ಕಡಂಗ ಏ.22 : ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಫಿತರ್ ಹಬ್ಬವನ್ನು ಕಡಂಗ ಬದ್ರಿಯ ಮಸೀದಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಜಮಅತ್ ಖತೀಬ್ ಸಹಜನ್ ಸಖಾಫಿ ನೇತೃತ್ವದಲ್ಲಿ ನಮಾಜ್ ನೆಡಸಲಾಯಿತು. ನಂತರ ಸಮೀಪದ ಮುಹ್ಯದ್ದೀನ್ ಮಸೀದಿಯಲ್ಲಿ ಸಲೀಂ ಫೈಜಿ ಉಸ್ತಾದರ ನೇತೃತ್ವದಲ್ಲಿ ನಮಾಜ್ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು. ನಾಡಿನ ಸುಭಿಕ್ಷಕ್ಕಾಗಿ ಮತ್ತು ಮೃತಪಟ್ಟವರಿಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು. ವರದಿ : ನೌಫಲ್ ಕಡಂಗ
ಲೇಖಕ: admin
ಮಡಿಕೇರಿ ಏ.22 : ನಾಲ್ಕುಗೋಡೆಗಳ ನಡುವಣ ಶಿಕ್ಷಣದ ಒತ್ತಡಗಳನ್ನು ಕಳೆದುಕೊಂಡು, ತಮ್ಮೊಳಗಿನ ಪ್ರತಿಭೆಗಳ ಅನಾವರಣದೊಂದಿಗೆ, ವ್ಯಕ್ತಿತ್ವದ ಬದಲಾವಣೆಯನ್ನು ಬೇಸಿಗೆ ಶಿಬಿರಗಳ ಮೂಲಕ ಮಕ್ಕಳು ಕಂಡುಕೊಳ್ಳಲು ಸಾಧ್ಯವೆಂದು ಗಣ್ಯರು ಅನಿಸಿಕೆ ವ್ಯಕ್ತಪಡಿಸಿದರು. ಸುಳ್ಯದ ರಂಗ ಮಯೂರಿ ಕಲಾ ಶಾಲೆ, ಮಡಿಕೇರಿಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಫೀ.ಮಾ.ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಆಯೋಜಿತ ರಾಜ್ಯ ಮಟ್ಟದ ‘ಬಣ್ಣ’ ಮಕ್ಕಳ ಶಿಬಿರದಲ್ಲಿ ಪಾಲ್ಗೊಂಡ ಗಣ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ‘ಡೋಲು’ ಬಾರಿಸುವ ಮೂಲಕ ಮಕ್ಕಳ ಕನಸಿನ ‘ಬಣ್ಣ’ದ ಹಬ್ಬಕ್ಕೆ ಚಾಲನೆ ನೀಡಿದ ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ನವೀನ್ ಅಂಬೆಕಲ್ಲು, ಮಡಿಕೇರಿಯಲ್ಲಿ ಎರಡನೇ ಬಾರಿ ಆಯೋಜಿತವಾಗುತ್ತಿರುವ ಬಣ್ಣ ಶಿಬಿರದ ಮೂಲಕ, ಶಾಲಾ ಕಲಿಕೆಯನ್ನು ಮೀರಿದ ವಿವಿಧ ವಿಚಾರಗಳ ಅರಿವನ್ನು ಪಡೆದುಕೊಳ್ಳುವ0ತೆ ಮಕ್ಕಳಿಗೆ ಕರೆ ನೀಡಿದರು. ನಗರದ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕರಾದ ಕಾಂಚನ ಕೆದಂಬಾಡಿ ಮಾತನಾಡಿ, ಶಾಲಾ ಚಟುವಟಿಕೆಗಳಲ್ಲಿ…
ವಿರಾಜಪೇಟೆ ಏ.22 : ಒರಲ್ ಮೆಡಿಸನ್ ಹಾಗೂ ರೇಡಿಯಾಲಜಿ, ದಂತ ವಿಜ್ಞಾನದಲ್ಲಿ ಎರಡು ಪ್ರಮುಖವಾದ ಮತ್ತು ಪೂರಕವಾದ ವಿಚಾರಗಗಳಾಗಿವೆ. ಭಾರತದಲ್ಲಿ ಈ ವಿಚಾರಗಳ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿಲ್ಲ ಎಂದು ಕೊಡಗು ದಂತ ಮಹಾವಿದ್ಯಾಲಯದ ಡೀನ್ ಡಾ. ಸುನೀಲ್ ಮುದ್ದಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನ ಪ್ರತಿಷ್ಟಿತ ದಂತ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ರಾಷ್ಟ್ರಮಟ್ಟದ ಐಎಒಎಂಆರ್ ಸಂಘದ ಸಹಯೋಗದಲ್ಲಿ ಓರಲ್ ಮೆಡಿಸಿನ್ ಹಾಗೂ ರೇಡಿಯಾಲಜಿ ವಿಷಯ ಆಧರಿಸಿ ನಡೆದ ಎರಡು ದಿನದ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಈ ಸಮಾವೇಶ ನಡೆಸುತ್ತಿರುವುದು ಸಂತಸ ತಂದಿದೆ. ರೋಗವನ್ನೇ ಗುರುತಿಸದೆ ಚಿಕಿತ್ಸೆ ನೀಡುವ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಆದರೆ ಸಿಡ್ಸ್ ವತಿಯಿಂದ ಈ ಎರಡು ವಿಷಯಗಳ ಮೇಲೆ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮುಂಬರುವ ಪೀಳಿಗೆಗೆ ಈ ಎರಡು ವಿಚಾರಗಳು ಅತ್ಯಂತ ಪ್ರಮುಖವಾದ ಅಧ್ಯಯನದ ವಿಚಾರಗಳಾಗಲಿವೆ ಎಂದು ಅಭಿಪ್ರಾಯಪಟ್ಟರು. ಐಎಒಎಂಆರ್ ಪ್ರಮುಖರಾದ ಡಾ.ಗೋಪಕುಮಾರ್ ಆರ್. ನಾಯರ್ ಮಾತನಾಡಿ, ಸಿಒರಲ್ ಮೆಡಿಸನ್ ಹಾಗೂ ರೇಡಿಯಾಲಜಿಗೆ…
ನಾಪೋಕ್ಲು ಏ.22 : ಮುಸಲ್ಮಾನ್ ಬಾಂಧವರು ಒಂದು ತಿಂಗಳ ವೃತಾಚರಣೆಯ ಬಳಿಕ ನಾಪೋಕ್ಲು ಪಟ್ಟಣದ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಈ ದುಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಶನಿವಾರ ಬೆಳಗ್ಗೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ ಅವರ ನೇತೃತ್ವದಲ್ಲಿ ಸಾಮೂಹಿಕ ಈ ದುಲ್ ಫಿತರ್ ನಮಾಜ್ ನಿರ್ವಹಿಸಲಾಯಿತು. ಪ್ರತಿಯೊಬ್ಬರು ಪ್ರವಾದಿಯವರ ಸಂದೇಶದಂತೆ ನಾಡಿನಲ್ಲಿ ಶಾಂತಿ ಸೌಹಾರ್ದತೆ ಮತ್ತು ಐಕ್ಯತೆಯಿಂದ ಜೀವನ ನಡೆಸಬೇಕು. ಇಸ್ಲಾಂ ಶಾಂತಿಯ ಧರ್ಮ ವಾಗಿದ್ದು, ಇನ್ನೊಬ್ಬರಿಗೆ ನೋವುಂಟು ಮಾಡುವ ಕಾರ್ಯ ಪ್ರವರ್ತಿಗಳನ್ನು ಮಾಡದೆ ಎಲ್ಲಾ ಧರ್ಮದವರೊಂದಿಗೆ ಸೌಹಾರ್ದತೆಯನ್ನು ಬೆಳೆಸಬೇಕೆಂದು ಅಶ್ರಫ್ ಅಹ್ಸನಿ ಅವರು ಈದ್ ಸಂದೇಶ ನೀಡಿದರು. ಈ ಸಂದರ್ಭ ನಾಡಿನ ಸುಭಿಕ್ಷಕ್ಕಾಗಿ ಮತ್ತು ಮೃತಪಟ್ಟವರಿಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಒಂದು ತಿಂಗಳ ಉಪವಾಸದ ದಿನದಲ್ಲಿ ಮಸೀದಿಯಲ್ಲಿನ ವಿವಿಧ ಉತ್ತಮ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿದ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಫಾರೂಕ್, ಶುಹೈಬ್, ಹಾರಿಸ್ ಅವರನ್ನು ಮಸೀದಿಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ…
ಮಡಿಕೇರಿ ಏ.22 : ಕೊಡಗು ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವೈವಿಧ್ಯಮಯ ಕಾಯ೯ಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಸ್ವೀಪ್ ಸಮಿತಿ ವತಿಯಿಂದ ರೂಪಿಸಲಾದ ಜನಸಾಮಾನ್ಯರನ್ನು ಒಳಗೊಂಡ ಸಂದೇಶವುಳ್ಳ ಆಕಷ೯ಕ ಪೋಸ್ಟರ್ ಗಳು ಜಿಲ್ಲೆಯಾದ್ಯಂತ ಜನರ ಗಮನ ಸೆಳೆಯುತ್ತಿದೆ. ಮತದಾನ ಮಾಡುವೆ ಎಂಬ ಸಂದೇಶದ ಮೂಲಕ ಪ್ರತೀ ಮತದಾರರಲ್ಲೂ ಮತದಾನದ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಸ್ವೀಪ್ ಸಮಿತಿಯು 50 ಕ್ಕೂ ಅಧಿಕ ಪೋಸ್ಟರ್ ಗಳನ್ನು ರೂಪಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುತ್ತಿದ್ದರೆ ಜಿಲ್ಲೆಯಾದ್ಯಂತಲಿರುವ 60 ಕ್ಕೂ ಅಧಿಕ ಹೋಡಿ೯ಂಗ್ ಗಳಲ್ಲಿ ಕೂಡ ಈ ಸಂದೇಶದ ಪೋಸ್ಟರ್ ಗಳು ಅಳವಡಿಸಲ್ಪಟ್ಟಿದೆ. ಕೊಡಗು ಜಿಲ್ಲಾ ಚುನಾವಣಾ ರಾಯಭಾರಿಗಳಾದ ಶಿಕ್ಷಕ ಗಾಯಕ ಬಸವರಾಜ ಬಡಿಗೇರ್, ವಿಶೇಷಚೇತನ ಮಹಿಳೆ ಎಸ್.ಕೆ. ಈಶ್ವರಿ, ಈಜು ಪರಿಣಿತ ಕೆ.ರವಿಮುತ್ತಪ್ಪ ಅವರನ್ನು ಮುಖ್ಯವಾಗಿರಿಸಿಕೊಂಡು ರಾಯಭಾರಿಗಳು ಜನರಲ್ಲಿ ತಪ್ಪದೇ ಮತದಾನ ಮಾಡಿ ಎಂಬ…
ಅಯೋಧ್ಯೆ ಏ.22 : ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನ ಮೃತಪಟ್ಟು 40 ಜನ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆ ಬಳಿ ಲಖನೌ–ಗೋರಖಪುರ್ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಗಾಯಾಳುಗಳನ್ನು ಅಯೋಧ್ಯೆಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಯೋಧ್ಯೆಯ ಹೊರವಲಯದ ಅಂಬೇಡ್ಕರ್ ನಗರದ ಬಳಿ ತಿರುವಿನಲ್ಲಿ ಖಾಸಗಿ ಬಸ್ ಒಂದು, ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಪ್ರಯಾಣಿಕರನ್ನು ಕರೆತರುತ್ತಿದ್ದ ಬಸ್ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿಯಾಗಿದೆ. ರಸ್ತೆ ಅಪಘಾತದಲ್ಲಿ ಇಲ್ಲಿಯವರೆಗೆ ಏಳು ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ಷಯ ತೃತೀಯವು ವಿಶೇಷವಾಗಿ ಭಾರತದಾದ್ಯಂತ ಹಿಂದೂಗಳು ಮತ್ತು ಜೈನರು ಆಚರಿಸುವ ಮಂಗಳಕರ ಹಬ್ಬವಾಗಿದೆ. ಅದೃಷ್ಟ ಮತ್ತು ಸಮೃದ್ಧಿಯನ್ನು ಕೋರುವ ಹಬ್ಬ, ಅಕ್ಷಯ ತೃತೀಯ ಯಾವುದೇ ಪ್ರಯತ್ನಗಳ ಫಲಪ್ರದಕ್ಕೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಅಕ್ತಿ ಅಥವಾ ಅಖಾ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯವನ್ನು ಹಿಂದೂ ತಿಂಗಳ ವೈಶಾಖದ ಶುಕ್ಲ ಪಕ್ಷ ತೃತೀಯದಂದು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ, ಅಕ್ಷಯ ತೃತೀಯ ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ. ಅಕ್ಷಯ ತೃತೀಯವನ್ನು ಭಾರತೀಯ ತಿಂಗಳ ವೈಶಾಖದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಇದು ಏಪ್ರಿಲ್-ಮೇ ತಿಂಗಳಲ್ಲಿ ಬರುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ಇಬ್ಬರೂ ತಮ್ಮ ಗ್ರಹಗಳ ಅತ್ಯುತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ಈ ದಿನವನ್ನು ‘ಅಖಾ ತೀಜ್’ ಎಂದೂ ಕರೆಯುತ್ತಾರೆ. ಅಕ್ಷಯ ತೃತೀಯ ಮಹತ್ವ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಅಕ್ಷಯ ತೃತೀಯ ದಿನದಂದು, ಸೂರ್ಯ ಮತ್ತು ಚಂದ್ರರು ತಮ್ಮ ಪ್ರಕಾಶಮಾನವಾದ ಹಂತದಲ್ಲಿದ್ದಾರೆ. ಅವರು ಅತ್ಯುನ್ನತ ಸ್ಥಾನವನ್ನು ಆಕ್ರಮಿಸುತ್ತಾರೆ,…
ನಾಪೋಕ್ಳು ಏ.22 : ಇತಿಹಾಸ ಪ್ರಸಿದ್ಧ ಕುಂಜಿಲ ಪಯ್-ನರಿ ಜುಮಾ ಮಸೀದಿಯಲ್ಲಿ ‘ಈದುಲ್ ಫಿತ್ರ್’ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸರ್ವರೂ ಪಾಲ್ಗೊಂಡು ಪರಸ್ಪರ ಸ್ನೇಹ ಮಿಲನ ಮಾಡಿಕೊಂಡರು. ನಂತರ ವಿಶೇಷ ಪ್ರಾರ್ಥನೆ ಮಾಡಿದರು. ವರದಿ:ಸಾಜಿದ್ ಪಯ್ಯಡಿ
ಸೋಮವಾರಪೇಟೆ ಏ.22 : ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2023-24 ನೇ ಸಾಲಿಗೆ ಪ್ರಥಮ ಬಿ.ಎ. ಮತ್ತು ಬಿ.ಕಾಂ ತರಗತಿಗಳಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಏಪ್ರಿಲ್ 24 ರಿಂದ ಕಾಲೇಜಿನ ಕಚೇರಿ ವೇಳೆಯಲ್ಲಿ ಅರ್ಜಿ ಪಡೆದು ಪ್ರವೇಶ ಪಡೆಯಬಹುದು. ಕಾಲೇಜಿನಲ್ಲಿ ಎಲ್ಲಾ ವಿಷಯಗಳಿಗೂ ಪೂರ್ಣಕಾಲಿಕ ಪ್ರಾಧ್ಯಾಪಕರು, ಗ್ರಂಥಪಾಲಕರು, ದೈಹಿಕ ಶಿಕ್ಷಣ ನಿರ್ದೇಶಕರನ್ನು ಒಳಗೊಂಡಿದ್ದು, ಕಾಲೇಜಿನಲ್ಲಿ ಸರ್ಕಾರದ ಸೌಲಭ್ಯಗಳಾದ ಶುಲ್ಕ ವಿನಾಯಿತಿ, ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಕಂಪ್ಯೂಟರ್ ಲ್ಯಾಬ್ ಶಿಕ್ಷಣ ತರಬೇತಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.95911 63808, 9590433420, 962060276,9480007249 ಅನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಧನಲಕ್ಷ್ಮಿ ಅವರು ತಿಳಿಸಿದ್ದಾರೆ.
ಮಡಿಕೇರಿ ಏ.22 : ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಮಾ ಅತ್ ಸರ್ವರೂ ಪಾಲ್ಗೊಂಡು ಪರಸ್ಪರ ಸ್ನೇಹ ಮಿಲನ ಮಾಡಿಕೊಂಡರು. ಸ್ಥಳೀಯ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ಈದ್ ಖುತುಬ ನಿರ್ವಹಿಸಿ ನಾಡಿನ ಸಮಸ್ತ ಜನರಿಗೆ ಈದ್ ಸಂದೇಶ ನೀಡಿ ಮೃತಪಟ್ಟವರಿಗೆ ವಿಶೇಷ ಪ್ರಾರ್ಥನೆ ಮಾಡಿದರು. ಜಮಾ ಅತ್ ನ ಸರ್ವ ಸದಸ್ಯರು ಪಾಲ್ಗೊಂಡಿದರು.






