ಮಡಿಕೇರಿ ಆ.31 : ಕಾಡಾನೆ ದಾಳಿಗೆ ಸಿಲುಕಿ ಶಾರ್ಪ್ ಶೂಟರ್ ವೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಸಕಲೇಶಪುರದ ಆಲೂರು ತಾಲ್ಲೂಕಿನ ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಶಾರ್ಪ್ ಶೂಟರ್ ವೆಂಕಟೇಶ್ (55) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡು ತಿರುಗಾಡುತ್ತಿದ್ದ ಕಾಡಾನೆ ಭೀಮನಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು. ಅರೆವಳಿಕೆ ನೀಡುವುದಕ್ಕಾಗಿ ಶಾರ್ಪ್ ಶೂಟರ್ ವೆಂಕಟೇಶ್ ಅವರು ಮುಂದಾದಾಗ ಏಕಾಏಕಿ ದಾಳಿ ಮಾಡಿದ ಭೀಮ ತುಳಿದು ಹಾಕಿತು. ಘಟನೆಯಿಂದ ತೀವ್ರವಾಗಿ ಗಾಯಗೊಂಡ ವೆಂಕಟೇಶ್ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಲೇಖಕ: admin
ಮೂರ್ನಾಡು ಆ.31 : ಮೂರ್ನಾಡು ನಂ.439ನೇ ಸಹಕಾರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 99ನೇ ವಾರ್ಷಿಕ ಕೈಲ್ಪೊಳ್ದ್ ಹಬ್ಬದ ಆಟೋಟ ಸ್ಪರ್ಧೆ ಸೆ.3ರಂದು ನಡೆಯಲಿದೆ. ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಆಟೋಟಗಳ ಕಾರ್ಯಕ್ರಮಗಳನ್ನು ಅಪರಾಹ್ನ 1.30 ಗಂಟೆಗೆ ಮೂರ್ನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ ಉದ್ಘಾಟಿಸಲಿದ್ದಾರೆ. ಸಾರ್ವಜನಿಕರಿಗೆ ತೆಂಗಿನಕಾಯಿಗೆ ಗುಂಡುಹೊಡೆಯುವುದು, ಮಹನೀಯರಿಗೆ, ಮಹಿಳೆಯರಿಗೆ, ಶಾಲಾ-ಕಾಲೇಜು ಮಕ್ಕಳಿಗೆ ವಿವಿಧ ಓಟದ ಸ್ಪರ್ಧೆಗಳು, ಕಣ್ಣುಕಟ್ಟಿ ಮಡಿಕೆ ಹೊಡೆಯುವುದು, ಭಾರದ ಕಲ್ಲು ಎಸೆತ, ಸಂಗೀತ ಕುರ್ಚಿ, ನಿಂಬೆಹಣ್ಣು ಚಮಚ ಓಟ, ವಾದ್ಯದ ಕುಣಿತ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದೆ. ಅಪರಾಹ್ನ 4.30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ , ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಹಕಾರ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಮುಂಡಂಡ ಪವಿ ಸೋಮಣ್ಣ ವಹಿಸಲಿದ್ದಾರೆ. ಈ ಸಂದರ್ಭ ಅಂತರಾಷ್ಟ್ರೀಯ…
ಮಡಿಕೇರಿ ಆ.31 : ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜು ಅವರನ್ನು ಭೇಟಿ ಮಾಡಲಾಯಿತು. ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ನೇತೃತ್ವದಲ್ಲಿ ಭೇಟಿಯಾದ ಸಂಸ್ಥೆಯ ಪ್ರಮುಖರು, ವಿವಿಧ ಭೇಡಿಕೆಗಳ ಕುರಿತು ಗಮನ ಸೆಳೆದರು. ಜಿ.ಪಂ , ಗ್ರಾ.ಪಂ ಹಾಗೂ ಪ.ಪಂ ಗಳಿಂದ ಸರಕಾರದ ಆದೇಶ ದಂತೆ ಅನುದಾನ ನೀಡುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿ ಜಿಲ್ಲಾ ಸಂಸ್ಥೆಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಅಲ್ಲದೆ ಸಂಸ್ಥೆಯ ಎಲ್ಲಾ ವಿಷಯಗಳಿಗೆ ಸಹಕರಿಸುವ ಭರವಸೆ ನೀಡಿದರು. ಜಿಲ್ಲಾ ಗೈಡ್ ಆಯುಕ್ತರಾದ ರಾಣಿ ಮಾಚಯ್ಯ, ಸಹ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ ಹಾಜರಿದ್ದರು.
ಬೆಂಗಳೂರು ಆ.31 : ಕರ್ನಾಟಕ ವಿಧಾನ ಪರಿಷತ್ ನ ನೂತನ ಸದಸ್ಯರಾಗಿ ಉಮಾಶ್ರೀ, ಎಮ್.ಆರ್. ಸೀತಾರಾಮ್ ಮತ್ತು ಎಚ್.ಪಿ.ಸುದಾಮ್ ದಾಸ್ ಅವರು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಹೆಚ್.ಕೆ.ಪಾಟೀಲ್, ಬೋಸರಾಜು ಸೇರಿದಂತೆ ಹಲವು ಶಾಸಕರುಗಳು, ನೂತನ ಶಾಸಕರುಗಳ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ಹಾಜರಿದ್ದರು.
ಮಡಿಕೇರಿ ಆ.31 : ಗೋಣಿಕೊಪ್ಪಲಿನ ಲಯನ್ಸ್ ಪ್ರೌಢ ಶಾಲೆಯಲ್ಲಿ ನಡೆದ ಆಮ್ಮತಿ ವಲಯಮಟ್ಟದ ಕ್ರೀಡಾಕೂಟದಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾಗಿದ್ದಾರೆ. ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯದಲ್ಲಿ ವಿದ್ಯಾರ್ಥಿಗಳಾದ 10ನೇ ತರಗತಿಯ ಆಕರ್ಶ್ ಕೊಂಗಂಡ, ಎಂ.ಜಿ.ಅಯ್ಯಪ್ಪ, ಸಿ.ತಹಾನ್ ಪೂವಯ್ಯ, 9ನೇ ತರಗತಿಯ ಪಿ.ಎಸ್.ಅನಲ್, 8ನೇ ತರಗತಿಯ ವೃಶಾಂಕ್ ದೇವಯ್ಯ ಭಾಗವಹಿಸಿ ವಿಜೇತರಾಗಿ ಮುಂಬರುವ ತಾಲೂಕು ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕಿಯರಾದ ಎಂ.ಪಿ.ಮೋನಿಕಾ ಕಾವೇರಿ ಹಾಗೂ ಲಾವಣ್ಯ ಮಾರ್ಗದರ್ಶನ ನೀಡಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಾಲಾ ಸಂಯೋಜಕರು ಹಾಗೂ ಶಿಕ್ಷಕ ವೃಂದದವರು ಶಾಘಿಸಿ ಅಭಿನಂದಿಸಿದ್ದಾರೆ.
ಮಡಿಕೇರಿ ಆ.31 : ಮಕ್ಕಳ ಹಲ್ಲುಗಳಿಗೆ ಪ್ರಾಥಮಿಕ ಅಥವಾ ಹಾಲು ಹಲ್ಲು ಎಂದು ಕರೆಯುತ್ತೇವೆ. ಈ ಹಲ್ಲುಗಳು ಮಗುವಿಗೆ ಒಂದರಿಂದ ಮೂರು ವರ್ಷ ವಯಸ್ಸಿನ ನಡುವೆ ಒಸಡಿನಲ್ಲಿ ಮೂಡುತ್ತವೆ ಹಾಗೂ ಹನ್ನೆರಡು ವರ್ಷ ಪ್ರಾಯದ ವರೆಗೆ ಇರುತ್ತವೆ. ಸಾಮಾನ್ಯವಾಗಿ ಈ ಹಲ್ಲುಗಳಿಂದ ಯಾವುದೇ ಪ್ರಯೋಜನವಿಲ್ಲವೆಂದು ಬಹಳ ಜನರು ನಂಬಿದ್ದಾರೆ. ಆದರೆ ಈ ಹಲ್ಲುಗಳು ಮಕ್ಕಳ ದವಡೆಯ ಹಾಗೂ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಲು ಹಲ್ಲಿನ ಎರಡು ಪ್ರಮುಖ ಪ್ರಯೋಜನಗಳು: ೧. ಆಹಾರ ಜಗಿಯುವಿಕೆ: ನಾವು ಸೇವಿಸುವ ಆಹಾರವನ್ನು ಹಲ್ಲುಗಳು ಚೆನ್ನಾಗಿ ಜಗಿದರೆ ಮಾತ್ರ ಅವುಗಳಲ್ಲಿರುವ ಪುಷ್ಟಿಕಾಂಶವು ನಮ್ಮ ದೇಹಕ್ಕೆ ದೊರೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಬೆಳೆಯುವ ಮಕ್ಕಳ ಹಲ್ಲುಗಳು ಅವರ ದೇಹದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ೨. ಶಾಶ್ವತ ಹಲ್ಲುಗಳ ಸ್ಥಳಾವಕಾಶ: ಶಾಶ್ವತ ಹಲ್ಲುಗಳು ಮಕ್ಕಳ ದವಡೆಯಲ್ಲಿ ಮೂಡುವವರೆಗೆ ಹಾಲು ಹಲ್ಲುಗಳು ಶಾಶ್ವತ ಹಲ್ಲುಗಳಿಗೆ ಬೇಕಾದ ಸ್ಥಳವನ್ನು ರೂಪಿಸಿಕೊಡುತ್ತವೆ. ಆದ್ದರಿಂದ ಶಾಶ್ವತ ಹಲ್ಲುಗಳು ಬರುವವರೆಗೆ ಹಾಲು ಹಲ್ಲುಗಳು ಇರಬೇಕು.…
ಮಡಿಕೇರಿ ಆ.31 : ಅಂಬಟ್ಟಿ ಗ್ರಾಮದ ಬಿಲ್ಲವ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ನಾರಾಯಣ ಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಈ ಸಂದರ್ಭ ಬಿಲ್ಲವ ಸೇವಾ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸೋಮವಾರಪೇಟೆ ಆ.31 : ಬ್ಲೂಸ್ಟಾರ್ ಹಾಕಿ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ಕ್ರೀಡಾ ದಿನ ಹಾಗೂ ಹಾಕಿ ಮಾಂತ್ರಿಕ ಮೇಜರ್ ದ್ಯಾನ್ಚಂದ್ ಅವರ ಜನ್ಮದಿನವನ್ನು ಜೂನಿಯರ್ ಕಾಲೇಜಿನ ಆಟದ ಮೈದಾನದಲ್ಲಿ ಆಚರಿಸಲಾಯಿತು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ದೇಶದಲ್ಲಿ ಅಪ್ರತಿಮ ಕ್ರೀಡಾ ಸಾಧಕ ಮೇಜರ್ ದ್ಯಾನ್ಚಂದ್ ಅವರು ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. ಇವರು 1928ರಲ್ಲಿ ಭಾರತ ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಪಡೆಯಲು ಪ್ರಮುಖ ಕಾರಣಕರ್ತರಾಗಿದ್ದರು. ತಮ್ಮ 17ನೇ ವಯಸ್ಸಿನಲ್ಲಿಯೇ ಕ್ರೀಡಾ ಕ್ಷೇತ್ರಕ್ಕೆ ಬಂದು 1949ರ ವರೆಗೆ 189 ಪಂದ್ಯಗಳನ್ನಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು. ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ. ಇದು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಧ್ಯಾನ್ಚಂದ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮುಬೇಕೆಂದು ಕರೆ ನೀಡಿದರು. ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಸ್ಥಾಪಕ ಸದಸ್ಯ ಬಿ.ಎಂ.ಸುರೇಶ್, ಕ್ಲಬ್ನ ಹಿರಿಯ ಸದಸ್ಯರಾದ ಎಸ್.ಬಿ.ಯಶ್ವಂತ್, ಶುಭಾಕರ್, ಬಿ.ಈ.ಅರುಣ್ಕುಮಾರ್, ಅಭಿ ಗೋವಿಂದಪ್ಪ, ಪ್ರದೀಪ್, ಮಾಜಿ ಸೈನಿಕ…
ಸೋಮವಾರಪೇಟೆ ಆ.31 : ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದ ಹಲವು ಕ್ರೀಡೆಯಲ್ಲಿ ಜಯಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಟೇಬಲ್ ಟೆನ್ನಿಸ್ನ ಬಾಲಕ ಮತ್ತು ಬಾಲಕೀಯರ ವಿಭಾಗದಲ್ಲಿ ಪ್ರಥಮ ಸ್ಥಾನ, ಖೋ ಖೋ ಬಾಲಕರು ಮತ್ತು ಬಾಲಕಿಯರು, ಕಬಡ್ಡಿ ಬಾಲಕರು ಮತ್ತು ಬಾಲಕಿಯರು, ಷಟಲ್ ಬ್ಯಾಡ್ಮಿಂಟನ್ ಬಾಲಕರು, ಬ್ಯಾಸ್ಕೆಟ್ ಬಾಲ್ ಬಾಲಕರು ದ್ವಿತೀಯ ಸ್ಥಾನ, 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಜ್ವಲ್ ದ್ವಿತೀಯ ಹಾಗೂ 3000 ಮೀಟರ್ ಓಟದ ಸ್ಪರ್ಧೆಯಲ್ಲಿ ಸುಪ್ರಿತ್ ತೃತೀಯ ಸ್ಥಾನಗಳಿಸಿದರು.
ಸೋಮವಾರಪೇಟೆ ಆ.31 : ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗದಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಕ್ರೀಡಾಕೂಟದ ಬಾಲಕಿಯರ ವಿಭಾಗದಲ್ಲಿ ಸೋಮವಾರಪೇಟೆ ತಾಲ್ಲೂಕಿನ ವಿಶ್ವಮಾನವ ಕುವೆಂಪು ಆಂಗ್ಲ ಮಾಧ್ಯಮ ಶಾಲೆಯ ವಾಲಿಬಾಲ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕ್ವಾಟರ್ಫೈನಲ್ನಲ್ಲಿ ವಿರಾಜಪೇಟೆ ಹಾಗೂ ಫೈನಲ್ನಲ್ಲಿ ಮಡಿಕೇರಿ ತಂಡವನ್ನು ಮಣಿಸಿ, ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ತಂಡದಲ್ಲಿ ನಾಯಕಿ ಎಚ್.ಆರ್.ಬಿಂದು, ಎಚ್.ಆರ್.ಜೀವಿತ, ವರ್ಣಿಕಾ ಗೌಡ, ಕೆ.ಎಲ್.ಕೃತಿ, ವಿದ್ಯಾಗೌರಿ, ಡಿ.ಆರ್.ರಿಶಿಕಾ, ಗನಿಕಾ, ಹನಿ ಅವರುಗಳು ವಿಭಾಗೀಯ ಮಟ್ಟದಲ್ಲಿ ಕೊಡಗು ತಂಡವನ್ನು ಪ್ರತಿನಿಧಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ, ಶಾಲೆಯ ಮುಖ್ಯಶಿಕ್ಷಕಿ ಮಿಲ್ಡ್ರೆಡ್ ಗೋನ್ಸಾಲ್ವೆಸ್, ಉಪನ್ಯಾಸಕ ಲಾಂಛನ್ ತರಬೇತಿ ನೀಡಿದ್ದಾರೆ.






