
ನಾಪೋಕ್ಲು ಆ.12 NEWS DESK : ಕಾರುಗುಂದ ಗೌಡ ಸಮಾಜದ ಆವರಣದಲ್ಲಿ ಬೆಟ್ಟಗೇರಿ ಉದಯ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರ ಸಭೆ ನಡೆಯಿತು. ಕೆಎಸ್ಆರ್ಟಿಸಿ ನಿವೃತ್ತ ಉದ್ಯೋಗಿ ತಳೂರು ಕೇಶವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಲೆಯ ವಿದ್ಯಾರ್ಥಿಗಳ ಇತ್ತೀಚಿನ ಶೈಕ್ಷಣಿಕ ಪ್ರಗತಿ, ಶಿಕ್ಷಣದ ಗುಣಮಟ್ಟ ಹಾಗೂ ಶಾಲೆಯಲ್ಲಿ ಎದುರಾಗುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಶಾಲೆಯ ಶೈಕ್ಷಣಿಕ ವಾತಾವರಣವನ್ನು ಮತ್ತಷ್ಟು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ತಮ್ಮ ಸಲಹೆ-ಅಭಿಪ್ರಾಯಗಳನ್ನು ಹಂಚಿಕೊಂಡರು. ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ವೇದಿಕೆಗೆ ‘ಉದಯ ಹಳೆ ವಿದ್ಯಾರ್ಥಿಗಳ ಚಾರಿಟೇಬಲ್ ಟ್ರಸ್ಟ್’ ಎಂದು ನಾಮಕರಣ ಮಾಡಲಾಯಿತು. ಟ್ರಸ್ಟ್ ಮೂಲಕ ಶಾಲೆಯ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಅಧ್ಯಕ್ಷ ತಳೂರು ಕೇಶವ ಕರೆ ನೀಡಿದರು. ಶಾಲೆಯ ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶದಿಂದ 2026ನೇ ಸಾಲಿನ ನೂತನ ಮಂಡಳಿಯನ್ನು ಸರ್ವಾನುಮತದಿಂದ ರಚಿಸಲಾಯಿತು. ಅಧ್ಯಕ್ಷರಾಗಿ ಬೆಳ್ಯನ ಚಂದ್ರಪ್ರಕಾಶ್ (ರವಿ), ಕಾರ್ಯದರ್ಶಿಯಾಗಿ ಶರ್ಫುದ್ದೀನ್ ಎಂ.ಎಚ್., ಉಪಾಧ್ಯಕ್ಷರಾಗಿ ಅರೆಯಂಡ ಸುರೇಶ್, ಸಹಕಾರ್ಯದರ್ಶಿಯಾಗಿ ಕದ್ಯದ ಭವಾನಿ ಶಂಕರ್ ಹಾಗೂ ಖಜಾಂಚಿಯಾಗಿ ಮಂಜುನಾಥ್ ಬಿ.ಎನ್. ಆಯ್ಕೆಯಾದರು. ಸಲಹೆಗಾರರಾಗಿ ಹೊಸೂರು ಕೇಶವ ಗಿರೀಶ್, ಚೆರುಮಾಡಂಡ ಸತೀಶ್ ಸೋಮಣ್ಣ ಹಾಗೂ ತಳೂರು ದಿನೇಶ್ ಕರುಂಬಯ್ಯ ಆಯ್ಕೆಯಾದರು. ಮಂಡಳಿ ಸದಸ್ಯರಾಗಿ ವಿ.ಟಿ. ಗಿರೀಶ್, ಚಳಿಯುಂಡ ಯುತೀಶ್ ಸೋಮಯ್ಯ, ತೆನ್ನಿರ ರಮೇಶ್, ಚಂದ್ರ ಉಡೋತ್ತು, ಮಜೀದ್ ಎಂ.ಎ., ಕೊಡಗನ ತೀರ್ಥ ಪ್ರಸಾದ್, ವೇದಾವತಿ ಎಂ.ಆರ್., ಪ್ರವೀಣ್ ಎಡಿಕೇರಿ, ಜಯಪ್ರಸಾದ್ ರೈ, ಗೌರಮ್ಮ ಕೆ.ಎಂ., ಬೆಳ್ಯನ ಎನ್. ಪವಿತ್ರ ಕುಮಾರ್, ರಂಜನ್ ಎ.ಬಿ., ನೈಯ್ಯಣ್ಣಿರ ಹೇಮಾ ಕುಮಾರ್, ಪಾಣತ್ತಲೆ ಚಂದನ್ ಹಾಗೂ ಕೋಳುಮಾಡಂಡ ಕಿರಣ ಆಯ್ಕೆಯಾದರು. ಮುಂದಿನ ದಿನಗಳಲ್ಲಿ ಟ್ರಸ್ಟ್ಗೆ ಹೊಸ ಸದಸ್ಯರನ್ನು ಮುಕ್ತವಾಗಿ ಸೇರ್ಪಡೆಗೊಳಿಸಲು ಅವಕಾಶ ನೀಡಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಪ್ರತಿ ಸದಸ್ಯರಿಗೆ ₹500 ಸದಸ್ಯತ್ವ ಶುಲ್ಕ ನಿಗದಿಪಡಿಸಲಾಯಿತು. ಸಭೆಯಲ್ಲಿ ಶಾಲೆಯ ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.










