ಲೇಖಕ: admin

ಸೋಮವಾರಪೇಟೆ ಮಾ.11 :    ಕೊಡಗಿನಲ್ಲೂ ಶರುವಾಯ್ತು ಲಿಂಗಾಯತ, ಪಂಚಮಸಾಲಿ ಮೀಸಲಾತಿ ಕಿಚ್ಚು. ವೀರಶೈವ ಲಿಂಗಾಯತರೆಲ್ಲಾ ಒಂದೇ ಇಲ್ಲಿ ಉಪ ಜಾತಿಗಳ ಸುಳಿವಿಲ್ಲ ಅಂದುಕೊಂಡವರಿಗೆ ಈಗ ಲಿಂಗಾಯತ ಪಂಚಮ ಸಾಲಿ ಮೀಸಲಾತಿ ಹೋರಾಟದಲ್ಲಿ ಜಿಲ್ಲೆಯ ಯುವಕರು ಭಾಗವಹಿಸುವ ಮೂಲಕ ಶಾಕ್ ನೀಡಿದ್ದಾರೆ. ಲಿಂಗಾಯತ ಪಂಚಮ ಸಾಲಿ ಜನಾಂಗವನ್ನ 2 ಎ ಮೀಸಲಾತಿ ನೀಡಬೇಕೆಂದು ಜಗದ್ಗುರು ಬಸವ ಜಯಮೃತ್ಯಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ 53 ದಿನಗಳಿಂದ ನಡೆಯುತ್ತಿರುವ ಪ್ರತಿಭಟನಾ ಧರಣಿ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯ ಹೋರಾಟದ ಪ್ರಮುಖ ಮೋಹನ್ ನೇತೃತ್ವದಲ್ಲಿ ಕಾರ್ಯದರ್ಶಿ ಅಜ್ಜಳ್ಳಿ ರವಿ, ವೀರಶೈವ ಮಹಾ ಸಭಾದ ಸೋಮವಾರಪೇಟೆ ತಾಲೂಕು ಯುವ ಘಟಕದ ಅಧ್ಯಕ್ಷ ಆದರ್ಶ,ಲಿಖಿತ್,ಶಿವಶಂಕರ್,ಕುಮಾರ್,ಉದಯ,ಪ್ರತಾಪ್ ಹಾಗೂ ಪ್ರಶಾಂತ್ ಸೇರಿದಂತೆ ಹಲವು ಮಂದಿ ಭಾಗವಹಿಸಿ ಲಿಂಗಾಯತ ಪಂಚಮಸಾಲಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.   

Read More

ಮಡಿಕೇರಿ ಮಾ.11 : ಹಿರಿಯ ಸಾಹಿತಿ ಬೊವ್ವೇರಿಯಂಡ ಚಿಣ್ಣಪ್ಪ ನಿಧನಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಸಂತಾಪ ವ್ಯಕ್ತಪಡಿಸಿದೆ. ಬೊವ್ವೇರಿಯಂಡ ಚಿಣ್ಣಪ್ಪ ಅವರು ಭಾರತದ ಪ್ರಥಮ ಜಾನಪದ ಸಂಗ್ರಹ ಕೃತಿ ಪಟ್ಟೋಲೆ ಪಳಮೆಯ ಸಂಪಾದಕ ನಡಿಕೇರಿಯಂಡ ಚಿಣ್ಣಪ್ಪ ಅವರ ಮೊಮ್ಮಗ, ಪಟ್ಟೋಲೆ ಪಳಮೆ ಕೃತಿಯ ತರ್ಜುಮೆ ಮತ್ತು ಕೊಡವ ಐನ್ ಮನೆಗಳ ಕುರಿತು ವಿಶೇಷ ಅಧ್ಯಯನ ಕೃತಿ ರಚನೆಯೊಂದಿಗೆ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ  ನೀಡಿದ್ದಾರೆ. ಹಿರಿಯ ಮುತ್ಸದ್ದಿ ಸಾಹಿತಿಯ ಅಗಲಿಕೆಯು ಸಾಹಿತ್ಯ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ. ಅವರ ಸ್ಮರಣಾರ್ಥ ಕೊಡವಾಮೆರ ಕೊಂಡಾಟ ಸಂಘಟನೆಯು ತನ್ನ ದೈನಂದಿನ ಚಟುವಟಿಕೆಯನ್ನು ಸ್ಥಗಿತಗೊಳಿಸಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Read More

ನಾಪೋಕ್ಲು ಮಾ.11 : ಕುಂಜಿಲ ಪಯ್ ನರಿ ಸುನ್ನಿ ಮುಸ್ಲಿಂ ಜಮಾಯತ್ ವತಿಯಿಂದ ಪಯ್ ನರಿ ವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯ ನಂತರ ಜಮಾಯತ್ ಅಧ್ಯಕ್ಷ ಶೌಕತ್ ಆಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಕರ್ನಾಟಕ ರಾಜ್ಯ ಮುಸ್ಲಿಂ ಜಮಾಯತ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ಪ್ರಮುಖರಾದ ನಿಸಾರ್ ಅಸನಿ, ಅಬ್ದುಲ್ ಸಖಾಫಿ ,ಹುಸೇನ್ ಮೌಲವಿ ಹಾಗೂ ಧರ್ಮ ಗುರುಗಳು, ಜಮಾಯತ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ರಾತ್ರಿ ಕೊಲ್ಲಂನ ಡಾ. ಮಹಮ್ಮದ್ ಫಾರೂಕ್ ಅವರಿಂದ ಉಪನ್ಯಾಸ ನಡೆಯಿತು. ಮಾ.13 ರಂದು ಮಧ್ಯಾಹ್ನ 1.15 ಕ್ಕೆ ಸಾರ್ವಜನಿಕ ಸೌಹಾರ್ದ ಸಮ್ಮೇಳನ ನಡೆಯಲಿದ್ದು, ಅಬ್ದುಲ್ ರಶೀದ್ ಜೈನಿ ಮುಖ್ಯ ಭಾಷಣ ಮಾಡಲಿದ್ದಾರೆ. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಮಾ.11 :  ಜೆಡಿಎಸ್ ಪಕ್ಷದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯು ಮಾ.15 ರಂದು ನಡೆಯಲಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರ (ಟೌನ್ ಹಾಲ್ ) ನಲ್ಲಿ ಸಭೆ ನಡೆಯಲಿದ್ದು, ವಿವಿಧ ಘಟಕದ ಅಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು, ಬೂತ್ ಮಟ್ಟದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ತಾಲೂಕು ಅಧ್ಯಕ್ಷ  ಪಿ.ಎ.ಮಂಜುನಾಥ್ ತಿಳಿಸಿದ್ದಾರೆ.

Read More

ಮೈಸೂರು : ಕೆಪಿಸಿಸಿ ಕಾರ್ಯಾಧ್ಯಕ್ಷ, ಚಾಮರಾನಗರದ ಮಾಜಿ ಸಂಸದ ಆರ್.ಧ್ರುವನಾರಾಯಣ (62) ವಿಧಿವಶರಾಗಿದ್ದಾರೆ. ಮೈಸೂರಿನ ವಿಜಯನಗರದಲ್ಲಿ ವಾಸವಾಗಿದ್ದ ಅವರು ಹೃದಯಾಘತದಿಂದ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಿಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಧ್ರುವನಾರಾಯಣ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

Read More

ಸುಂಟಿಕೊಪ್ಪ,ಮಾ.10: ಗ್ರಾಮ ದೇವರ 4ನೇ ವರ್ಷದ ವಾರ್ಷಿಕ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಸುಂಟಿಕೊಪ್ಪದ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ, ರಾಮ ಸೇವಾ ಸಮಿತಿ, ಅಯ್ಯಪ್ಪ ದೇವಾಲಯ, ಗೌರಿ ಗಣೇಶೋತ್ಸವ, ಮಸಣಕಮ್ಮ ದೇವಸ್ಥಾನ, ವೃಕ್ಷೋದ್ಭವ ಗಣಪತಿ ದೇವಾಲಯ, ಟಿಸಿಎಲ್ ಚಾಮುಂಡೇಶ್ವರಿ ದೇವಸ್ಥಾನ, ಶ್ರೀದೇವಿ ಅಣ್ಣಪ್ಪ ದೇವಾಲಯ, ಬಾಳೆಕಾಡು ಮುತ್ತಪ್ಪ ದೇವಸ್ಥಾನ ಸಮಿತಿಗಳ ಸಹಭಾಗಿತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಗ್ರಾಮ ದೇವರ ವಾರ್ಷಿಕ ಪೂಜೋತ್ಸವದ ಅಂಗವಾಗಿ ತಳಿರು ತೋರಣ ವಿವಿಧ ಬಗೆಯ ಬಣ್ಣ ಹೂಗಳಿಂದ ಸಿಂಗರಿಸಲಾಗಿತ್ತು. ಅರ್ಚಕ ಗಣೇಶ್ ಭಟ್ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಸ್ಥಳ ಶುದ್ಧಿ ಕಳಸದೊಂದಿಗೆ ಕುಂಕುಮ ಪೂಜೆ, ಅಲಂಕಾರ ಪೂಜೆ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಬೆಳಿಗ್ಗೆ 10.30 ಗಂಟೆಯ ನಂತರ ಗ್ರಾಮ ದೇವರಿಗೆ ಹರಕೆ ಸಮರ್ಪಣೆ ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಭಕ್ತರು ಗ್ರಾಮ ದೇವತೆಗೆ ಹರಕೆ ಒಪ್ಪಿಸಿದರು. ಸಮಿತಿಯ ದಿನು ದೇವಯ್ಯ, ಎ.ಶ್ರೀಧರ್ ಕುಮಾರ್, ಸುರೇಶ್ ಗೋಪಿ, ಪಟ್ಟೆ ಮನೆ…

Read More

ಮಡಿಕೇರಿ ಮಾ.11 : ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ 19ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯ ಗಾಂಧಿ ಕ್ರಿಕೆಟರ್ಸ್ ಕಂಡಕರೆ ತಂಡದ ಜರ್ಸಿಯನ್ನು ಕೊಡಗು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರವಿ ಗೌಡ ಬಿಡುಗಡೆಗೊಳಿಸಿದರು. ಕಂಡಕರೆಯಲ್ಲಿ ಗಾಂಧಿ ಯುವಕ ಸಂಘದ ಅಧ್ಯಕ್ಷರಾದ ಷರೀಫ್‌‌ ಪಿ.ಎಂ ಗಾಂಧಿ ಕ್ರಿಕೆಟರ್ಸ್ ತಂಡದ ಆಟಗಾರರಿಗೆ ವಿತರಿಸಿದರು. ಈ ಸಂದರ್ಭ ಗಾಂಧಿ ಯುವಕ ಸಂಘದ ಸ್ಥಾಪಕ ಪತ್ರಕರ್ತ ಇಸ್ಮಾಯಿಲ್ ಕಂಡಕರೆ,ಪ್ರಧಾನ ಕಾರ್ಯದರ್ಶಿ ಇರ್ಷಾದ್ ಕೆ.ಎಂ,ಉಪಾಧ್ಯಕ್ಷ ಸವಾದ್ ಉಸ್ಮಾನ್ ಈ.ಯು, ಅಫ್ನಾನ್ ಪಿ.ಎಂ, ಸಲ್ಮಾನ್, ಖರೀಮ್, ಮುಬಶ್ಶಿರ್, ಸಹೀರ್, ರಿಯಾಸ್, ಕಂಡಕರೆ ನಿವಾಸಿ ಶುಕೂರ್ ಇದ್ದರು.

Read More

ಮಡಿಕೇರಿ ಮಾ.10 : ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆ ಇಂದು ಕೊಡಗು ಜಿಲ್ಲೆಯನ್ನು ಪ್ರವೇಶಿಸಿತು. ಕೇಸರಿಮಯವಾದ ಗೋಣಿಕೊಪ್ಪಲಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಕಾರ್ಯಕರ್ತರು ಸಾಕ್ಷಿಯಾದರು. ಜಯಘೋಷಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಯಾತ್ರೆ ಸಾಗಿತು. ಸಾವಿರಾರು ಕಾರ್ಯಕರ್ತರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರಮೋದಿ ಅವರಿಗೆ ಜಯಕಾರ ಹಾಕಿದರು. ನಂತರ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಭಾರತೀಯ ಜನತಾ ಪಾರ್ಟಿ ಜಾತಿವಾದಿ ಪಕ್ಷವಲ್ಲ ರಾಷ್ಟ್ರವಾದಿ ಪಕ್ಷ, ಬಿಜೆಪಿಗೆ ಕೋಮುವಾದಿ ಪಟ್ಟ ಕಟ್ಟಿದವರೇ ಜಾತಿವಾದಿಗಳು ಎಂದು ಗುಡುಗಿದರು. ಸಿದ್ದರಾಮಯ್ಯ ಅವರು ಕುರುಬರೆಲ್ಲ ನನ್ನ ಹಿಂದೆ ಬನ್ನಿ ಎಂದರೆ, ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರೆಲ್ಲ ನನ್ನ ಹಿಂದೆ ಬನ್ನಿ ಎಂದು ಕರೆ ನೀಡುತ್ತಿದ್ದಾರೆ. ಇದರಲ್ಲೇ ಅರ್ಥವಾಗುತ್ತದೆ ಜಾತಿಯ ವಾದಿಗಳು ಯಾರೆಂದು. ಸಿದ್ದರಾಮಯ್ಯ ಅವರಿಗೆ ಕುರುಬರು, ದಲಿತರು, ಇತರ ಜನಾಂಗಗಳ ಬೆಂಬಲ ಇಲ್ಲ ಎನ್ನುವುದು ಖಾತ್ರಿಯಾಗಿ ಅಲ್ಪಸಂಖ್ಯಾತರು ಹೆಚ್ಚು ಸಂಖ್ಯೆಯಲ್ಲಿರುವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ…

Read More

ಮಡಿಕೇರಿ ಮಾ.10 : ಮಹಿಳಾ ದಿನಾಚರಣೆ ಅಂಗವಾಗಿ ಕೊಡವ ಕೂಟಾಳಿಯಡ ಕೂಟದಿಂದ ಹಿರಿಯ ಕಲಾವಿದೆ ಮೈತಾಡಿ ಗ್ರಾಮದ ಕುಂಡಚ್ಚಿರ ಜಾಜಿ ಮುತ್ತಣ್ಣ ಅವರನ್ನು ಮನೆಗೆ ತೆರಳಿ ಸನ್ಮಾನಿಸಲಾಯಿತು. ಕಿರಿಯ ವಯಸ್ಸಿನಲ್ಲಿ ಉಮ್ಮತ್ತಾಟ್, ಪೌರಾಣಿಕ ನಾಟಕ, ಕೊಡವ ಹಾಡುಗಳನ್ನು ಕಲೆಯಾಗಿ ರೂಪಿಸಿಕೊಂಡು 75ರ ಇಳಿ ವಯಸ್ಸಿನಲ್ಲೂ ಕಿರಿಯರಿಗೆ ತರಬೇತಿ ನೀಡುತ್ತಿರುವ ಕುಂಡಚ್ಚಿರ ಜಾಜಿ ಮುತ್ತಣ್ಣ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಕೂಟದ ಅಧ್ಯಕ್ಷೆ ಚಿಮ್ಮಚ್ಚಿರ ಪವಿತ ರಜನ್ ಮಾತನಾಡಿ, ಸೇವೆ, ಸಾಧನೆ ಮೂಲಕ ಸಾಕಷ್ಟು ಮಹಿಳೆಯರು ಸಮಾಜಕ್ಕೆ ತಮ್ಮದೇ ಆದ ಕಾಣಿಕೆ ನೀಡುತ್ತಿದ್ದಾರೆ. ಇಂತಹವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಗೌರವಿಸಲಾಗುತ್ತಿದೆ ಎಂದರು. ಕೂಟದ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಸಲಹೆಗಾರ ಚಂಗುಲಂಡ ಸೂರಜ್, ಸಾಂಸ್ಕೃತಿಕ ನಿರ್ದೇಶಕಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸದಸ್ಯ ಕಾಳಮಂಡ ರಾಬಿನ್ ಅಚ್ಚಮ್ಮ ಇದ್ದರು.

Read More

ಕುಶಾಲನಗರ, ಮಾ.10 : ಟಿಬೆಟಿಯನ್ ನೂತನ ವರ್ಷ ಆಚರಣೆ  ಅಂಗವಾಗಿ  ಸಮೀಪದ ಬೈಲುಕುಪ್ಪೆ ಟಿಬೆಟಿನ್ ನಿರಾಶ್ರಿತ ಶಿಬಿರದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಿದವು.  ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಆವರಣದಲ್ಲಿ ಬೃಹತ್ ಪರದೆಗಳ ಅನಾವರಣ ಕಾರ್ಯಕ್ರಮ ಕೂಡ ನಡೆಯಿತು. ಧಾರ್ಮಿಕ ಗುರುಗಳಾಗಿದ್ದ ಗುರು ಪದ್ಮ ಸಂಭವ ಮತ್ತು ಅಧಿಕ ಆಯುಷ್ಯ ನೀಡುತ್ತದೆ ಎಂದು ನಂಬಿಕೆ ಹೊಂದಿರುವ ಅಮಿತಾಯುಶ್ ಚಿತ್ರಪರದೆಗಳನ್ನು ಅನಾವರಣಗೊಳಿಸಲಾಯಿತು.

Read More