


ಸೋಮವಾರಪೇಟೆ ಆ.15 NEWS DESK : 2047ರ ವಿಕಸಿತ ಭಾರತ ನಿರ್ಮಾಣಕ್ಕೆ ಸರ್ವರು ಸಂಕಲ್ಪ ತೊಡಬೇಕೆಂದು ಪತ್ರಕರ್ತ ಎಸ್.ಮಹೇಶ್ ತಿಳಿಸಿದರು. ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಹಾಗೂ ಟ್ರೇಡ್ ಯೂನಿಯನ್ ವತಿಯಿಂದ ಪಟ್ಟಣದ ಜಿ.ಸಿ.ವೇದಿಕೆಯಲ್ಲಿ ಆಯೋಜಿಸಿದ್ದ 80ನೆ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ರಾಷ್ಟ್ರದ ಮಹಾನ್ ನಾಯಕರು,ಸ್ವಾತಂತ್ರ್ಯಕ್ಕಾಗಿ, ಹೋರಾಡಿ ಪ್ರಾಣತೆತ್ತ ಫಲವಾಗಿ ಇಂದು ನಾವು ಈ ದೇಶದಲ್ಲಿ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗಿದೆ ಎಂದರು. ಅಂದು ಸ್ವಾತಂತ್ರಕ್ಕಾಗಿ ಪರಕೀಯರಾದ ಬ್ರಿಟೀಷರವಿರುದ್ದ ಹೋರಾಡಿದರೆ ಇಂದು ದೇಶದ ಆಂತರಿಕ ವಿಚಿದ್ರಕಾರಕ ಶಕ್ತಿಗಳವಿರುದ್ದ ಹೋರಾಟಮಾಡಬೇಕಾದ ಪರಿಸ್ಥಿತಿಬಂದಿರುವುದು ವಿಷಾದನೀಯವೆಂದರು. 2047ಕ್ಕೆ ಈ ದೇಶಕ್ಕೆ ಸ್ವಾತಂತ್ರ ಬಂದು ಶತಮಾನ ಪೂರೈಸುವ ಹಿನ್ನಲೆಯಲ್ಲಿ ಈ ದೇಶದ ಪಧಾನಿಗಳಾದ ನರೇಂದ್ರಮೋದಿಯವರು ಆರ್ಥಿಕಾಭಿವೃದ್ಧಿ,ಸ್ವಾವಂಬನೆ, ಅಂತರ್ಘತಾಭಿವೃದ್ದಿ , ಸುಸ್ಥಿರತೆ ಮುಂತಾದ ಅಧಿವೃದ್ಧಿಯ ವಿಕಸಿತ ಭಾರತ ನಿರ್ಮಾಣಕ್ಕೆ ಪಣತೊತ್ತಿದ್ದಾರೆ ಈ ದೇಶದ ಪ್ರಜೆಗಳಾದ ನಾವುಗಳು ಅವರೊಡನೆ ಕೈಜೋಡಿಸಬೇಕೆಂದರು. 1873 ರಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಬಳಿಯ ಹೆಮ್ಮನೆ ಗ್ರಾಮದ ಪುಟ್ಟಬಸಪ್ಪ ಅಲಿಯಾಸ್ ಕಲ್ಯಾಣ ಸ್ವಾಮಿ ಎಂಬುವರು ಬ್ರಿಟೀಷರವಿರುದ್ದ ಹೋರಾಡಿ ಜಯಗಳಿಸಿ ಮಂಗಳೂರಿನ ಬಾವುಟಗುಡ್ಡದಲ್ಲಿ ಈ ನಾಡಿನ ದ್ವಜ ಹಾರಿಸಿದ್ದರು ನಂತರ ಬ್ರಿಷರ ಹುನ್ನಾರದಿಂದ ನೇಣಿಗೇರಿದ ಇಂತಹ ಅಪ್ರತಿಮ ಹೋರಾಟಗಾರನನ್ನು ಇತಿಹಾಸ ಮರೆಯುವುದು ಇಂದಿನ ಆಡಳಿತ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದು ವಿಷಾದಿಸಿದರು. ವೃತ್ತನಿರೀಕ್ಷಕ ಮುದ್ದು ಮಾದೇವ ಧ್ವಜಾರೋಹಣ ನೆರವೇರಿಸಿದರು. ಮಾಜಿ ಸೈನಿಕ ಚಂದ್ರಕುಮಾರ್, ವೈದ್ಯರಾದ ಜಯರಾಜ್ ಹಾಗೂ ಪೌರಕಾರ್ಮಿಕರಾದ ಶ್ರೀಮತಿ ಕಾಳಮ್ಮ ನವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಸಂಘದ ಅಧ್ಯಕ್ಷ ವಸಂತಾಚಾರ್ಯ ವಹಿಸಿದ್ದರು. ಕರ್ನಾಟಕ ರಕ್ಷಣಾವೆದಿಕೆ ನಗರಾಧ್ಯಕ್ಷ ಮಂಜುನಾಥ್,ನಿವೃತ್ತ ಶಿಕ್ಷಕ ರಾಜಪ್ಪ,ಪ್ರಮುಖರುಗಳಾದ ಭಾಸ್ಕರ್,ಕೃಷ್ಣಕುಮಾರ್,ಜಲೀಲ್ಸಾಬ್, ಯೂ ಟ್ಯೂಬರ್ ಗಳಾದ ಮದನ್,ವಿಕಿಲ್ ರೈ,ಜಗದೀಶ್,ಪ್ರಸನ್ನ,ಗಣೇಶ,ಸುನೀಲ್, ನಿತಿನ್,ವಿಶ್ವ,ರೋಹಿತ್ ಪೂಜಾರಿ ಹಾಗೂ ಮುಂತಾದವರುಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿ.ಕೆ.ಸೈನಿಕ ತರಬೇತಿ ಶಾಲೆಯ ವಿದ್ಯಾರ್ಥಿಗಳು ಧ್ವಜವಂದನೆ ಹಾಗೂ ಗೌರವ ರಕ್ಷೆ ಸಲ್ಲಿಸಿದರು.








