ಲೇಖಕ: admin

ನಾಯಿಕಡಿತವನ್ನು ತಪ್ಪಿಸುವುದು ನಾಯಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕುತೂಹಲ ಹೊಂದಿರುವ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಅಪರಿಚಿತ ನಾಯಿಯನ್ನು ಸಮೀಪಿಸುವುದಾಗಲೀ, ಅದನ್ನು ಮುಟ್ಟುವುದಾಗಲೀ ಅಥವಾ ಆಹಾರ ನೀಡಲು ಪ್ರತ್ನಿಸುವುದಾಗಲೀ ಮಾಡಬಾರದು. (ಅಗತ್ಯವಿದ್ದರೆ ಅದರ ಮಾಲೀಕರ ಸಮಕ್ಷಮದಲ್ಲಿ ಅವರ ಮಾರ್ಗದರ್ಶನದಲ್ಲಿ ಮುಂದುವರೆಯಬಹುದು) ಪರಿಚಿತ ನಾಯಿಯೇ ಆಗಲಿ, ಅದನ್ನು ರೇಗಿಸಿಯಾಗಲೀ ಅಥವಾ ಕೀಟಲೆ ಮಾಡಿಯಾಗಲೀ ಕಚ್ಚಲು ಪ್ರೇರೇಪಿಸಬಾರದು. ಮಲಗಿ ನಿದ್ರಿಸುತ್ತಿರುವ/ಆಹಾರ ಸೇವಿಸುತ್ತಿರುವ/ಮರಿಗಳೊಂದಿಗೆ ಇರುವ/ಪರಸ್ಪರ ಕಚ್ಚಾಡುತ್ತಿರುವ ನಾಯಿಗಳಿಂದ ದೂರವಿರಬೇಕು. ದಾರಿಯಲ್ಲಿ ಎದುರಾಗುವ ಅಥವಾ ಹಾದಿಬದಿಯಲ್ಲಿದ್ದು ನಮ್ಮ ಕಡೆ ಬೊಗಳುತ್ತಿರುವ ನಾಯಿಯಿಂದ ಸಾಕಷ್ಟು ಅಂತರ ಕಾಯ್ದುಕೊಂಡು ಅದನ್ನು ಹೆಚ್ಚಾಗಿ ಗಮನಿಸದವರಂತೆ ನಿಧಾನವಾಗಿ ಹಾದುಹೋಗಬೇಕು. ನೆನಪಿಡಿ: ನಮ್ಮ ಕಡೆ ತೀಕ್ಷ್ಣವಾಗಿ ನೋಡುತ್ತಿರುವ ಅಥವಾ ಬೊಗಳುತ್ತಿರುವ ನಾಯಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೇರವಾಗಿ ನೋಡಬಾರದು. ಓಡಲಾರಂಭಿಸುವ/ಓಡುತ್ತಿರುವ ಅಥವಾ ವೇಗವಾಗಿ ವಾಹನದಲ್ಲಿ ಚಲಿಸುತ್ತಿರುವ ವ್ಯಕ್ತಿಗಳನ್ನು ಅಟ್ಟಿಸಿಕೊಂಡು ಹೋಗುವುದು ಬಹುತೇಕ ನಾಯಿಗಳ ಗುಣ. ನಾಯಿ ನಮ್ಮ ಕಡೆ ಗಮನವಿರಿಸಿ ಬೊಗಳಲಾರಂಭಿಸಿದಾಗ, ಕೂಡಲೇ ತಿರುಗಿ ಅದಕ್ಕೆ ಬೆನ್ನು ತೋರಿಸಿ ವೇಗವಾಗಿ…

Read More

ಕುಶಾಲನಗರ, ಮೇ 9: ಕುಶಾಲನಗರದ ಫಾತಿಮ ಪ್ರೌಢಶಾಲೆಯ ಯಶ್ವಿನ್ ಗೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.98.56 ಫಲಿತಾಂಶ ಲಭಿಸಿದೆ. 625 ಅಂಕಗಳಿಗೆ 616 ಅಂಕಗಳನ್ನು ಗಳಿಸಿರುವ ಯಶ್ವಿನ್, ಕನ್ನಡ 122, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 99 ಹಾಗೂ ಸಮಾಜ ವಿಜ್ಞಾನ ವಿಷಯಕ್ಕೆ 95 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾನೆ. ವಿದ್ಯಾರ್ಥಿನಿ ಯಶ್ವಿನ್, ಕುಶಾಲನಗರ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಗಣಿತ ವಿಷಯದ ಶಿಕ್ಷಕ ಎ.ಸಿ.ಮಂಜುನಾಥ್ ಹಾಗೂ ನಿಡ್ತ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಡಿ.ಎಂ. ಮಹಾದೇವಿ ದಂಪತಿಯ ಪುತ್ರನಾಗಿದ್ದಾನೆ.  ವಿದ್ಯಾರ್ಥಿ ಯಶ್ವಿನ್ ನ ಉತ್ತಮ ಫಲಿತಾಂಶಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

Read More

ಚೆಯ್ಯಂಡಾಣೆ ಮೇ 9 :  ಪಾರಾಣೆ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಶೇ.100 ಫಲಿತಾಂಶ ದೊರೆತ್ತಿದ್ದು, ಸತತವಾಗಿ ನಾಲ್ಕು ಬಾರಿ ಶೇ.100 ಫಲಿತಾಂಶ ಗಳಿಸಿ ಮಾದರಿ ಶಾಲೆ ಎನಿಸಿಕೊಂಡಿದೆ. ಒಟ್ಟು 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪೈಕಿ 12 ಗಂಡು 14 ಹೆಣ್ಣು  ಪರೀಕ್ಷೆ ಬರೆದಿದ್ದಾರೆ.  ಉನ್ನತ ಶ್ರೇಣಿಯಲ್ಲಿ ಇಬ್ಬರು, ಪ್ರಥಮ ಹತ್ತೊಂಬತ್ತು, ದ್ವಿತೀಯ ಸ್ಥಾನವನ್ನು ಐವರು ಪಡೆದುಕೊಂಡಿದ್ದಾರೆ. ಕೆ.ಯು.ಮೋಹಿತ್  576 ಅಂಕ ಪಡೆದು ಶಾಲೆಗೆ ಪ್ರಥಮ, ಡಿ.ಐ.ಫಾತಿಮತ್ ಇರ್ಷಾನ 560 ದ್ವಿತೀಯ, ವೈ.ಎಚ್.ರುಕ್ಷನಾ 522 ತೃತೀಯ ಸ್ಥಾನ  ಪಡೆದುಕೊಂಡಿದ್ದಾರೆ. ವರದಿ :  ಅಶ್ರಫ್ 

Read More

ಮಡಿಕೇರಿ ಮೇ 9 :  ಬೃಹತ್ ಗಾತ್ರದ ನಾಗರಹಾವೊಂದು ಕೋಳಿಗೂಡಿಗೆ ನುಗ್ಗಿ ಕೋಳಿಯನ್ನು ನುಂಗಿದ ಘಟನೆ ನೆಲ್ಲಿಹುವುದಿಕೇರಿ ಗ್ರಾಮದ ಸಂಪಿಗೆ ಕೊಲ್ಲಿಯಲ್ಲಿ ನಡೆದಿದೆ. ಗ್ರಾಮದ ಬಿ ಎಸ್ಟೇಟ್ ಲೈನ್ ಮನೆಯಲ್ಲಿ ವಾಸವಿದ್ದ ಕುಮಾರ್ ಎಂಬವರು ಕೋಳಿ ಗೂಡಿನಿಂದ ಕೋಳಿಗಳನ್ನು ಹೊರಗೆ ಬಿಡಲು ಹೋದ ಸಂದರ್ಭ ಒಂದು ಕೋಳಿ ಸತ್ತು ಬಿದ್ದು ಮತ್ತೊಂದು ಕೋಳಿ ಕಾಣೆಯಾಗಿತ್ತು. ಗೂಡಿನಲ್ಲಿ ಪರಿಶೀಲಿಸಿದ ಸಂದರ್ಭ  ನಾಗರಹಾವು ಗೋಚರಿಸಿದೆ.  ತಕ್ಷಣ ಗ್ಯಹ್ಯ ಗ್ರಾಮದ ಉರಗ ರಕ್ಷಕ ಸುರೇಶ್ ಪೂಜಾರಿ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸುರೇಶ್ ಬೃಹತ್ ಗಾತ್ರದ ನಾಗರಹಾವನ್ನು ಸೆರೆ ಹಿಡಿದು ಮಾಲ್ದಾರೆ ಅರಣ್ಯಕ್ಕೆ ಬಿಟ್ಟರು.

Read More

ಚೆಯ್ಯಂಡಾಣೆ ಮೇ 9 : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ  ನರಿಯಂದಡ ಕೇಂದ್ರ ಪ್ರೌಢಶಾಲೆ ಶೇ.100 ರಷ್ಟು ಸಾಧನೆ ಮಾಡಿದೆ. ಪರೀಕ್ಷೆಯಲ್ಲಿ ಒಟ್ಟು 23 ವಿದ್ಯಾರ್ಥಿಗಳು ಹಾಜರಾಗಿದ್ದು, ಗಂಡು 9, ಹೆಣ್ಣು 14 ಮಂದಿ ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಉನ್ನತ ಶ್ರೇಣಿಯಲ್ಲಿ ಈರ್ವರು, ಪ್ರಥಮ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು,  ದ್ವಿತೀಯ ಆರು, ತೃತೀಯ ಶ್ರೇಣಿಯಲ್ಲಿ ಇಬ್ಬರು  ಉತ್ತೀರ್ಣರಾದರು. ಕೆ.ಯು.ಫೌಝಿಯಾ 562 ಅಂಕ ಪಡೆದು ಶಾಲೆಗೆ ಪ್ರಥಮ, ವಿ.ಯಂ.ಅಜಯ್ 557 ಅಂಕ ಪಡೆದು ದ್ವಿತೀಯ, ಪಿ.ಟಿ.ಶರಣ್ಯ 510 ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವರದಿ :  ಅಶ್ರಫ್     

Read More

ಚೆಯ್ಯಂಡಾಣೆ ಮೇ 9 :  ಚಾಮಿಯಾಲ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ 4ನೇ ವರ್ಷದ ಚಾಮಿಯಾಲ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯು  2 ದಿನಗಳ ಕಾಲ ಕುವೆಲೆರ ಅನಿಸ್ ಕುಟುಂಬದ ಗದ್ದೆಯಲ್ಲಿ  ನಡೆಯಿತು. ಫೈನಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಎ.ಎಸ್. ಬ್ಲಾಸ್ಟರ್ಸ್ ತಂಡ ಹೊರಹೂಮ್ಮಿದರೆ, ರನ್ನರ್ಸ್ ಸ್ಥಾನಕ್ಕೆ ಅಯಾನ್ ಸೂಪರ್ ಸ್ಟಾರ್ ತಂಡ ತೃಪ್ತಿ ಪಟ್ಟಿತ್ತು. ಮೂರನೇ ಸ್ಥಾನವನ್ನು ಶಾಮಿಲಿ ಕಿಂಗ್ಸ್ ತಂಡ ಪಡೆದು ಕೊಂಡಿತ್ತು. ಮೊದಲು ನಡೆದ ಸೆಮಿಫೈನಲ್ ಪಂಧ್ಯದಲ್ಲಿ ಅಯಾನ್ ಸೂಪರ್ ಸ್ಟಾರ್ ತಂಡ ಎ.ಎಸ್.ಬ್ಲಾಸ್ಟರ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು  ಸೆಮಿಫೈನಲ್ ಪಂದ್ಯಾವಳಿಯನ್ನು ಎ.ಎಸ್.ಬ್ಲಾಸ್ಟರ್ಸ್ ತಂಡ ಶಾಮಿಲಿ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯಾವಳಿಯಲ್ಲಿ  ಸ್ಥಳೀಯ ಜಮಾಅತ್ ಅಧ್ಯಕ್ಷ ಕೆ.ಎ.ಮಜೀದ್ ಬೋಲಿಂಗ್ ಹಾಗೂ ಗ್ರಾಮದ ಹಿರಿಯರಾದ ರಶೀದ್ ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟಿಸಿದರು. ಒಟ್ಟು 5 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದವು. ಅಯಾನ್ ಸೂಪರ್ ಸ್ಟಾರ್ , ಎ.ಎಸ್ ಬ್ಲಾಸ್ಟರ್ಸ್, ಶಾಮಿಲಿ…

Read More

ನಾಪೋಕ್ಲು ಮೇ 9 : ಪಾರಾಣೆ ಪ್ರೌಢಶಾಲೆಯು ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಸಾಧನೆ ಮಾಡಿದ್ದು, ಸತತ ನಾಲ್ಕು ಬಾರಿ ಶೇ.100 ಫಲಿತಾಂಶ ಗಳಿಸಿದ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯು ಶೇ. 95.31 ಫಲಿತಾಂಶ ದಾಖಲಿಸಿದರೆ ಸೇಕ್ರೆಡ್ ಹಾರ್ಟ್ ಶಾಲೆಯು 93.33 ಫಲಿತಾಂಶ ದಾಖಲಿಸಿದೆ. ಶ್ರೀರಾಮ ಟ್ರಸ್ಟ್ ಶಾಲೆಯ ವಿದ್ಯಾರ್ಥಿ ಎಮ್.ಸಿ ಸಮಯ ಉತ್ತಪ್ಪ 613 ಅಂಕಗಳಿಸಿ 98 ಶೇ ಫಲಿತಾಂಶ ಪಡೆದುಕೊಂಡಿದ್ದಾರೆ. ಅದೇ ಶಾಲೆಯ ವಿದ್ಯಾರ್ಥಿಗಳಾದ ಆರ್ಯನ್ ಅಯ್ಯಪ್ಪ 604 ಅಂಕ ಗಳಿಸಿ ಶೇ. 96 ಅಂಕ ಹಾಗೂ ಎನ್.ಪಿ.ಪ್ರಿಶಾ ಮಾಚಮ್ಮ 601 ಅಂಕಗಳಿಸಿ 96.16 ಫಲಿತಾಂಶ ಪಡೆದುಕೊಂಡಿದ್ದಾರೆ. ಉಳಿದಂತೆ ಕಕ್ಕಬ್ಬೆಯ ಅನುದಾನಿತ ಪ್ರೌಢಶಾಲೆ 93.33, ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆ ಶೇ.85, ನಾಪೋಕ್ಲುವಿನ ಕೆಪಿಎಸ್ ಪ್ರೌಢಶಾಲೆ ಶೇ.80.39, ಹೊದವಾಡ ಸರ್ಕಾರಿ ಪ್ರೌಢಶಾಲೆ ಶೇ.88.8 ಫಲಿತಾಂಶ ಪಡೆದುಕೊಂಡಿದೆ. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಮೇ 9 :  ಪರಿಸರ ಸಂರಕ್ಷಣಾ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ  ಸಂಯುಕ್ತಶ್ರಯದಲ್ಲಿ ಪರಿಸರ ಸಂರಕ್ಷಣೆ ಹಾಗೂ  ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಮಡಿಕೇರಿ ಎಫ್.ಎಂ.ಕೆ.ಎಂ.ಸಿ. ಕಾಲೇಜು ಸಭಾಂಗಣದಲ್ಲಿ  ನಡೆದ ಕಾರ್ಯಕ್ರಮದಲ್ಲಿ  ಪರಿಸರ ಅಧಿಕಾರಿ ಎಂ. ಜಿ. ರಘುರಾಮ್  ವಿದ್ಯಾರ್ಥಿಗಳಿಗೆ  ಪ್ರತಿಜ್ಞೆ ವಿಧಿ  ಬೋಧಿಸಿದರು. ನಂತರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್’ನ ಜಿಲ್ಲಾ ಸಂಘಟಕರಾದ ಯು.ಸಿ.ದಮಯಂತಿ  ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋದಿಸಿದರು.   ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಆಯುಕ್ತ  ಬೇಬಿ ಮ್ಯಾಥ್ಯೂ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ  ಮೇಜರ್ ಡಾ. ಬಿ.ರಾಘವ  ಸ್ವಾಗತಿಸಿದರು. ಕಾಲೇಜಿನ ಎಂ.ಎ.ಕೊಡವದ ಸಂಯೋಜಕ  ಮೇಚಿರ ರವಿಶಂಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಜಂಟಿ ಕಾರ್ಯದರ್ಶಿ  ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಮಡಿಕೇರಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಅಜ್ಜಮಕ್ಕಡ ಎಂ.…

Read More

ಮಡಿಕೇರಿ ಮೇ 9 :  ಮೇಲಿನ ಎರಡೂ ಕೃತಿಗಳು ಅಂಕಣ ಬರಹಗಳ ಸಂಗ್ರಗಳಾಗಿದ್ದು, ‘ಕೊಡವ ಮಕ್ಕಡಕೂಟ(ರಿ)’ ಅವರಿಂದ ಪ್ರಕಟವಾದ ಕೊಡವ ಸಾಹಿತ್ಯ ಮಾಲೆ ಸರಣಿಯ 61 ಮತ್ತು 62ನೇ ಪುಸ್ತಕಗಳಾಗಿವೆ. ಲೇಖಕ ಬಾಳೆಯಡ ಶ್ರೀ ಕಿಶನ್ ಪೂವಯ್ಯ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಅವಳಿ ಪುಸ್ತಕಗಳನ್ನು ಇದೆ 2023 ರ, ಫೆಬ್ರವರಿ ತಿಂಗಳಿನಲ್ಲಿ ಸಾಹಿತ್ಯಲೋಕಕ್ಕೆ ಅನಾವರಣಗೊಳಿಸಿದ್ದಾರೆ. ಕೊಡವ ಮಕ್ಕಡ ಕೂಟ(ರಿ) ಸಂಸ್ಥೆಯ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ ತಮ್ಮ ಅಧ್ಯಕ್ಷರ ನುಡಿಯಲ್ಲಿ ಲೇಖಕ ಕಿಶನ್ ಪೂವಯ್ಯ ನವರ ಬಹುಮುಖ ಪ್ರತಿಭೆಯನ್ನು ವರ್ಣಿಸಿದ್ದಾರೆ. ಅಂತೆಯೇ, “ಶಕ್ತಿ” ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಪ್ರತಿಯೊಂದು ಲೇಖನz ಬಗ್ಗೆ ಸಂಕ್ಷಿಪ್ತವಾದ ಅಭಿಪ್ರಾಯವನ್ನುಗಟ್ಟಿಯಾಗಿ ವ್ಯಕ್ತಪಡಿಸಿ, ನನ್ನ ವಿಮರ್ಶೆಯನ್ನು ತೆಳುವಾಗಿಸಿದ್ದಾರೆ. ಇನ್ನು ವಿದ್ವಾಂಶರು, ಹಿರಿಯ ವಕೀಲರಾದ ಗೌರವನ್ವಿತ ಬಾಲಸುಬ್ರಮಣ್ಯ ಕಂಜರ್ಪಣೆಯವರು ತಮ್ಮ ವಿದ್ವತ್ಪೂರ್ಣ ಮುನ್ನುಡಿಯಲ್ಲಿ ಪ್ರಕೃತಿಯನ್ನು, ನೆಲ-ಜಲಸಂಪತ್ತನ್ನು, ವನಸಿರಿಯಜೊತೆಗೆ ಪ್ರಾಣಿಪಕ್ಷಿಗಳ ಸಹಬಾಳ್ವೆಯನ್ನು ಕೊಂಡಾಡುತ್ತಾ, “ಅಲ್ಲಿಗೆ ಸಲ್ಲದ ಏಕೈಕಜೀವಿ, ಮನುಷ್ಯನ” ಸ್ವಾರ್ಥಬುದ್ಧಿ, ಕಪಟತನ, ರಾಜಕೀಯ ಇತ್ಯಾದಿಗಳು, ಅದರ ಕುರಿತು ಬರೆದ ಲೇಖಕರ “ಜನಹಿತ,…

Read More

ಮಡಿಕೇರಿ ಮೇ 9 : ಉದ್ಯಮಿ ಹಾಗೂ ಬಿಜೆಪಿ ಪ್ರಮುಖ ಮಡಿಕೇರಿಯ ಎಸ್.ಸಿ.ಸುಬ್ರಮಣಿ (70) ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಮಡಿಕೇರಿ ಪಟ್ಟಣ ಸಹಕಾರ ಸಂಘದ ನಿರ್ದೇಶಕರಾಗಿ ಹಾಗೂ ಈ ಹಿಂದೆ ಪುರಸಭೆ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ದಸರಾ ಸಮಿತಿಯಲ್ಲೂ ಸಕ್ರಿಯರಾಗಿದ್ದರು.

Read More