ಲೇಖಕ: admin

ಮಡಿಕೇರಿ ಮೇ 10 : ವಿಧಾನಸಭಾ ಚುನಾವಣೆ ಗೆ ಮುಂಜಾನೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 58.24ರಷ್ಟು ಮತದಾನ ನಡೆದಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.57.58 ರಷ್ಟು ಮತದಾನ ನಡೆದಿದ್ದು, ವಿರಾಜಪೇಟೆ ಕ್ಷೇತ್ರದಲ್ಲಿ 58.92ರಷ್ಟು ಮತದಾನ ನಡೆದಿದೆ. ಮತದಾರರು ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತು ಉತ್ಸಾಹದಿಂದ ಮತದಾನ ಮಾಡಿದರು.

Read More

ಚೆಯ್ಯಂಡಾಣೆ ಮೇ 10 :  ವಿಧಾನ ಸಭಾ ಚುನಾವಣೆಯ ಚೆಯ್ಯಂಡಾಣೆ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ 7 ಗಂಟೆಗೆ ಮೊದಲ ಮತದಾನ ಮಾಡಿದರು. ವಿಕಲಚೇತನರು, ಅಂಗವಿಕಲರು ಹಾಗೂ ರೋಗಿಗಳನ್ನು ಕರೆತರುವ ವಾಹನಕ್ಕೆ ಮಾತ್ರ ಮತಗಟ್ಟೆ ಸಮೀಪಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಉಳಿದಂತೆ ಎಲ್ಲರು ಸಾಲಾಗಿ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಮೊದಲ ಬಾರಿ ಮತದಾನ ಮಾಡಿದ  ಟಿ.ಆರ್. ಸಂದ್ಯಾ , ಟಿ.ಎಸ್. ಆಕಾಶ್, ಬಿ.ಜೆ.ಪುನೀತ್ ರೈ, ಎಂ.ಎ.ಮನೋಜ್, ಪಿ.ಎಂ .ಯೋಶಿಕ್ ,ಪಿ.ಎಂ. ಪುನೀತ್, ಎಂ. ಎಸ್. ಮೈತ್ರಿ ಮತಿತ್ತರರು ಮೊದಲ ಬಾರಿಗೆ ಮತ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಚಲಾಯಿಸಿ ಸಂಭ್ರಮಿಸಿದರು. ಮಧ್ಯಾಹ್ನ ನಂತರ ಮಳೆ ಸುರಿದರು ಕೂಡ ಮತದಾರರು ಆಗಮಿಸಿ ಮತ ಚಲಾಯಿಸಿದರು. ವರದಿ : ಅಶ್ರಫ್   

Read More

ಮಡಿಕೇರಿ ಮೇ 10 :  ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಡಿಕೇರಿ ನಗರಸಭಾ ವ್ಯಾಪ್ತಿಯ ಎವಿ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Read More

ಸುಂಟಿಕೊಪ್ಪ, ಮೇ 10 :  ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯ ಮತಗಟ್ಟೆ 139 ರಲ್ಲಿ ವಿದ್ಯಾರ್ಥಿ ಜ್ಞಾನೇಶ್  ಪ್ರಥಮ ಮತ ಚಲಾಯಿಸಿದರು. ನಂತರ ಮತನಾಡಿ, ಸಂವಿಧಾನದಲ್ಲಿ ಮತದಾನ ಹಕ್ಕು ಪವಿತ್ರವಾದುದು. ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಕಲ್ಪಿಸುವುದು ಯಾವುದೇ ಸರಕಾರದ ಹಕ್ಕಾಗಿದೆ. ಪ್ರಥಮ ಮತ ಅರ್ಹ ವ್ಯಕ್ತಿಗೆ ನೀಡಿದ್ದೇನೆ ಎಂದು ಹೇಳಿದರು.

Read More

ಸುಂಟಿಕೊಪ್ಪ ಮೇ 10 : ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯ 139 ಮತಗಟ್ಟೆಯಲ್ಲಿ ವಿದ್ಯಾರ್ಥಿನಿ ಶಿವಾನಿ ಪ್ರಥಮ ಮತ ಚಲಾಯಿಸಿ ಸಂಭ್ರಮಿಸಿದರು.  ನಂತರ ಮಾತನಾಡಿ  ಪ್ರಜಾಪ್ರಭುತ್ವದಲ್ಲಿ ಮತದಾನ ಹಕ್ಕು ಶ್ರೇಷ್ಠವಾಗಿದ್ದು, ದೇಶವನ್ನು ಆಳುವವರ ಆಯ್ಕೆ ಮಾಡುವ ಹಕ್ಕು ಲಭಿಸಿರುವುದೇ ಅತೀವ ಸಂತಸ ತಂದಿದೆ ಎಂದು ಶಿವಾನಿ ಅಭಿಪ್ರಾಯ ವ್ಯಕ್ತಪಡಿಸಿದರು.   

Read More

ನಾಪೋಕ್ಲು ಮೇ 10 : ಅಂಚೆ ಮತದಾನ ನಿರಾಕರಿಸಿ ಮತಗಟ್ಟೆಯಲ್ಲಿ ಮತಗಟ್ಟೆಗೆ ಆಗಮಿಸಿ  ಮತದಾನ ಮಾಡುವ ಮೂಲಕ 90 ವರ್ಷದ  ವೃದ್ದೆ ಅಮೀನಾ  ಗಮನ ಸೆಳೆದರು. ಹಳೇ ತಾಲ್ಲೂಕು ನಿವಾಸಿ ನಾಪೋಕ್ಲು ಗ್ರಾ.ಪಂ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಎಂ.ಎಂ. ಶಾದುಲಿ ಅವರ  ಪತ್ನಿ  ಅಮೀನಾ, ಕಳೆದ ಎಲ್ಲಾ ಚುನಾವಣೆಯಲ್ಲೂ ನಾನು ಮತಗಟ್ಟೆಯಲ್ಲೇ ಮತದಾನ ಮಾಡುತ್ತಿದ್ದೇನೆ, ಈ ವರ್ಷ ಯಾಕೆ ಅಂಚೆ ಮತದಾನ ಮಾಡಿಸುತ್ತಿರಿ ಎಂದು ಕೆಲವು ದಿನಗಳ ಹಿಂದೆ ಅಧಿಕಾರಿಗಳು ಅಂಚೆ ಮತದಾನ ಮಾಡಿಸಲು ಮನೆಗೆ ಭೇಟಿ ನೀಡಿದಾಗ  ಪ್ರಶ್ನಿಸಿದರು.  ಮತಗಟ್ಟೆಗೆ ನಡೆಯಲು ಸಾಧ್ಯವಿಲ್ಲ ಎಂದು ಮಕ್ಕಳು ಮನ ಒಲಿಸಲು ಪ್ರತ್ನಿಸಿದರೂ  ಮಾತು ಕೇಳದ  ವೃದ್ದೆ  ತಾನು  ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತೇನೆ ಎಂದು ಪಟ್ಟು ಹಿಡಿದ  ಹಿನ್ನೆಲೆ  ಇಂದು ಮಗ ಇಬ್ರಾಹಿಂ ನೊಂದಿಗೆ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆಗೆ ತೆರಳಿ  ಮತವನ್ನು ಚಲಾವಣೆ ಮಾಡಿದರು. 90ವರ್ಷ ವಾದರೂ ಇವರಿಗೆ ಮತದಾನ ಮಾಡಲು ಇರುವ ಮುತುವರ್ಜಿ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ. ವರದಿ…

Read More

ನಾಪೋಕ್ಲು ಮೇ 10 : ಮಲೇಶ್ಯಾದಲ್ಲಿ ಮೇ 12 ರಿಂದ 14ರ ತನಕ ನಡೆಯಲಿರು 19ನೇ ಅಂತರ ರಾಷ್ಟ್ರೀಯ ಓಕಿನಾವ ಗೊಜು – ರಿಯು ಇಪೋಹ್ ಸಿಟಿ ಕರಾಟೆ ಚಾಂಪಿಯನ್ ಶಿಪ್ – 2023ಗೆ ಬಾಲಕರ (7 -1೦ ವರ್ಷದೊಳಗಿನ) ವಿಭಾಗದಲ್ಲಿ) ಕೊಡಗಿನ ಕೊಳ್ಳೀರ ಭವಿನ್ ಆಯ್ಕೆಯಾಗಿದ್ದಾನೆ. ಈತ ನಂಜರಾಯಪಟ್ಟಣದ ಕೊಳ್ಳೀರ ಯೋಗೇಶ್ ರಮ್ಯಾ ದಂಪತಿಯ ಪುತ್ರ. ಭವಿನ್ ಡಾ.ಎಸ್.ಷಣ್ಮುಗಮ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ಪ್ರಸ್ತುತ ಬೆಂಗಳೂರಿನ ಇಂಡಿಯನ್ ಏರ್ಫೋರ್ಸ್ (ವಾಯು ಸೇನಾ) ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾನೆ. ವರದಿ : ದುಗ್ಗಳ ಸದಾನಂದ 

Read More

ಮಡಿಕೇರಿ ಮೇ 10 :  ಕೊಡಗಿನಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಮಧ್ಯಾಹ್ನದ ವೇಳೆಗೆ   ಶೇ.45.64ರಷ್ಟು ಮತದಾನ ನಡೆದಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 43.99 ರಷ್ಟು ಮತದಾನ ನಡೆದಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 47.34 ರಷ್ಟು ಮತದಾನ ನಡೆದಿದೆ. ಮತದಾರರು ಉತ್ಸಹದಿಂದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸುತ್ತಿದ್ದಾರೆ.

Read More

ನಾಪೋಕ್ಲು ಮೇ 10 :  ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳದ (ಜೆಡಿಎಸ್) ಅಭ್ಯರ್ಥಿ ಎಂ. ಎ. ಮನ್ಸೂರ್ ಆಲಿ ಮತ ಚಲಾವಣೆ ಮಾಡಿದರು. ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಮತಗಟ್ಟೆ 57 ರಲ್ಲಿ ಮನ್ಸೂರ್ ಆಲಿ ಮತ ಚಲಾವಣೆಮಾಡಿದರು. ವರದಿ :ಝಕರಿಯ ನಾಪೋಕ್ಲು  

Read More

ಮಡಿಕೇರಿ ಮೇ 10 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂತರ್ ಗೌಡ ಸೋಮವಾರಪೇಟೆ ತಾಲೂಕು ಬೇಗೂರು ಗ್ರಾ.ಪಂ ವ್ಯಾಪ್ತಿಯ ಬಳಗುಂದ ಮತಗಟ್ಟೆಯಲ್ಲಿ ತಮ್ಮ ಪತ್ನಿ ದಿವ್ಯ ಅವರೊಂದಿಗೆ ಮತ ಚಲಾಯಿಸಿದರು.

Read More