ಅಮ್ಮತಿ, ಮೇ 29 NEWS DESK : ಅಮೃತ ಯುವ ಮೊಗೇರ ಸೇವಾ ಸಮಿತಿ ಇವರ ಸಹಭಾಗಿತ್ವದಲ್ಲಿ, ಶ್ರೀ ಕಲ್ಲುರ್ಟಿ ಮೊಗೇರ ಫುಟ್ಬಾಲ್ ಅಮ್ಮತಿ ವತಿಯಿಂದ ರಾಜ್ಯ ಮಟ್ಟದ “ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ – 2026” ಪಂದ್ಯಾವಳಿಯನ್ನು ಮೇ 30 ಹಾಗೂ 31 ರಂದು ಅಮ್ಮತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಮೊಗೇರ ಸಮುದಾಯದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿರುವ ಈ ರಾಜ್ಯ ಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು 8 ಮಾಲೀಕತ್ವದ ತಂಡಗಳು ಭಾಗವಹಿಸಲಿದ್ದು, ಎರಡು ದಿನಗಳ ಕಾಲ ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಕೊಡಗು ಸೇರಿದಂತೆ ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಾವಂತ ಆಟಗಾರರು ಭಾಗವಹಿಸಲಿದ್ದು, ಪ್ರತಿಯೊಂದು ಪಂದ್ಯವೂ ರೋಚಕ ಪೈಪೋಟಿಗೆ ಸಾಕ್ಷಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಪಂದ್ಯಾವಳಿಯ ಚಾಂಪಿಯನ್ ತಂಡಕ್ಕೆ ರೂ.50,000 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತಿದ್ದು, ರನ್ನರ್ಸ್ ತಂಡಕ್ಕೆ ರೂ.30,000 ನಗದು ಮತ್ತು…
ಲೇಖಕ: admin
ವಿರಾಜಪೇಟೆ ಮೇ 29 NEWS DESK : ಕೊಡಗು ಜಿಲ್ಲಾ ಕಿವುಡರ ಸಂಘದ ಜಿಲ್ಲಾಧ್ಯಕ್ಷರಾಗಿ ಮಾತಂಡ ಗೌರು ಸೋಮಣ್ಣ ಅವಿರೋಧ ಆಯ್ಕೆಯಾಗಿದ್ದಾರೆ. ವಿರಾಜಪೇಟೆಯ ಪುರಭವನದಲ್ಲಿ ಕೊಡಗು ಜಿಲ್ಲಾ ಕಿವುಡರ ಸಂಘದ ಒಂಬತ್ತನೇ ವರ್ಷದ ವಾರ್ಷಿಕ ಸಾಮಾನ್ಯ ಮಹಾಸಭೆ ಮತ್ತು ಚುನಾವಣೆಯಲ್ಲಿ ಆಯ್ಕೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ, ಕೊಡಗು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಮಾತಂಡ ಗೌರು ಸೋಮಣ್ಣ ಸಂಘದ ಸರ್ವ ಸದಸ್ಯರ ಉಪಸ್ಥಿತಿ ಮತ್ತು ಭಾಗವಹಿಸುವಿಕೆ ನಮ್ಮ ಸಂಘಕ್ಕೆ ಶಕ್ತಿ, ಏಕತೆ ಮತ್ತು ಮುಂದಿನ ಉದ್ದೇಶವನ್ನು ಒಳಗೊಂಡಿರುತ್ತದೆ. ಕಳೆದ ಸಾಲಿನಲ್ಲಿ ಸರ್ವರೂ ಒಟ್ಟುಗೂಡಿ ಸಮರ್ಪಣಾ ಭಾವದಿಂದ ಒಟ್ಟಾಗಿ ಸೇವೆ ಸಲ್ಲಿಸುವುದರ ಮೂಲಕ ಕೆಡಿಡಿಎ ಗೆ ಒಳ್ಳೆಯ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದೇವೆ .ನಮ್ಮ ಸಂಘದ ಗೌರವಾಧ್ಯಕ್ಷರು ದಣಿವರಿಯದೆ ನಮ್ಮ ಜೊತೆಗೆ ನಿರಂತರ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅವರ ದೂರ ದೃಷ್ಟಿಯಿಂದ ಇಂದು ಸಂಘ ಯಶಸ್ವಿಯ ಹಾದಿಯಲ್ಲಿದೆ. ಸಂಘದ ಸರ್ವ ಪದಾಧಿಕಾರಿಗಳಿಗೆ ಧನ್ಯವಾದಗಳು ಸಲ್ಲಿಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌರವಾಧ್ಯಕ್ಷ ಜೋಸೆಫ್…
ವಿರಾಜಪೇಟೆ ಮೇ 29 NEWS DESK : ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರವು ಯಶಸ್ವಿಯಾಗಿ ಜರುಗಿತು. ಸ್ಲ್ಯಾಶ್ ಅಂಡ್ ಸ್ಪಾರ್ಕ್ 2026 ಎಂಬ ಧ್ಯೇಯದಡಿಯಲ್ಲಿ ನಾಲ್ಕು ವಾರಗಳ ಕಾಲ ಜರುಗಿದ ಶಿಬಿರಕ್ಕೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ಚಾಲನೆ ನೀಡಿದರು. ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸೃಜನಾತ್ಮಕ ಕಲಿಕೆಯ ಜೊತೆಗೆ ಮನರಂಜನೆಯನ್ನು ಒದಗಿಸಲಾಯಿತು. ಕಲೆ, ಕ್ರೀಡೆ ಹಾಗೂ ವಿಜ್ಞಾನದ ಕುರಿತಾದ ಚಟುವಟಿಕೆಗಳ ಕುರಿತು ಪರಿಚಯಿಸಲಾಯಿತು. ಮಕ್ಕಳಿಗೆ ಕಾರ್ಡ್ ಬೋರ್ಡ್ ಕ್ರಿಯೇಷನ್, ಡೂಡಲ್ ಆರ್ಟ್, ಸ್ಕ್ರಿಬಲ್ ಆರ್ಟ್, ಬಾಟಲ್ ಪೇಂಟಿಂಗ್, ಅಡುಗೆ ತಯಾರಿಸುವ ವಿಧಾನಗಳು, ಪರಿಸರ ವಿಜ್ಞಾನ, ಆಡಿಯೋ ವಿಜುವಲ್ ಕಮ್ಯುನಿಕೇಶನ್, ರೊಬೊಟಿಕ್ಸ್ ಮುಂತಾದ ವಿಷಯದ ಕುರಿತು ತರಬೇತಿಯನ್ನು ನೀಡಲಾಯಿತು. ಮಕ್ಕಳು ಕೂಡ ತಮ್ಮ ಕೈ ಚಳಕದಿಂದ ಅನೇಕ ಸುಂದರ ಕಲಾಕೃತಿಗಳನ್ನು ತಯಾರಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಿ ಪರಸ್ಪರ ಸ್ನೇಹ, ಸಹಕಾರ ಹಾಗೂ ತಂಡದ…
ವಿರಾಜಪೇಟೆ ಮೇ 29 NEWS DESK : ಅನ್ಯ ಭಾಷೆ ಹೊಂದಿರುವ ಮಕ್ಕಳಲ್ಲಿ ಬೋಧಕರು ನೈಜ ಭಾಷೆಯ ಮನೋಭಾವನೆ ಬರುವಂತೆ ನೋಡಿಕೊಂಡು ಬೋಧಿಸಬೇಕಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಕಾವೇರಿ ಕಾಲೇಜು ಹಾಗೂ ದಲಿತ ಸಾಹಿತ್ಯ ಪರಿಷತ್ ನುಡಿ ಉತ್ಸವ ಮತ್ತು ಕೊಡಗು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗಡಿ ಪ್ರದೇಶಗಳ ಪಠ್ಯ ಕ್ರಮದಲ್ಲಿ ಕನ್ನಡ ಭಾಷ ನೀತಿ ಹಾಗೂ ಬಹುಭಾಷ ವಾಸ್ತವಿಕತೆಗಳ ಮರುಚಿಂತನೆ ಎನ್ನುವ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಕನ್ನಡ ಭಾಷೆ ಸಾವಿರಾರು ವರ್ಷದ ಇತಿಹಾಸ ಇರುವ ಭಾಷೆ. ಇದಕ್ಕೆ 2008 ರಲ್ಲಿ ಶಾಸ್ತ್ರೀಯ ಸ್ಥಾನ ಬಂದಿರುವುದು ಹೆಮ್ಮೆ ಗೌರವ ಎಂದು ಹೇಳಿಕೊಂಡರೆ ಸಾಲದು. ಈ ಪುರಾತನ ಭಾಷೆಯಲ್ಲಿ ಸಾಹಿತ್ಯ, ಪರಂಪರೆ, ಸಂಸ್ಕೃತಿ, ಆಚಾರ-ವಿಚಾರ ಆಳವಾಗಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ಆಗಬೇಕು. ಇಂದು ಆಯೋಜಿಸಿರುವ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮವಲ್ಲ. ಇದು ನಮ್ಮ ಸಾಹಿತ್ಯ…
ಮಡಿಕೇರಿ ಮೇ 29 NEWS DESK : ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು/ ಗ್ರಾಹಕರು ಕ್ರಮವನ್ನು ಗಮನಿಸಿ ಪಾಲಿಸಬೇಕಾಗಿ ಇಲಾಖೆಯು ವಿನಂತಿಸುತ್ತಿದೆ. ಗೃಹ ಬಳಕೆ ವಿದ್ಯುತ್ ಗ್ರಾಹಕರು ಗಮನಿಸಬೇಕಾದ ಅಂಶಗಳು: ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಎಲ್ಲಾ ವಿದ್ಯುತ್ ಕಾಮಗಾರಿಗಳನ್ನು ಎಷ್ಟೇ ಚಿಕ್ಕದಿರಲಿ, ಪರಿಣಿತ ವ್ಯಕ್ತಿಗಳಿಂದ ನಿರ್ವಹಿಸಬೇಕು. ಭಾರತೀಯ ಗುಣಮಟ್ಟ ಸಂಸ್ಥೆಯ (ಐಎಸ್ಐ) ಪ್ರಮಾಣೀಕೃತ ವಿದ್ಯುತ್ ಉಪಕರಣ, ಕೇಬಲ್, ವೈರ್ ಹಾಗೂ ಸುರಕ್ಷತಾ ಉಪಕರಣಗಳನ್ನು ಬಳಸಬೇಕು. ವಿದ್ಯುತ್ ಸ್ಥಾವರದಲ್ಲಿ ಪರಿಣಾಮಕಾರಿ ಭೂಸಂಪರ್ಕ ವ್ಯವಸ್ಥೆ ಕಲ್ಪಿಸಿ, ನಿರ್ವಹಿಸಬೇಕಾಗಿರುತ್ತದೆ. ಜೀವ ರಕ್ಷಕ ಆರ್ಸಿಡಿ ಗಳನ್ನು ಬಳಸಿ ವಿದ್ಯುತ್ ಸೋರಿಕೆಯಿಂದ ಉಂಟಾಗುವ ಅಪಾಯವನ್ನು ತಪ್ಪಿಸುವುದು. ಭಾರಿ ವಿದ್ಯುತ್ ಪರಿಕರಗಳಾದ ರೆಫ್ರಿಜರೇಟರ್, ಮಿಕ್ಸರ್, ಘೀಸರ್, ವಾಷಿಂಗ್ ಮಷಿನ್ ಮುಂತಾದವುಗಳಿಗೆ ಮೂರು ಪಿನ್ ಪ್ಲಗ್ ಸಾಕೆಟ್ಸ್ಗಳಿರುವ ಪ್ರತ್ಯೇಕ ಸ್ವಿಚ್ ನಿಯಂತ್ರಣದಿಂದಲೇ ವಿದ್ಯುತ್ ಸರಬರಾಜು ಕಲ್ಪಿಸಿ, ಮೂರನೇ ಪಿನ್ಗೆ ಭೂಸಂಪರ್ಕ ಕಲ್ಪಿಸಬೇಕಿದೆ. ವಿದ್ಯುತ್ ಸ್ವಿಚ್ ಹಾಗೂ ಸಾಕೆಟ್ಗಳನ್ನು ಕೈಗೆ ಎಟುಕುವ ಎತ್ತರದಲ್ಲಿ ಮಕ್ಕಳಿಗೆ ಸಿಗದ ಹಾಗೆ…
ಮೈಸೂರು, ಮೇ 29 NEWS DESK : ಮೈಸೂರು ಜಿಲ್ಲೆಯಾದ್ಯಂತ ರಸ್ತೆ ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಸದ ಯದುವೀರ್ ಒಡೆಯರ್ ಅವರು ಮೈಸೂರು, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳನ್ನು ಒಳಗೊಂಡಂತೆ ಹಲವು ಪ್ರಮುಖ ರಸ್ತೆ ಅಭಿವೃದ್ಧಿ ಮತ್ತು ಸುಧಾರಣಾ ಕಾಮಗಾರಿಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ರೂ.50 ಕೋಟಿ ಮೌಲ್ಯದ ಕೇಂದ್ರ ರಸ್ತೆ ನಿಧಿ ಮೂಲಕ ಕೈಗೆತ್ತಿಕೊಳ್ಳಲಾಗುತ್ತಿರುವ ಈ ಕಾಮಗಾರಿಗಳು ರಸ್ತೆ ಸಂಪರ್ಕ ಸುಧಾರಣೆ, ಸುರಕ್ಷಿತ ಸಂಚಾರ, ವಾಹನ ದಟ್ಟಣೆ ನಿವಾರಣೆ ಹಾಗೂ ಗ್ರಾಮೀಣ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗಲಿವೆ. ಈ ಯೋಜನೆಗಳಡಿ ಹುಣಸೂರು ತಾಲ್ಲೂಕಿನ ರಾಮನಾಥಪುರ–ತೆರಕನಾಂಬಿ ವಿಭಾಗದ SH-86 ರಸ್ತೆಯ ಕಿಮೀ 50.75 ರಿಂದ 64.87ರವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣಾ ಕಾಮಗಾರಿಗೆ ರೂ.6 ಕೋಟಿ ಮಂಜೂರಾಗಿದೆ. ಅದೇ ರೀತಿ, ಹಾದ್ಯ (SH-86)ದಿಂದ ಅವರ್ತಿ (SH-287)ವರೆಗೆ ಕಿತ್ತೂರು, ಅತ್ತಿಗುಡು, ಬೆಟ್ಟದಪುರ (SH-21) ಹಾಗೂ ಚಿಕ್ಕನೇರಳೆ ಮಾರ್ಗವಾಗಿ ಪಿರಿಯಾಪಟ್ಟಣ ತಾಲ್ಲೂಕಿನ ಕಿಮೀ 24.75 ರಿಂದ…
ಮಡಿಕೇರಿ ಮೇ 28 NEWS DESK : ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯ ಸಂರಕ್ಷಣೆಯ ಪ್ರಚಾರದ ಮೂಲಕ ಮಾರುಕಟ್ಟೆ ವ್ಯಾಪಿಸುತ್ತಿರುವ ಈ ದಿನಗಳಲ್ಲಿ ಎಲ್ಲಾ ರೀತಿಯ ಪ್ರಚಾರವನ್ನೂ ನಂಬುವ ಬದಲಿಗೆ ಸೂಕ್ತ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕೆಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆಯ ವೈದ್ಯೆ ಡಾ ಕೆ.ಟಿ.ರಾಜಶ್ರೀ ಸಲಹೆ ನೀಡಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಆರೋಗ್ಯ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ರಾಜಶ್ರೀ, ಹಿಂದಿನ ಕಾಲದಲ್ಲಿ ನೀಡಲಾಗುತ್ತಿದ್ದ ಚಿಕಿತ್ಸೆ ಮತ್ತು ಹಳೇ ಆರೋಗ್ಯ ಪದ್ದತಿಯನ್ನೇ ನಂಬಿಕೊಂಡಿರಬಾರದು. ಆರೋಗ್ಯ ಪದ್ದತಿ ಕೂಡ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ ಎಂದರು. ಇಂದಿನ ನವ ತಂತ್ರಜ್ಞಾನದ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಆರೋಗ್ಯ ಚಿಕಿತ್ಸೆ ಸಂಬಂಧಿತ ಪ್ರಚಾರ ನಡೆಯುತ್ತಿದೆ ಆದರೆ ಇಂಥ ಪ್ರಚಾರವನ್ನು ನಂಬುವ ಬದಲಿಗೆ ಸೂಕ್ತ ವೈದ್ಯರನ್ನು ಮುಖತ ಭೇಟಿಯಾಗಿ ಚಿಕತ್ಸೆ ಪಡೆಯುವುದು ಅಗತ್ಯ ಎಂದೂ ಅವರು ಹೇಳಿದರು. ರೋಟರಿ ಜಿಲ್ಲೆ 3181 ನ…
ಮಡಿಕೇರಿ ಮೇ 29 NEWS DESK : ಕನ್ನಡ ಭಾಷೆಯ ಅಭಿವೃದ್ಧಿಗೆ ಸಣ್ಣ ಸಣ್ಣ ಭಾಷೆಗಳ ಕೊಡುಗೆ ಅಪಾರವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಲ್ಲಿ ಹಾಗೂ ಶಿಕ್ಷಣಕ್ಕೆ ಒತ್ತು ನೀಡುವಲ್ಲಿ ಸರಕಾರದ ಶಿಕ್ಷಣ ನೀತಿಯಲ್ಲಿ ಶಾಲಾ ಗ್ರಂಥಾಲಯಗಳ ಪಾತ್ರ ಪ್ರಮುಖವಾಗಿದೆ ಎಂದು ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಹಾಗೂ ಕಥೆಗಾರ ಅಬ್ದುಲ್ ರಶೀದ್ ಬಣ್ಣಿಸಿದ್ದಾರೆ. ಸುಂಟಿಕೊಪ್ಪದ ಎಸ್.ಎಸ್.ಇಂಟರ್ನ್ಯಾಷನಲ್ ಸಭಾಂಗಣದ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ಶುಕ್ರವಾರ ನಡೆದ ಕೊಡಗು ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡಗನ್ನು ಕರ್ನಾಟಕದ ಕಾಶ್ಮೀರ ಎಂದು ಹೇಳುತ್ತಾರೆ. ಆದರೆ ಈ ಹೋಲಿಕೆ ಯಾಕೋ ಸರಿ ಬರುತ್ತಿಲ್ಲ ಕಾಶ್ಮೀರದ ಕಷ್ಟ ಕಾರ್ಪಣ್ಯಗಳ ಅರಿವು ಇರುವವರು ಮತ್ತು ಕೊಡಗಿನ ಚೆಲುವನ್ನು ಚೆನ್ನಾಗಿ ಬಲ್ಲವರು ಯಾರೂ ಸಹ ಈ ಹೋಲಿಕೆ ಸರಿಯಲ್ಲ ಎಂದು ಹೇಳುತ್ತಾರೆ. ಈ ನೆಲದ ಮಣ್ಣು, ಗಾಳಿ, ಇಲ್ಲಿನ ಗುಡಿಗಳು, ಭಗವತಿ, ಈಶ್ವರ,…
ಮಡಿಕೇರಿ NEWS DESK ಮೇ 29 : ಕೊಡಗು ಜಿಲ್ಲೆಯಲ್ಲಿ ಸ್ವಂತ ಸೂರಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿರುವ ಸುಮಾರು 60 ಸಾವಿರಕ್ಕೂ ಅಧಿಕ ನಿವೇಶನ ರಹಿತ ಬಡವರಿಗೆ ತಲಾ 5 ಸೆಂಟ್ ನಿವೇಶನ ಹಂಚಿಕೆ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಮತ್ತು ನವ ಕರ್ನಾಟಕ ನಿರ್ಮಾಣ ಆಂದೋಲನ ಸಮಿತಿಯ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಬೇಡಿಕೆ ಈಡೇರಿಸಲು ಸರಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ಪ್ರತಿಭಟನಾಕಾರರು, ಸೂಕ್ತ ಸ್ಪಂದನೆ ದೊರೆಯದೇ ಇದ್ದಲ್ಲಿ ರಾಜ್ಯ ಮಟ್ಟದ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು. ಭೂಕಬಳಿಕೆದಾರರ ಬಳಿ ಇರುವ ಸರಕಾರಿ ಭೂಮಿಯ ಒತ್ತುವರಿಯನ್ನು ತಕ್ಷಣ ತೆರವು ಮಾಡಬೇಕು. ಬಡವರಿಗೆ ನಿವೇಶನ ಹಂಚಿಕೆ ಮಾಡಲು ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ 50 ಎಕರೆ ಭೂಮಿ ಕಾಯ್ದಿರಿಸಬೇಕು. ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ, ಪೊನ್ನಂಪೇಟೆಯ ಬಿ.ಶೆಟ್ಟಿಗೇರಿ, ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಪೊನ್ನತ್ ಮೊಟ್ಟೆ ಭಾಗದಲ್ಲಿ ಮತ್ತು ಮಾದಾಪುರದ ಕುಂಬೂರು…
ಮಡಿಕೇರಿ NEWS DESK ಮೇ 29 : ಚೆನ್ನೈನ ಮನೋಗಾನಂ ಸಂಗೀತ ವಿದ್ಯಾ ಸಂಸ್ಥೆ ಮಡಿಕೇರಿ ಹಾಗೂ ತಲಕಾವೇರಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮೇ 30ರಂದು ತಲಕಾವೇರಿಯಲ್ಲಿ ಬೆಳಿಗ್ಗೆ 8.30 ಕ್ಕೆ ಹಾಗೂ ಮೇ 31ರಂದು ಮಡಿಕೇರಿಯ ಗೌಳಿ ಬೀದಿಯ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಬೆಳಿಗ್ಗೆ 7 ಗಂಟೆಗೆ ಕಾರ್ಯಕ್ರಮಗಳು ನಡೆಯಲಿದೆ. ಈ ಸಂಗೀತ ವಿದ್ಯಾ ಸಂಸ್ಥೆ ಪ್ರತಿ ವರ್ಷ ತನ್ನ ವಿದ್ಯಾರ್ಥಿಗಳನ್ನು ದೇಶದ ವಿವಿಧ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಸಂಸ್ಥೆಯ ಆರು ಮತ್ತು ಏಳನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಕೊಡಗಿನಲ್ಲಿ ಸಂಗೀತ ಸುಧೆ ನಡೆಯಲಿದ್ದು, ಮಕ್ಕಳ ಸಂಗೀತದೊoದಿಗೆ ಪಿಟೀಲು ವಾದನ ಕೂಡ ಇರಲಿದೆ. ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಅವರ ಸಹಕಾರದಿಂದ ಈ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ರಮಶ್ರೀ ತಿಳಿಸಿದ್ದಾರೆ.






