
ಮಡಿಕೇರಿ NEWS DESK ಆ.30 : ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಬಾಚರಣಿಯಂಡ ಸುಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘದ ಪ್ರಗತಿ ಕುರಿತು ಮಾಹಿತಿ ನೀಡಿದ ಸುಮನ್ ಅವರು 2025-26 ನೇ ಸಾಲಿನಲ್ಲಿ ಸಂಘವು ರೂ.35,20,997 ನಿವ್ವಳ ಲಾಭವನ್ನು ಪಡೆದಿದ್ದು ಸದಸ್ಯರಿಗೆ ಶೇ.14ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದರು. ಸಂಘದಲ್ಲಿ ರೂ.1,25,77,047 ಷೇರು ಬಂಡವಾಳವಿದ್ದು, ಒಟ್ಟು ರೂ.15.86 ಕೋಟಿ ಸಾಲವನ್ನು ವಿತರಿಸಲಾಗಿದೆ. ರೂ.9.45 ಕೋಟಿ ಕೆಸಿಸಿ ಫಸಲು ಸಾಲವನ್ನು ನೀಡಲಾಗಿದೆ. ಒಟ್ಟು ರೂ.6,15,42,000 ಠೇವಣಿಯನ್ನು ಸಂಗ್ರಹಿಸಲಾಗಿದೆ. ಆಡಿಟ್ ವರ್ಗೀಕರಣದಲ್ಲಿ ಸಂಘ “ಎ” ದರ್ಜೆಯಲ್ಲಿ ಮುಂದುವರೆದಿದೆ. 1976ರಲ್ಲಿ ಸಂಘ ಸ್ಥಾಪನೆಗೊಂಡಿದ್ದು ಪ್ರಸ್ತುತ ವರ್ಷ 50ನೇ ವರ್ಷದ ಸಂಭ್ರಮದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಹಾಸಭೆಯಲ್ಲಿ 10ನೇ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಯಿತು. ಸಂಘದ ಉಪಾಧ್ಯಕ್ಷ ಪೊಡೊನೋಳನ ಶ್ರೀನಿವಾಸ್, ನಿರ್ದೇಶಕರುಗಳಾದ ಅಯ್ಯಂಡ ಬೆಳ್ಳಿಯಪ್ಪ, ಕೇಕಡ ಸುಗುಣ, ತೊತ್ತಿಯಾನ ಚೇತಕ್, ಕುಞ್ಞಳಿಯಾನ ಸಂತೋಷ್ ಕುಮಾರ್, ಮುಕ್ಕಾಟಿ ನಾಣಯ್ಯ, ಎಂ.ಕೆ.ವಸಂತ, ನಾಳೆಯಮ್ಮನ ಜೀವನ್, ಕೂರನ ಕಿಶೋರ್ ಕುಮಾರ್, ಚಿಯಬೇರ ವೀಣಾ ಸೋಮಯ್ಯ, ಎಂ.ಸರಸಮ್ಮ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ.ಜ್ಯೋತಿ, ಕೆಡಿಸಿಸಿ ಬ್ಯಾಂಕ್ ನ ಮೇಲ್ವಿಚಾರಕಿ ಪಿ.ಪಿ.ಕಾವೇರಮ್ಮ, ಹಿರಿಯ ಸಹಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪೊಡೊನೋಳನ ಶ್ರೀನಿವಾಸ್ ಸ್ವಾಗತಿಸಿ, ಕೂರನ ಕಿಶೋರ್ ಕುಮಾರ್ ವಂದಿಸಿದರು.









