ಲೇಖಕ: admin

ಮಡಿಕೇರಿ ಡಿ.14 NEWS DESK : ಕೊಡಗಿನಲ್ಲಿ ಈಗ ಬೆಳದಿಂಗಳಿನ ಹಬ್ಬ ಪುತ್ತರಿಯ ಸಂಭ್ರಮ. ಕೊಡವರ ನಾಡಿನಲ್ಲಿ ಪ್ರತಿ ವರ್ಷ ಪುತ್ತರಿಯಂದು ಹರಡುವ ಬೆಳದಿಂಗಳಿಗೆ ವಿಶೇಷ ಸಡಗರವಿದೆ. ಕೊಡಗಿನ ಕೃಷಿಕರ ಪಾಲಿಗೆ ಪುತ್ತರಿಯೆಂಬುದು ಸುಗ್ಗಿ ಹಬ್ಬ, ಹಿಗ್ಗಿನ ಹಬ್ಬ. ತಾವು ಬೆವರು ಸುರಿಸಿ ಶ್ರಮದಿಂದ ಹೊಲದಲ್ಲಿ ಬೆಳೆದ ಭತ್ತದ ಪೈರನ್ನು ಭೂದೇವಿಗೆ ಪೂಜೆ ಸಲ್ಲಿಸಿ ಗದ್ದೆಯಿಂದ ಮನೆಗೆ ಸಾಂಪ್ರದಾಯಿಕವಾಗಿ ತರುವ ಹಬ್ಬವೇ ಪುತ್ತರಿ. ಈ ಬಾರಿಯ ಹಬ್ಬ ಡಿ.14 ರಂದು ಕೊಡಗು ಜಿಲ್ಲೆಯಾದ್ಯಂತ ನಡೆಯಲಿದೆ. ಕೊಡವ ಭಾಷೆಯಲ್ಲಿ ಪುದಿಯ ಎಂದರೆ ಹೊಸ ಮತ್ತು ಅರಿ ಎಂದರೆ ಅಕ್ಕಿ ಎಂಬ ಅರ್ಥವಿದೆ. ಪುದಿಯ ಅರಿ-ಹೊಸ ಅಕ್ಕಿ ಎಂಬುದೇ ಪುತ್ತರಿಯಾಗಿದ್ದು, ಕೊಡಗಿನ ಪ್ರತೀ ಹೊಲದಲ್ಲೂ ಪುತ್ತರಿ ಹಬ್ಬದಂದು ಪೂಜೆ ನಡೆಯುತ್ತದೆ. ಕುಟುಂಬಸ್ಥರೆಲ್ಲ ಸೇರಿ ಪುತ್ತರಿಯ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ಹಬ್ಬದೂಟ ಸೇವಿಸುತ್ತಾರೆ. ಕೊಡಗಿನಲ್ಲಿ ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ಬಿಟ್ಟರೆ ಮೂರನೇ ಪ್ರಮುಖ ಹಬ್ಬವೇ ಪುತ್ತರಿ. ಕೊಡಗಿನವರು ದೇಶ-ವಿದೇಶ ಎಲ್ಲೇ ನೆಲೆಸಿರಲಿ ತವರಿನ…

Read More

*ಪುತ್ತರಿ ನಮ್ಮೆರ ನಲ್ಲಾಮೆ : ಕೊಡಗು ಸಮೃದ್ಧಿಯಾಗಲಿ, ಧಾನ್ಯಲಕ್ಷ್ಮಿಯನ್ನು ಮನೆ ಮನೆಗಳಿಗೆ ಬರ ಮಾಡಿಕೊಳ್ಳುವ ಈ ಶುಭ ಸಂದರ್ಭ ನಾಡನ್ನು ಸಮೃದ್ಧಿಗೊಳಿಸಲಿ. ಸರ್ವ ಜನರಿಗೆ ಸುಖ, ಶಾಂತಿ, ಆರೋಗ್ಯ, ಅಭ್ಯುದಯ ದೊರೆಯಲಿ. ಕೊಡಗು ಶ್ರೀಮಂತವಾಗಲಿ* (ತೇಲಪಂಡ ಶಿವಕುಮಾರ್ ನಾಣಯ್ಯ, ಪ್ರಧಾನ ಸಂಚಾಲಕರು, ಸಾಮಾಜಿಕ ಜಾಲತಾಣ, ಕೊಡಗು ಜಿಲ್ಲಾ ಬಿಜೆಪಿ*

Read More

*ಪುತ್ತರಿ ನಮ್ಮೆರ ನಲ್ಲಾಮೆ : ಮಾತೆ ಕಾವೇರಿ, ಪಾಡಿ ಶ್ರೀಇಗ್ಗುತ್ತಪ್ಪ ದೇವರು ಸರ್ವರಿಗೂ ಶುಭ ತರಲಿ*

Read More