕದಿಂದ ಹಲವು ನುರಿತ ರ್ಯಾಲಿಪಟುಗಳು ಸೇರಿ ಆಫ್ ರೋಡ್ ರ್ಯಾಲಿಗೆ ಸಿದ್ದಗೊಂಡ 4*4 ನ ಒಟ್ಟು 21 ವಾಹನಗಳು ಭಾಗವಹಿಸಿದ್ದವು. ಕೇರಳದ ಕೋಟಾಯಂನ ಆನಂದ್ ಮಂಜುರನ್ ಡ್ರೈವರ್ ಹಾಗು ಕೋಡ್ರೈವರಾಗಿ…
ಲೇಖಕ: admin
ಚೆಯ್ಯಂಡಾಣೆ ಆ.1 : ಕಡಂಗ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕೋಡಿರ ಎಂ.ತಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ನಂಬಿಯಪಂಡ.ಎ.ಅಯ್ಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೋಡಿರ.ಎಂ.ನಾಣಯ್ಯ, ಐತಿಚಂಡ ಪಿ.ಮಾದಯ್ಯ, ಪಾಂಡಂಡ.ಎಂ.ಸುಬ್ರಮಣಿ, ಮೇದುರ.ಎನ್.ಕುಶಾಲಪ್ಪ, ನೆಲ್ಲಚಂಡ.ಟಿ.ಕಿರಣ್ ಕಾರ್ಯಪ್ಪ,ಬೆಪುಡಿಯಂಡ.ಎಸ್.ಜಾನ್ಸಿ, ಕೆ.ಜೆ.ಶಾರದ, ಕೈಪಂಗಡ.ಕೆ.ಉತ್ತಪ್ಪ, ಸೊಮ್ಮಯ್ಯ.ಎಂ.ಎ, ಹೆಚ್.ಕೆ.ಗಂಗಮ್ಮ , ಐತಿಚಂಡ.ಕೆ. ವನಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ರಿಟರ್ನಿಂಗ್ ಅಧಿಕಾರಿ ಬಿ.ಜಿ. ಸಂದೀಪ್ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ವರದಿ : ಅಶ್ರಫ್
ಮಡಿಕೇರಿ ಆ.1 : ಭಾರತದ ವಿಭಿನ್ನ ಸ್ಥಾನಗಳಿಂದ ಈಶ್ವರೀಯ ಸೇವೆಯಲ್ಲಿ ಸಮರ್ಪಿತರಾಗಿರುವ ರಾಜಯೋಗಿ ಶಿಕ್ಷಕಿಯರು, ಕುಮಾರ ಕುಮಾರಿಯರು 50 ಜನರ ತಂಡ ತಮ್ಮ ತಮ್ಮ ಸ್ಥಾನಗಳ ಸಂಸ್ಕೃತಿಗಳ ಮಾಹಿತಿಗಳನ್ನು ರಷ್ಯಾದ ಸಹೋದರ ಸಹೋದರಿಯರಿಗೆ ಅರಿವು ಮೂಡಿಸಿದರು. ರಷ್ಯಾದ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ ಬರ್ಗ್ ಗೆ ಎರಡು ವಾರಗಳ ಪ್ರವಾಸ ಕೈಗೊಂಡ ಬ್ರಹ್ಮಾಕುಮಾರೀಸ್ ಮಡಿಕೇರಿ ಶಾಖೆಯ ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕನವರು ಹಾಗೂ ರಾಜಯೋಗಿ ಶಿಕ್ಷಕಿಯರು, ಕುಮಾರ ಕುಮಾರಿಯರು ಅಲ್ಲಿಯ ಸಂಸ್ಕೃತಿ ಕಲೆಗಳ ಬಗ್ಗೆ ವಿಶೇಷ ಅನುಭವ ಪಡೆದರು. ಮಡಿಕೇರಿ ಶಾಖೆಯ ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕ ಮಾತನಾಡಿ, ಅಲ್ಲಿಯ ಜನರ ಕಲಾಭಿಮಾನ ಅಧ್ಯಾತ್ಮ ಪ್ರೀತಿ ಕೇಂದ್ರಗಳ ಸೇವಾ ಕಾರ್ಯಗಳು ವರ್ಣನಾತೀತ. ಭಾರತದ ಬಗ್ಗೆ ಇರುವ ಅಭಿಮಾನ ಪ್ರೀತಿ ಅವರ ಮಾತು ಸತ್ಕಾರಗಳಲ್ಲಿ ಅನುಭವವಾಗುತ್ತಿತ್ತು. ಹಿಂದಿ ಭಾಷೆ ಕಲಿತು ಮಾತನಾಡುವುದು, ಹಾಡುವುದು, ಭಾರತೀಯ ನೃತ್ಯಗಳು ಅಲ್ಲಿಯ ಸಹೋದರ ಸಹೋದರಿಯರು ಆತ್ಮೀಯತೆಯಿಂದ ಕಲಿತು ಎಲ್ಲರ ಮುಂದೆ ಪ್ರದರ್ಶಿಸಿದರು. ಕಲೆಗೆ ದೇಶ ಭಾಷೆಗಳ ಬಂಧನವಿಲ್ಲ ಎಂಬ ಅರಿವು…
ಮಡಿಕೇರಿ ಆ.1 : ಮೈಸೂರಿನಲ್ಲಿ ಮಂಜುಶ್ರೀ ಮಾಜಿಕ್ ಸ್ಟೆಪ್ಸ್ ವತಿಯಿಂದ ನಡೆದ 35ನೇ ವರ್ಷದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಡಾನ್ಸ್ ಸ್ಟುಡಿಯೋ ತಂಡ ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ ಮತ್ತು ಸಬ್ ಜೂನಿಯರ್ ಕಪಲ್ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದಿದೆ. ಡಿಜೆ ಡ್ಯಾನ್ಸ್ ಸ್ಟುಡಿಯೋ ವತಿಯಂದ ಹಾಸನದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗೆದ್ದುಕೊಂಡಿದೆ. ನೃತ್ಯ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಆರ್ಯನ್, ತೇಜಸ್, ಪ್ರವೀಣ್, ಕೀರ್ತನ್, ಶಿವ ಕುಮಾರ್, ಚಂದನ್, ಅಭಿನವ್, ಯಾನ ಶೆಟ್ಟಿ, ಜಾಹ್ನವಿ ಬೋಜಮ್ಮ, ಜನನಿ, ವೆನಿಷ, ತಶ್ಮಿತ, ಆಧ್ಯ ದೇಚಮ್ಮ, ವರ್ನಿಕ, ಪ್ರೇಕ್ಷಾ ಬಿ.ಆರ್, ಪ್ರೇಕ್ಷಾ ಎಂ.ಕೆ, ಐಶ್ವರ್ಯ ರೈ, ಪ್ರಜ್ಞಾ, ಕಿಷಿ ಕಾವೇರಮ್ಮ, ಚಾರ್ವಿತ, ಸಬ್ ಜೂನಿಯರ್ ಕಪಲ್ನಲ್ಲಿ ದಿಶಾ ಹಾಗೂ ಸಾನ್ವಿಕ ಪಾಲ್ಗೊಂಡಿದ್ದರು. ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ಸಂಯೋಜಕ ಅಭಿಷೇಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಮಡಿಕೇರಿ ಆ.1 : ಇತ್ತೀಚಿಗೆ ದೈವಾಧೀನರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮೀನಾಕ್ಷಿ ಅವರಿಗೆ ಮಡಿಕೇರಿ ಬ್ರಹ್ಮಾಕುಮಾರೀಸ್ ಲೈಟ್ಹೌಸ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲೈಟ್ಹೌಸ್ ಸಭಾಂಗಣದಲ್ಲಿ ಮೃತರ ಭಾವಚಿತ್ರಕ್ಕೆ ಅವರ ಸಹೋದರರು, ಬಂಧುಗಳು, ಬ್ರಹ್ಮಕುಮಾರ, ಕುಮಾರಿಯರು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯತ್ರಿ ಜೀ ಮಾತನಾಡಿ, ಕೊಡಗಿನ ಗೋಣಿಕೊಪ್ಪ ಸಮೀಪದ ಚಿಕ್ಕಮಂಡೂರಿನ ಕಳ್ಳಿಚಂಡ ಪರಿವಾರದ ಮೀನಾಕ್ಷಿ ಅವರು ತಮ್ಮ ಮೂಲಕ ಆಧ್ಯಾತ್ಮ ಮಾರ್ಗದಲ್ಲಿ ಸಾಗುವ ಸಂಕಲ್ಪ ಮಾಡಿದರು. 1978ರಲ್ಲಿ ಈಶ್ವರೀಯಜ್ಞಾನ ಪಡೆದು ನಂತರ 1980 ರಿಂದ ಸಮರ್ಪಿತರಾಗಿ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ 1993ರಿಂದ ಕೇರಳದ ಕಣ್ಣೂರು ಜಿಲ್ಲೆಯ ಜಿಲ್ಲಾ ಸಂಚಾಲಕರಾಗಿ 30 ವರ್ಷಗಳಿಂದ ಸೇವೆ ಮಾಡಿ ಅನೇಕರಿಗೆ ಮಾರ್ಗದರ್ಶನ ನೀಡಿ ಆಧ್ಯಾತ್ಮಿಕ ಪ್ರೇರಣೆ ತುಂಬಿ ಅನೇಕ ಸೇವಾ ಕೇಂದ್ರಗಳನ್ನು ತೆರೆದು ಅನೇಕರ ಜೀವನಕ್ಕೆ ಮಾರ್ಗದರ್ಶಕರಾದರು. ತಮ್ಮ 69 ವಯಸ್ಸಿನ ಹಿರಿಯ ಸಹೋದರಿಯವರು ಅನೇಕ ಕಾರ್ಯಕ್ರಮಗಳನ್ನು ನೀಡಿ ಜಿಲ್ಲೆಯಲ್ಲಿ ಯಶಸ್ವಿ ಸೇವೆ ಮಾಡಿದರು. ಕೊಡಗಿನ ಬಗ್ಗೆ ಅಪಾರ ಅಭಿಮಾನ…
ಮಡಿಕೇರಿ ಆ.1 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ನೂತನ ಜಿಲ್ಲಾಧ್ಯಕ್ಷರನ್ನಾಗಿ ಪಿ.ಎ.ಹನೀಫ್ ಅವರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಭಾಷಾ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿರುವ ಉತ್ಸಾಹಿ ಯುವ ನಾಯಕ ಹನೀಫ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದರಿಂದ ಜಿಲ್ಲೆಯಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೂತನ ಅಧ್ಯಕ್ಷರು ಅಲ್ಪಸಂಖ್ಯಾತರ ಘಟಕದ ಎಲ್ಲಾ ವಿಭಾಗಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ, ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಪಿ.ಎ.ಹನೀಫ್ ಅವರನ್ನು ಆಯ್ಕೆ ಮಾಡಿದ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಕೆ.ಅಬ್ದುಲ್ ಜಬ್ಬರ್ ಹಾಗೂ ಶಿಫಾರಸ್ಸು ಮಾಡಿದ ಜಿಲ್ಲೆಯ ಎಲ್ಲಾ ಮುಖಂಡರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಖಲೀಲ್ ಭಾಷಾ ತಿಳಿಸಿದ್ದಾರೆ.
ಮಡಿಕೇರಿ ಆ.1 : ಮನೆಯ ಹಿಂಭಾಗದ ಬರೆ ಕುಸಿಯದಂತೆ ರಕ್ಷಣೆಗಾಗಿ ಪಂಚಾಯ್ತಿಯಿಂದ ನಿರ್ಮಿಸಿದ್ದ ತಡೆಗೋಡೆಯ ಮೇಲೆ ಜನ ಪ್ರತಿನಿಧಿಯೊಬ್ಬರು ಕಾಂಪೌಂಡ್ ವಾಲ್ ನಿರ್ಮಿಸುವ ಮೂಲಕ ಆತಂಕ ಸೃಷ್ಟಿಸಿದ್ದಾರೆಂದು ಸುಂಟಿಕೊಪ್ಪದ ಪಂಪ್ ಹೌಸ್ ಬಡಾವಣೆಯ ನಿವಾಸಿ ಜಿ.ಎನ್.ದಿನೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಪ್ ಹೌಸ್ ಬಡಾವಣೆಯಲ್ಲಿನ ತಮ್ಮ ಮನೆಯ ಹಿಂಭಾಗದ ಬರೆ ಕುಸಿಯದಂತೆ 2009 ರಲ್ಲಿ ಗ್ರಾಮ ಪಂಚಾಯ್ತಿಯಿಂದ ಸುಮಾರು 30 ಅಡಿ ಉದ್ದದ, 8 ಅಡಿ ಎತ್ತರದ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಈ ತಡೆಗೋಡೆಯ ಮೇಲ್ಭಾಗದಲ್ಲಿ ಸುಮಾರು ಮೂವತ್ತು ಅಡಿ ದೂರದಲ್ಲಿ ಪಂಚಾಯ್ತಿ ಜನಪ್ರತಿನಿಧಿಯೊಬ್ಬರ ಮನೆ ಇದೆ. ಈ ತಡೆಗೋಡೆಯ ಮೇಲೆ ಅನಧಿಕೃತವಾಗಿ ಕಾಂಪೌಂಡ್ ವಾಲ್ ನಿರ್ಮಿಸಿ ಮಣ್ಣು ತುಂಬಲಾಗಿದೆ ಎಂದು ಆರೋಪಿಸಿದರು. ಮಣ್ಣಿನ ಹೆಚ್ಚಿನ ಒತ್ತಡದಿಂದಾಗಿ ಹಳೆಯ ತಡೆಗೋಡೆಯ ಅಲ್ಲಲ್ಲಿ ಬಿರುಕುಗಳು ಮೂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ತಡೆಗೋಡೆ ಕುಸಿದಲ್ಲಿ ನಮ್ಮ ಮನೆಗೆ ತೀವ್ರ ಹಾನಿ ಸಂಭವಿಸಲಿದೆ ಎಂದು ಬೇಸರ ವ್ಯಕ್ತಪಡಿಸಿದರು. 2022 ರ ಜ.24 ರಂದು…
ಮಡಿಕೇರಿ ಆ.1 : ನಗರದ ಸರಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ನಿವೃತ್ತ ಉಪ ಪ್ರಾಂಶುಪಾಲರಾದ ನಳಿನಿ ಪೂವಯ್ಯ ಅವರಿಗೆ ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಮುಖರು ಹಾಗೂ ಶಿಕ್ಷಕರು ನಳಿನಿ ಪೂವಯ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು. ನಿವೃತ್ತ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು. ಈ ಸಂದರ್ಭ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೋಮವಾರಪೇಟೆ ಆ.1 : ನಿಡ್ತ ಮೀಸಲು ಅರಣ್ಯದಲ್ಲಿ ಶ್ರೀಗಂಧ ಮರವನ್ನು ಕಡಿದು, ಸಾಗಿಸಲು ಕೆತ್ತನೆ ಮಾಡುತ್ತಿದ್ದ ಸಂದರ್ಭ ದಾಳಿ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಬಸುರುಗುಪ್ಪೆ ಗ್ರಾಮದ ಎ.ಸಿ.ಯೋಗೇಶ್ ಬಂಧಿತ ಆರೋಪಿ. ಅರಣ್ಯದಲ್ಲಿ ಶ್ರೀಗಂಧ ಮರವನ್ನು ಬುಡ ಸಮೇತ ಕಡಿದು, 12 ತುಂಡುಗಳನ್ನಾಗಿ ಪರಿವರ್ತಿಸಿ ಸಾಗಿಸುವ ಪ್ರಯತ್ನದಲ್ಲಿದ್ದಾಗ ಬಂಧಿಸಲಾಗಿದೆ. ಎಸಿಎಫ್ ಎ.ಎ.ಗೋಪಾಲ್ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವಲಯ ಆರ್ಎಫ್ಒ ಎಚ್.ಪಿ.ಚೇತನ್, ಡಿಆರ್ಎಫ್ಒ ಎಚ್.ಎಂ.ರಾಕೇಶ್, ಗಸ್ತುಪಾಲಕರಾದ ಪ್ರಸಾದ ಕುಮಾರ್, ಎ.ಎಸ್. ಸದಾನಂದ ಹಿಪ್ಪರಗಿ, ಅರಣ್ಯ ವೀಕ್ಷಕರಾದ ಪ್ರವೀಣ್, ಚೆಟ್ಟಿಯಪ್ಪ, ವಿಕಾಸ್, ಧರ್ಮ, ಉದಯ್ ಕುಮಾರ್, ವಾಹನ ಚಾಲಕ ಸಂತೋಷ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸೋಮವಾರಪೇಟೆ ಆ.1 : ಬೆಜೆಪಿ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಯಲು ಹಿರಿಯ ಮುತ್ಸದಿ ರಾಜಕಾರಣಿ ಬಿ.ಬಿ.ಶಿವಪ್ಪ ಕಾರಣ ಎಂದು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಮಂಜು ಬಣ್ಣಿಸಿದರು. ಮಹಿಳಾ ಸಮಾಜದಲ್ಲಿ ಬಿ.ಬಿ.ಶಿವಪ್ಪ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ಪುಣ್ಯಸ್ಮರಣಾ ಕಾಯಕ್ರವiದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಶಿವಪ್ಪನವರು ತಮ್ಮ ಆಸ್ತಿ ಮಾರಾಟವಾದರೂ ಪರ್ವಾಗಿಲ್ಲ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸುತ್ತೇನೆ ಎಂದು ಪಣ ತೊಟ್ಟು ಪಕ್ಷ ಸಂಘಟನೆಗೆ ಶ್ರಮಿಸಿದವರು. ಈಗ ರಾಜ್ಯದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ಅವರು ಸಕಲೇಶಪುರದಲ್ಲಿಯೂ ಪಕ್ಷವನ್ನು ಸಂಘಟಿಸಿದರ ಫಲವಾಗಿ ನಾನು ಈ ದಿನ ಶಾಸಕನಾಗಲು ಸಾಧ್ಯವಾಗಿದೆ. ಇಂತಹ ಧೀಮಂತ ವ್ಯಕ್ತಿಯ ಪುಣ್ಯ ಸ್ಮರಣಾ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಮಟ್ಟದಲ್ಲಿ ಆಚರಿಸುವಂತಾಗಬೇಕೆಂದರು. ಮಾಜಿ ಸಚಿವ ಅಪ್ಪಚು ರಂಜನ್ ಮಾತನಾಡಿ, ಕರ್ನಾಟಕದ ಬಿಜೆಪಿಗೆ ಶಿವಪ್ಪ ಹಾಗೂ ಸುಶೀಲಮ್ಮ ಮಾತಾ-ಪಿತೃಗಳಿದ್ದಂತೆ. ಶಿವಪ್ಪನವರು ಯಾವತ್ತೂ ಅಧಿಕಾರಕ್ಕಾಗಿ ಪಕ್ಷ ಸಂಘದಸಿದವರಲ್ಲ. ಹಿಂದೆ 44 ಮಂದಿ ಬಿಜೆಪಿ ಶಾಸಕರಿದ್ದ ಸಂದರ್ಭ ಬಿ.ಬಿ.ಶಿವಪ್ಪರವರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡುವಾಗ…






