ನಾಪೋಕ್ಲು ಮಾ.16 : ಯಾವ ಮನೆಯಲ್ಲಿ ಸ್ತ್ರೀ ವಿದ್ಯಾವಂತಳಾಗಿರುತ್ತಾಳೋ ಆ ಕುಟುಂಬ ಆರ್ಥಿಕವಾಗಿ ಸದೃಢವಾಗಿರುತ್ತದೆ ಎಂದು ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಹಿರಿಯ ಶಿಕ್ಷಕಿ ಮುಂಡಂಡ ಕವಿತಾ ಅಯ್ಯಣ್ಣ ಹೇಳಿದರು. ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪೋಷಕರ ಗುಣ, ನಡತೆ, ಮಾರ್ಗದರ್ಶನದಿಂದ ಮಕ್ಕಳ ವಿದ್ಯಾಭ್ಯಾಸ, ಉನ್ನತಿ, ಹಣಕಾಸು ನಿರ್ವಹಣೆ ಉತ್ತಮವಾಗಲಿದ್ದು, ಜೀವನ ಸಾರ್ಥಕತೆಯಿಂದ ಕೂಡಿರುತ್ತದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರಿ ಮಹಿಳಾ ಸಮಾಜದ ಅಧ್ಯಕ್ಷೆ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಮಹಿಳೆಯರು ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜದ ವತಿಯಿಂದ ಶಿಕ್ಷಕಿ ಮುಂಡಂಡ ಕವಿತಾ ಅಯ್ಯಣ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಹಿಳೆಯರಿಗಾಗಿ ವಿವಿಧ ಮನರಂಜನಾ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷರಾದ ಬೊಪ್ಪಂಡ ಶೈಲಾ ಬೋಪಯ್ಯ, ನಿರ್ದೇಶಕರುಗಳಾದ ಕೇಟೋಳಿರ…
ಲೇಖಕ: admin
ಮಡಿಕೇರಿ ಮಾ.16 : ನೆಲ್ಯಹುದಿಕೇರಿಯ ಪುರಾತನ ಶ್ರೀ ಸತ್ಯನಾರಾಯಣ ದೇವಾಲಯದ ವಾರ್ಷಿಕೋತ್ಸವವು ಮಾ.19, 20 ಹಾಗೂ 21 ರಂದು ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಮಾ.19 ರಂದು ಪ್ರಾತಕಾಲ 6.30 ರಿಂದ ಗಣಹೋಮ ಉತ್ಸವ ಪ್ರಾರಂಭವಾಗಲಿದೆ. ಬೆಳಿಗ್ಗೆ 11 ಗಂಟೆಗೆ ಹಾಸನ ಮಹಾಸಂಸ್ಥಾನ ಮಠ ಹಾಗೂ ಕೊಡಗು ಶಾಖಾ ಮಠದ ಗುರುಗಳಾದ ಶ್ರೀ ಶಂಭುನಾಥ ಸ್ವಾಮಿಜಿ ಅವರು ಶ್ರೀ ಸತ್ಯನಾರಾಯಣ ದೇವಾಲಯಕ್ಕೆ ಕಳಸ ಮೆರವಣಿಯೊಂದಿಗೆ ಆಗಮಿಸಲಿದ್ದು, ಶ್ರೀಗಳ ದೃಷ್ಟಿ ತೆಗೆಯುವುದು, ದೇವಾಲಯದ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರವೇಶ ಮೆಟ್ಟಿಲಿನ ಉದ್ಘಾಟನೆ, ದೇವಾಲಯ ಪ್ರದಕ್ಷಣೆ, ದೇವರ ಕ್ಷೇತ್ರದಲ್ಲಿ ಜ್ಯೋತಿ ಬೆಳಗುವ ಕಾರ್ಯಕ್ರಮ, ದೇವತ ಪ್ರಾರ್ಥನೆ ಹಾಗೂ ಶ್ರೀ ಸತ್ಯನಾರಾಯಣ ದೇವರಿಗೆ ಪಂಚಾಮೃತ ಅಭಿಷೇಕ ಜರುಗಲಿದೆ. ನಂತರ ಗುರುಗಳ ಪಾದ ಪೂಜೆ, ಗುರುಕಾಣಿಕೆ, ಗುರುಗಳಿಂದ ಪ್ರವಚನ, ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6.30 ಗಂಟೆಗೆ ತಕ್ಕರ ಮನೆಯಿಂದ ಭಂಡರಾ ಇಳಿಸುವುದು, 7 ಗಂಟೆಗೆ ದೇವತಾ ಪ್ರಾರ್ಥನೆ,…
ಮಡಿಕೇರಿ ಮಾ.16 : ಅಲ್-ಅಮೀನ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಕಾವೇರಿ ಹಾಲ್ ನಲ್ಲಿ 9 ಮುಸ್ಲಿಂ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಲ್-ಅಮೀನ್ ಸಮಿತಿಯ ಮಹಾಪೋಷಕ ಹಾಗೂ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್, ಅಲ್ -ಅಮೀನ್ ಸಮಿತಿಯು ಬಡ,ಅನಾಥರಾಗಿರುವ 445ಕ್ಕೂ ಅಧಿಕ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಇದರಲ್ಲಿ 430 ಕ್ಕೂ ಅಧಿಕ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಯ ಬಡಕುಟುಂಬದ ಹೆಣ್ಣು ಮಕ್ಕಳಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಅಲ್-ಅಮೀನ್ ಸಮಿತಿಯು ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮವನ್ನು ನಡೆಸುವುದರ ಮೂಲಕ, ಬಡ ಕುಟುಂಬಗಳ ಕಣ್ಣೀರೊರೆಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಈ ವರ್ಷ 9 ಬಡ ಹೆಣ್ಣುಮಕ್ಕಳ ವಿವಾಹವನ್ನು ಯಶಸ್ವಿಯಾಗಿ ನಡೆಸಿ ಕೊಡಲಾಗಿದೆ ಎಂದು ಹೇಳಿದರು. ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಹಾಗೂ ಕುಶಾಲನಗರ ದಾರುಲ್ ಹುದಾ ಮದರಸ ಪ್ರಾಂಶುಪಾಲ ತಮ್ಲೀಖ್ ದಾರಿಮಿ ಮುಖ್ಯ ಭಾಷಣ ಮಾಡಿ, ಹೊಸ ಕನಸುಗಳೊಂದಿಗೆ ನವ ವಧು-ವರರಿಗೆ ದಾಂಪತ್ಯ…
ಮಡಿಕೇರಿ ಮಾ.16 : ಭಾರತ ಸರ್ಕಾರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಹಾಗೂ ಕೊಡಗು ಜಿಲ್ಲಾ ಯುವ ಕೇಂದ್ರದ ವತಿಯಿಂದ ದೇವಪುರ ಗ್ರಾ.ಪಂ ಯ ತಿತಿಮತಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ವಿಜ್ಞಾನ ದಿನ ಆಚರಿಸಲಾಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪ್ರಬಂಧ ಸ್ಪರ್ಧೆ ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ದೇವಪುರ ಗ್ರಾ.ಪಂ ಪಿಡಿಓ, ಶಾಲೆಯ ಮುಖ್ಯ ಶಿಕ್ಷಕರಾದ ಗಂಗಮ್ಮ, ಸಹ ಶಿಕ್ಷಕರಾದ ನಾಗಶ್ರೀ, ಅನಿಲ, ವೈಲೇಟ್, ಸುರೇಂದ್ರ, ಯುವ ಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಲೆಕ್ಕಧಿಕಾರಿ ಹಾಜರಿದ್ದರು.
ಮಡಿಕೇರಿ ಮಾ.16 : ಕೊಡಗು ಜಿಲ್ಲೆಗೆ ಮಾ.18 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಲಿದ್ದಾರೆ.
ಮಡಿಕೇರಿ ಮಾ.16 : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಕೊಡಗು ಜಿಲ್ಲಾ ಮಹಾಸಭೆ ಹಾಗೂ ಪುನಾರಚನೆ ಸಮಾವೇಶವು ಕುಶಾಲನಗರದಲ್ಲಿ ನಡೆಯಿತು. ಕುಶಾಲನಗರದ ಬಿಜಿಟಿ ಆಡಿಟೋರಿಯಮ್ ನಲ್ಲಿ ರಾಜ್ಯ ನಾಯಕ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಅವರ ನೇತೃತ್ವದಲ್ಲಿ ನಡೆದ ಸಭೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ ಉದ್ಘಾಟಿಸಿದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೊಳಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಆಹ್ಮದ್ ಮದನಿ ಗುಂಡಿಕೆರೆ, ಕೋಶಾಧಿಕಾರಿಯಾಗಿ ಅಬ್ದುಲ್ಲ ನೆಲ್ಲಿಹುದಿಕೇರಿ, ಉಪಧ್ಯಕ್ಷರಾಗಿ ಅಬೂಬಕ್ಕರ್ ಮದನಿ ಮಾಲ್ದಾರಿ, ಕಾರ್ಯದರ್ಶಿಗಳಾಗಿ (ದಅ್ವಾ) ಅಬ್ದುಲ್ ಅಝೀಜ್ ಸಖಾಫಿ ಕೊಡಲಿಪೇಟೆ (ಸಂಘಟನೆ) ಯಾಕೂಬ್ ಮಾಸ್ಟರ್ ಕೊಳಕೇರಿ (ಸಾಂತ್ವನ) ಅಝೀಝ್ ಮುಸ್ಲಿಯಾರ್ ಮಾಲ್ದರಿ (ಸೋಷಿಯಲ್) ಅರಾಫತ್ ನಾಪೊಕ್ಲು (ಕಲ್ಚರಲ್) ಹಸೈನಾರ್ ಮುಸ್ಲಿಯಾರ್ ಸುಂಟಿಕೊಪ್ಪ (ಇಸಾಬಾ) ಶರೀಫ್ ಹೊಸತೋಟ ಎಂಬವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ತಙ್ಙಳ್ ಎರುಮಾಡ್, ವಿ.ಪಿ.ಮೊಯ್ದೀನ್ ಪೊನ್ನತ್ ಮೊಟ್ಟೆ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಸಮದ್ ನಿಝಾಮಿ…
ಮಡಿಕೇರಿ ಮಾ.16 : ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು, ಕೊಡವರ ಬೇಡಿಕೆಗಳನ್ನೂ ತಮ್ಮ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕೆಂದು ಕೊಡವಾಮೆರ ಕೊಂಡಾಟ ಸಂಘಟನೆ ಆಗ್ರಹಿಸಿದೆ. ಕೊಡಗಿನ ಆದಿ ಮೂಲ ನಿವಾಸಿ ಜನಾಂಗವಾಗಿದ್ದು, ಕೊಡಗಿನಲ್ಲಿ ಸುಮಾರು ಒಂದು ಲಕ್ಷ, ಮೈಸೂರು ಜಿಲ್ಲೆಯಲ್ಲಿ ಸುಮಾರು 25000, ಬೆಂಗಳೂರಿನಲ್ಲಿ ಸುಮಾರು 60,000 ಹಾಗೂ ರಾಜ್ಯದ ಇತರೆಡೆಗಳಲ್ಲಿ ಸರಿಸುಮಾರು 40,000 ಮತದಾರರನ್ನು ಹೊಂದಿರುವ, ಕೊಡವ ಜನಾಂಗಕ್ಕೆ ಇದುವರೆಗೂ ಯಾವುದೇ ರಾಜಕೀಯ ಪಕ್ಷವೂ ಸೂಕ್ತ ಮನ್ನಣೆಯನ್ನು ನೀಡಿಲ್ಲ. ಮುಂಬರುವ ವಿಧಾನ ಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡುವ ರಾಜಕೀಯ ಪಕ್ಷವನ್ನು ಜನಾಂಗ ಬೆಂಬಲಿಸುವ ಯೋಚನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡವ ಪ್ರಮುಖ ಬೇಡಿಕೆಗಳಾದ ಕೊಡವ ಭಾಷೆಯನ್ನು, ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸುವುದು, ಕೊಡವರನ್ನ ಆದಿ ಬುಡಕಟ್ಟು ಜನಾಂಗವೆಂದು ಅಧಿಕೃತಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡುವುದು, ಕೊಡವ, ಕಾರೋಣ ಕೂಟ , ಕೈಮಡ, ಐನ್ ಮನೆಗಳನ್ನು ವಿಶೇಷ ಸ್ಮಾರಕಗಳಂತೆ ರಕ್ಷಿಸಲು ಅನುದಾನ, ತಲೆಕಾವೇರಿ, ಇಗ್ಗುತಪ್ಪ ದೇವಾಲಯಗಳನ್ನು ಮುಜರಾಯಿ ಇಲಾಖೆಯ ಕಪಿ ಮುಷ್ಟಿಯಿಂದ…
ಮಡಿಕೇರಿ ಮಾ.16 : ಮನೆಯಲ್ಲಿ ಕಟ್ಟಿ ಹಾಕಿದ ಸಾಕು ನಾಯಿಗಳನ್ನು ಚಿರತೆಯೊಂದು ಎಳೆದೊಯ್ದು ಭಕ್ಷಿಸುತ್ತಿರುವ ಘಟನೆ ದೇವಸ್ತೂರು ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮದ ಸಾಕು ನಾಯಿಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿದ್ದವು. ಈ ಬಗ್ಗೆ ಗ್ರಾಮಸ್ಥರಲ್ಲೇ ಚರ್ಚೆ ನಡೆದಿತ್ತು, ಆದರೆ ಬುಧವಾರ ರಾತ್ರಿ ಸ್ಥಳೀಯ ನಿವಾಸಿ ನಂದೀರ ಹರಿ ಚಂಗಪ್ಪ ಎಂಬುವವರ ನಾಯಿಯನ್ನು ಚಿರತೆ ಎಳೆದೊಯ್ದ ಘಟನೆ ನಡೆದಿದೆ. ಕಟ್ಟಿ ಹಾಕಿದ ನಾಯಿ ಕಿರುಚಿಕೊಂಡಾಗ ಹರಿ ಚಂಗಪ್ಪ ಅವರು ನೋಡಲು ಬಂದರು. ಅವರು ಬರುವಷ್ಟರಲ್ಲೇ ಚಿರತೆ ನಾಯಿಯನ್ನು ಎಳೆದೊಯ್ದಿದೆ. ಮನೆಯ ಆವರಣದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಸ್ಥಳೀಯರು ಭಯಗೊಂಡಿದ್ದಾರೆ. ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಅನಾಹುತಗಳು ಸಂಭವಿಸುವ ಮೊದಲು ಚಿರತೆಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು.
ಮಡಿಕೇರಿ ಮಾ.16 : ಮದೆ ಗ್ರಾ.ಪಂ ವ್ಯಾಪ್ತಿಯಲ್ಲಿ ರೂ 1.15 ಕೋಟಿ ಅನುದಾನದಲ್ಲಿ ನಡೆಯುವ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು. ಇದೇ ಸಂದರ್ಭ ಪೂರ್ಣಗೊಂಡ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಿದರು.
ಮಡಿಕೇರಿ ಮಾ.16 : ರಾಜ್ಯದ ಪ್ರಥಮ ಕ್ರೀಡಾಶಾಲೆಯಾದ ಕೂಡಿಗೆ ಕ್ರೀಡಾಶಾಲೆಯಲ್ಲಿ 36 ವಷ೯ಗಳ ಕಾಲ ಶಿಕ್ಷಕಿಯಾಗಿ ಕಾಯ೯ನಿವ೯ಹಿಸಿದ್ದ ಕುಂತಿ ಬೋಪಯ್ಯ ಅವರ ಸೇವಾ ಸಾಧನೆ ಸಂಬಂಧಿತ ಸಾಕ್ಷ್ಯ ಚಿತ್ರ “ಕುಂತಿ ಟೀಚರ್” ಮಾ.19 ರಂದು ಮಡಿಕೇರಿಯಲ್ಲಿ ತೆರೆಕಾಣಲಿದೆ. ಮಡಿಕೇರಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಾ.19 ರಂದು ಸಂಜೆ 6 ಗಂಟೆಗೆ ಆಯೋಜಿತ ಕಾಯ೯ಕ್ರಮದಲ್ಲಿ ಸಾಕ್ಷ್ಯ ಚಿತ್ರವನ್ನು ಚಿಂತಕರಾದ ಡಾ.ಎಂ.ಜಿ.ಪಾಟ್ಕರ್, ಭಾರತೀಯ ವಿದ್ಯಾಭವನ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್.ದೇವಯ್ಯ ಲೋಕಾಪ೯ಣೆ ಮಾಡಲಿದ್ದಾರೆ. ಕುಂತಿ ಅವರು ಕ್ರೀಡಾ ಶಾಲೆಯಲ್ಲಿ ದಾಖಲೆ ಅವಧಿಗೆ ಸೇವೆ ಸಲ್ಲಿಸಿದ ಕೀತಿ೯ ಹೊಂದಿದ್ದು, ಗ್ರಾಮೀಣ ಪ್ರದೇಶದ ಕ್ರೀಡಾಶಾಲೆಯ ಉನ್ನತಿಗೆ ಅವರು ಶ್ರಮಿಸಿದ ರೀತಿಯನ್ನು ಸಾಕ್ಷ್ಯ ಚಿತ್ರದಲ್ಲಿ ಬಿಂಬಿತವಾಗಿದೆ. ಕುಂತಿ ಅವರ ಕುರಿತು ಶಾಲೆಯ ಶಿಕ್ಷಕ ವಗ೯, ವಿದ್ಯಾಥಿ೯ಗಳು, ನಿಕಟ ವತಿ೯ಗಳ ಹೇಳಿಕೆಯನ್ನು 50 ನಿಮಿಷದ ಈ ಚಿತ್ರ ಹೊಂದಿದೆ. ಸಾಕ್ಷ್ಯ ಚಿತ್ರವನ್ನು ಪತ್ರಕತ೯ ಅನಿಲ್ ಎಚ್.ಟಿ. ನಿದೇ೯ಶನ ಮಾಡಿದ್ದು, ವಿರಾಜಪೇಟೆಯ ಸಂಕೇತ್ ಸ್ಟುಡಿಯೋದಲ್ಲಿ ಸಂಕಲನ ಮಾಡಲಾಗಿದೆ.






