ಶ್ರೀ ರಾಮೇಶ್ವರ ದೇವಾಲಯವು ತೀರ್ಥಹಳ್ಳಿಯ ಪ್ರಮುಖ ಹಿಂದೂ ದೇವಾಲಯವಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ. ಈ ದೇವಾಲಯವು ಕಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು ತುಂಗಾ ನದಿಯ ದಡದಲ್ಲಿದೆ. ಇದು ಪರಶುರಾಮ ತೀರ್ಥದ ಬಳಿ ಇದೆ. ದೇವಾಲಯದ ಗರ್ಭಗುಡಿಯು ಋಷಿ ಪರಶುರಾಮರಿಂದ ಸ್ಥಾಪಿಸಲ್ಪಟ್ಟ ಲಿಂಗವನ್ನು ಹೊಂದಿದೆ ಮತ್ತು ಆದ್ದರಿಂದ ದೇವಾಲಯವನ್ನು ಪರಶುರಾಮ ತೀರ್ಥವೆಂದು ಪರಿಗಣಿಸಲಾಗಿದೆ. ಪುರಾಣ :: ಪುರಾಣ ದಲ್ಲಿ ಉಲ್ಲೇಖಗೊಂಡಂತೆ ರೇಣುಕಾದೇವಿಯ ಮೋಹದ ಕಾರಣದಿಂದಾಗಿ ಮಡಕೆ ಮಾಡುವುದು ಅಸಾಧ್ಯವಾಗುತ್ತದೆ. ಇದನ್ನು ತನ್ನ ದಿವ್ಯದೃಷ್ಠಿಯಿಂದ ಅರಿತ ಜಮದಗ್ನಿ ಮಹರ್ಷಿಯು ತನ್ನ ಮಕ್ಕಳನ್ನು ಕರೆದು ಆಕೆಯನ್ನು ಸಂಹರಿಸುವಂತೆ ತಿಳಿಸುತ್ತಾನೆ. ಆಗ ಮಾತೃಹತ್ಯೆ ಪಾಪ ಎಂದು ಅರಿತ ಸುತರು ತಂದೆ ನುಡಿದದ್ದನ್ನು ಅನುಸರಿಸಲು ನಿರಾಕರಿಸಿದಾಗ ಕೋಪಗೊಂಡ ಜಮದಗ್ನಿಯು ತನ್ನ ಕೊಪದ ಜ್ವಾಲೆಯಿಂದ ಮಕ್ಕಳನ್ನು ಸುಡುತ್ತಾನೆ. ನಂತರ ತನ್ನ ಕೊನೆಯ ಮಗನಾದ ಪರಶುರಾಮನನ್ನು ಕರೆದು ಆಕೆಯನ್ನು ಸಂಹರಿಸಲು ತಿಳಿಸುತ್ತಾನೆ. ತಂದೆಯ ಆಜ್ಞೆಯನ್ನು ಪರಶುರಾಮ ಪಾಲಿಸಲು ಸಮ್ಮತಿಸುತ್ತಾನೆ. ತಾಯಿ ರೇಣುಕಾದೇವಿಯ ಶಿರಸ್ಸನ್ನು ತನ್ನ ಪರಶುವಿನಿಂದ ಛೇದಿಸುತ್ತಾನೆ. ತಂದೆಯ ಕೋಪವನ್ನು…
ಲೇಖಕ: admin
ಸಿರಿಮನೆ ಜಲಪಾತ: ಸಿರಿಮನೆ ಜಲಪಾತವು ಪಶ್ಚಿಮ ಘಟ್ಟದ ಜನಪ್ರಿಯ ಜಲಪಾತವಾಗಿದೆ, ಇದು ಚಿಕ್ಕಮಗಳೂರು ಜಿಲ್ಲೆಯ ಶ್ರಿಂಗೇರಿ ಶಾರದಾಂಬ ದೇವಾಲಯದಿಂದ ಸುಮಾರು 18 ಕಿ.ಮೀ ದೂರದಲ್ಲಿದೆ. ಸಿರಿಮನೆ ಜಲಪಾತದ ಸಮೀಪ ತಲುಪಲು ರಸ್ತೆ ಇದೆ. ಜಲಪಾತಕ್ಕೆ ಹತ್ತಿರ ಇರುವ ಹಳ್ಳಿಯ ಹೆಸರು ಕಿಗ್ಗಾ (ಸಿರಿಮನೆ ಜಲಪಾತದಿಂದ 5 ಕಿ.ಮೀ). ಸಿರಿಮನೆ ಜಲಪಾತ ಸುಮಾರು 40 ಅಡಿ ಎತ್ತರವಿದೆ. ಜಲಪಾತದ ಬುಡದಲ್ಲಿ ಇರುವ ಕೊಳದ ಆಳವು ಕಡಿಮೆ, ಆದ್ದರಿಂದ ಸಿರಿಮನೆ ಜಲಪಾತ ಸ್ನಾನ ಮಾಡಲು ಸುರಕ್ಷಿತವಾಗಿದೆ (ಮಳೆಗಾಲದಲ್ಲಿ ನೀರಿನ ಪ್ರಮಾಣ ತುಂಬಾ ಹೆಚ್ಚಿರುವುದರಿಂದ ತೀರಾ ಹತ್ತಿರ ಹೋಗದಿರುವುದು ಒಳ್ಳೆಯದು) ಸಿರಿಮನೆ ಜಲಪಾತವು ದೊಡ್ಡ ಗುಂಪುಗಳಿಗೆ ಏಕಕಾಲದಲ್ಲಿ ಸ್ಥಳಾವಕಾಶ ಕಲ್ಪಿಸುವಷ್ಟು ಅಗಲವಿದೆ. ಶೃಂಗೇರಿ, ಹೊರನಾಡು ದೇವಾಲಯಗಳಿಗೆ ಭೇಟಿ ನೀಡುವ ಹೆಚ್ಚಿನ ಭಕ್ತರು ಸಿರಿಮನೆ ಜಲಪಾತಕ್ಕೂ ಭೇಟಿ ನೀಡುತ್ತಾರೆ. ಸಮಯ: ಸಿರಿಮನೆ ಜಲಪಾತ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಹತ್ತಿರ: ಅಗುಂಬೆ (41 ಕಿ.ಮೀ), ಶೃಂಗೇರಿ ದೇವಾಲಯಗಳು (17 ಕಿ.ಮೀ), ಕುಂದಾದ್ರಿ (40…
ಮಡಿಕೇರಿ ಜು.20 : ಸಿದ್ದಾಪುರ-ಪಾಲಿಬೆಟ್ಟ ರಸ್ತೆಯಲ್ಲಿ ರಾತ್ರಿವೇಳೆ ಕಾಡಾನೆಯೊಂದು ಸಂಚರಿಸುವ ಮೂಲಕ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ರಾತ್ರಿ ವೇಳೆ ಒಂಟಿ ಸಲಗ ಸಿದ್ದಾಪುರ ಪಾಲಿಬೆಟ್ಟ ರಸ್ತೆಯಲ್ಲಿ ತೆರಳುತ್ತಿರುವ ದೃಶ್ಯ ಗ್ಯಾರೇಜ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಮಾರ್ಗವಾಗಿ ವಾಹನ ತೆರಳುವುದರಿಂದ ಅರಣ್ಯ ಇಲಾಖೆ ತಕ್ಷಣವೇ ಆನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರಾದ ಅನಿಲ್ ಒತ್ತಾಯಿಸಿದ್ದಾರೆ. ವರದಿ : ಸುರೇಶ ಗುಹ್ಯ
ಮಡಿಕೇರಿ ಜು.20 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 42.61 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 3.69 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 986.44 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1826.92 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 32.18 ಮಿ.ಮೀ. ಕಳೆದ ವರ್ಷ ಇದೇ ದಿನ 6.25 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1518.21 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2543.43 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 35.12 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.53 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 700.46 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1451.06 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.53 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.30 ಮಿ.ಮೀ.…
ಮಡಿಕೇರಿ ಜು.20 : ನೆಲ್ಲಿಹುದಿಕೇರಿಯ ಬೆಟ್ಟದಕಾಡು ಗ್ರಾಮದಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ನಗದು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದರು.
ಮಡಿಕೇರಿ ಜು.20 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣೆ ಮತ್ತು ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ. ಇದಕ್ಕೆ ‘ ಮುಂಗಾರಿನ ಸಂಭ್ರಮ ‘ ಎಂಬ ವಿಷಯ ವಸ್ತು ನೀಡಲಾಗಿದೆ. ರೀಲ್ಸ್ ಅವಧಿ ಒಂದು ನಿಮಿಷ ಮೀರುವಂತಿಲ್ಲ. ಒಬ್ಬರು ಎಷ್ಟು ರೀಲ್ಸ್ ಬೇಕಾದರು ಕಳುಹಿಸಬಹುದಾಗಿದೆ. ಪ್ರಥಮ ಬಹುಮಾನ 3000 ರೂ, ದ್ವಿತೀಯ 2000 ರೂ ತೃತೀಯ 1000 ರೂ ನೀಡಲಾಗುತ್ತದೆ. ರೀಲ್ಸ್ ವೀಡಿಯೋ ಲಂಬ(vertical) ಆಕಾರದಲ್ಲಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ವಯಸ್ಸು ಊರಿನ ವಿವರಗಳ ಸಮೇತ 8310826979 ನಂಬರ್ ಗೆ ವಾಟ್ಸ್ಆ್ಯಪ್ ಮಾಡಬೇಕು. ರೀಲ್ಸ್ ಕಳುಹಿಸಲು ಆ.10 ಕೊನೆಯ ದಿನವಾಗಿರುತ್ತದೆ. ರೀಲ್ಸ್ ಅನ್ನು 8310826979 ಗೆ ವಾಟ್ಸ್ ಮಾಡಬಹುದು. ಅಥವಾ kodagupressclub.drushyam@gmail.com ಗೆ ಇ-ಮೇಲ್ ಮಾಡಬಹುದು ರೀಲ್ಸ್ ಗಳ ಪ್ರದರ್ಶನ ಮತ್ತು ಬಹುಮಾನ ವಿತರಣಾ ಸಮಾರಂಭ ವಿಶ್ವ ಛಾಯಾಗ್ರಹಣ ದಿನವಾದ ಆಗಸ್ಟ್ 19 ರಂದು ಮಡಿಕೇರಿಯ ನೂತನ ಗಾಂಧಿಭವನ ಸಭಾಂಗಣದಲ್ಲಿ ನಡೆಯಲಿದೆ.…
ಮಡಿಕೇರಿ ಜು.20 : ನಾಪೋಕ್ಲು ಹಳೆ ತಾಲೂಕು ನಿವಾಸಿ ಬಾಬು ಪೂಜಾರಿ ಅವರ ಪತ್ನಿ ಲಕ್ಷ್ಮಿ(60) ಬುಧವಾರ ನಿಧನರಾಗಿದ್ದಾರೆ.
ಸೋಮವಾರಪೇಟೆ ಜು.19 : ತಾಲ್ಲೂಕು ಆಡಳಿತ ಮತ್ತು ಕಂದಾಯ ಇಲಾಖೆಯ ವತಿಯಿಂದ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ, ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪಂಚಾಯಿತಿ ವ್ಯಾಪ್ತಿಯ ಕಂದಾಯ ಗ್ರಾಮಗಳಾದ ಗರ್ವಾಲೆ, ಸೂರ್ಲಬ್ಬಿ, ಶಿರಂಗಳ್ಳಿ ಹಾಗೂ ಉಪ ಗ್ರಾಮಗಳಾದ ಕುಂಬಾರಗಡಿಗೆ, ಕಿರುದಾಲೆ, ಮಂಕ್ಯ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ತಮ್ಮ ಆಸ್ತಿಗಳ ಪೌತಿ ಖಾತೆಗೆ ಸಂಬಂಧಿಸಿದಂತೆ, ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಿದರು. ಈ ಸಂದರ್ಭ ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುಂಡ, ಸದಸ್ಯೆ ಎಚ್.ಎಚ್. ರತ್ನ, ಗ್ರಾಮ ಲೆಕ್ಕಿಗರಾದ ದೀಪಿಕ ಮತ್ತು ಚೈತ್ರ ಇದ್ದರು.
ಸೋಮವಾರಪೇಟೆ ಜು.19 : ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ವತಿಯಿಂದ ಜು.23ರ ಹೊಸಳ್ಳಿ ಗ್ರಾಮದಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಎಚ್.ತಿಮ್ಮಯ್ಯ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 9.30 ಗಂಟೆಗೆ ಹೊಸಳ್ಳಿ ಗ್ರಾಮದ ಕುಶಾಲಪ್ಪ ಅವರಿಗೆ ಸೇರಿದ ಗದ್ದೆಯಲ್ಲಿ ಕ್ರೀಡಾಕೂಟ ಆರಂಭಗೊಳ್ಳಲಿದ್ದು, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ, ಹುಣಸೂರು ಶಾಸಕ ಹರೀಶ್ ಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹರಪಳ್ಳಿ ರವೀಂದ್ರ, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಉದ್ಯಮಿ ಅರುಣ್ ಕೊತ್ನಳ್ಳಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಒಕ್ಕಲಿಗ ಸಮುದಾಯದ ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ. ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆ ಮತ್ತು ಪುರುಷರ ಪ್ರತ್ಯೇಕ ವಿಭಾಗದಲ್ಲಿ ಹಗ್ಗಜಗ್ಗಾಟ,…
ಮಡಿಕೇರಿ ಜು.19 : ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಜು.21 ರ ಸಂಜೆ 5 ಗಂಟೆಯಿಂದ ಜುಲೈ, 23 ರ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು, ಮಡಿಕೇರಿ ತಾಲ್ಲೂಕಿನ ಕಾಂತೂರು ಮೂರ್ನಾಡು ಮತ್ತು ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಎಲ್ಲಾ ವಿಧದ ಮದ್ಯ ತಯಾರಿಕೆ, ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೋಟೆಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶ ಹೊರಡಿಸಿದ್ದಾರೆ.






