Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಗದ್ದೆಹಳ್ಳ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಪ್ರಾರಂಭೋತ್ಸವ : ಆಂಗ್ಲ ಭಾಷೆಯ ಕಲಿಕೆ ಅನಿವಾರ್ಯ : ಶಾಸಕ ಡಾ.ಮಂತರ್ ಗೌಡ*
  • *ಕೊಡಗಿನಲ್ಲಿ ಮಳೆ ಕೊರತೆ : ಪುತ್ತರಿ ಹಬ್ಬಕ್ಕೆ ಕದಿರು ತೆಗೆಯುವುದಕ್ಕಾಗಿ ಮಾತ್ರ ಭತ್ತ ಬೆಳೆಯಬೇಕಾದ ಪರಿಸ್ಥಿತಿ*
  • *ಕೊಡಗು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆ : ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಲು ಸಂಸದ ಯದುವೀರ್ ಸೂಚನೆ*
  • *ವಲಸಿಗರನ್ನು ಮುಕ್ತವಾಗಿ ಬಿಟ್ಟು ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ : ಸಂಸದ ಯದುವೀರ್ ಅಸಮಾಧಾನ*
  • *33 ನಿಮಿಷದಲ್ಲಿ 310 ಆಸನಗಳು : ಯೋಗಾಸನದಲ್ಲಿ ಬಿ.ಕೆ.ಸಿಂಚನ ಹೊಸ ದಾಖಲೆ*
  • *ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾದ ನಂದಿನೆರವಂಡ ಮಧು*
  • *33 ನಿಮಿಷದಲ್ಲಿ 310 ಆಸನಗಳು : ಯೋಗಾಸನದಲ್ಲಿ ಬಿ.ಕೆ.ಸಿಂಚನ ಹೊಸ ದಾಖಲೆ*
  • *ಮಕ್ಕಂದೂರು : ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಅರಿವು*
  • *ಮಡಿಕೇರಿ : ನಗರಸಭೆಯ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ*
  • *ತಾವೂರು ಗ್ರಾಮದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿಯಲ್ಲಿ ಶರಣ ಸಂಸ್ಕೃತಿ ಪ್ರಸಾರ ದತ್ತಿ ಕಾರ್ಯಕ್ರಮ : ಸದಾಚಾರ-ಸದ್ವಿಚಾರಗಳ ಸಂಜೀವಿನಿ ವಚನ ಸಾಹಿತ್ಯ : ಬಿ.ಜಿ.ಅನಂತಶಯನ ಆಶಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿಯಲ್ಲಿ ಶರಣ ಸಂಸ್ಕೃತಿ ಪ್ರಸಾರ ದತ್ತಿ ಕಾರ್ಯಕ್ರಮ : ಸದಾಚಾರ-ಸದ್ವಿಚಾರಗಳ ಸಂಜೀವಿನಿ ವಚನ ಸಾಹಿತ್ಯ : ಬಿ.ಜಿ.ಅನಂತಶಯನ ಆಶಯ*

ಸೆಪ್ಟೆಂಬರ್ 21, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.21 NEWS DESK : ವಚನ ಸಾಹಿತ್ಯವೂ ಸದಾಚಾರ ಹಾಗೂ ಸದ್ವಿಚಾರಗಳ ಮೂಲಕ ಮನುಷ್ಯ ತನ್ನ ಅಮೂಲ್ಯ ಜೀವನವನ್ನು ಕಟ್ಟಿಕೊಳ್ಳಲು ಪ್ರೇರೇಪಿಸುವ ಸಂಜೀವಿನಿ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಮಡಿಕೇರಿಯ ಶರಣ ಮುರುಗೇಶ್ ಅವರು ಸ್ಥಾಪಿಸಿರುವ ಲಿಂ.ಹೆಚ್.ಬಿ.ಶೀಲವಂತ ಹಾಗೂ ಸಿದ್ದಲಿಂಗಪ್ರಸಾದ್ ದತ್ತಿ ಶರಣ ಸಂಸ್ಕೃತಿ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಪ್ರತಿಪಾದಿಸುವ ಸರ್ವಸ ಮಾನತೆಯ ಮತ್ತು ಮಾನವ ಸಮಾಜದ ಸರ್ವಾಂಗೀಣ ಪ್ರಗತಿಯ ಪರಿಕಲ್ಪನೆಗಳು ಜಗತ್ತಿನ ಇಡೀ ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ಹನ್ನೆರಡನೇ ಶತಮಾನದಲ್ಲಿ ತಾಂಡವಿಸಿದ್ದ ಮೂಢನಂಬಿಕೆ, ಅಂಧಶ್ರದ್ಧೆ ಹಾಗೂ ಮೂಲಭೂತವಾದಗಳನ್ನು ಪ್ರಶ್ನಿಸಿ ಪ್ರಗತಿಪರ ಚಿಂತನೆಗಳನ್ನು ಮೊಳಗಿಸಿದ ಕೀರ್ತಿ ವಚನಕಾರರದ್ದು ಎಂದು ಬಣ್ಣಿಸಿದ ಅನಂತಶಯನ, ಬಸವಣ್ಣ ಅವರು ನಾಡಿಗೆ ನೀಡಿರುವ ಸಪ್ತಸೂತ್ರಗಳ ವಚನ ಕಲಬೇಡ, ಕೊಲಬೇಡ, ಹುಸಿಯನುಡಿಲು ಬೇಡ ಎಂಬ ವಚನವನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ಅನಂತಶಯನ ಆಶಿಸಿದರು.
” ಶರಣ ಸಂಸ್ಕ್ರತಿ ಪ್ರಸಾರ ” ದತ್ತಿ ಉಪನ್ಯಾಸ ನೀಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್, ಕನ್ನಡ ಸಾಹಿತ್ಯಕ್ಕೆ ವಿಶ್ವಮನ್ನಣೆ ತಂದು ಕೊಟ್ಟ ವಚನ ಸಾಹಿತ್ಯ ಈ ನಾಡಿನ ಎಲ್ಲಾ ಸಾಹಿತ್ಯ ಪ್ರಾಕಾರಗಳ ತಾಯಿ ಬೇರು. ಧರ್ಮ, ಗುಡಿ – ಗುಂಡಾರ, ದೇವಾಲಯಗಳನ್ನು ಕೆಡವಿ ಶರೀರವನ್ನೇ ದೇವಾಲಯವಾಗಿಸಿ, ಆತ್ಮಜ್ಞಾನವನ್ನೇ ದೇವರನ್ನಾಗಿಸಿ ತು. ಅರಿವನ್ನು ಗುರುವಾಗಿಸಿದ ವಚನ ಸಾಹಿತ್ಯ ಆಚಾರವನ್ನೇ ಪಥವಾಗಿಸಿತು. ದೇವರ ಹೆಸರಿನಲ್ಲಿ ಸಾಮಾನ್ಯ ಜನರನ್ನು ಸುಲಿಗೆ ಮಾಡಿ, ಶೋಷಣೆ ಮಾಡುತ್ತಿದ್ದ ಪೂಜಾರಿಗಳ ಬಣ್ಣ ಬಯಲು ಮಾಡಿದ ವಚನಕಾರರು, ಧರ್ಮದ ಆಚರಣೆಗಳಿಗೆ ದಲ್ಲಾಳಿಗಳ ಅಗತ್ಯವಿಲ್ಲವೆಂದು ಸಾರಿದ ಬಗೆಯನ್ನು ವಚನಗಳ ಮೂಲಕ ಮುನೀರ್ ಅಹಮದ್ ವಿಶ್ಲೇಷಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪಿ.ಪಿ.ಕವಿತಾ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳನ್ನು ಅರಿಯಲು ಅನುವಾಗುತ್ತದೆ. ಸಮಾಜದಲ್ಲಿ ಇಂದು ತಾಂಡವವಾಡುತ್ತಿರುವ ಎಲ್ಲಾ ಸಂಕೋಲೆಗಳಿಗೆ ವಚನಗಳ ಅರಿವು ಹಾಗೂ ಆಚರಣೆ ದಿವ್ಯ ಔಷಧಿ ಎಂದರು. ಮಡಿಕೇರಿ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ಜಾನಪದ ಪರಿಷತ್ತಿನ ಕೋಷಾಧಿಕಾರಿ ಸಂಪತ್ ಕುಮಾರ್, ಕೊಡಗು ಗೌಡ ವಿದ್ಯಾಸಂಸ್ಥೆಯ ಅಧ್ಯಕ್ಷ ಅಂಬೇಕಲ್ ನವೀನ್, ಶರಣ ಸಾಹಿತ್ಯ ದತ್ತಿ ದಾನಿ ಕೂರ್ಗ್ ಆಪ್ಡಿಕಲ್ಸ್ ಮಾಲೀಕ ಮುರುಗೇಶ್ ಹಾಗೂ ಕಮಲಾ ಮುರುಗೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ವಸತಿ ನಿಲಯದ ಮೇಲ್ವಿಚಾರಕಿ ಕರುಣಾಕ್ಷಿ ಇದ್ದರು. ನೇತ್ರ ತಜ್ಞೆ ವಿಜಯಲಕ್ಷ್ಮಿ ಹಾಗೂ ಕಮಲಾ ಮುರುಗೇಶ್ ವಚನಗಳನ್ನು ವಾಚಿಸಿದರು. ವಿದ್ಯಾರ್ಥಿನಿ ಪ್ರನುತಾ ಸ್ವಾಗತಿಸಿ, ಸಿಂಚನ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಗದ್ದೆಹಳ್ಳ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಪ್ರಾರಂಭೋತ್ಸವ : ಆಂಗ್ಲ ಭಾಷೆಯ ಕಲಿಕೆ ಅನಿವಾರ್ಯ : ಶಾಸಕ ಡಾ.ಮಂತರ್ ಗೌಡ*

ಜೂನ್ 22, 2026

*ಕೊಡಗಿನಲ್ಲಿ ಮಳೆ ಕೊರತೆ : ಪುತ್ತರಿ ಹಬ್ಬಕ್ಕೆ ಕದಿರು ತೆಗೆಯುವುದಕ್ಕಾಗಿ ಮಾತ್ರ ಭತ್ತ ಬೆಳೆಯಬೇಕಾದ ಪರಿಸ್ಥಿತಿ*

ಜೂನ್ 22, 2026

*ಕೊಡಗು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆ : ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಲು ಸಂಸದ ಯದುವೀರ್ ಸೂಚನೆ*

ಜೂನ್ 22, 2026

*ಕೊಡಗಿನಲ್ಲಿ ಮಳೆ ಕೊರತೆ : ಪುತ್ತರಿ ಹಬ್ಬಕ್ಕೆ ಕದಿರು ತೆಗೆಯುವುದಕ್ಕಾಗಿ ಮಾತ್ರ ಭತ್ತ ಬೆಳೆಯಬೇಕಾದ ಪರಿಸ್ಥಿತಿ*

ಜೂನ್ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಜೂ.22 : ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುವ ಮುಟ್ಲು ಗ್ರಾಮದಲ್ಲಿ ಈ ಬಾರಿ ಜೂನ್…

*ಕೊಡಗು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆ : ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಲು ಸಂಸದ ಯದುವೀರ್ ಸೂಚನೆ*

ಜೂನ್ 22, 2026

*ವಲಸಿಗರನ್ನು ಮುಕ್ತವಾಗಿ ಬಿಟ್ಟು ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ : ಸಂಸದ ಯದುವೀರ್ ಅಸಮಾಧಾನ*

ಜೂನ್ 22, 2026

*33 ನಿಮಿಷದಲ್ಲಿ 310 ಆಸನಗಳು : ಯೋಗಾಸನದಲ್ಲಿ ಬಿ.ಕೆ.ಸಿಂಚನ ಹೊಸ ದಾಖಲೆ*

ಜೂನ್ 21, 2026

*ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾದ ನಂದಿನೆರವಂಡ ಮಧು*

ಜೂನ್ 21, 2026

*33 ನಿಮಿಷದಲ್ಲಿ 310 ಆಸನಗಳು : ಯೋಗಾಸನದಲ್ಲಿ ಬಿ.ಕೆ.ಸಿಂಚನ ಹೊಸ ದಾಖಲೆ*

ಜೂನ್ 21, 2026

*ಮಕ್ಕಂದೂರು : ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಅರಿವು*

ಜೂನ್ 20, 2026

*ಮಡಿಕೇರಿ : ನಗರಸಭೆಯ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ*

ಜೂನ್ 20, 2026

*ತಾವೂರು ಗ್ರಾಮದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ*

ಜೂನ್ 20, 2026

*ಗರ್ಭಿಣಿ, ಬಾಣಂತಿಯರು ಹಾಗೂ ಶಿಶು ಪೋಷಣೆ ಬಗ್ಗೆ ಮಾಹಿತಿ ನೀಡುವಲ್ಲಿ  ‘ಕಿಲ್ಕಾರಿ’ ಸೇವೆ ಸಹಕಾರಿ : ಡಾ.ಸತೀಶ್ ಕುಮಾರ್*

ಜೂನ್ 20, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.