ಲೇಖಕ: admin

ಶನಿವಾರಸಂತೆ ಏ.21 : ವಿಧಾನಸಭಾ ಚುನಾವಣೆ ಹಿನ್ನೆಲೆ ನಿಲವಾಗಿಲು ಮತ್ತು ಹಿಪ್ಪಲಿ  ಚೆಕ್‌ಪೋಸ್ಟ್ ಗೆ ಸೋಮವಾರಪೇಟೆ ತಹಶೀಲ್ದಾರ್ ನರಗುಂದ ಭೇಟಿ ನೀಡಿ  ವಾಹನಗಳ ತಪಾಸಣೆ ನೆಡೆಸಿದರು. ಈ ಸಂದರ್ಭ ಶನಿವಾರಸತೆ ಹೋಬಳಿ ಉಪತಹಶೀಲ್ದಾರ್ ಟಿ.ಸಿ.ನಾಗರಾಜು ಹಾಗೂ ಇತರ ಅಧಿಕಾರಿಗಳು ಇದ್ದರು.

Read More

ಶನಿವಾರಸಂತೆ ಏ.21 : ಕೊಡಗಿನ ಜನ ಆಮದು ರಾಜಕಾರಣಿಗಳಿಗೆ ಮಣೆ ಹಾಕುವುದಿಲ್ಲ, ನಾನು ಕೊಡಗಿನ ಅಳಿಯ, ಸೊಸೆ ಎಂದ ಕೂಡಲೇ ಮತ ನೀಡುವುದಿಲ್ಲ. ಇಲ್ಲಿ ಈ ಮಣ್ಣಿನ ಮಕ್ಕಳಿಗಷ್ಟೇ ಪ್ರಾಶಸ್ತ್ಯ. ಆದ್ದರಿಂದ ಈ ಬಾರಿ ಕೂಡ ಕೊಡಗಿನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ. ದುಂಡಳ್ಳಿಯಲ್ಲಿ ಬೂತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ  ಅವರು,  ಮಡಿಕೇರಿ ಕಾಂಗ್ರೆಸ್ ಅಭ್ಯರ್ಥಿ ಬೆಳಿಗ್ಗೆ ಕಾಂಗ್ರೆಸ್, ಸಂಜೆ ಜೆಡಿಎಸ್, ಅವರ ತಂದೆ ಅರಕಲಗೂಡು ಜೆಡಿಎಸ್ ಅಭ್ಯರ್ಥಿ ಬೆಳಿಗ್ಗೆ ಜೆಡಿಎಸ್, ಸಂಜೆ ಕಾಂಗ್ರೆಸ್, ಇವರು ಈ ಚುನಾವಣೆಯಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ, ಮುಂದಿನ ಚುನಾವಣೆಯಲ್ಲಿ ಇನ್ನೊಂದು ಕ್ಷೇತ್ರದಿಂದ ಬೇರೊಂದು ಪಕ್ಷದಿಂದ ಸ್ಪರ್ಧಿಸುತ್ತಾರೆ. ಇಂತಹ “ಪಿಕ್ನಿಕ್ ರಾಜಕಾರಣಿಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷೆ ಮಾಡುವಂತಿಲ್ಲ ಎಂದರು. ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದ ಅಪ್ಪಚ್ಚು ರಂಜನ್, ಕಾಮಗಾರಿಗಳ ಗುಣಮಟ್ಟವನ್ನು ಇಂದಿಗೂ ಸ್ವತಹ ನಾನೇ ಪರೀಕ್ಷೆ ಮಾಡುತ್ತೇನೆ ಎಂದು…

Read More

ಮಡಿಕೇರಿ ಏ.20 : ನಮಗೆ ಸುಂದರವಾದ ಪರಿಸರ ದೈವಾನುಗ್ರಹವಾಗಿ ಸಿಕ್ಕಿದ್ದು ಅದನ್ನು ಹಾಗೂ ಜೀವಜಲವನ್ನು ಸಂರಕ್ಷಣೆ ಮಾಡುವಂತೆ ಏರ್ ಮಾರ್ಷಲ್(ನಿ) ಕೊಡಂದೇರ ಕಾರ್ಯಪ್ಪ ಮಕ್ಕಳಿಗೆ ಕರೆ ನೀಡಿದರು. ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ನಗರದ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ಏರ್ಪಡಿಸಲಾಗಿರುವ ಮಕ್ಕಳ ಉಚಿತ ಬೇಸಿಗೆ ಕ್ರೀಡಾ ಶಿಬಿರಕ್ಕೆ ಆಗಮಿಸಿ, ಮಕ್ಕಳೊಂದಿಗೆ ಬೆರೆತು ಹಿತವಚನಗಳನ್ನು ನುಡಿದರು. ದೈವಾನುಗ್ರಹದಿಂದ ನಮಗೆ ಸುಂದರವಾದ ಪರಿಸರ ಸಿಕ್ಕಿದೆ. ಅದನ್ನು ಹಾಳು ಮಾಡಬಾರದು, ಎಲ್ಲೆಂದರಲ್ಲಿ, ರಸ್ತೆ ಬದಿಗಳಲ್ಲಿ ಕಸ ಹಾಕುತ್ತಿರುವದನ್ನು ಕಾಣುತ್ತಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಕಸ ಹಾಕದಂತೆ ತಡೆಗಟ್ಟಬೇಕೆಂದು ಹೇಳಿದರು. ಈಗಿನ ಬಿಸಿಲ ಬೇಗೆ ಹೇಳತೀರದ್ದಾಗಿದೆ. ಜನರು ನಾಳೆ ಇದೆ ಎಂಬುವದನ್ನು ನಂಬುವದಿಲ್ಲ; ಭವಿಷ್ಯದಲ್ಲಿ ಇಲ್ಲಿನ ಬೆಳೆಗಾರರ ಪರಿಸ್ಥಿತಿ ಹೇಗೆಂದು ಹೇಳಲಾಗದು. ಹಾಗಾಗಿ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆ ಸಂಪಾದಿಸುವಂತಾಗಬೇಕು. ಬಿಸಿಲಿಗೆ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಮಡಿಕೇರಿ ಬಳಿಯ ಕೂಟುಹೊಳೆಯಲ್ಲಿಯೂ ನೀರು ಕಡಿಮೆಯಾಗಿದೆ. ಹಾಗಾಗಿ ಎಲ್ಲರೂ ನೀರನ್ನು ಮಿತವಾಗಿ…

Read More

ಸುಂಟಿಕೊಪ್ಪ ಏ.21 : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸುಂಟಿಕೊಪ್ಪ ವ್ಯಾಪ್ತಿಯ ಸರಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳು ಉತ್ತಮ ಸಾಧನೆ ಮಾಡಿರುವುದು ಪೋಷಕರಲ್ಲಿ ಹಾಗೂ ಕಾಲೇಜಿನ ಉಪನ್ಯಾಸಕರಲ್ಲಿ ಹರ್ಷ ಉಂಟು ಮಾಡಿದೆ. ಸರಕಾರಿ ಪದವಿಪೂರ್ವ ಕಾಲೇಜಿನ ಒಟ್ಟು 86 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು 70 ಮಕ್ಕಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 32ಮಂದಿ, ಕಲಾವಿಭಾಗದಲ್ಲಿ 21 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 22ಮಂದಿ ಉತ್ತೀರ್ಣರಾಗಿದ್ದಾರೆ. ಮತ್ತಿಕಾಡು ಕೃಷ್ಣತೋಟದಲ್ಲಿ ಕೂಲಿ ಕಾರ್ಮಿಕರಾಗಿರುವ ಮೂಲತಃ ಚಾಮರಾಜನಗರ ನಿವಾಸಿಯಾದ ಮಹದೇವ ನಾಯಕ ಮಹದೇವಮ್ಮ ದಂಪತಿಗಳ ಪುತ್ರಿ ಚಾಂದನಿ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 562 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಚಾಂದನಿಯ ಅಕ್ಕ ಪ್ರೀತಿ ಕೂಡ 2 ವರ್ಷಗಳ ವಾಣಿಜ್ಯ ವಿಭಾಗದಲ್ಲೇ ಅತೀ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ ಸ್ಥಾನಪಡೆದುಕೊಂಡಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ ಮಹದೇವನಾಯಕ್, ಪುತ್ರಿಯ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಇಬ್ಬರು ಪುತ್ರಿಯರನ್ನು ವಿವಾಹ ಮಾಡಿಕೊಟ್ಟಿರುವ ಮಹದೇವ ನಾಯಕ ಅವರು ಚಾಂದನಿಯ ತಂಗಿ…

Read More

ಮಡಿಕೇರಿ ಏ.21 : ಪವಿತ್ರವಾದ ಈದುಲ್ ಫಿತ್ರ್ ಹಬ್ಬವನ್ನು ನಾಳೆ (ಏಪ್ರಿಲ್ 22)ಆಚರಿಸಲಾಗುತ್ತದೆ. ಇದರ ಅಂಗವಾಗಿ ಮಡಿಕೇರಿ ನಗರದ ಬದ್ರಿಯಾ ಮಸೀದಿಯಲ್ಲಿ ಬೆಳಿಗ್ಗೆ 7:30 (ಹಾಫಿಝ್ ಫಝ್ಲರಹ್ಮಾನ್ ಸಖಾಫಿ)ಬಟ್ಕಳ್ ಮಸೀದಿಯಲ್ಲಿ 8:30(ಮುಹಮ್ಮದ್ ಅಲಿ ಲತೀಫಿ)ಹಾಗೂ ಎಂ.ಎಂ.ಮಸೀದಿಯಲ್ಲಿ 9:00 (ಹಮೀದ್ ಮದನಿ)ನೇತೃತ್ವದಲ್ಲಿ ಈದ್ ನಮಾಝ್ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಪೂಂಚ್ ಏ.21 : ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಐವರು ಯೋಧರ ಸಾವಿಗೆ ಕಾರಣರಾದ ಭಯೋತ್ಪಾದಕರ ವಿರುದ್ಧ ಸೇನಾಪಡೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಅಡಗಿ ಕುಳಿತಿರುವ ಉಗ್ರರಿಗಾಗಿ ಸೇನಾಪಡೆಗಳು ಶುಕ್ರವಾರ ಭಾರೀ ಕಾರ್ಯಾಚರಣೆ ನಡೆಸುತ್ತಿವೆ. ದಾಳಿ ನಡೆದ ಸ್ಥಳದ ಸುತ್ತಲೂ ಭದ್ರತಾ ಪಡೆ ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಉಗ್ರರ ಪತ್ತೆಗೆ ಡ್ರೋಣ್’ಗಳು, ಸ್ನಿಫ್ಪರ್ ಡಾಗ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಗಡಿ ಜಿಲ್ಲೆಗಳಾದ ರಜೌರಿ ಹಾಗೂ ಪೂಂಚ್ ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಕಣ್ಗಾವಲನ್ನು ಹೆಚ್ಚಿಸಲಾಗಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ಗುರುವಾರ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಭಿಂಬರ್ ಗಲಿ ಪ್ರದೇಶದ ಬಳಿ ಸೇನಾ ವಾಹನವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಐವರು ಯೋಧರು ಹುತಾತ್ಮರಾಗಿ, ಓರ್ವ ಯೋಧ ಗಾಯಗೊಂಡಿದ್ದರು. ದಾಳಿಯಲ್ಲಿ ಮೃತಪಟ್ಟ ಯೋಧರನ್ನು ರಾಷ್ಟ್ರೀಯ ರೈಫಲ್ಸ್ ಘಟಕದ ಮನ್ದೀಪ್…

Read More

ಕಲ್ಲು ಗಣಪತಿ ದೇವಾಲಯವು ಶಿರಿಯಾರ ಗ್ರಾಮದ ಅತ್ಯಂತ ಹಳೆಯ ಮತ್ತು ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯವು ಈಶ್ವರ, ಪಾರ್ವತಿ ಮತ್ತು ಗಣೇಶ ದೇವರನ್ನು ಪೂಜಿಸುತ್ತದೆ. ದೇವಾಲಯವು ಒಂದು ಬಂಡೆಯ ಗುಹೆಯೊಳಗೆ ನೆಲೆಗೊಂಡಿದೆ. ಇದು ಒಂದು ಬದಿಯಲ್ಲಿ ಬಂಡೆಗಳಿಂದ ಮತ್ತು ಇನ್ನೊಂದು ಬದಿಯಲ್ಲಿ ನದಿಯಿಂದ ಆವೃತವಾಗಿದೆ. ಗುಹೆಯೊಳಗಿನ ಸಣ್ಣ ದೇವಾಲಯವನ್ನು ಬಂಡೆಗಳಿಂದ ನಿರ್ಮಿಸಲಾಗಿದೆ, ಆದರೆ ಈ ದೇವಾಲಯವನ್ನು ಯಾರು ನಿರ್ಮಿಸಿದ್ದಾರೆಂದು ಯಾರಿಗೂ ತಿಳಿದಿಲ್ಲ. ಇಡೀ ಪ್ರದೇಶವು ಚಿಕ್ಕದಾದ ಹಚ್ಚ ಹಸಿರಿನ ಕಾಡು ಮತ್ತು ಭತ್ತದ ಗದ್ದೆಗಳಿಂದ ಆವೃತವಾಗಿದೆ. ಸ್ಥಳವನ್ನು ತಲುಪಲು ನೀವು ಗದ್ದೆಗಳ ಮೂಲಕ ಹಾದುಹೋಗುವ ಕಿರಿದಾದ ಮಣ್ಣಿನ ಹಾದಿಯ ಮೂಲಕ ಹಾದು ಹೋಗಬೇಕು. ಬಂಡೆಗಳ ಸಮೀಪವಿರುವ ಜಲಸಂಪನ್ಮೂಲವು ಕ್ಷೇತ್ರದ ಅಗತ್ಯಗಳನ್ನು ಪೂರೈಸುತ್ತದೆ. ಒಳಗಿನ ಗುಹೆಯು ಉಸಿರುಕಟ್ಟುವ ಬಂಡೆಗಳ ರಚನೆಗಳನ್ನು ಹೊಂದಿದೆ. ಇದು ದೇವಾಲಯದ ಚಟುವಟಿಕೆಗಳನ್ನು ನಿರ್ವಹಿಸುವ ದಿವಂಗತ ತಿಮ್ಮಪ್ಪ ಅಡಿಗ ಅವರ ಕುಟುಂಬದಿಂದ ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ ಎಂಬ ಹೆಸರನ್ನು ಹೊಂದಿದೆ. ಈ ದೇವಾಲಯವು ಶಿವ, ಪಾರ್ವತಿ ಮತ್ತು ಗಣೇಶನ ಮೂರು ಪ್ರತಿಮೆಗಳನ್ನು…

Read More

ಮಡಿಕೇರಿ ಏ.21 :   ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್  ಮಡಿಕೇರಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ನಗರದ ಮಾರುಕಟ್ಟೆ ಹಾಗೂ  ಮುಖ್ಯರಸ್ತೆಯಲ್ಲಿ ರೋಡ್ ಶೋ ಮೂಲಕ  ಮತಯಾಚಿಸಿದರು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

Read More

ಮಡಿಕೇರಿ ಏ.21 :  ಕೊಡಗಿಗೆ ಉತ್ತಮ ಮಳೆಯಾಗಲಿ ಎಂದು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಾಸಕ ಕೆ.ಜಿ.ಬೋಪಯ್ಯ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದಭ೯  ಮಾತನಾಡಿದ ಕೆ.ಜಿ.ಬೋಪಯ್ಯ, ಈ ವೇಳೆಗಾಗಲೇ ಮಳೆ ಬಂದು ಭೂಮಿ ತಂಪಾಗಬೇಕಾಗಿತ್ತು.ಆದರೆ ಮಳೆ ಕಾಣದೆ ಜನ ಕಂಗಾಲಾಗಿದ್ದಾರೆ. ಕಾಫಿ ಗಿಡಗಳು ಒಣಗುತ್ತಿದೆ. ಕೖಷಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಶ್ರೀ ಓಂಕಾರೇಶ್ವರ  ದೇವಾಲಯದಲ್ಲಿ  ಮಳೆ ಬರಲಿ ಎಂದು ಪೂಜೆ ಸಲ್ಲಿಸಿದ್ದೇನೆ. ಮಳೆಯ ಅಗತ್ಯ ತುತಾ೯ಗಿ ಇದೆ ಎಂದರು. ನಗರಸಭೆ ಅಧ್ಯಕ್ಷೆ  ಅನಿತಾ ಪೂವಯ್ಯ, ಪ್ರಮುಖರಾದ ಜಿ.ರಾಜೇಂದ್ರ, ಎಸ್.ಎಸ್.ಸಂಪತ್ ಕುಮಾರ್, ರಮೇಶ್ ಹೊಳ್ಳ , ಬಿ.ಕೆ .ರವೀಂದ್ರ ರೈ,ಮಹೇಶ್ ಜೈನಿ, ಕವನ್, ಉಮೇಶ್ ಸುಬ್ರಹ್ಮಣಿ, ಬಿ.ಕೆ. ಅರುಣ್ ಕುಮಾರ್ ಸೇರಿದಂತೆ ಮತ್ತಿತರು ಇದ್ದರು.

Read More

ಮಡಿಕೇರಿ ಏ.19 : ಹಾಡಹಗಲೇ ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರ ಗಂಭೀರ ಗಾಯಗೊಂಡಿರುವ ಘಟನೆ ಇಂಜಿಲಗೆರೆಯ ಗ್ರಾಮದ ಕೌರಿ ಎಂಬಲ್ಲಿ ನಡೆದಿದೆ. ಅಮ್ಮತ್ತಿ ಸಮೀಪದ ಕೌರಿ ನಿವಾಸಿ ಕಾಫಿ ಬೆಳೆಗಾರ ಉದ್ದಪಂಡ ಚಂಗಪ್ಪ (48) ಗಾಯಗೊಂಡ ವ್ಯಕ್ತಿ. ಮನೆಯಿಂದ ಕಾಫಿ ತೋಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಸಂದರ್ಭ ಕಾಡಾನೆಯೊಂದು ಹಿಂಬದಿಯಿಂದ ಬಂದು ಚಂಗಪ್ಪ ಅವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಕಾಡಾನೆ ದಾಳಿಯಿಂದ ಚಂಗಪ್ಪ ಅವರ ಸೊಂಟಕ್ಕೆ, ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅಮ್ಮತ್ತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

Read More