ಮಡಿಕೇರಿ ಮೇ 1 : ಆಮ್ ಆದ್ಮಿ ಪಕ್ಷದ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಕೆ.ಪಿ.ಬೋಪಣ್ಣ ಪರವಾಗಿ ಕುಶಾಲನಗರ, ಸುಂಟಿಕೊಪ್ಪ, ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಯಿತು. ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕೂಡಿಗೆ, ಕೂಡುಮಂಗಳೂರು, ಗುಡ್ಡೆ ಹೊಸೂರು, ಅಂಧಗೋವೆ ಕಡೆಗಳಲ್ಲಿ ಪಕ್ಷದ ಯೋಜನೆಗಳ ಕುರಿತು ಜನರಿಗೆ ತಿಳಿಸಿ ಅಭ್ಯರ್ಥಿಯ ಗೆಲುವಿಗೆ ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಕೆ.ಪಿ.ಬೋಪಣ್ಣ ಕೊಡಗಿನ ಸಮಗ್ರ ಅಭಿವೃದ್ಧಿಗಾಗಿ ಕಾಫಿಯ ಮಾರುಕಟ್ಟೆ, ಗುಣಮಟ್ಟ ನಿಯಂತ್ರಣ ಮತ್ತು ಸಂಶೋಧನೆಗೆ ಅನುಕೂಲವಾಗುವಂತೆ ಹೊಸ ಉಪಕ್ರಮ, ಅಕ್ರಮ ಲಾಗಿಂಗ್, ಗಣಿಗಾರಿಕೆ, ಕಳ್ಳಬೇಟೆ ಮತ್ತು ಅತಿಕ್ರಮಣ ತಡೆಯಲು ಕಠಿಣ ಕ್ರಮಗಳು, ಪರಿಸರ ಪ್ರವಾಸೋದ್ಯಮವನ್ನು ಹೆಚ್ಚಿಸುವುದು ಮತ್ತು ಸ್ಥಳೀಯರಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು, ಸಶಸ್ತ್ರ ಸೇವೆಗಳಿಗೆ ಪ್ರದೇಶದ ವಿಶೇಷ ಕೊಡುಗೆಯನ್ನು ಗುರುತಿಸಲು ಯುದ್ಧ ಸ್ಮಾರಕ, ಕಾಫಿ ಬೆಳೆಗಾರರಿಗೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ವಂತ ಉಪಯೋಗಕ್ಕೆ ಮರ ಕಡಿಯಲು ಸುಲಭದಲ್ಲಿ ಅನುಮತಿ ನೀಡಲು ಆದೇಶ ಪಡಿಸಲು ಕ್ರಮ ಕೈಗೊಳ್ಳಲಾಗುವುದು, ಅರಣ್ಯ ರಕ್ಷಣೆ ಕಾಯ್ದೆ ಅಡಿಯಲ್ಲಿ ಸಿಗಬೇಕಾದಂತಹ ಹಕ್ಕು…
ಲೇಖಕ: admin
ಮಡಿಕೇರಿ ಮೇ 1 : ವಿಧಾನಸಭಾ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ನಗರದ ಸಂತ ಜೋಸೆಫರ ಶಾಲೆ ಹಾಗೂ ವಿರಾಜಪೇಟೆಯ ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ಎರಡನೇ ಸುತ್ತಿನ ತರಬೇತಿ ಕಾರ್ಯಗಾರವು ಜರುಗಿತು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿರಾಜಪೇಟೆಯ ಸಂತ ಅನ್ನಮ್ಮ ಶಾಲಾ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿ ವಿಧಾನಸಭಾ ಚುನಾವಣೆ ಸಂಬಂಧ ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚುತಪ್ಪದೆ ಪಾಲಿಸಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡಬಾರದು ಎಂದರು. ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್, ಚುನಾವಣೆ ದಿನದಂದು ಅಣಕು ಮತದಾನ, ಮತದಾನ, ಮತದಾನ ಪೂರ್ಣಗೊಂಡ ನಂತರ ಅನುಸರಿಸಬೇಕಾದ ಕ್ರಮಗಳು, ಡಿಮಸ್ಟರಿಂಗ್ ಮತ್ತಿತರ ಕಾರ್ಯಗಳನ್ನು ನಿಯಮಾನುಸಾರ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದರು. ಜಿಲ್ಲೆಯಲ್ಲಿ ಒಟ್ಟು 542 ಮತಗಟ್ಟೆಗಳಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 269 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, ಮತಗಟ್ಟೆಗಳಿಗೆ ನಿಯೋಜಿಸುವ…
ಮಡಿಕೇರಿ ಮೇ 1 – ಮಡಿಕೇರಿಯ ಜನರಲ್ ತಿಮ್ಮಯ್ ಕ್ರೀಡಾಂಗಣದಲ್ಲಿ ಕತ್ತಲಾವರಿಸುತ್ತಿದ್ದಂತೆಯೇ ನೂರಾರು ಜನ ಮೊಬೈಲ್ ಲೈಟ್ ಬೆಳಗುತ್ತಾ ನಾನೂ ಮತ ಹಾಕುವೆ ಎಂಬ ಸಂದೇಶ ಸಾರಿದರು. ಮಳೆಯ ಸಿಂಚನದ ನಡುವೇ ಮತದಾನದ ಮಹತ್ವವನ್ನು ವಿಭಿನ್ನವಾಗಿ ಸಾರಿದ ಕಾಯ೯ಕ್ರಮ ವಿನೂತನ ರೀತಿಯಲ್ಲಿ ಗಮನ ಸೆಳೆಯಿತು. ಕೊಡಗು ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ಮಡಿಕೇರಿ ರೋಟರಿ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ವುಡ್ಸ್ ಸಹಯೋಗದೊಂದಿಗೆ, ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೊಬೈಲ್ ಲೈಟ್ ಬೆಳಗಿಸಿ ನಾನೂ ಮತಹಾಕುವೆ ಎಂಬ ಸಂದೇಶ ಸಾರುವ ಕಾಯ೯ಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಮಡಿಕೇರಿಯ ಜಿಲ್ಲಾ ಕ್ರೀಡಾಂಗಣವಾದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನೂರಾರು ಜನ ಸೇರಿ ,ಸಾಲಾಗಿ ನಿಗಧಿತ ಸ್ಥಳದಲ್ಲಿ ನಿಂತು ಮೊಬೈಲ್ ಲೈಟ್ ಬೆಳಗಿಸಿ ನಾನೂ ವೋಟ್ ಹಾಕುವೆ ಎಂಬ ಸಂದೇಶ ಸಾರಿದರು. ಮತದಾನದ ಮಹತ್ವದ ಕುರಿತಂತೆ ಮಾತನಾಡಿದ…
ಸೋಮವಾರಪೇಟೆ ಮೇ 1 : ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಪಂಡ ಮುತ್ತಪ್ಪ ತಮ್ಮ ಕಾರ್ಯಕರ್ತರೊಂದಿಗೆ ಬಿರುಸಿನ ಪ್ರಚಾರ ನಡೆಸಿದರು. ಕಳೆದ ಹಲವಾರು ವರ್ಷಗಳ ದುರ್ಬಲ ಆಡಳಿತದಿಂದ ಬೇಸತ್ತಿರುವ ಕ್ಷೇತ್ರದ ಜನತೆ ಈ ಭಾರಿ ಜೆಡಿಎಸ್ ಪರವಾಗಿದ್ದಾರೆ. ಆದ್ದರಿಂದ ಗೆಲುವು ನಮ್ಮದೆ ಎಂದು ನಾಪಂಡ ಮುತ್ತಪ್ಪ ವಿಶ್ವಾಸ ವ್ಯಕ್ತಡಿಸಿದರು. ಈ ಸಂದರ್ಭ ಜೆಡಿಎಸ್ ಜಿಲ್ಲಾ ಅಧ್ಯಕ್ಷೆ ರುಬೀನಾ, ತಾಲೂಕು ಅಧ್ಯಕ್ಷ ನಾಗರಾಜ್, ಕ್ಷೇತ್ರ ಸಮಿತಿ ಅಧ್ಯಕ್ಷ ಕೆ. ಟಿ.ಪರಮೇಶ್, ಪ್ರಚಾರ ಸಮಿತಿ ಅಧ್ಯಕ್ಷ ಪ್ರವೀಣ್ ಹಾಗೂ ಮುಂತಾದವರು ಹಾಜರಿದ್ದರು.
ಮಡಿಕೇರಿ ಮೇ 1 : ಬ್ರಹ್ಮಾಕುಮಾರೀಸ್ ಮಡಿಕೇರಿ ಶಾಖೆ ವತಿಯಿಂದ ಮೇ 1 ರಿಂದ 5ರ ವರೆಗೆ ಮಕ್ಕಳಿಗಾಗಿ ವಿಶೇಷ ಧ್ಯಾನ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 3 ರಿಂದ 5.30ರ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ಸಕಾರಾತ್ಮಕ ಬದಲಾವಣೆ ಹಾಗೂ ಸಕಾರಾತ್ಮಕ ಚಿಂತನೆಗಳಿಗೆ ಪ್ರೋತ್ಸಾಹ, ಅವರ ಜೀವನದಲ್ಲಿ ಕ್ರಿಯಾತ್ಮಕವಾದ ಮನೋಬಲದ ಬುದ್ದಿಗೆ ಪ್ರೋತ್ಸಾಹ, ನೆನಪಿನ ಶಕ್ತಿ ಹಾಗೂ ಏಕಾಗ್ರತೆಗೆ ಕ್ರಿಯಾ ಚುಟುವಟಿಕೆಗಳು ಮೌಲ್ಯವರ್ಧಕ ಆಟಗಳು, ಇತ್ಯಾದಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಚುಟುವಟಿಕೆಗಳು ನಡೆಯಲಿದೆ. 8 ರಿಂದ 12 ವರ್ಷದೊಳಗಿನ 40 ಮಕ್ಕಳಿಗೆ ಮಾತ್ರ ಅವಕಾಶ ಇದ್ದು, ಪೋಕಷರು ಮಕ್ಕಳಿಗೆ ಪ್ರೋತ್ಸಾಹಿಸಿ ಕಾರ್ಯಕ್ರಮದ ಲಾಭ ಪಡೆದುಕೊಳ್ಳುವಂತೆ ಬ್ರಹ್ಮಾಕುಮಾರಿಸ್ನ ಪ್ರಮುಖರು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಹಾಗೂ ನೊಂದಾಣಿಗಾಗಿ ದೂರವಾಣಿ ಸಂಖ್ಯೆ 9449239750 ಸಂಪರ್ಕಿಸಬಹುದಾಗಿದೆ.
ಮಡಿಕೇರಿ ಮೇ 1 : ದುಡಿಯುವವನಿಗೆ ಸಂಬಳ ಕೊಡುವವನೇ ಮಾಲೀಕ ಆದರೆ ಆತನನ್ನು ಸಂಬಳ ಕೊಡುವ ಮಟ್ಟಕ್ಕೆ ಬೆಳೆಸುವವನೇ ಕಾರ್ಮಿಕ. ಒಂದೆಡೆ ಬಡತನ, ಮತ್ತೊಂದೆಡೆ ಅನಕ್ಷರತೆ. ಮತ್ತೊಂದು ಕಡೆ ಸಕಲ ಸಂಪತ್ತಿನಿಂದ ವಂಚಿತವಾದ ಜನಾಂಗ ಕಾರ್ಮಿಕರಾಗಿ ಬದುಕುತ್ತಾರೆ. ಇಂತಹ ಸೋಚನೀಯ ಆರ್ಥಿಕ ಪರಿಸ್ಥಿತಿಯ ಕುಟುಂಬದಿಂದ ಬೆಳೆದು ಬಂದ ವ್ಯಕ್ತಿ ನನ್ನನ್ನು ನಂಬಿರುವ ಅಪ್ಪ, ಅಮ್ಮ, ಹೆಂಡತಿ, ಮಕ್ಕಳ ಲಾಲನೆ, ಪೋಷಣೆ ರಕ್ಷಣೆ ಜೊತೆಗೆ ಸರ್ವರ ತುತ್ತಿನ ಚೀಲ ತುಂಬಲು ಕಾರ್ಮಿಕ ವೃತ್ತಿಯನ್ನು ಆರಿಸಿಕೊಳ್ಳುತ್ತಾರೆ. ಇಂತಹ ಕಾರ್ಮಿಕರಲ್ಲಿ ಕೆಲವರು ಕಾಯಕ ವೆಂಬುದು ಕೇವಲ ಕಾಸು ಸಂಪಾದನೆಯಲ್ಲ, ಕಾಯಕವೆಂಬುದು ಹೊಟ್ಟೆಪಾಡಲ್ಲ, ಕಾಯಕ ಎಂಬುದು ಸಮಾಜ ಸೇವೆ ಎಂದು ದುಡಿಯುತ್ತಾರೆ. ಕೂಲಿ ಅಥವಾ ಸಂಬಳ ಕಡಿಮೆ ಇದ್ದರೂ ಬೆವರಿನ ದುಡಿಮೆಯೂ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೆಚ್ಚಿನ ಕಾರ್ಮಿಕರು ಬದುಕಿನುದ್ದಕ್ಕೂ ದುಡಿಯುತ್ತಾರೆ. ಜೀವನದಲ್ಲಿ ಯಾರು ಕೈ ಬಿಟ್ಟರು ನನ್ನ ತೊಳ್ ಬಲ ಇರವತನಕ ಜೀವನ ಸಾಗಿಸೋಣ ಎಂದು, ನಡು ನಾಡೆ ಇರಲಿ ಗಡಿನಾಡೆ ಇರಲಿ ತಮ್ಮ ಕಾಯಕವ…
ಮಡಿಕೇರಿ ಮೇ 1 : ಸೋಮವಾರಪೇಟೆಯ ಸಂತೆಯ ದಿನವಾದ ಇಂದು ಪಟ್ಟಣದಲ್ಲಿ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಹಾಗೂ ಸಂಸದ ಪ್ರತಾಪ್ ಸಿಂಹ ತಮ್ಮ ನೂರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಮತ ಯಾಚಿಸಿದರು.
ಮಡಿಕೇರಿ ಮೇ 1 : ಕೊಡಗು ಜಿಲ್ಲೆಯಲ್ಲಿ ನಮೂನೆ-12ಡಿ ಅಡಿಯಲ್ಲಿ ಹೆಸರು ನೋಂದಾಯಿಸಿ ಮನೆಯಿಂದಲೇ ಅಂಚೆ ಮತಪತ್ರ ಮೂಲಕ ಇದುವರೆಗೆ ಒಟ್ಟು 791 ಮಂದಿ ಮತದಾನ ಮಾಡಿದ್ದಾರೆ. ಇವರಲ್ಲಿ 80 ವರ್ಷ ಮೇಲ್ಪಟ್ಟವರು 631 ಮಂದಿ ಮತ್ತು ವಿಶೇಷ ಚೇತನರು 160 ಮಂದಿ ಮತದಾನ ಮಾಡಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 387 ಮಂದಿ ಮತದಾನ ಮಾಡಿದ್ದು, ಇವರಲ್ಲಿ 80 ವರ್ಷ ಮೇಲ್ಪಟ್ಟವರು 309 ಮಂದಿ ಮತ್ತು ವಿಶೇಷ ಚೇತನರು 78 ಮಂದಿ ಮತದಾನ ಮಾಡಿದ್ದಾರೆ. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 404 ಮಂದಿ ಮತದಾನ ಮಾಡಿದ್ದು, ಇವರಲ್ಲಿ 80 ವರ್ಷ ಮೇಲ್ಪಟ್ಟವರು 322 ಮಂದಿ ಮತ್ತು ವಿಶೇಷ ಚೇತನರು 82 ಮಂದಿ ಮತದಾನ ಮಾಡಿದ್ದಾರೆ.
ಮಡಿಕೇರಿ ಮೇ 1 : ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಡಿಪಿಐ ಪಕ್ಷ ಸ್ಪರ್ಧೆ ಮಾಡುತ್ತಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಇರುವ ಕಾರಣ ಪಕ್ಷದ ನಿಲುವು ಕುರಿತು ಮಡಿಕೇರಿಯ ಜಿಲ್ಲಾ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಅವರ ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಮತ್ತು ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ನಾಯಕರುಗಳೊಂದಿಗೆ ಚರ್ಚಿಸಲಾಯಿತು. ಜನಪರ ಹೋರಾಟಗಾರ ಅಮೀನ್ ಮೊಹಿಸಿನ್ ಅವರು ಮಡಿಕೇರಿ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡಲಿದ್ದು, ಕ್ಷೇತ್ರದಲ್ಲಿ ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಜೆಸಿಬಿ ಪಕ್ಷಗಳಾಗಿದ್ದು, ಬೇಸತ್ತಿರುವ ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಮಡಿಕೇರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಸ್ಡಿಪಿಐ ಅಭ್ಯರ್ಥಿ ಅಮೀನ್ ಮೊಹಿಸಿನ್ ಅವರನ್ನು ಬೆಂಬಲಿಸಲಿದ್ದಾರೆ ಎಂದು ಅಫ್ಸರ್ ಕೊಡ್ಲಿಪೇಟೆ ವಿಶ್ವಾಸ ವ್ಯಕ್ತಪಡಿಸಿದರು. ವಿರಾಜಪೇಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕಣಕ್ಕೆ ಇಳಿಸದ ಕಾರಣ ಫ್ಯಾಸಿಸ್ಟ್ ಮನೋಭಾವನೆ ಇರುವ ಅಭ್ಯರ್ಥಿಗಳನ್ನು ಸೋಲಿಸುವ…
ಮಡಿಕೇರಿ ಏ.12 : 18 ವರ್ಷದೊಳಗಿನ ಮಕ್ಕಳ ಸ್ಪರ್ಧೆಯಲ್ಲಿ ಮಡಿಕೇರಿ ನಗರದ ಮಾನ್ವಿ ಎಸ್. (ಪ್ರಥಮ) ಮೋಕ್ಷಿತ ಕೆ.ಜೆ. (ದ್ವಿತೀಯ) ಹಾಗೂ ರೀಕ್ಷಿತ (ತೃತೀಯ) ಸ್ಥಾನ ಪಡೆದರು. ಹಾಗೆಯೇ 18 ವರ್ಷ ಮೇಲ್ಪಟ್ಟ ದಿವ್ಯ ಗಾಳಿಬೀಡು (ಪ್ರಥಮ) ಸುಶ್ಮಿತಾ ಟಿ.ಪಿ. (ದ್ವಿತೀಯ) ಹಾಗೂ ರಿವ್ಯ ಎಂ.ಎಂ. ತೃತೀಯ ಸ್ಥಾನ ಪಡೆದರು. ಮತ್ತು ಎಲ್ಲಾ ಸ್ಪರ್ಧಾರ್ಥಿಗಳಿಗೂ ಸಮಾಧನಕರ ಪ್ರಶಸ್ತಿ ಪತ್ರ ನೀಡಲಾಯಿತು.






