ಲೇಖಕ: admin

ವಿರಾಜಪೇಟೆ ಮಾ.15 :  ಮೀನುಪೇಟೆ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ 79ನೇ ವಾರ್ಷಿಕ ತೆರೆ ಮಹೋತ್ಸವವು ಮಾ.21, 22 ಹಾಗೂ  23ರಂದು ನಡೆಯಲಿದೆ. ದೇವಾಲಯದ ಆವರಣದಲ್ಲಿ ಮೂರು ದಿನಗಳ ಕಾಲ  ವಿವಿಧ ಧಾರ್ಮಿಕ  ಪೂಜಾ ಕೈಂಕರ್ಯದೊಂದಿಗೆ ಜರುಗಲಿದೆ ಎಂದು  ದೇವಾಲಯದ ಉತ್ಸವ ಆಚರಣಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ. ಮಾ.21 ರಂದು ಪ್ರಾತ:ಕಾಲ ಗಣಪತಿ ಹೋಮ ನಡೆಯಲಿದ್ದು,  ಬೆಳಿಗ್ಗೆ 8 ಗಂಟೆಗೆ  ಧ್ವಜಾರೋಹಣ ನಡೆಯಲಿದೆ. ಸಂಜೆ 6 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ ರಾತ್ರಿ 8 ಕ್ಕೆ ಅನ್ನಸಂತರ್ಪಣೆ,  9 ಗಂಟೆಗೆ ಮಯವಿಲ್ ಮನೋರಮ ಟಿವಿ ಚ್ಯಾನಲ್ ಉಗ್ರಂ ಉಜ್ವಲಂ ತಂಡದಿಂದ ಸ್ಟೇಜ್ ಶೋ  ನಡೆಯಲಿದೆ. ಮಾ. 22 ರಂದು  ಸಂಜೆ 5 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ, 5-30 ಕ್ಕೆ ಮೊದಕಲಶದೋಂದಿಗೆ ತಾಲಪ್ಪೊಲಿ ಮೆರವಣಿಗೆ ನಡೆಯಲಿದೆ.  ಸಿಂಗಾರಿ ಮೇಳಂ, ದೀಪದೋಂದಿಗೆ ನೃತ್ಯ ಕಾರ್ಯಕ್ರಮ ಹಾಗೂ ಚೆಂಡೆ ಮೇಳದೊಂದಿಗೆ ಮಹಿಳೆಯರ ತಾಲಪ್ಪೊಲಿ ಸಾತ್ ನೀಡಲಿದ್ದಾರೆ. ಮೆರವಣಿಗೆಯು ನಗರದ ತೆಲುಗರ ಬೀದಿಯಿಂದ ಹೊರಟು ಮುಖ್ಯ ಬೀದಿಗಳಲ್ಲಿ…

Read More

ಸೋಮವಾರಪೇಟೆ ಮಾ.14 : ಸ್ಕೂಟರ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಗಣಸಿ ಎಂಬಲ್ಲಿ ನಡೆದಿದೆ. ಸೋಮವಾರಪೇಟೆಯ  ಬೆಟ್ಟದಕೊಪ್ಪ ಗ್ರಾಮದ ಕೃಷಿಕ ರಮೇಶ್ ಎಂಬುವವರ ಪುತ್ರ ಮನೋಹರ್(33) ಮೃತಪಟ್ಟವರು. ಮನೋಹರ್ ತಿಪಟೂರಿನಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸವಿದ್ದು, ಕೊಬ್ಬರಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ತನ್ನೂರಿನಿಂದ ತಿಪಟೂರಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭ ರಾತ್ರಿ ಅಪಘಾತ ಸಂಭವಿಸಿದೆ. ತಲೆ ಮತ್ತು ಎದೆ ಭಾಗಕ್ಕೆ ತೀವ್ರ ಗಾಯಗೊಂಡು ಮೃತಪಟ್ಟರು. ಮೃತರು ಪತ್ನಿ, ಇಬ್ಬರು ಮಕ್ಕಳು, ತಂದೆ, ತಾಯಿಯನ್ನು ಅಗಲಿದ್ದಾರೆ.

Read More

ಸೋಮವಾರಪೇಟೆ ಮಾ.14 : ಶ್ರೀ ಮುತ್ತಪ್ಪಸ್ವಾಮಿ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಸಮಿತಿ ವತಿಯಿಂದ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಜೃಂಭಣೆಯ ಜಾತ್ರೋತ್ಸವ ಮಂಗಳವಾರದಂದು ಸಂಜೆ ತೆರೆ ಕಂಡಿತು. ಪಟ್ಟಣ ಮಾತ್ರವಲ್ಲದೇ ಅಕ್ಕ ಪಕ್ಕದ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಶ್ರೀ ಮುತ್ತಪ್ಪ, ಶ್ರೀ ತಿರುವಪ್ಪ, ಶ್ರೀ ವಿಷ್ಣುಮೂರ್ತಿ, ಶ್ರೀ ಭಗವತಿ, ಶ್ರೀ ರಕ್ತಚಾಮುಂಡಿ, ಶ್ರೀ ಕಂಡಕರ್ಣ, ಶ್ರೀ ಕರಿಂಗುಟ್ಟಿಶಾಸ್ತಾವು, ಶ್ರೀಪೊಟ್ಟನ್ ಶ್ರೀ ಗುಳಿಗನ್ ದೈವಗಳ ಕೋಲಗಳು ನಡೆದವು. ಧಾರ್ಮಿಕ ಉತ್ಸವದಲ್ಲಿ ಎಲ್ಲಾ ಜಾತಿ ಜನಾಂಗ ಮಾತ್ರವಲ್ಲದೆ, ಎಲ್ಲಾ ಧರ್ಮಿಯರೂ ಭಾಗವಹಿಸುವುದು ವಿಶೇಷವಾಗಿತ್ತು.ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಪಟ್ಟಣದ ಮುಖ್ಯ ಬೀದಿಗಳಲ್ಲಿ ಸೋಮವಾರ ರಾತ್ರಿ ಸಿಂಗಾರಿಮೇಳ ಮೆರವಣಿಗೆ ನಡೆಯಿತು.

Read More

ಮಡಿಕೇರಿ ಮಾ.14 : ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ನಾಪೋಕ್ಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರ್ಧ ಇಂಚಿನಷ್ಟು ಮಳೆ ಸುರಿದಿದೆ. ಮರಗೋಡು, ಮದೆನಾಡು, ಬೆಟ್ಟಗೇರಿ, ಗಾಳಿಬೀಡು, ಭಾಗಮಂಡಲ ಮತ್ತಿತರೆಡೆ ಸಾಧಾರಣ ಮಳೆಯಾಗಿದೆ. ಮಡಿಕೇರಿ ನಗರ ಮತ್ತು ಸೋಮವಾರಪೇಟೆ ಸುತ್ತಮುತ್ತ ತುಂತುರು ಮಳೆ ಮಳೆಯಾಗಿದ್ದು, ವಿರಾಜಪೇಟೆಯಲ್ಲಿ ಮೋಡ ಕವಿದ ವಾತಾವರಣವಿತ್ತು. ಉತ್ತಮ ಮಳೆಯಾಗಿದ್ದರೆ ಬೆಂಕಿಯಿoದ ನಾಶವಾಗಿರುವ ಅರಣ್ಯ ಭಾಗಕ್ಕೆ ಸಹಕಾರಿಯಾಗುತ್ತಿತ್ತು. ಆದರೆ ನಿರೀಕ್ಷೆಯಷ್ಟು ಮಳೆಯಾಗದೆ ನಿರಾಶೆ ಮೂಡಿಸಿದೆ. ನಾಪೋಕ್ಲು ವಿಭಾಗದಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿರುವುದರಿಂದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಬೀರಿದೆ. ಕಾಫಿ ಮತ್ತು ಕರಿಮೆಣಸು ಕೊಯ್ಲು ಕಾರ್ಯ ಮುಗಿಸಿದ್ದು, ಪ್ರಸ್ತುತ ಉತ್ತಮ ಮಳೆಯಾದರೆ ಮುಂದಿನ ವರ್ಷ ಉತ್ತಮ ಫಸಲನ್ನು ಪಡೆಯಲು ಸಾಧ್ಯವಾಗುತ್ತದೆ. ಮಳೆಯಾಗದಿದ್ದರೆ ಸ್ಪಿಂಕ್ಲರ್ ಮೊರೆ ಹೋಗಬೇಕಾಗುತ್ತದೆ, ಇದರಿಂದ ಬೆಳೆಗಾರರು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಕಾಫಿ ತೋಟಗಳೇ ಇರುವ ಪ್ರದೇಶ ಉತ್ತಮ ಮಳೆಯ ನಿರೀಕ್ಷೆಯಲ್ಲಿದೆ. ಬಿಸಿಲಿನ ತಾಪಕ್ಕೆ ಕಾಡ್ಗಿಚ್ಚು ಏರ್ಪಟ್ಟು ಅರಣ್ಯ ಬೆಂಕಿಗಾಹುತಿಯಾಗುತ್ತಿದೆ. ಕಾಡಿನಲ್ಲಿ ನೀರಿನ ಕೊರತೆ ಉಂಟಾಗಿ…

Read More

ಬೆಂಗಳೂರು ಮಾ.14 : ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಪತ್ನಿ ಪರಿಮಳ, ಪುತ್ರ ಯತಿರಾಜ್ ಜೊತೆಗಿದ್ದರು. ಮೋದಿ ಅವರಿಗೆ ಮಂತ್ರಾಲಯದ ರಾಯರ ಮೂರ್ತಿ ನೀಡಿದ ಜಗ್ಗೇಶ್ ಮಾರ್ಚ್ 17 ನನ್ನ ಜನ್ಮ ದಿನವಾಗಿದ್ದು, ಆಶೀರ್ವಾದ ಮಾಡುವಂತೆ ಕೋರಿದರು. 60 ವಸಂತ ಪೂರ್ಣಗೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ವಿಶ್ವ ನಾಯಕ ಪ್ರಧಾನಿ ನರೇಂದ್ರಮೋದಿ ಅವರಿಂದ ಆಶೀರ್ವಾದ ಪಡೆದು ಪುನೀತನಾದೆ ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ಜಗ್ಗೇಶ್ ಹರ್ಷ ಹಂಚಿಕೊಂಡಿದ್ದಾರೆ.

Read More

ಸುಂಟಿಕೊಪ್ಪ,ಮಾ.14 : ಸುಂಟಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಮಿಂಚು, ಆಲಿಕಲ್ಲು  ಸಹಿತ ಉತ್ತಮ ಮಳೆಯಾಗಿದೆ.  ಮಂಗಳವಾರ ಸಂಜೆ ಸುಂಟಿಕೊಪ್ಪ, ನಾಕೂರು, ಪನ್ಯ, ಹರದೂರು, ಗರಗಂದೂರು ಸೇರಿದಂತೆ ವಿವಿಧ ಭಾಗಗಳಲ್ಲಿ  2 ಇಂಚಿನಷ್ಟು ಮಳೆಯಾಗಿದೆ.  ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿದೆ. ಗುಡುಗು ಸಿಡಿಲಿನ ಅಬ್ಬರ ಬೆಚ್ಚಿ ಬೀಳಿಸಿದೆ.

Read More

ಮಡಿಕೇರಿ ಮಾ.14 : ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಮಕ್ಕಂದೂರು ಕ್ರಿಕೆಟ್ ಕ್ಲಬ್ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಮಕ್ಕಂದೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಮೂರನೇ ಆವೃತ್ತಿಯ ಚಾಂಪಿಯನ್ ಆಗಿ ಹಿಂದೂ ಕ್ರಿಕೆಟ್‌ಕ್ಲಬ್(ಹೆಚ್‌ಸಿಸಿ) ಹೊರ ಹೊಮ್ಮಿದೆ. ಭಜರಂಗಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ರಾಯಲ್ ಟೈರ‍್ಸ್ ತಂಡ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಮಕ್ಕಂದೂರು ಶ್ರೀ ಭದ್ರಕಾಳೇಶ್ವರಿ ದೇವಾಲಯದ ಬಳಿಯ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಹೆಚ್‌ಸಿಸಿ, ಭಜರಂಗಿ ಬಾಯ್ಸ್, ರಾಯಲ್ ಟೈರ‍್ಸ್, ಟೀಂ ಟೈಟಾನ್ಸ್, ಸ್ಟಾರ್ ಲೈಟ್, ಶಿವಾಜಿ ಫ್ರೆಂಡ್ಸ್, ಧರ್ಮಶಾಸ್ಥ ಹಾಗೂ ಟೀಂ ರೆಬೆಲ್ಸ್ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಕ್ವಾಲಿಫೈರ್ ಹಂತದಲ್ಲಿ ಫೈನಲ್‌ಗೇರಿದ ಕಿರುವಾಲೆ ಪವನ್ ಮಾಲೀಕತ್ವದ ಶಾಂತೆಯಂಡ ಲೂತನ್ ನಾಯಕನಾಗಿದ್ದ ಹೆಚ್‌ಸಿಸಿ ಹಾಗೂ ಲಕ್ಕಪ್ಪನ ವಿಜೇತ ಮಾಲೀಕ ಹಾಗೂ ನಾಯಕತ್ವದ ದಿನೇಶ್ ನಾಯಕನಾಗಿದ್ದ ಭಜರಂಗಿ ಬಾಯ್ಸ್ ತಂಡಗಳ ನಡುವೆ ಪಂದ್ಯಾಟ ನಡೆದು ಹೆಚ್‌ಸಿಸಿ ತಂಡ ಜಯ ಗಳಿಸಿತು. ಭಜರಂಗಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದರೆ,…

Read More

ಮಡಿಕೇರಿ ಮಾ.14 : ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮೀನು ಸಾಗಾಟ ಮಾಡುವ ಲಾರಿಗಳಿಂದ ಕಲುಷಿತ ನೀರು ಸೋರಿಕೆಯಾಗುತ್ತಿದ್ದು, ಮಾಲಿನ್ಯವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿ ಮದೆನಾಡು ನಿವಾಸಿ ಜಿ.ಎ.ಇಬ್ರಾಹಿಂ ಎಂಬುವವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೆದ್ದಾರಿಯುದ್ದಕ್ಕೂ ಮೀನು ಸಾಗಾಟದ ಕಲುಷಿತ ನೀರು ಸೋರಿಕೆಯಾಗುತ್ತದೆ. ಇದರಿಂದ ಮಾಲಿನ್ಯ ಉಂಟಾಗುತ್ತದೆಯಲ್ಲದೆ ರೋಗ ರುಜಿಗಳು ಹರಡುವ ಭೀತಿ ಇದೆ. ಅಪಘಾತವೂ ಸಂಭವಿಸಬಹುದು ಎಂದು ದೂರಿನಲ್ಲಿ ತಿಳಿಸಿರುವ ಅವರು ವೈಜ್ಞಾನಿಕ ಕ್ರಮ ಅನುಸರಿಸದ ಲಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Read More

ಮಡಿಕೇರಿ ಮಾ.14 : ಕಾಡಾನೆ ದಾಳಿ ಮಾಡಿದ ಸಂದರ್ಭ ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ನಿಯಂತ್ರಣ ತಪ್ಪಿ ಬಿದ್ದ ಅರಣ್ಯ ಸಿಬ್ಬಂದಿಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಚಿನಿವಾಡ ಎಂಬಲ್ಲಿ ನಡೆದಿದೆ. ತೇಜಸ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೆಲವು ದಿನಗಳ ಹಿಂದೆ ಕಾಡಾನೆ ಮರಿಗೆ ಜನ್ಮ ನೀಡಿತ್ತು. ಆದರೆ ಮರಿ ಹುಟ್ಟಿದಾಕ್ಷಣ ಸಾವನ್ನಪ್ಪಿತ್ತು. ಇಂದು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾಗ ಕಾಡಾನೆ ದಾಳಿಗೆ ಮುಂದಾಗಿದೆ. ತಕ್ಷಣ ಎಚ್ಚೆತ್ತುಕೊಂಡ ತೇಜಸ್ ಓಡಲು ಆರಂಭಿಸಿದಾಗ ಆಯತಪ್ಪಿ ಬಿದಿದ್ದಾರೆ ಎಂದು ಹೇಳಲಾಗಿದೆ.

Read More

ಕುಶಾಲನಗರ  ಮಾ.14 :  ಉತ್ತಮ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮೂಲಕ ನೆಮ್ಮದಿಯ ಬದುಕು ಸಾಗಿಸಲು ಅನುವು ಮಾಡಿ ಕೊಡುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ ಎಂದು ಉಡುಪಿ ಪುತ್ತಿಗೆ ಮಠದ ಪ್ರಚಾರಕ  ರಮಣ ಶ್ರೀ ಆಚಾರ್ಯ  ಕರೆ ನೀಡಿದ್ದಾರೆ. ಉಡುಪಿ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಕೋಟಿ ಭಗವದ್ಗೀತಾ ಲೇಖನ ಯಜ್ಞ ಭಾಗವಾಗಿ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಮಕ್ಕಳು ಹಿರಿಯರ ಚಟುವಟಿಕೆಗಳನ್ನು ಗಮನಿಸಿ ಅನುಕರಣೆ ಮಾಡುತ್ತಾರೆ. ಉತ್ತಮ ಕರ್ತವ್ಯಗಳನ್ನು ಮಾಡುವ ಮೂಲಕ ನೆಮ್ಮದಿ ಗಳಿಸಲು ಸಾಧ್ಯ ಎಂದ ಅವರು, ದೇಶಪ್ರೇಮ, ದೈವ ಭಕ್ತಿ, ದೇಹ ಪ್ರೇಮ ಇವುಗಳನ್ನು ಪ್ರತಿಯೊಬ್ಬರು ಹೊಂದಬೇಕಾಗಿದೆ ಎಂದರು. ಎರಡು ವರುಷದ ಅವಧಿಯ ಒಳಗೆ ದಿನಕ್ಕೆ ಭಗವದ್ಗೀತೆಯ ಎರಡು ಶ್ಲೋಕಗಳನ್ನು ಬರೆಯುವ ಮೂಲಕ ಪೂರ್ಣಗೊಳಿಸಿ ನಂತರ ಅದನ್ನು ಸ್ವಯಂಸೇವಕರ ಅಥವಾ ನೇರವಾಗಿ ಮಠಕ್ಕೆ ತಲುಪಿಸಬಹುದು ಎಂದರು. ಈ ಅಭಿಯಾನದಲ್ಲಿ ಪಾಲ್ಗೊಳ್ಳುವವರಿಗೆ ಅವಶ್ಯವಿರುವ ಭಗವದ್ಗೀತೆ ಮತ್ತು ಬರೆಯುವ ಪುಸ್ತಕಗಳನ್ನು…

Read More