
ಚೆಟ್ಟಳ್ಳಿ ಆ.17 NEWS DESK : ಚೆಟ್ಟಳ್ಳಿ ಕಾಫಿಬೋರ್ಡ್ ಸಂಶೋಧನಾ ಕೇಂದ್ರದಲ್ಲಿ ಹಂಗಾಮಿ ದಿನ ಕೂಲಿ ಕಾರ್ಮಿಕರು ವಯನಾಡಿನ ಭೂಕುಸಿತ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ್ದಾರೆ. ಸಂಶೋಧನಾ ಕೇಂದ್ರದ ಸುಮಾರು 20 ಮಂದಿ ಕೂಲಿ ಕಾರ್ಮಿಕರು ಕಾರ್ಮಿಕರಾದ ಪ್ರೀತಿ ಎಂಬವರ ನೇತೃತ್ವದಲ್ಲಿ ತಮ್ಮ ಒಂದು ದಿನದ ವೇತನವನ್ನು ಸಂಗ್ರಹಿಸಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಜಯನ್ ಮತ್ತು ವಿಪಿನ್ ಅವರ ಮುಖಾಂತರ ವಯನಾಡಿನ ಭೂಕುಸಿತದಲ್ಲಿ ಸಂತ್ರಸ್ತರಾದ ಕುಟುಂಬಕ್ಕೆ ಮುಖ್ಯಮಂತ್ರಿಗಳ ನಿಧಿಗೆ ಹಸ್ತಾಂತರಿಸಿದರು.











