ಮಡಿಕೇರಿ ಜ.22 NEWS DESK : ಕೊಡಗು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ, ಸಂಸ್ಕøತಿ, ಪರಿಸರ, ಕಲೆ, ಜಾನಪದ ಸಂಸ್ಕೃತಿಯ ಸಂರಕ್ಷಣೆಗಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 37 ದತ್ತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಾಲ್ಕು ವರ್ಷಗಳ ಹಿಂದೆ ತಾವು ಅಧಿಕಾರಕ್ಕೆ ಬಂದ ಹಂತದಲ್ಲಿ ಜಿಲ್ಲಾ ಕಸಾಪದಲ್ಲಿದ್ದ 19 ದತ್ತಿಗಳನ್ನು ಪ್ರಸ್ತುತ 37ಕ್ಕೆ ಹೆಚ್ಚಿಸಲಾಗಿದೆ. ಆಗ ಇದ್ದ 2 ಸಾವಿರ ಸದಸ್ಯತ್ವವನ್ನು 3500ಕ್ಕೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಂಸ್ಕøತಿಯ ಬೆಳವಣಿಗೆಯ ದೃಷ್ಟಿಯಿಂದ, ಮಕ್ಕಳಲ್ಲಿ ಕನ್ನಡದ ಬಗ್ಗೆ ಒಲವು ಮೂಡಿಸುವುದಕ್ಕಾಗಿ ದತ್ತಿ ನಿಧಿಯ ಬಹುತೇಕ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಲ್ಲಿ ಆಯೋಜಿಸಿಕೊಂಡು ಬರುತ್ತಿರುವುದಾಗಿ ಹೇಳಿದರು. ದತ್ತಿ ನಿಧಿ ಸ್ಥಾಪಕ ಖ್ಯಾತ ಸಂಶೋಧಕ ಡಾ.ಎಂ.ಜಿ.ನಾಗರಾಜು ಅವರ ಆಶಯಗಳಿಗೆ ಅನುಗುಣವಾಗಿ ಫೆ.14 ರಂದು ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಕೊಡಗಿನ ದೇವರಕಾಡುಗಳ ಕುರಿತ…
ಲೇಖಕ: admin
ಬೆಂಗಳೂರು ಜ.22 NEWS DESK : ಬಿಗ್ ಬಾಸ್ 12ನೇ ಆವೃತ್ತಿಯ ವಿಜೇತ ಗಿಲ್ಲಿ ನಟರಾಜ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ, ಸನ್ಮಾನಿಸಿದರು. ಮುಂದಿನ ಜೀವನ ಇನ್ನಷ್ಟು ಯಶಸ್ಸು, ಸಂತಸದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಮಡಿಕೇರಿ ಜ.22 NEWS DESK : ಕೊಡಗಿನ ಹಿತಚಿಂತನೆಯೊಂದಿಗೆ, ಅರಬ್ ರಾಷ್ಟ್ರಗಳಲ್ಲಿರುವ ಕೊಡಗಿನ ಮೂಲದ ಅನಿವಾಸಿ ಭಾರತೀಯರನ್ನು ಕೇಂದ್ರೀಕರಿಸಿಕೊಂಡು ಹಲವಾರು ಹಲ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘÀಟಿಸಿಕೊಂಡು ಬರುತ್ತಿರುವ ‘ಯುಎಇ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್’ ಇಪ್ಪತ್ತೈದು ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದು, ತನ್ನ ಬೆಳ್ಳಿ ಹಬ್ಬವನ್ನು ‘ಕನೆಕ್ಟ್ ಕೊಡಗು-2026’ ಶೀರ್ಷಿಕೆಯಡಿ ಫೆ.8 ರಂದು ಯುಎಇನ ಶಾರ್ಜಾದಲ್ಲಿ ಆಚರಿಸಿಕೊಳ್ಳಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಅಹ್ಮದ್ ಚಾಮಿಯಾಲ್ ಈ ಕುರಿತು ಮಾಹಿತಿ ನೀಡಿ, ಯುಎಇಯ ಶಾರ್ಜಾ ಅಲ್ ಬತಾಯ ಗಾರ್ಡನ್ನಲ್ಲಿ ಅಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದ್ದು. ಆ ಸಂದರ್ಭ ವಾಲಿಬಾಲ್, ಹಗ್ಗ ಜಗ್ಗಾಟ, ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಜೊತೆಗೆ ಮಕ್ಕಳಿಗಾಗಿ ವಿಶೇಷ ಕ್ರೀಡೆಗಳು ಹಾಗೂ ಮಹಿಳೆಯರಿಗಾಗಿ ವಿವಿಧ ಚಟುವಟಿಕೆಗಳೂ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿರುವುದಾಗಿ ತಿಳಿಸಿದರು. ಅಸೋಸಿಯೇಷನ್ನ ಸಲಹಾ ಸಮಿತಿ ನಾಯಕರಾದ ಉಸ್ಮಾನ್ ಹಾಜಿ ಅವರು ಮಾತನಾಡಿ, ಶಾರ್ಜಾದಲ್ಲಿ ಆಯೋಜಿತ…
ಮಡಿಕೇರಿ ಜ.22 NEWS DESK : ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿದ ಅವರು ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು. ಅನುಷ್ಠಾನಗೊಳ್ಳುತ್ತಿರುವ ಸರಕಾರದ ಯೋಜನೆಗಳು ಮತ್ತು ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಬಗ್ಗೆ ಶಾಸಕರು ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಮಡಿಕೇರಿ ಜ.22 NEWS DESK : ಅಂತರರಾಷ್ಟ್ರೀಯ ಶೋಲಿಂಗ್ ಕುಂಗ್ಫು ಸಂಸ್ಥೆಯ ವತಿಯಿಂದ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಚೇರಂಬಾಣೆಯ ಶ್ರೀ ರಾಜ ರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ ಮಾಡಿದ್ದಾರೆ. ಶಾಲೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿಗಳಾದ ಅಂಕಿತ್ ಬಿ.ಎ. ಬ್ಲಾಕ್ ಬೆಲ್ಟ್ ಪ್ರಥಮ ಡಿಗ್ರಿ, ಲಕ್ಷಣ್ ಕೆ.ಎ ಹಾಗೂ ಮೋನಿಷ್ ಮುತ್ತಣ್ಣ ಬ್ಲ್ಯಾಕ್ ಬೆಲ್ಟ್ ಪಡೆದುಕೊಂಡಿರುತ್ತಾರೆ. ಪರೀಕ್ಷೆಯಲ್ಲಿ ಒಟ್ಟು ಮೂವತ್ಮೂರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಹನ್ನೊಂದು ವಿದ್ಯಾರ್ಥಿಗಳು ಹಳದಿ, ಎಂಟು ವಿದ್ಯಾರ್ಥಿಗಳು ಅರೇಂಜ್, ಒಬ್ಬ ವಿದ್ಯಾರ್ಥಿ ಹಸಿರು, ಏಳು ವಿದ್ಯಾರ್ಥಿಗಳು ನೀಲಿ, ಆರು ವಿದ್ಯಾರ್ಥಿಗಳು ಬ್ರೌನ್ ಬೆಲ್ಟ್ ಪಡೆದು ಸಾಧನೆ ಮಾಡಿದ್ದಾರೆ. ಈ ಸಂದರ್ಭ ಪರೀಕ್ಷಾರ್ಥಿಗಳಾಗಿ ಇಂಡಿಯನ್ ಗ್ರ್ಯಾಂಡ್ ಮಾಸ್ಟರ್ ಶಿಫು ಇಂದ್ರಜಿತ್, ಇಂಡಿಯನ್ ತರಬೇತುದಾರರಾದ ದೇವರಾಜ್, ಕೊಡಗು ಜಿಲ್ಲೆಯ ತರಬೇತುದಾರರಾದ ವೇಣು ಗೋಪಾಲ್, ಕರ್ನಾಟಕ ರಾಜ್ಯದ ತರಬೇತುದಾರರಾದ ನಾಟೋಳಂಡ ನಂಜುಂಡ ಪಾಲ್ಗೊಂಡಿದ್ದರು. ಉತ್ತಿರ್ಣರಾದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ನಾಟೋಳಂಡ ವಿಜು ಹಾಗೂ ಮುಖ್ಯ ಶಿಕ್ಷಕರಾದ ಕುದುಪಜೆ ಕವನ್…
ಮಡಿಕೇರಿ ಜ.22 NEWS DESK : ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಲು ಇಂತಹ ಕಥಾ ಸ್ಪರ್ಧೆಗಳು ದಾರಿದೀಪವಾಗಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕೊಡಗಿನ ಗೌರಮ್ಮ ತಮ್ಮ ಸಾಹಿತ್ಯ ಮತ್ತು ಕತೆ, ಕವನ ರಚನೆಗಳನ್ನು ರೂಡಿಸಿಕೊಂಡಿದ್ದರು. ಕೊಡಗಿಗೆ ಗಾಂಧೀಜಿ ಭೇಟಿ ಕೊಟ್ಟ ಸಂದರ್ಭದಲ್ಲಿ ತಮ್ಮ ಮೈ ಮೇಲಿನ ಚಿನ್ನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ದಾನ ನೀಡುವ ಮೂಲಕ ಸ್ವಾತಂತ್ರ ಹೋರಾಟಗಾರರಿಗೆ ಪ್ರೇರಣದಾಯಕರಾಗಿದ್ದರು ಎಂದು ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯನಿ ಕಟ್ಟೆಮನೆ ಅನುಸೂಯ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಗಿನ ಗೌರಮ್ಮ ಅವರ ನೆನಪಿನಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಸಣ್ಣ ಕಥೆಗಳ ಗೌರಮ್ಮ ಕಥಾಸ್ಪರ್ಧೆಯನ್ನು ಬ್ಲಾಸಂ ಶಾಲೆಯ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮುಂದೊಂದು ದಿನ ಸಾಹಿತಿಗಳಾಗಿ ಬೆಳೆಯಲು ಈ ಕಥಾ ಸ್ಪರ್ಧೆಯು ಮೆಟ್ಟಿಲುಗಳಾಗಲಿ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಮಾತನಾಡಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತರವಾದದ್ದು.…
ಮಡಿಕೇರಿ ಜ.22 NEWS DESK : ತೀಯಾನ್ ಮಹಾಸಭಾದ ಕೊಡಗು ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎ.ಎನ್.ಪದ್ಮನಾಭ ಕಿರಗಂದೂರು ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಎಸ್.ಆರ್.ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಅರುಣ್, ಸಂಘಟನಾ ಕಾರ್ಯದರ್ಶಿಯಾಗಿ ಎನ್.ಸಿ.ಸುದರ್ಶನ್ ಹಾಗೂ ಖಜಾಂಚಿಯಾಗಿ ಎಂ.ಕೆ.ಮೋಹನ್ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಮಡಿಕೇರಿಯ ಲೆಕ್ಕ ಪರಿಶೋಧಕÀ ಟಿ.ಕೆ.ಸುಧೀರ್, ನಿರ್ದೇಶಕರಾಗಿ ಶಶಿಕುಮಾರ್, ಎನ್.ಸಿ.ಸುನಿಲ್, ಗಣೇಶ್, ವೀಣಾ ಜಯರಾಮ್ ಹಾಗೂ ಕಾನೂನು ಸಲಹೆಗಾರರಾಗಿ ವಿರಾಜಪೇಟೆಯ ಕೆ.ವಿ.ಸುನಿಲ್ ನೇಮಕಗೊಂಡರು. ಇದೇ ಸಂದರ್ಭ ಜಿಲ್ಲಾ ಯೂತ್ ಅಧ್ಯಕ್ಷರನ್ನಾಗಿ ಶಜಿ ಭರತ್ ಹಾಗೂ ಉಪಾಧ್ಯಕ್ಷರನ್ನಾಗಿ ಪ್ರವೀಣ್ ಅವರನ್ನು ಸಭೆಯ ಒಮ್ಮತದ ನಿರ್ಧಾರದಂತೆ ಆಯ್ಕೆ ಮಾಡಲಾಯಿತು. *ಸಭೆ* ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ತೀಯಾನ್ ಮಹಾಸಭಾದ ಜಿಲ್ಲಾ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘಟನೆಯ ಬಲವರ್ಧನೆ ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ನಂತರ ಸರ್ವಾನುಮತದಿಂದ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ…
ನಾಪೋಕ್ಲು ಜ.22 NEWS DESK : ಮೂರ್ನಾಡು ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಗ್ರಾಮ ಪಂಚಾಯತಿ ಹಾಗೂ ಸಂಘ ಸಂಸ್ಥೆಗಳ ಸಹಯೋಗದಿಂದ ನೂತನವಾಗಿ ನಿರ್ಮಿಸಿದ ಸುಸಜ್ಜಿತ ಶೌಚಾಲಯವನ್ನು ಲೋಕಾರ್ಪಣೆಗೊಳಿಸಲಾಯಿತು. ಮೂರ್ನಾಡು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ, ಆಪ್ತಮಿತ್ರ ಬಳಗ, ಗಜಾನನ ಯುವಕ ಸಂಘ ಹಾಗೂ ಕಾಂತೂರ್ ಮೂರ್ನಾಡು ಗ್ರಾಮ ಪಂಚಾಯತ್ ಜೊತೆಗೂಡಿ ಕಟ್ಟಿಸಿ ಸುಸಜ್ಜಿತ ಶೌಚಾಲಯವನ್ನೂ ಗಣ್ಯರು ಉದ್ಘಾಟನೆ ಮಾಡಿ ಶಾಲೆಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯರಾದ ಗುರುರಾಜ್ ಮಾತನಾಡಿ, ಮೂರು ಸಂಘಗಳು ನಮ್ಮ ಶಾಲೆಗೆ ಉಪಯೋಗವಾಗುವಂತ ಕೆಲಸಗಳನ್ನು ಮಾಡಿಕೊಟ್ಟಿದೆ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತಮ್ಮ ಶಕ್ತಿಗೆ ಮೀರಿ ನಮ್ಮ ಶಾಲೆಗೆ ಉಪಯುಕ್ತ ಕೆಲಸಗಳನ್ನು ಮಾಡಿಕೊಟ್ಟಿದನ್ನು ಸ್ಮರಿಸಿ ಇದೇ ರೀತಿ ನಮ್ಮ ಶಾಲೆಗೆ ಬೆಂಬಲವಾಗಿ ಕೈಜೋಡಿಸುತ್ತಾ ನಮ್ಮೊಂದಿಗೆ ಇರಬೇಕೆಂದು ತಿಳಿಸಿದರು. ಎಲ್ಲಾ ಸಂಘದ ಅಧ್ಯಕ್ಷರಿಗೂ ಹಾಗೂ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಪಿಡಿಓ ಹಾಗೂ ಸದಸ್ಯರು ಗಳಿಗೆ ಧನ್ಯವಾದ ತಿಳಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಸ್.ಕುಶಾನ್…
ವಿರಾಜಪೇಟೆ ಜ.22 NEWS DESK : ಎನ್ಎಸ್ಡಿಸಿ ಸ್ಕಿಲ್ ಇಂಡಿಯಾದ ಅನುಮೋದಿತ ತರಬೇತಿ ಪಾಲುದಾರ ಆವಾಸ್(ಎವಿಎಎಸ್)ನಿಂದ ಆಯೋಜಿಸಲ್ಪಟ್ಟ 14ನೇ ರಾಷ್ಟ್ರೀಯ ಮಟ್ಟದ ಚಾಂಪಿಯನ್ಶಿಪ್ 2025 ರಲ್ಲಿ, ರಾಷ್ಟ್ರೀಯ ಮಟ್ಟದ ಅಬ್ಯಾಕಸ್ ಮತ್ತು ವೇದ ಗಣಿತ ಚಾಂಪಿಯನ್ಶಿಪ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ವಿರಾಜಪೇಟೆಯ ಶ್ರೀಹಾ ಸುರೇಶ್ ಹೊರಹೊಮ್ಮಿದ್ದಾರೆ. ಬೀಡ್ಸ್ ಅಂಡ್ ಬ್ರೈನ್ ವಿಭಾಗದಲ್ಲಿ ಅಭ್ಯಾಸಿದ ಶ್ರೀಹಾ ಸುರೇಶ್ 100 ಪ್ರಶ್ನೆಗಳಲ್ಲಿ 100ಕ್ಕೂ 5 ನಿಮಿಷ 14 ಸೆಕೆಂಡ್ನಲ್ಲಿ ಉತ್ತರಿಸಿ ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್ ಆಗಿ ಕೊಡಗಿಗೆ ಕೀರ್ತಿ ತಂದಿದ್ದಾರೆ. ಇವರಿಗೆ ಶಿಕ್ಷಕರಾದ ದೇಚಮ್ಮ ಅವರು ತರಬೇತಿ ನೀಡಿದ್ದಾರೆ. ಐದೂವರೆ ವರ್ಷದ ಈ ಪುಟ್ಟ ಬಾಲಕಿ ವಿರಾಜಪೇಟೆಯ ಸ್ಯಾಪಲಿಂಗ್ ಮಾಂಟೆಸ್ಸರಿಯಲ್ಲಿ ಯುಕೆಜಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಶ್ರೀಹಾ ಸುರೇಶ್ ವಿರಾಜಪೇಟೆಯ ಸಕ್ಸಸ್ ಮೆನ್ಸ್ ಹಬ್ ಮಾಲೀಕ ಸುರೇಶ್ ಹಾಗೂ ಸೌಮ್ಯ ಅವರ ಪುತ್ರಿ.
*ಇಭಾನಿ ಲೇಔಟ್, ಪೆರುಂಬಾಡಿ, ಆರ್ಜಿ, ವಿರಾಜಪೇಟೆ : ಪ್ರಾರಂಭಿಕ ಮಾರಾಟ ರಿಯಾಯಿತಿ ದರದಲ್ಲಿ : ತಕ್ಷಣ ಬುಕ್ ಮಾಡಿ : ಮನೆ ಕಟ್ಟಿಕೊಡಲಾಗುವುದು* *ಸಂಪರ್ಕಿಸಿ : ಎಂ.ಪಿ.ಕೇಶವ ಕಾಮತ್ : 94483 46276, ಎಂ.ಪಿ.ಪ್ರಮೋದ್ ಕಾಮತ್ : 94480 48213, ಚಂದನ್ ಕಾಮತ್ : 88020 85908*






