ಮಡಿಕೇರಿ ಅ.29 NEWS DESK : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಪತ್ರಕರ್ತರ ಕಾಲ್ಚೆಂಡು ಪಂದ್ಯವಾಳಿಯು ನ.3 ರಂದು ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕ್ರೀಡಾಕೂಟದ ಸಂಚಾಲಕ ಪ್ರೆಸ್ ಕ್ಲಬ್ ನಿರ್ದೇಶಕ ಇಸ್ಮಾಯಿಲ್ ಕಂಡಕರೆ ಹಾಗೂ ಕೆ.ಎಂ.ವಿನೋದ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿಯು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಸೂಪರ್ ಸೆವೆನ್ಸ್ ಮಾದರಿಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳ ಭಾಗವಹಿಸಲಿದೆ. ಗೋಪಾಲ್ ಸೋಮಯ್ಯ ನಾಯಕತ್ವದ ಮೀಡಿಯಾ ಯುನೈಟೆಡ್ ತಂಡದಲ್ಲಿ, ರೆಜಿತ್ ಕುಮಾರ್ ಗುಹ್ಯ, ವಿ.ವಿಅರುಣ್ ಕುಮಾರ್, ಕುಡೆಕಲ್ ಸಂತೋಷ್, ಶಶಿಕುಮಾರ್ ರೈ, ಅಬ್ದುಲ್ಲಾ, ಎಚ್.ಸಿ ಜಯಪ್ರಕಾಶ್, ಕೆ.ಬಿ.ಶಂಶುದ್ದೀನ್, ವಿಶ್ವ ಕುಂಬೂರು, ದುರ್ಗ ಪ್ರಸಾದ್, ಚಂದನ್ ನಂದರಬೆಟ್ಟು ಮತ್ತು ರವಿಕುಮಾರ್ ಸ್ಥಾನ ಪಡೆದಿದ್ದಾರೆ. ಸುರ್ಜಿತ್ ನಾಯಕತ್ವದ ರಾಕ್ ಸ್ಟಾರ್ ತಂಡದಲ್ಲಿ ಸುಬ್ರಮಣಿ ಸಿದ್ದಾಪುರ, ಮಂಜು ಸುವರ್ಣ,ಮುಸ್ತಫಾ ಸಿದ್ದಾಪುರ, ಮನು, ರಿಜ್ವಾನ್ ಹುಸೇನ್, ಲೋಕೇಶ್ ಕಾಟಕೇರಿ,…
ಲೇಖಕ: admin
ಮಡಿಕೇರಿ ಅ.29 NEWS DESK : ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದ ಅಂಗವಾಗಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ “ಏಕತೆಗಾಗಿ ಓಟ” ನಡೆಯಿತು. ಮಡಿಕೇರಿಯ ಕಾರ್ಯಪ್ಪ ವೃತ್ತದಿಂದ ಆರಂಭಗೊಂಡ ಓಟ ರಾಜಸೀಟ್ನಲ್ಲಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮಾಜಿ ಶಾಸಕ ಅಪ್ಪಚ್ಚು ರಂಜನ್, ವಿಧಾನಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷ ಕಾಂಗಿರ ಸತೀಸ್, ಮನು ಮಂಜುನಾಥ್, ಎಸ್.ಸಿ ಮೋರ್ಚಾ ಜಿಲ್ಲಾದ್ಯಕ್ಷ ಪಿ.ಎಂ.ರವಿ, ಮಹಿಳಾ ಮೋರ್ಚಾ ಜಿಲ್ಲಾ ಅದ್ಯಕ್ಷೆ ಅನಿತಾ ಪೂವಯ್ಯ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಮುಖರಾದ ಕನ್ನಂಡ ಸಂಪತ್, ಬಿ.ಕೆ.ಜಗದೀಶ್, ನಗರ ಸಭಾ ಸದಸ್ಯರಾದ ಸವಿತಾ ರಾಕೇಶ್, ಎಸ್.ಸಿ ಸತೀಸ್, ಸಬಿತಾ, ಶ್ವೆತಾ ಪ್ರಶಾಂತ್, ಚಂದ್ರ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮಡಿಕೇರಿ ಅ.29 NEWS DESK : ಪ್ರಸಕ್ತ ಸಾಲಿನ ಭಾರತ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ (ಪಿಎಂಇಜಿಪಿ) ಕಾರ್ಯಕ್ರಮದಡಿಯಲ್ಲಿ ಉತ್ಪಾದನೆ/ ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್ಲೈನ್ ಮುಖಾಂತರ ಎಲ್ಲಾ ವರ್ಗದವರು ಹೊಸದಾಗಿ ಸ್ವಂತ ಉದ್ಯೋಗ ಆರಂಭಿಸುವ ನಿರುದ್ಯೋಗ ಯುವಕ, ಯುವತಿಯರಿಂದ ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಸ್ವ-ಉದ್ಯೋಗ ಮಾಡಿಕೊಳ್ಳುವವರಿಗೆ ಪಟ್ಟಣ/ನಗರ/ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ.25 ರಿಂದ 35 ರವರೆಗೆ ಸಹಾಯಧನ ನೀಡಲಾಗುವುದು. ಕಾಫಿ ಗ್ರೈಂಡಿಂಗ್, ಫ್ಲೋರ್ ಮಿಲ್, ಸಿಮೆಂಟ್ ಬ್ಲಾಕ್ಸ್, ವರ್ಮಿ ಕಾಂಪೋಸ್ಟ್, ಜೇನುಕೃಷಿ, ಎಣ್ಣೆ ತಯಾರಿಕೆ, ರಬ್ಬರ್, ಪಶು ಆಹಾರ, ಜ್ಯೂಸ್ ತಯಾರಿಕೆ, ರೆಡಿಮೆಡ್ ಗಾರ್ಮೆಂಟ್ಸ್, ಫ್ಲೆಕ್ಸ್ ಅಂಡ್ ಪ್ರಿಂಟಿಂಗ್ ಪ್ರಸ್, ಬ್ಯೂಟಿ ಪಾರ್ಲರ್, ಸಲೂನ್, ಘಿ-ಖಚಿಥಿ sಛಿಚಿಟಿಟಿiಟಿg, ಒeಜiಛಿಚಿಟ ಟಚಿb, ಅಡಿಕೆ ಮತ್ತು ಪೇಪರ್ ಪ್ಲೇಟ್ಸ್, ಶಾಮಿಯಾನ, ಸೆಂಟ್ರಿಂಗ್ ವಕ್ರ್ಸ್, ಎಂಜಿನಿಯರಿಂಗ್ ವಕ್ರ್ಸ್, ವೆಲ್ಡಿಂಗ್, ವಾಟರ್ ಸರ್ವೀಸ್ ಸ್ಟೇಷನ್, ಹಸು/ಕುರಿ/ಮೇಕೆ/ಎಮ್ಮೆ/ಕೋಳಿ/ಬಾತು ಕೋಳಿ/ಮೀನು ಸಾಕಾಣಿಕೆ…
ಕುಶಾಲನಗರ ಅ.29 NEWS DESK : ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ 2023- 24ನೇ ಸಾಲಿನ ಮೊದಲ ಗ್ರಾಮ ಸಭೆಯು ಸಿದ್ದಲಿಂಗಪುರದ ಸಮುದಾಯ ಭವನ ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷೆ ಶೋಭಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಜೀವನ್ ಕುಡಿಯುವ ನೀರಿನ ಕಾಮಗಾರಿ ಕುರಿತು ಚರ್ಚಿಸಲಾಯಿತು. ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಜಲಜೀವನ್ ಕುಡಿಯುವ ನೀರಿನ ಸರಬರಾಜು ಯೋಜನೆಯ ಕಾಮಗಾರಿಯು ಸಮರ್ಪಕವಾಗಿ ನಡೆದಿಲ್ಲಾ ಅಲ್ಲದೇ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಇದರ ಬಗ್ಗೆ ವಿಸ್ತಾರವಾದ ವರದಿಯನ್ನು ನೀಡುವಂತೆ ಗ್ರಾಮಸ್ಥರಾದ ಟಿ.ಕೆ ಪಾಂಡುರಂಗ, ಪಿ.ಡಿ.ರವಿ ಮೂರ್ತಿ ಒತ್ತಾಯಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರುದ್ರಭೂಮಿ, ಆನೆ ಕಂದಕಗಳು, ವಸತಿ ರಹಿತರಿಗೆ ಕಾಯ್ದಿರಿಸಿದ ಜಾಗದಲ್ಲಿ ವಸತಿ ಸೌಕರ್ಯಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ತೊರೆನೂರು ಗ್ರಾಮ ಪಂಚಾಯತಿ ಕಟ್ಟಡದ ಸಮೀಪದಲ್ಲಿ ಪಶುಪಾಲನಾ ಇಲಾಖೆಯ ಪಶು ಆಸ್ಪತ್ರೆ ಇದ್ದರೂ ಸಿಬ್ಬಂದಿ ಗಳ ನೇಮಕಾತಿ ಇಲ್ಲಾದೆ ಪಶು ಆಸ್ಪತ್ರೆಯಿಂದ ಹೈನುಗಾರರಿಗೆ ದೊರಕದ…
ಚೆಟ್ಟಳ್ಳಿ ಅ.29 NEWS DESK : ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಐನ್ ಮನೆಯಲ್ಲಿ ಒಂದೇ ಕುಟುಂಬದ ಐದು ತಲೆಮಾರಿನ ಕುಟುಂಬದವರು ಪತ್ತಲೋದಿ ದಿನ ನೂರಾಂಡ್ ನಮ್ಮೆಯನ್ನು ಆಚರಿಸಿದರು. ಕೊಡಗಿನ ಹಲವು ಐನ್ ಮನೆಗಳಿಗೆ ಶತಮಾನಗಳ ಇತಿಹಾಸವಿರುವಂತೆ ಚೆಟ್ಟಳ್ಳಿಯ ಪುತ್ತರಿರ ಕುಟುಂಬದ (ಪುದಿಯ ಮನೆ) ಮನೆಗೆ ನೂರನೇ ವರ್ಷ ತುಂಬಿತ್ತು. ಅಜ್ಜ, ಮುತ್ತಜ್ಜರು, ತಂದೆ-ತಾಯಿ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ವಿವಾಹವಾಗಿ ಕೊಟ್ಟ ಹೆಣ್ಣು ಮಕ್ಕಳ ಕುಟುಂಬ ಪತ್ತಲೋದಿ ದಿನ ಒಟ್ಟಾಗಿ ಐನ್ ಮನೆಯಲ್ಲಿ ಸೇರಿ ನೆಲ್ಲಕ್ಕಿ ನಡುಬಾಡೆಯಲ್ಲಿ ಮೀದಿ ನೀರಿಟ್ಟು ಒಳಿತು ಮಾಡಲೆಂದು ಪುತ್ತರಿರ ಕಾಶಿ ಸುಬ್ಬಯ್ಯ ಪ್ರಾರ್ಥಿಸಿದರು. ನಂತರ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಕ್ರೀಡೆ ನಡೆಯಿತು. ನೂರಾಂಡ್ ನಮ್ಮೆಯ ವಿಶೇಷತೆ ಬಗ್ಗೆ ಪುತ್ತರಿರ ದೇವಿದೇವಯ್ಯ ತಿಳಿಸಿದರು. ಈ ಕುಟುಂಬದ ಮೂಲಪುರುಷರಾದ ದಿ.ಪುತ್ತರಿರ ಗಣಪತಿ, ದಿ.ಪುತ್ತರಿರ ಕುಶಾಲಪ್ಪ ಹಾಗೂ ದಿ.ಪುತ್ತರಿರ ಚಿಣ್ಣಪ್ಪ ಅವರ ಜೀವನ ಸಾಧನೆಯನ್ನು ಪುತ್ತರಿರ ಗಣೇಶ್ ಭೀಮಯ್ಯ ನೆನೆಸುತ್ತಾ ಹಿರಿಯದ ಆದರ್ಶವನ್ನು ನಾವೆಲ್ಲರು ಪಾಲಿಸು ವಂತಾಗ ಬೇಕೆಂದರು.…
ಮಡಿಕೇರಿ ಅ.29 NEWS DESK : ಕಳೆದ ದಶಕದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಉಪಕ್ರಮಗಳಿಂದಾಗಿ ಆಯುಷ್ ವಲಯವು ಮಹತ್ವದ ಪರಿವರ್ತನೆಗೆ ಒಳಗಾಗಿದೆ. ಸಾಂಪ್ರದಾಯಿಕ ಭಾರತೀಯ ವೈದ್ಯಶಾಸ್ತ್ರದಲ್ಲಿನ ಈ ಕ್ರಾಂತಿಯು ಉದ್ಯಮದ ವೃತ್ತಿಪರರು, ವ್ಯಾಪಾರಿಗಳು ಮತ್ತು ಆರೋಗ್ಯ ಸೇವೆ ಮಾಡುವವರನ್ನು ಒಳಗೊಂಡಂತೆ ವಿವಿಧ ಪಾಲುದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. 2014 ರಲ್ಲಿ ಸ್ಥಾಪನೆಯಾದಾಗಿನಿಂದ, ಆಯುಷ್ ಸಚಿವಾಲಯವು ಆಯುಷ್ ಅನ್ನು ಮುಖ್ಯವಾಹಿನಿಯ ಆರೋಗ್ಯ ರಕ್ಷಣೆಗೆ ಯಶಸ್ವಿಯಾಗಿ ಸಂಯೋಜಿಸಿದೆ, ನಾವೀನ್ಯತೆ, ಸಂಶೋಧನೆ ಮತ್ತು ಜಾಗತಿಕ ಮನ್ನಣೆಯನ್ನು ಗಳಿಸುತ್ತಿದೆ. ಸಚಿವಾಲಯದ ಕಾರ್ಯತಂತ್ರದ ಗಮನವು ಸಾರ್ವಜನಿಕ ಆರೋಗ್ಯ, ತಂತ್ರಜ್ಞಾನ, ಶಿಕ್ಷಣ, ಜಾಗತೀಕರಣ ಮತ್ತು ಗುಣಮಟ್ಟದ ನಿಯಂತ್ರಣವನ್ನು ಒಳಗೊಳ್ಳುತ್ತದೆ, ಆಯುಷ್ ಉತ್ಪನ್ನಗಳು ಮತ್ತು ಸೇವೆಗಳು ಸುರಕ್ಷಿತ ಮತ್ತು ಉತ್ತಮ ಗುಣಮಟ್ಟವನ್ನು ಖಚಿತಪಡಿಸುತ್ತದೆ. ದೇವರುಗಳ ವೈದ್ಯ ಮತ್ತು ಆಯುರ್ವೇದದ ದೇವರು ಎಂದು ಪೂಜಿಸಲ್ಪಡುವ ದೇವರು ಧನ್ವಂತರಿಯನ್ನು ಗೌರವಿಸಲು ಆಯುರ್ವೇದ ದಿನವನ್ನು ಧಂತೇರಸ್ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಈ ವರ್ಷ, ಆಯುರ್ವೇದ ದಿನವನ್ನು ಅಕ್ಟೋಬರ್ 29, 2024 ರಂದು ಆಚರಿಸಲಾಗುತ್ತದೆ, “ಜಾಗತಿಕ…
ಮಡಿಕೇರಿ ಅ.28 NEWS DESK : ಭಾರತ್ ಸ್ಕೌಟ್ಸ್, ಗೈಡ್ಸ್ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಚೇರಿಯ ಸಂಯುಕ್ತಾಶ್ರಯದಲ್ಲಿ ನಗರದ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್, ಗೈಡ್ಸ್ ಭವನದಲ್ಲಿ ಹಸಿರು ದೀಪಾವಳಿ ಆಚರಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಪ್ರತಿಯೊಬ್ಬರೂ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವ ಮೂಲಕ ಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು. ದೀಪಾವಳಿ ಸಂದರ್ಭದಲ್ಲಿ ಎಲ್ಲರೂ `ಹಣತೆ ಬೆಳಗಿಸಿ, ದೀಪಾವಳಿ ಆಚರಿಸಿ, ಪಟಾಕಿ ತ್ಯಜಿಸಿ-ಮಾಲಿನ್ಯ ತಡೆಯಿರಿ’ ಎಂಬ ಘೋಷಣೆಯಡಿ ಹಸಿರು ದೀಪಾವಳಿ ಹಬ್ಬ ಆಚರಣೆ ಕುರಿತು ಪ್ರತಿಜ್ಞೆ ಸ್ವೀಕರಿಸಲಾಯಿತು. ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ದ, ವಾಯು ಮತ್ತು ಜಲ ಮಾಲಿನ್ಯ ಹಾಗೂ ನೆಲ ಮಾಲಿನ್ಯದ ಜತೆಗೆ ಪ್ರಾಣಿ-ಪಕ್ಷಿ ಜೀವ ಸಂಕುಲಗಳು ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿ ಪರಿಸರ ವ್ಯವಸ್ಥೆಗೂ ತೀವ್ರ ಧಕ್ಕೆಯುಂಟಾಗುತ್ತದೆ.…
ಮಡಿಕೇರಿ ಅ.28 NEWS DESK : ನಗರದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ವಿಜಯ ವಿನಾಯಕ ದೇವಾಲಯದ 26ನೇ ವಾರ್ಷಿಕೋತ್ಸವವು ನ.3 ಮತ್ತು 4 ರಂದು ನಡೆಯಲಿದೆ. ನ.3ರ ಸಂಜೆಯಿಂದ ಆರಂಭಗೊಳ್ಳುವ ಪೂಜಾ ವಿಧಿವಿಧಾನಗಳು ನ.4ರ ಮಧ್ಯಾಹ್ನ ಮಹಾಮಂಗಳಾರತಿಯೊಂದಿಗೆ ಪೂರ್ಣಗೊಳ್ಳಲಿದೆ. ಆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.
ವಿರಾಜಪೇಟೆ ಅ.28 NEWS DESK : ಕೊಡವ ಕೂಟಾಳಿಯಡ ಕೂಟ ಸಂಘಟನೆ ವತಿಯಿಂದ ಕೊಡವ ಜನಾಂಗದ ಮಕ್ಕಳಿಗಾಗಿ ಆಯೋಜಿಸಿಸಲಾಗಿದ್ದ ನಾಲ್ಕನೇ ವರ್ಷದ ಕೊಡಗ್’ರ ಚುಪ್ಪಿ ಕೋಗಿಲೆ ಎಂಬ ಆನ್ಲೈನ್ ಗಾಯನ ಸ್ಪರ್ಧೆಯಲ್ಲಿ ಪಳಂಗಂಡ ಶಾನ್ ಸುಬ್ಬಯ್ಯ ಪ್ರಥಮ ಸ್ಥಾನ ಪಡೆಯುವ ಮೂಲಕ “ಕೊಡಗ್ ರ ಚುಪ್ಪಿ ಕೋಗಿಲೆ-2024” ಎನ್ನುವ ಬಿರುದಿಗೆ ಭಾಜನರಾಗಿದ್ದಾರೆ. ದ್ವಿತೀಯ ಸ್ಥಾನವನ್ನು ಕಾಂಡಂಡ ಪರಿಧಿ ಪೂವಮ್ಮ , ತೃತೀಯ ಸ್ಥಾನವನ್ನು ತಾಪಂಡ ಹರ್ಷಿತ್ ಪೊನ್ನಪ್ಪ ಹಾಗೂ ಹಂಚೆಟ್ಟಿರ ದಿಶಾ ದೇಚಮ್ಮ ಪಡೆದುಕೊಂಡರು. ಮೊಣ್ಣಂಡ ಭವಿನ್ ಬೋಪಣ್ಣ, ತಾತಂಡ ದಕ್ಷ್ ಬೋಜಣ್ಣ, ಬೊಳ್ಳಚೆಟ್ಟಿರ ದಿಲೀಪ್ ಕುಮಾರ್, ಬಾಚರಣಿಯಂಡ ಚೈತ್ರಾ ಚಿಣ್ಣಮ್ಮ, ಬಾಚರಣಿಯಂಡ ಪರಿಧಿ ಪೊನ್ನಮ್ಮ, ಬಲ್ಯಮೀದೇರಿರ ರೋಹನ್ ತಿಮ್ಮಯ್ಯ, ಕಾಳಿಮಡ ಹಿತಾ ದೇಚಮ್ಮ ಟಾಪ್ಟೆನ್ ಸ್ಪರ್ಧಿ ಸ್ಥಾನ ಅಲಂಕರಿಸಿದರು. ಸ್ಪರ್ಧಾ ಕಾರ್ಯಕ್ರಮದಲ್ಲಿ ಸುಮಾರು 43 ಮಕ್ಕಳು ತಮ್ಮ ಕಂಠದಾನದ ಮೂಲಕ ಗಮನ ಸೆಳೆದರು. ಕಾಟಿಮಾಡ ಗಿರಿ ಅಯ್ಯಪ್ಪ, ಕೊಳ್ಳಿಮಾಡ ಕರುಣ್ ಪೂವಯ್ಯ, ಅಲ್ಲಾರಂಡ ಸೋಮಯ್ಯ, ಮಾಳೇಟಿರ ಲೀನಾ ಸೋಮಯ್ಯ ಧನ ಸಹಾಯದ…
ಮಡಿಕೇರಿ ಅ.28 NEWS DESK : ಜೀವವಿಮೆಗೆ ಸಂಬಂಧಿಸಿದಂತೆ ತರಲಾಗಿರುವ ಹೊಸ ಆದೇಶಗಳನ್ನು ವಿರೋಧಿಸಿ ಜೀವವಿಮಾ ನಿಗಮದ ಪ್ರತಿನಿಧಿಗಳು ಸೋಮವಾರ ಮಡಿಕೇರಿಯಲ್ಲಿ ಅಸಹಕಾರ ಚಳವಳಿ ನಡೆಸಿದರು. ಮಡಿಕೇರಿ ಜೀವವಿಮಾ ನಿಗಮದ ಪ್ರತಿನಿಧಿಗಳ ಸಂಘಟನೆಯ ಅಧ್ಯಕ್ಷ ಎ.ವಿ.ಮಂಜುನಾಥ್ ಅವರ ನೇತೃತ್ವದಲ್ಲಿ ಎಲ್ಐಸಿ ಕಛೇರಿಯ ಮುಂಭಾಗ ಸೇರಿದ ಪ್ರತಿನಿಧಿಗಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಇತ್ತೀಚೆಗೆ ಕ್ಲಾ ಬ್ಯಾಕ್ ಎನ್ನುವ ಆದೇಶ ತರಲಾಗಿದ್ದು, ಇದರಿಂದ ಒಂದು ಲಕ್ಷ ಮೊತ್ತದ ವಿಮೆಯನ್ನು ವರ್ಷದ ಒಳಗೆ ಹಿಂದಿರುಗಿಸಿದಲ್ಲಿ, ಅದಕ್ಕೆ ಸಂಬಂಧಿಸಿದ ಏಜೆಂಟರ ಕಮಿಷನ್ ಮತ್ತು ಸೌಲಭ್ಯಗಳನ್ನು ಕಡಿತಗೊಳಿಸಲಾಗುತ್ತಿದೆ. ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಮಂಜುನಾಥ್ ಆಗ್ರಹಿಸಿದರು. ಹೊಸ ಜೀವವಿಮಾ ಪಾಲಿಸಿಗಳನ್ನು ತರಲಾಗಿದ್ದು, ಇವುಗಳ ಪ್ರೀಮಿಯಂನನ್ನು ಶೇ.7.50 ಯಷ್ಟು ಹೆಚ್ಚಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜಿಎಸ್ಟಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಎಲ್ಐಸಿ ಪ್ರತಿನಿಧಿಗಳ ಸಂಘಟನೆಯ ಉಪಾಧ್ಯಕ್ಷರಾದ ಟಿ.ಎಲ್.ಅನಿತಾ, ಕೆ.ಪಿ.ಗಣೇಶ್, ಖಜಾಂಚಿ ಚಾಮ, ಹಿರಿಯ ಪ್ರತಿನಿಧಿಗಳಾದ ಬೆಳ್ಯಪ್ಪ, ವೈ.ಡಿ.ಮೋಹನ್, ಪಿ.ಆರ್.ಮಂದಪ್ಪ, ಮಹಿಳಾ ಘಟಕದ ಸವಿತಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.






