ಲೇಖಕ: admin

ಮಡಿಕೇರಿ ಏ.13 : ವಿಧಾನಸಭಾ ಚುನಾವಣೆ ಸಂಬಂಧ ಕೊಡಗು ಜಿಲ್ಲೆಗೆ ವೆಚ್ಚ ವೀಕ್ಷಕರಾಗಿ ನೇಮಕವಾಗಿರುವ ಶಲಭ್ ಕಟಿಯಾರ್ (ಐಆರ್‍ಎಸ್) (ಸಿ ಮತ್ತು ಸಿಇ) ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಂದ ಹಲವು ಮಾಹಿತಿ ಪಡೆದರು. ವೆಚ್ಚಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿರುವ ಕಚೇರಿಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಭೇಟಿ ನೀಡಿ ಮಾಹಿತಿ ನೀಡಬಹುದಾಗಿದೆ. ಅಥವಾ ಸಂಚಾರಿ ದೂರವಾಣಿ ಸಂಖ್ಯೆ 9353190721 ಸಂಪರ್ಕಿಸಬಹದಾಗಿದೆ ಎಂದು ವೆಚ್ಚ ವೀಕ್ಷಕರ ಸಂಪರ್ಕ ಅಧಿಕಾರಿ ಎಚ್.ಸಿ.ಗಿರೀಶ್ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಏ.13 : ಕಡಗದಾಳು ಗ್ರಾಮದ ಆದಿ ಶ್ರೀ ಪನ್ನಂಗಾಲತಮ್ಮೆ ದೇವಾಲಯದ ವಾರ್ಷಿಕ ಉತ್ಸವವು ಏ.15 ರಿಂದ 17ರ ವರೆಗೆ ನಡೆಯಲಿದೆ. ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದೆ. ಏ.15 ರಂದು ಬೆಳಿಗ್ಗೆ 7 ಗಂಟೆಗೆ ದೇವರ ಭಂಡಾರ ಏರಿಸುವುದು, ಬೆಳಿಗ್ಗೆ 11 ಗಂಟೆಯಿಂದ ಅಮ್ಮೆ ದೇವರ ಕೊಡೆ, ಚೌವುಂಡಿ, ಅಯ್ಯಪ್ಪ, ಹಾಗೂ ಕುರುಂದ ದೇವರುಗಳ ಉತ್ಸವ ನಡೆಯಲಿದ್ದು, ನಂತರ ಎತ್ತು ಪೋರಾಟ, ಕುರುಂದಕಳಿ, ರಾತ್ರಿ ಚವುಂಡಿ ಬಾರಣಿ ನೆರವೇರಲಿದೆ. ಏ.16 ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ನಂತರ ದೇವಿಯ ಅವಭ್ರತ ಸ್ನಾನ ನೆರವೇರಲಿದ್ದು, ಏ.17 ರಂದು ಬೆಳಿಗ್ಗೆ ದೇವರ ನುಡಿ ಕೇಳುವುದು, ಹರಿಕೆ ಒಪ್ಪಿಸುವುದು, ಭಂಡಾರ ನೋಡುವ ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಸಮಿತಿ ಕೋರಿದೆ.

Read More

ಮಡಿಕೇರಿ ಏ.13 : ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ.ಕೃಷ್ಣಮೂರ್ತಿ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವನ್ನು ವಿಹೆಚ್‍ಪಿಯ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ. ಚೆಟ್ಟಳ್ಳಿ ಸಮೀಪ ಅಬ್ಯಾಲ ಎಂಬಲ್ಲಿ ಕೃಷ್ಣಮೂರ್ತಿಯವರು ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೆ ಯತ್ನಸಿದ್ದಾರೆ. ಆದರೆ ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೃತ್ತಿಪರ ಅಥವಾ ಸಂಘಟನೆಯ ದ್ವೇಷ ಯಾವುದೇ ಇದ್ದರು ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ. ಗುಂಡು ಹಾರಿಸಿದವರನ್ನು ಶೀಘ್ರ ಬಂಧಿಸಬೇಕು ಮತ್ತು ಕೃಷ್ಣಮೂರ್ತಿ ಅವರಿಗೆ ಪೊಲೀಸರು ಸೂಕ್ತ ಭದ್ರತೆಯನ್ನು ನೀಡಬೇಕು ಎಂದು ವಿಹೆಚ್‍ಪಿ ಒತ್ತಾಯಿಸಿದೆ. ದುಷ್ಕರ್ಮಿಗಳ ಬಂಧನವಾಗದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.  

Read More

ಮಡಿಕೇರಿ ಏ.13 : ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪಿ.ಕೃಷ್ಣಮೂರ್ತಿ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವನ್ನು ಮಡಿಕೇರಿ ನಗರ ಬಿಜೆಪಿ ಯುವ ಮೋರ್ಚಾ ತೀವ್ರವಾಗಿ ಖಂಡಿಸಿದೆ. ಗುಂಡು ಹಾರಿಸಿದ ಆರೋಪಿಗಳನ್ನು ಪೊಲೀಸರು ಶೀಘ್ರ ಬಂಧಿಸಬೇಕು ಮತ್ತು ಜಿಲ್ಲೆಯ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಯುವ ಮೋರ್ಚಾದ ನಗರಾಧ್ಯಕ್ಷ ನವೀನ್ ಪೂಜಾರಿ ಒತ್ತಾಯಿಸಿದ್ದಾರೆ.

Read More

ವರಂಗ ಕಾರ್ಕಳ ತಾಲೂಕಿನಲ್ಲಿರುವ ಒಂದು ಜೈನ ಯಾತ್ರಾ ಸ್ಥಳ. ಎಲ್ಲಿದೆ ವರಂಗ…? ವರಂಗ ಇರುವುದು ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿ.ಮೀ. ದೂರದಲ್ಲಿ. ಕಾರ್ಕಳದಿಂದ ಸುಮಾರು 25 ಕಿ.ಮೀ., ಉಡುಪಿಯಿಂದ 37 ಕಿ.ಮೀ. ಮಂಗಳೂರಿನಿಂದ 85 ಕಿ.ಮೀ. ದೂರ. ಸಮಯವಿದ್ದರೆ, ಕೆರೆಯ ಪಕ್ಕವೇ ಇರುವ ಬೇಡ ರಾಜನ ಅರಮನೆಯ ಕುರುಹುಗಳಿರುವ ಬೆಟ್ಟವನ್ನು ಹತ್ತಿಳಿಯಬಹುದು. ವರಂಗ ಕೆರೆ ಬಸದಿ :  ಒಂದು ಕಡೆ ಎತ್ತರಕ್ಕೆ ಉದ್ದಾನುದ್ದ ಹರಡಿ ನಿಂತ ಪಶ್ಚಿಮ ಘಟ್ಟದ ಪಸಿರುಡೆಯ ಸೊಬಗು. ಮತ್ತೊಂದು ಕಡೆಯಲ್ಲಿ ಹಚ್ಚ ಹಸಿರಿನ ಗದ್ದೆ, ತೋಟದ ಬೆಡಗು. ನಡುವೆ ವಿಶಾಲ ಕೆರೆಯ ಮಧ್ಯೆ ಫಳಫಳಿಸುವ ಪದ್ಮಾವತಿ ದೇವಿಯ ಬಸದಿ. ನೀರಿನಲ್ಲಿ ಅಲ್ಲಾಡುವ ಮಂದಿರದ ಚಿತ್ರಕ್ಕೆ ಕಮಲದ ಹೂವುಗಳ ಸಿಂಗಾರದೈಸಿರಿ. ಇಂತಹುದೊಂದು ಅಪರೂಪದ, ಇಡೀ ದಕ್ಷಿಣ ಭಾರತದಲ್ಲಿ ಮತ್ತೆಲ್ಲೂ ಸಿಗದಂಥ ಸೌಂದರ್ಯ ಮತ್ತು ದೈವಿಕ ಶಕ್ತಿಯ ಪರಮ ಕ್ಷೇತ್ರವನ್ನು ನೋಡಬೇಕಾದರೆ ನೀವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವರಂಗ ಎಂಬ ಪುಟ್ಟ ಹಳ್ಳಿಗೆ ಬರಬೇಕು.…

Read More

ಮಡಿಕೇರಿ ಏ.13 : ಮಡಿಕೇರಿಯ ಬ್ರೈನೋಬ್ರೈನ್ ಅಬಾಕಸ್ ವಿದ್ಯಾರ್ಥಿಗಳಿಗೆ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಪದವಿ ಪ್ರದಾನ ಮಾಡಲಾಯಿತು. ರಾಜ್ಯ ಬ್ರೈನೋಬ್ರೈನ್ ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕ ನೀಲ್ ಕಮಲ್ ಸ್ವರ್ಣಾಕರ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು. ಮಡಿಕೇರಿ ಕೇಂದ್ರದಲ್ಲಿ ಪದವಿ ಪ್ರದಾನ ಸ್ವೀಕರಿಸಿದ ವಿದ್ಯಾರ್ಥಿಗಳ ಸಂಖ್ಯೆ ವಿಶ್ವದ ಇತರೆ ಬ್ರೈನೋಬ್ರೈನ್ ಕೇಂದ್ರಗಳಲ್ಲೇ ಅತ್ಯಧಿಕ ಮತ್ತು ಎಲ್ಲಾ ಕೇಂದ್ರಗಳಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ಮುಖ್ಯಸ್ಥೆ ಹಾಗೂ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪೊಷಕರು ಮಾತನಾಡಿ, ಸ್ಮರಣಾ ಶಕ್ತಿ, ಕಲ್ಪನಾ ಶಕ್ತಿ, ಆತ್ಮ ವಿಶ್ವಾಸ, ಚುರುಕುತನ, ಬಹುಕಾರ್ಯ ಕೌಶಲ್ಯ, ಛಾಯಾಗ್ರಹಣದ ಬಗ್ಗೆ ಆಸಕ್ತಿ, ಹೆಚ್ಚಾಗಿ ಮಕ್ಕಳ ಕನಸಿಗೆ ರೆಕ್ಕೆ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ::: ಪದವಿ ಪ್ರದಾನ ಸ್ವೀಕರಿಸಿದ ವಿದ್ಯಾರ್ಥಿಗಳು ::: ಹೆಚ್.ಎಸ್.ಆರ್ಯ, ಎಂ.ಎಸ್.ನಿತೀಶ್, ಎಂ.ಜಿ.ಧನ್ವಿತ್, ಹೆಚ್.ಎಲ್.ಆದರ್ಶ್, ಕೆ.ಮಾನ್ವಿಕ್ ಮೌರ್ಯ, ಬಿ.ಆರ್.ಗನ್ಯಶ್ರೀ, ಆನ್ಶಿಯಾ ಡಿ ಕ್ರೂಜ್, ಎನ್.ಕೆ.ಪುನೀತ್, ಹೆಚ್.ಎಲ್.ಅಶ್ರಿತ್, ಎಂ.ಎನ್.ನೀಲ್,…

Read More

ಮಡಿಕೇರಿ ಏ.13 :  ಕೊಡಗು ಐರಿ ಸಮುದಾಯಗಳ ಮಧ್ಯೆ ನಡೆಯುವ ಒಂಭತ್ತನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಬಿಡುಗಡೆಗೊಳಿಸಲಾಯಿತು. ಕಲಾವಿದ ಐಮಂಡ ರೂಪೇಶ್ ನಾಣಯ್ಯ  ಲೋಗೋ ವಿನ್ಯಾಸ ಮಾಡಿದ್ದಾರೆ.  ಐರಿ ಜನಾಂಗದ ಸಂಸ್ಕೃತಿಕ ಹೆಗ್ಗುರುತಾಗಿರುವ ಐನ್ ಮನೆಯನ್ನು ಮುಖ್ಯ ಥೀಂ ಆಗಿಟ್ಟುಕೊಂಡು ಲೋಗೋ ರಚಿಸಲಾಗಿದೆ.  ಐರಿ ಜನಾಂಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಏಳು ಬಾರಿ ಚಾಂಪಿಯನ್ ಆಗಿದ್ದ ಬಲ್ಲಮಾವಟಿ ಐರೀರ ತಂಡದ ಹೊಡಿ ಬಡಿ ಆಟಗಾರ ಚಂಗಪ್ಪ ಲೋಗೋ ಬಿಡುಗಡೆ ಮಾಡಿದರು. ಈ ಸಂದರ್ಭ ಐನ್ ಮನೆ ಟ್ರೋಫಿ ಕ್ರಿಕೆಟ್ ಆಯೋಜನಾ ಸಮಿತಿ ಕಾರ್ಯದರ್ಶಿ ಮುಲ್ಕೈರಿರ ರೋಷನ್ ಸುಬ್ಬಯ್ಯ, ಸದಸ್ಯರಾದ ಮುಲ್ಲೈರಿರ ಮೋಹನ್ ಗಣಪತಿ, ಐಮಣಿಯಂಡ ಕಿಶೋರ್ ಕಾವೇರಪ್ಪ, ಕರಕುಶಲಕರ್ಮಿ ಐನಂಗಡ ಉದಯ್, ಮುಲ್ಕೈರಿರ ಸುಬ್ಬಯ್ಯ, ಆಯಪಂಡ ದಿಲನ್ ದೇವಯ್ಯ, ಕುಂದೈರಿರ ರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಐನ್ ಮನೆ ಟ್ರೋಫಿ -2023 :  ಐನ್ ಮನೆ ಟ್ರೋಫಿ -2023 ಇದೇ…

Read More

ಮಡಿಕೇರಿ ಏ.13 : ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾಧ್ಯಕ್ಷ ಹಾಗೂ ವಕೀಲ ಪಿ.ಕೃಷ್ಣಮೂರ್ತಿ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವನ್ನು ಮಡಿಕೇರಿ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ. ಗುoಡು ಹಾರಿಸಿದ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕೆoದು ಒತ್ತಾಯಿಸಿ ಕಲಾಪವನ್ನು ನಡೆಸದೆ ಕೋರ್ಟ್ ಎದುರು ವಕೀಲರು ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾದ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ಹಾಗೂ ಪ್ರಮುಖರು ಸೂಕ್ತ ತನಿಖೆಗಾಗಿ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

Read More

ಮಡಿಕೇರಿ ಏ.13 : ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುವ ಕೆದಕಲ್ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಭದ್ರಕಾಳೇಶ್ವರಿ ದೇವಿಯ ಉತ್ಸವ ಆರಂಭಗೊಂಡಿದ್ದು, ಏ.16 ರಂದು ದೊಡ್ಡಹಬ್ಬ ನಡೆಯಲಿದೆ. ಅಂದು ಬೆಳಿಗ್ಗೆ 8.30 ಗಂಟೆಗೆ ನಾಡು ಹತ್ತುವುದರಿಂದ ಪ್ರಾರಂಭಗೊಂಡು ಕೊಂಬಾಟ್, ಚೌರಿಯಾಟ್, ಬಿಲ್ಲಾಆಟ್ ನಂತರ ದೇವರಿಗೆ ಭಂಡಾರ, ಹರಕೆ ಹಾಕುವುದು, ಭಕ್ತಾಧಿಗಳಿಗೆ ದೇವರ ಪ್ರಸಾದ ವಿನಿಯೋಗ, ಬಾಳೆಸೂರೆ ಎಸೆಯುವುದು, ಕಾಳೆ ಓಡಿಸುವುದು, ತೆಂಗಿನಕಾಯಿ ಗುಂಡು ಹೊಡೆಯುವುದು ಹಾಗೂ ದೇವಿಯ ಇತರೆ ಕೈಂಕರ್ಯ ನಡೆಯಲಿದೆ. ಏ.17 ರಂದು ಚಿಕ್ಕಹಬ್ಬ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಮೂರು ತರಹದ ಕುಣಿತ, ಭಂಡಾರ ಹಾಕುವುದು ಮತ್ತು ಕೊಂಬು ಅರ್ಪಿಸುವುದು. ಏ.18 ರಂದು ಭಂಡಾರ ಹಾಕುವುದು, ತಪ್ಪು ಹಣ ಒಪ್ಪಿಸುವುದು, ಶುದ್ಧ ಕಲಶ ಹಾಗೂ ಮಹಾ ಪೂಜೆಯೊಂದಿಗೆ ಉತ್ಸವ ಮುಕ್ತಾಯವಾಗಲಿದೆ ಎಂದು ಅಧ್ಯಕ್ಷ ಮುಕ್ಕಾಟಿರ ಅಶ್ವಿನ್ ಹಾಗೂ ತಕ್ಕ ಮುಖ್ಯಸ್ಥರು ಮತ್ತು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

Read More

ಮಡಿಕೇರಿ ಏ.13 : ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾಧ್ಯಕ್ಷ ಹಾಗೂ ವಕೀಲ ಪಿ.ಕೃಷ್ಣಮೂರ್ತಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ಬುಧವಾರ ರಾತ್ರಿ 11.30 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕುಶಾಲನಗರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಡಿಕೇರಿಯ ನಿವಾಸಕ್ಕೆ ಆಗಮಿಸುತ್ತಿದ್ದಾಗ ಚೆಟ್ಟಳ್ಳಿ ಸಮೀಪ ಗುಂಡಿನ ದಾಳಿಯಾಗಿದೆ. ಕಾರಿಗೆ ಗುಂಡು ತಗುಲಿದ್ದು, ಕೃಷ್ಣಮೂರ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಿಡಗಳ ಮರೆಯಿಂದ ಆರೋಪಿ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಹಾಗೂ ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರನ್ನು ಚೆಟ್ಟಳ್ಳಿಯ ನಿವಾಸಕ್ಕೆ ಬಿಟ್ಟು ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸಿದಾಗ ಘಟನೆ ನಡೆದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More