ಸೋಮವಾರಪೇಟೆ ಏ.21 NEWS DESK : ಸಿಮೆಂಟ್ ತುಂಬಿದ ಭಾರೀ ಲಾರಿಯೊಂದು ಚಲಿಸಿದ ಪರಿಣಾಮ ಶನಿವಾರಸಂತೆ ರಸ್ತೆಯಲ್ಲಿ ಇಂಟರ್ ಲಾಕ್ ಗಳಿಗೆ ಹಾನಿಯಾಗಿದೆ. ಶಿವಕುಮಾರ ಸ್ವಾಮೀಜಿ ಬಸ್ ನಿಲ್ದಾಣದ ಬಳಿ ಸುಸಜ್ಜಿತವಾಗಿ ಇಂಟರ್ ಲಾಕ್ ಅಳವಡಿಸಲಾಗಿತ್ತು. ಇದು ಪ್ರಯಾಣಿಕರಿಗೆ ಅನುಕೂಲಕರ ವ್ಯವಸ್ಥೆಯಾಗಿತ್ತು. ಆದರೆ 40 ಟನ್ ಸಿಮೆಂಟ್ ತುಂಬಿದ ಭಾರೀ ಲಾರಿ ಚಲಿಸಿದ ಪರಿಣಾಮ ಇಂಟರ್ ಲಾಕ್ ಗಳು ಒಡೆದು ಹೋಗಿದೆ. ಸಾರ್ವಜನಿಕರ ದೂರಿನ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡರು.