
ಮಡಿಕೇರಿ ಸೆ.18 NEWS DESK : ಕೊಡಗು ಮೂಲ ನಿವಾಸಿ ಅರಮನೆಪಾಲೆ ಸಮಾಜದ ಮಹಾಸಭೆ ಸೆ.21 ರಂದು ಬೆಳಿಗ್ಗೆ 10 ಗಂಟೆಗೆ ಹಾಕತ್ತೂರು ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಾಜದ ಪ್ರಧಾನ ಸಂಘಟಕ ಮಂದಣ್ಣ ಪಿ.ಕೆ. ಅವರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಮೂಲ ನಿವಾಸಿ ಅರಮನೆಪಾಲೆ ಸಮಾಜದ ಪ್ರಧಾನ ಸಂಚಾಲಕ ಅರಮನೆಪಾಲೆರ ಮಂಜುನಾಥ್ ಜಿ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮಹಾಸಭೆಯನ್ನು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಉದ್ಘಾಟಿಸಲಿದ್ದು, ತಾವು ಪ್ರಾಸ್ತಾವಿಕ ಭಾಷಣ ಮಾಡುವುದಾಗಿ ತಿಳಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡವ ಭಾಷಿಕ ಸಮುದಾಯಗಳ ಕೂಟದ ನಿರ್ದೇಶಕ ಅರಮನೆಪಾಲೆರ ದೇವಯ್ಯ, ಮಾಜಿ ಯೋಧರಾದ ಅರಮನೆಪಾಲೆರ ಸುಭಾಷ್, ಅರಮನೆಪಾಲೆರ ಸಿ.ಶಿವಪ್ಪ, ಅರಮನೆಪಾಲೆ ಸಮಾಜದ ಕಾರ್ಯದರ್ಶಿ ಅರಮನೆಪಾಲೆರ ದೇವಯ್ಯ ಹಾಕತ್ತೂರು, ನಿರ್ದೇಶಕರಾದ ಅರಮನೆಪಾಲೆರ ಗಣೇಶ್ ಹಾಗೂ ಅರಮನೆಪಾಲೆರ ವಿಶ್ವನಾಥ್ ಪಾಲ್ಗೊಳ್ಳಲಿದ್ದಾರೆ. ನಿರ್ದೇಶಕರಾದ ಅರಮನೆಪಾಲೆರ ಜೋಯಪ್ಪ, ಕಾರ್ಯಕ್ರಮ ಸಂಯೋಜಕ ಅರಮನೆಪಾಲೆರ ಲೋಕೇಶ್, ಮರಣ ಧನಸಹಾಯನಿಧಿಯ ಅಧ್ಯಕ್ಷ ಅರಮನೆಪಾಲೆರ ಯತೀಶ್ ಬಿದ್ದಪ್ಪ, ಕಾರ್ಯದರ್ಶಿ ಅರಮನೆಪಾಲೆರ ಸುಬ್ಬಯ್ಯ, ಕ್ರೀಡಾಸಮಿತಿ ಅಧ್ಯಕ್ಷ ಅರಮನೆಪಾಲೆರ ನವೀನ್, ಕ್ರಿಕೆಟ್ ಪಂದ್ಯಾವಳಿ ಸಮಿತಿ ಅಧ್ಯಕ್ಷ ಅರಮನೆಪಾಲೆರ ಪ್ರವೀಣ್, ಕಾರ್ಯದರ್ಶಿ ಅರಮನೆಪಾಲೆರ ರಘು, ಮಾದಾಪುರ ಗ್ರಾಮ ಸಮಿತಿ ಅಧ್ಯಕ್ಷ ಅರಮನೆಪಾಲೆರ ನಿಶಾನ್, ಕಾರ್ಯದರ್ಶಿ ಅರಮನೆಪಾಲೆರ ನವೀನ್, ಕಂಡಿಮಕ್ಕಿ ಗ್ರಾಮ ಸಮಿತಿ ಕಾರ್ಯದರ್ಶಿ ಅರಮನೆಪಾಲೆರ ಸಂತೋಷ್, ಹಾಕತ್ತೂರು ಗ್ರಾಮ ಸಮಿತಿ ಅಧ್ಯಕ್ಷ ಅರಮನೆಪಾಲೆರ ದೇವಯ್ಯ, ಚೆಯ್ಯಂಡಾಣೆ ಗ್ರಾಮ ಸಮಿತಿ ಕಾರ್ಯದರ್ಶಿ ಅರಮನೆಪಾಲೆರ ಭಾರತಿ, ನಾಪೋಕ್ಲು-ಪೇರೂರು ಗ್ರಾಮ ಸಮಿತಿ ಅಧ್ಯಕ್ಷ ಅರಮನೆಪಾಲೆರ ಮುತ್ತಪ್ಪ, ಕಾರ್ಯದರ್ಶಿ ಅರಮನೆಪಾಲೆರ ಸುಶೀಲ, ನಾಗಬಾಣೆ ಗ್ರಾಮ ಸಮಿತಿ ಅಧ್ಯಕ್ಷ ಅರಮನೆಪಾಲೆರ ರಮೇಶ್, ಕಾರ್ಯದರ್ಶಿ ಅರಮನೆಪಾಲೆರ ದೀನಾ, ಚೇಲಾವರ ಅಧ್ಯಕ್ಷ ಅರಮನೆಪಾಲೆರ ಪೂವಣ್ಣ, ಕಾರ್ಯದರ್ಶಿ ಅರಮನೆಪಾಲೆರ ಅನಿತಾ ಪೂವಣ್ಣ, ಕುಂಜಿಲ, ಕಕ್ಕಬ್ಬೆ, ನೆಲಜಿ ಸಮಿತಿ ಕಾರ್ಯದರ್ಶಿ ಅರಮನೆಪಾಲೆರ ಮಧು, ಹಾಕತ್ತೂರು-ಬಿಳಿಗೇರಿ, ಮುತ್ತಾರ್ಮುಡಿ, ಪಾಲೆಮಾಡು ಸಮಿತಿ ಕಾರ್ಯದರ್ಶಿ ಅರಮನೆಪಾಲೆರ ಹರಿಣಿ, ಕೊಡಗು ಮೂಲ ನಿವಾಸಿ ಅರಮನೆಪಾಲೆ ಸಮಾಜದ ಮಾಜಿ ಕಾರ್ಯದರ್ಶಿ ಅರಮನೆಪಾಲೆರ ರವಿ ಗಣೇಶ್, ಚೆಯ್ಯಂಡಾಣೆ ಗ್ರಾಮ ಸಮಿತಿ ಅಧ್ಯಕ್ಷೆ ಅರಮನೆಪಾಲೆರ ಬೀನಾಕುಮಾರಿ ಹಾಗೂ ಬಾಳುಗೋಡು ಸಮಿತಿ ಕಾರ್ಯದರ್ಶಿ ಅರಮನೆಪಾಲೆರ ಲಲಿತಾ ಗೌರವ ಉಪಸ್ಥಿತಿ ಇರುವರು ಎಂದು ಮಂದಣ್ಣ ಪಿ.ಕೆ ಮಾಹಿತಿ ನೀಡಿದ್ದಾರೆ. ಸಭೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿರುವ ಅವರು, ಸಮಾಜ ಬಾಂಧವರು ಕಡ್ಡಾಯವಾಗಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸುವಂತೆ ಮನವಿ ಮಾಡಿದ್ದಾರೆ.









