ಲೇಖಕ: admin

ಮಡಿಕೇರಿ ಜ.14 NEWS DESK : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಕಾಡಾನೆ ಸೇರಿದಂತೆ ವನ್ಯಜೀವಿಗÀಳ ಉಪಟಳ ಮಿತಿ ಮೀರಿದೆ. ಕೃಷಿ ಫಸಲನ್ನು ಸಂರಕ್ಷಿಸಿಕೊಳ್ಳಲು ಮತ್ತು ಜೀವ ಉಳಿಸಿಕೊಳ್ಳಲು ಬೆಳೆಗಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಈ ಹಿಂದೆ ನಿರ್ಮಿಸುತ್ತಿದ್ದ ‘ಕಂದಕ’ಗಳು ನಂತರ ಬಂದ ‘ಸೌರಬೇಲಿ’ ಯೋಜನೆಗಳೆಲ್ಲವು ಇಂದು ವಿಫಲವಾಗಿದೆ. ಪ್ರಸ್ತುತ ಜಾರಿಗೆ ತಂದಿರುವ ‘ರೈಲ್ವೆ ಹಳಿಗಳ ಬೇಲಿ’ ಒಂದಷ್ಟು ಪ್ರಯೋಜನಕಾರಿಯಾಗಿದ್ದರು, ಇದು ಬೆಟ್ಟಗುಡ್ಡದ ಪ್ರದೇಶಗಳಲ್ಲಿ ಪ್ರಯೋಜನಕ್ಕೆ ಬಾರದಾಗಿದೆ. 2015 ರಿಂದ ಈಚೆಗೆ ಬರಪೊಳೆÉ ಮತ್ತು ಬ್ರಹ್ಮಗಿರಿ ಅರಣ್ಯ ಪ್ರದೇಶದ ಆನೆಗಳು ಬೇಗೂರು, ಚೀನಿವಾಡ, ಕೊಂಗಣ, ಬಿ.ಶೆಟ್ಟಿಗೇರಿ, ಕುಟ್ಟಂದಿ, ವಿ.ಬಾಡಗ, ಈಚೂರು, ಕುಂದ, ಹಳ್ಳ್ಳಿಗಟ್ಟು, ಹುದೂರು ವ್ಯಾಪ್ತಿಯಲ್ಲಿ ಅತಿಯಾಗಿ ಉಪಟಳ ನೀಡುತ್ತಿವೆ. ಕಾಡಾನೆಗಳ ಹಿಂಡು ಭತ್ತದ ಕೃಷಿಯ ಮೇಲೆ ದಾಳಿ ನಡೆಸುತ್ತಾ ಬಂದಿರುವುದಲ್ಲದೆ, ಕಾಫಿ, ಕರಿಮೆಣಸು, ಅಡಿಕೆ, ಬಾಳೆ ಕೃಷಿಯನ್ನೂ ನಾಶ ಮಾಡಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲೇ ಅತೀ ಹೆಚ್ಚು 146 ಹುಲಿಗಳಿದ್ದು, ಈ…

Read More

ಮಡಿಕೇರಿ ಜ.14 NEWS DESK : ಸಾಧಕರು ಮತ್ತು ಸೇವಾ ಕಾಯ೯ಗಳ ಯಶಸ್ಸಿನ ಕಥೆಗಳು ರೋಟರಿಯಲ್ಲಿ ದಾಖಲೆಯಾಗಿಸಬೇಕು. ಈ ಮೂಲಕ ಇಂಥ ಕಥೆಗಳು ಮತ್ತಷ್ಟು ಸಮಾಜಸೇವೆಗೆ ಜನರಿಗೆ ಪ್ರೇರಣೆಯಾಗಬೇಕೆಂದು ರೋಟರಿ ಜಿಲ್ಲೆ 3181 ರ ಗವನ೯ರ್ ಪಿ.ಕೆ.ರಾಮಕೃಷ್ಣ ಕರೆ ನೀಡಿದ್ದಾರೆ.  ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಸಾಧಕರನ್ನು ಸನ್ಮಾನಿಸಿ ಮಾತನಾಡಿದ ರಾಮಕೖಷ್ಣ, ರೋಟರಿ ಸಂಸ್ಥೆಗಳು ಪ್ರತೀ ವಷ೯ ಸಾಕಷ್ಟು ಸೇವಾ ಕಾಯ೯ಯೋಜನೆಗಳ ಮೂಲಕ ನೂರಾರು ಜನರಿಗೆ ಜೀವನಾಧಾರ ಕಲ್ಪಿಸುತ್ತಿವೆ. ಇಂಥ ಯೋಜನೆಗಳನ್ನು ಯಶಸ್ವಿ ಕಥೆಯ ದಾಖಲೆಯಾಸಿದ್ದೇ ಆದಲ್ಲಿ ಮತ್ತಷ್ಟು ಮಂದಿಗೆ ಇದರಿಂದ ಸಾಮಾಜಿಕ ಸೇವಾ ಕಾಯ೯ಕ್ಕೆ ಸ್ಪೂತಿ೯ ದೊರಕುವಂತಾಗುತ್ತದೆ ಎಂದು ಕರೆ ನೀಡಿದರು. ಭಾರತದಲ್ಲಿ ಪ್ರತೀ ವಷ೯ವೂ 30 ಸಾವಿರ ಕೋಟಿ ರು. ಗಳಷ್ಟು ಸಿ.ಎಸ್. ಆರ್ ಫಂಡ್ ವಿವಿಧ ಸಂಸ್ಥೆಗಳಿಂದ ಸಾಮಾಜಿಕ ಸೇವಾ ಕಾಯ೯ಗಳಿಗೆ ಮೀಸಲಾಗಿದೆ. ಇಂಥ ಆಥಿ೯ಕ ಮೂಲವನ್ನು ರೋಟರಿ ಸಂಸ್ಥೆಗಳು ಸದುಪಯೋಗ ಪಡಿಸಿಕೊಳ್ಳುವಂತೆಯೂ ಅವರು ಸಲಹೆ ನೀಡಿದರು. ರೋಟರಿ…

Read More

ಮಡಿಕೇರಿ ಜ.14 NEWS DESK : ಅಂತರರಾಷ್ಟ್ರೀಯ ಖ್ಯಾತಿಯ ಲೇಖಕಿ ಸರಿತಾ ಮಂದಣ್ಣ ಅವರು ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈಗಾಗಲೇ 14 ಭಾಷೆಗಳಿಗೆ ಅನುವಾದಗೊಂಡಿರುವ ಸರಿತಾ ಮಂದಣ್ಣ ಅವರ ಪ್ರಸಿದ್ಧ ಕಥಾಸಂಕಲನ ಟೈಗರ್ ಹಿಲ್ ಬಳಿಕ, ಇದೀಗ ಲೇಖಕಿಯವರು ದಿ ಬೋಲ್ಡ್ ಕ್ರೋನಿಕಲ್ಸ್ ಸರಣಿಯಡಿಯಲ್ಲಿ ದಿ ವಾರ್ ಎಲಿಫಂಟ್ಸ್ ಆಫ್ ಟೈಗರ್ಸ್ ಹಾಗೂ ಸೀಕ್ರೆಟ್ ಅಮಾಂಗ್ ಸ್ಟಾರ್ಸ್ ಎಂಬ ಎರಡು ಮಕ್ಕಳ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಈ ಕಥಾ ಸರಣಿಗಳು ಭಾರತದ 2,500 ವರ್ಷಗಳ ಇತಿಹಾಸವನ್ನು ಪ್ರತಿಬಿಂಬಿಸುತ್ತವೆ. ಇತಿಹಾಸವನ್ನು ತಿಳಿದುಕೊಂಡು ಅದನ್ನು ಸರಳವಾಗಿ ಕಥೆಯ ರೂಪದಲ್ಲಿ ಹೇಗೆ ಬರೆಯಬೇಕು ಎಂಬ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಲೇಖಕಿ ಸರಿತಾ ಮಂದಣ್ಣ, “ಇತಿಹಾಸ ಎಂದರೆ ಕೇವಲ ವರ್ಷಗಳು ಮತ್ತು ದಿನಾಂಕಗಳು ಮಾತ್ರವಲ್ಲ. ಆಗಿನ ಕಾಲಘಟ್ಟವನ್ನು ಮನಗಂಡು ಅದರ ಪ್ರಭಾವವನ್ನು ಅರಿಯುವುದೇ ನಿಜವಾದ ಇತಿಹಾಸ ಅಧ್ಯಯನ” ಎಂದು ಹೇಳಿದರು. ಇಂದಿನ ಮಕ್ಕಳು ಹೆಚ್ಚಿನ ಆಸಕ್ತಿಯಿಂದ ಅಧ್ಯಯನ ಮಾಡಿದರೆ, ಭವಿಷ್ಯದಲ್ಲಿ ಪ್ರತಿಯೊಬ್ಬರೂ…

Read More

ಮಡಿಕೇರಿ ಜ.14 NEWS DESK :  ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಕೊಡಗು ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಲಾಯಿತು. ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರೋಗ್ಯ ಇಲಾಖೆಯ ಜಿಲ್ಲಾ ನಿಗ್ರಹದಳ ಅಧಿಕಾರಿ ಮತ್ತು ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಆನಂದ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋದಕ ಆಸ್ಪತ್ರೆ ಯ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹೇಶ್  ಹವಾಮಾನ ಬದಲಾವಣೆ ಉಷ್ಣ ಅಲೆಗಳು ಮತ್ತು ಎಚ್ಚರಿಕೆಗಳು, ಉಷ್ಣ ಒತ್ತಡದ ವರ್ಗೀಕರಣ ಕ್ಲಿನಿಕಲ್ ಲಕ್ಷಣಗಳು ಮತ್ತು ಚಿಕಿತ್ಸೆಗಳು, ಶಾಖದ ಬದಲಿಗೆ ಲಕ್ಷಣಗಳು ಮತ್ತು ಕಾರಣಗಳು, ಟ್ರೀಟ್ಮೆಂಟ್ ಪ್ರೋಟೋಕಾಲ್, ಹೀಟ್ ಸ್ಟ್ರೋಕ್ , ದುರ್ಬಲ ಗುಂಪು ( ಗರ್ಭಿಣಿ ಬಾಣಂತಿ ಮಕ್ಕಳು ವಯೋ ವೃದ್ಧರು ), ತುರ್ತು ಪರಿಸ್ಥಿತಿ ಮತ್ತು ಅನಿರೀಕ್ಷಿತ ಘಟನೆಗಳ ತುರ್ತು ಸಿದ್ಧತೆ, ಬೇಸಿಗೆ ಪೂರ್ವ, ಬೇಸಿಗೆ ಸಮಯ,…

Read More

ಮಡಿಕೇರಿ ಜ.14 NEWS DESK :  ಪ್ರಾಚೀನ ಕಾಲದಿಂದಲೂ ನಮ್ಮ ಕಲೆ, ಸಂಸ್ಕೃತಿ ಸಂರಕ್ಷಣೆಯಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸಿದ್ದು, ಹೀಗಾಗಿಯೇ ಭಾರತದಲ್ಲಿ ಆಲಯಗಳು ಕಲೋಪಾಸನ ಕೇಂದ್ರಗಳಾಗಿಯೂ ಕಂಗೊಳಿಸಿವೆ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಹೇಳಿದ್ದಾರೆ. ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉದ್ದೇಶಿತ ಶ್ರೀ ಚಾಮುಂಡೇಶ್ವರಿ ಕಲಾಮಂದಿರಕ್ಕೆ ಭೂಮಿಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಗಳಲ್ಲಿ ನೆಲಸಿರುವ ಭಾರತೀಯರು ತಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ವಿದೇಶದ ನೆಲದಲ್ಲಿ ಇರುವವರಿಗೆ ಭಾರತದ ಸಂಸ್ಕೃತಿಯ ಮಹತ್ವದ ಅರಿವಾಗುತ್ತದೆ. ಭಾರತದಲ್ಲಿ ಭಜನೆ, ಹಾಡು, ನೖತ್ಯ, ಯೋಗ, ಧ್ಯಾನಗಳ ಮೂಲಕ ಸಾಂಸ್ಕೃತಿಕ ಕೇಂದ್ರಗಳಾಗಿಯೂ ದೈವಿಕ ಕೇಂದ್ರಗಳು ರೂಪುಗೊಂಡಿವೆ ಎಂದರಲ್ಲದೇ, ಮಕ್ಕಳಿಗೆ ಧಾಮಿ೯ಕ ಶಿಕ್ಷಣ ಕಲಿಸುವಲ್ಲಿ ದೇವಾಲಯಗಳ ಕಲಾಮಂದಿರಗಳು ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷರಾಗಿದ್ದ ಕೇಶವಪ್ರಸಾದ್ ಮುಳಿಯ ದೇವಾಲಯದ ಮೂಲಕ ಧಾಮಿ೯ಕ ಶಿಕ್ಷಣದಂಥ ವಿನೂತನ ಕಾಯ೯ಕ್ರಮ ಆಯೋಜಿಸಿದ್ದನ್ನು…

Read More

ಮಡಿಕೇರಿ ಜ.14 NEWS DESK : ಕೊಡಗು ಜಿಲ್ಲಾ ಮಲೆಯ ಸಮಾಜದ ನೂತನ ಅಧ್ಯಕ್ಷರಾಗಿ ಎಂ.ಕೆ.ಅಶೋಕ್‌ ಆಯ್ಕೆಯಾಗಿದ್ದಾರೆ. ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಉಪಾಧ್ಯಕ್ಷರಾಗಿ ಎಂ.ಎಸ್.‌ ಮುತ್ತಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಬಿದ್ದಪ್ಪ ಎಂ.ಪಿ., ಸಹಕಾರ್ಯದರ್ಶಿಯಾಗಿ ರೀನಾ ರೋಶನ್‌, ಖಜಾಂಚಿಯಾಗಿ ಎಂ.ಎ.ಮಂಜುನಾಥ್‌ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಬಿ.ಗಣೇಶ್‌, ಎಂ.ಕೆ.ಯತೀಶ್‌, ಎಂ.ಜಿ.ವಿಜಿತ್‌, ಎಂ.ಯು.ದರ್ಶನ್‌, ಎಂ.ಎಂ.ಹ್ಯಾರಿ, ಎಂ.ಯು. ಬೆಲ್ಲು ಅವರನ್ನು ಆಯ್ಕೆ ಮಾಡಲಾಯಿತು.

Read More

ಕಡಗದಾಳು ಜ.14 NEWS DESK : ಕತ್ತಲೆಕಾಡುವಿನ ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ ಸಂಕ್ರಾಂತಿ ಪ್ರಯುಕ್ತ ಜ.15ರಂದು ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಟ್ರಸ್ಟ್‌ ಆವರಣದಲ್ಲಿ ಸಂಜೆ 6 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, 6.30ಕ್ಕೆ ದೀಪೋತ್ಸವ, ಸಂಜೆ 7 ಗಂಟೆಗೆ ಟ್ರಸ್ಟ್‌ನ ವಿದ್ಯಾರ್ಥಿ ಘಟಕದ ಸದಸ್ಯರಿಂದ ಭಜನೆ, ರಾತ್ರಿ 8 ಗಂಟೆಗೆ ಮಂಗಳಾರತಿ, 8-15ಕ್ಕೆ ಫಲಹಾರ ಏರ್ಪಡಿಸಲಾಗಿದೆ. ಇದೇ ಸಂದರ್ಭ ಟ್ರಸ್ಟ್‌ಗೆ ನೂತನವಾಗಿ ಖರೀದಿಸಲಾದ ಧ್ವನಿವರ್ಧಕವನ್ನು ಲೋಕಾರ್ಪಣೆ ಮಾಡಲಾಗುವುದು. ಕೊನೆಯಲ್ಲಿ ಸುಭಾಷ್‌ ಮತ್ತು ತಂಡದಿಂದ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ ಪ್ರಕಟಣೆ ತಿಳಿಸಿದೆ.

Read More

ಮೈಸೂರು, ಜ.14 NEWS DESK : ಮೈಸೂರಿನಲ್ಲಿ ಮೂಲಸೌಕರ್ಯ ಕಾಮಗಾರಿಗಳನ್ನು ಅದರಲ್ಲೂ ಪ್ರಮುಖವಾಗಿ ಮಣಿಪಾಲ ಜಂಕ್ಷನ್‌ ಬಳಿ ಫ್ಲೈ ಓವರ್‌ ನಿರ್ಮಾಣ ಸಂಬಂಧ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ. ಈ ಸಂಬಂಧ ನವದೆಹಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿ ಉಮಾಶಂಕರ್‌ ಅವರನ್ನು ಭೇಟಿ ಮಾಡಿ ಸಂಸದ ಯದುವೀರ್‌ ಒಡೆಯರ್‌ ಮನವಿ ಸಲ್ಲಿಸಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಹಾದಿಯಲ್ಲಿರುವ ಬರುವ ಕೆಂಪೇಗೌಡ ವೃತ್ತ (ಮಣಿಪಾಲ ಜಂಕ್ಷನ್‌)ದಲ್ಲಿ ಫ್ಲೈ ಓವರ್‌ ನಿರ್ಮಾಣ ಮಾಡಿದರೆ ಆಗುವ ಅನುಕೂಲಗಳ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಸಂಸದರು ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸಕಾರಾತ್ಮಕವಾಗಿ ಮುಖ್ಯ ಕಾರ್ಯದರ್ಶಿಗಳು ಸ್ಪಂದಿಸಿದ್ದರು.  :: ಮೈಸೂರಿಗೆ ಮೈಲಿಗಲ್ಲು :: ಈ ಯೋಜನೆಯು ಮೈಸೂರಿಗೆ ಮೈಲಿಗಲ್ಲು ಯೋಜನೆಯಾಗಿದೆ. ಫ್ಲೈ ಓವರ್‌ ನಿರ್ಮಾಣಗೊಂಡರೆ ಅಪಘಾತಗಳು ಕಡಿಮೆಯಾಗಲಿವೆ, ಪ್ರಯಾಣದ ಸಮಯ ಇಳಿಕೆಯಾಗಲಿದೆ, ಜೊತೆಗೆ ಸಾರಿಗೆ ದಟ್ಟಣೆ ನಿವಾರಣೆಯಾಗಿ, ಮೈಸೂರಿಗೆ ಆಗಮಿಸುವ  ಮತ್ತು ನಿರ್ಗಮಿಸುವ ಹಾದಿ ಸುಗಮವಾಗಲಿದೆ ಎಂದು…

Read More

ಮಡಿಕೇರಿ ಜ.14 NEWS DESK : ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 36ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಜ.13ರ ಮುಂಜಾನೆಯಿಂದಲೇ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಶೇಕ ಇತ್ಯಾದಿ ಸೇವೆ ನಡೆಯಿತು. ಇಂದು ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, ಮುತ್ತಪ್ಪ ಮತ್ತು ಸುಬ್ರಹ್ಮಣ್ಯ ದೇವರ ಪೂಜೆ, ಪಂಚಾಮೃತಾಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪಾರ್ಚನೆ, ತುಲಭಾರಸೇವೆ ಜರುಗಿತು. ನಂತರ ಶ್ರೀ ಕುಟ್ಟಿಚಾತನ್ ವೆಳ್ಳಾಟಂ, ಮುತ್ತಪ್ಪ ವೆಳ್ಳಾಟಂ, ಶ್ರೀ ಪೋದಿ ದೇವರ ವೆಳ್ಳಾಟಂ ಹಾಗೂ ಶ್ರೀ ಅಯ್ಯಪ್ಪ ದೇವರ ಅಲಂಕಾರ ಪೂಜೆ, ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ನಗರದ ವಿವಿಧ ಬಡಾವಣೆಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಸಂಜೆ 6ರಿಂದ ಭಜನೆ, 7ರಿಂದ ಅಲಂಕಾರ ಪೂಜೆ…

Read More

ಬೆಂಗಳೂರು ಜ.14 NEWS DESK : ಕರ್ನಾಟಕ ಮತ್ತು ಕೇರಳ ಉಪ ವಿಭಾಗದ ಆಶ್ರಯದಲ್ಲಿ, ಮಾಜಿ ಸೈನಿಕರ ವಂತಿಗೆ ಆರೋಗ್ಯ ಯೋಜನೆ (ಇಸಿಎಚ್ ಎಸ್) ಪಾಲಿಕ್ಲಿನಿಕ್, ಎಂಇಜಿ & ಕೇಂದ್ರವನ್ನು “ ಇಸಿಹೆಚ್‌ಎಸ್ ಪಿಸಿ ಬಿಆರ್ ವಿ’’ ಎಂದು ಮರುನಾಮಕರಣ ಮಾಡಲಾಗಿದೆ ಮತ್ತು ಅದನ್ನು ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿರುವ ಇಂಟಿಗ್ರೇಟೆಡ್ ಆರ್ಮಿ ವೆಟರನ್ಸ್ ಕಾಂಪ್ಲೆಕ್ಸ್‌ನಲ್ಲಿರುವ ಬಿಆರ್ ವಿ ಗೆ ಸ್ಥಳಾಂತರ ಮಾಡಲಾಗಿದೆ. ಪಾಲಿಕ್ಲಿನಿಕ್ ಅನ್ನು ಕರ್ನಾಟಕ ಮತ್ತು ಕೇರಳ ಉಪ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್, ಮೇಜರ್ ಜನರಲ್ ವಿಟಿ ಮ್ಯಾಥ್ಯೂ, ಎವಿಎಸ್ ಎಂ, ವೈಎಸ್ ಎಂ ಮತ್ತು ಬೆಂಗಳೂರು ಮಿಲಿಟರಿ ಕೇಂದ್ರದ ಹಿರಿಯ ಯೋಧರು ಉದ್ಘಾಟಿಸಿದರು. ಪಾಲಿಕ್ಲಿನಿಕ್ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದು, ಅನುಭವಿ ಆರೋಗ್ಯ ವೃತ್ತಿಪರ ಸಿಬ್ಬಂದಿಯನ್ನು ಹೊಂದಿದೆ. ಪಾಲಿಕ್ಲಿನಿಕ್ ಸಶಸ್ತ್ರ ಪಡೆಗಳ 2 ಸಾವಿರಕ್ಕೂ ಅಧಿಕ ಹಿರಿಯ ಯೋಧರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಸಮಗ್ರ ಹಿರಿಯ ಯೋಧರ ಕಾಂಪ್ಲೆಕ್ಸ್, ಹಿರಿಯ ಯೋಧರ ಸಹಾಯವಾಣಿ,…

Read More