
ಮಡಿಕೇರಿ ಮೇ 15 NEWS DESK : ಶ್ರೀಮಂಗಲದ ಕುರ್ಚಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಚೋಕಿರ ಕಲ್ಪನ ತಿಮ್ಮಯ್ಯ ನೇತೃತ್ವದಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ವಲಯ ಅಧ್ಯಕ್ಷ ಪೆಲ್ವಿನ್ ಪೂಣಚ್ಚ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಸಂದರ್ಭ ಮಾತನಾಡಿದ ಕಾರ್ಯಕರ್ತರು ಶಾಸಕ ಪೊನ್ನಣ್ಣ ಅವರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಗ್ರಾ.ಪಂ ಸದಸ್ಯ ಸುದಿ ಪೊನ್ನಪ್ಪ, ಪ್ರಮುಖರಾದ ಚೋಕಿರ ತಿಮ್ಮಯ್ಯ, ಪ್ರಶಾಂತ್ ಕಾಳಿಮಾಡ, ಮುಕ್ಕಾಟ್ಟಿರ ಅಯ್ಯಪ್ಪ, ಬೋಸ್ ಮಾದಪ್ಪ, ಮಚ್ಚಮಾಡ ಉದಯ ಹಾಜರಿದ್ದರು.








