ಮಡಿಕೇರಿ ನ.7 NEWS DESK : ಭಾರತದಲ್ಲಿ ಮಾನಸಿಕ ಆರೋಗ್ಯದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳಲ್ಲಿನ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಕಂಡುಕೊಳ್ಳುವ ಮತ್ತು ಅವುಗಳನ್ನು ಬಗೆಹರಿಸುವ ಪ್ರಯತ್ನಗಳಿಗೆ ಪೂರಕವಾಗಿ ಮೈಂಡ್ ಅಂಡ್ ಮ್ಯಾಟರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಂಗಳೂರು ನಿಮ್ಹಾನ್ಸ್ ಸಹಯೋಗದೊಂದಿಗೆ ನ.8 ರಿಂದ 15ರವರೆಗೆ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ‘ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನ’ ನಡೆಯಲಿದೆ. ನಗರದದಲ್ಲಿ ಸುದ್ದಿಗೋಷ್ಠಿಯಲ್ಲಿ ಮೈಂಡ್ ಅಂಡ್ ಮ್ಯಾಟರ್ಸ್ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿಗಳಾದ ಡಾ.ಎಂ.ಎ.ಅಚ್ಚಯ್ಯ ಅವರು ಮಾತನಾಡಿ, ಶಿಕ್ಷಣ ಮತ್ತು ಮಾನಸಿಕ ಆರೋಗ್ಯದ ಮೂಲಕ ಸಶಕ್ತ ಸಮಾಜವನ್ನು ರೂಪಿಸುವ ಉದ್ದೇಶ ಸಂಸ್ಥೆಯದ್ದು. ಈ ಹಿನ್ನೆಲೆ ಸಂಸ್ಥೆಯು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ 180ಕ್ಕೂ ಹೆಚ್ಚಿನ ತರಬೇತಿ ಪಡೆದ ಸ್ವಯಂ ಸೇವಕರೊಂದಿಗೆ ಕೊಡಗು, ಮೈಸೂರು, ಹಾಸನ ವಿಭಾಗದ 14 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ, ಸಾವಿರಕ್ಕು ಹೆಚ್ಚಿನ ವಯಸ್ಕರಿಗೆ ಮಾನಸಿಕ ಆರೋಗ್ಯದ ಕಾರ್ಯಾಗಾರಗಳನ್ನು ನಡೆಸಿರುವುದಾಗಿ ಮಾಹಿತಿ ನೀಡಿ, ಈ ಬಾರಿ ಕಾರ್ಯಕ್ರಮವನ್ನು ಮಂಗಳೂರಿಗೂ ವಿಸ್ತ್ತರಿಸುವ ಚಿಂತನೆ…
ಲೇಖಕ: admin
ಮಡಿಕೇರಿ ನ.7 NEWS DESK : ಮುಸ್ಲಿಂ ಸಮುದಾಯದ ವಿವಾಹ ಸಮಾರಂಭಗಳಲ್ಲಿ ನುಸುಳಿರುವ ಅನಗತ್ಯ ಆಚರಣೆಗಳನ್ನು ತೊಡೆದು, ಆರ್ಥಿಕ ಭಾರವನ್ನು ನಿವಾರಿಸಿಕೊಳ್ಳುವ ಅಗತ್ಯತೆಯ ಬಗ್ಗೆ ಸಮುದಾಯ ಬಾಂಧವರಲ್ಲಿ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ(ಎಸ್ವೈಎಸ್) ‘ಮಾದರಿ ಮದುವೆ:ಶತದಿನ ಅಭಿಯಾನ’ ಎನ್ನುವ ವಿಶಿಷ್ಟ ಕಾರ್ಯಕ್ರಮವನನ್ನು ಹಮ್ಮಿಕೊಂಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಸ್ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ಅವರು ಈ ಬಗ್ಗೆ ಮಾಹಿತಿ ನೀಡಿ, ನೂರು ದಿನಗಳ ಈ ಅಭಿಯಾನಕ್ಕೆ ನ.8 ರಂದು ಎಮ್ಮೆಮಾಡಿನ ಪ್ರಸಿದ್ಧ ದರ್ಗಾದಲ್ಲಿ ವಿದ್ಯುಕ್ತ ಚಾಲನೆಯನ್ನು ನೀಡಲಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ವೈಎಸ್ ರಾಜ್ಯಾಧ್ಯಕ್ಷರಾದ ಬಶೀರ್ ಸಅದಿ ಅವರು ವಹಿಸಲಿದ್ದಾರೆ ಮತ್ತು ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ವಿನೂತನ ಅಭಿಯಾನ 2026ರ ಫೆ.15 ರಂದು ಸಮಾರೋಪಗೊಳ್ಳಲಿದೆಯೆಂದು ತಿಳಿಸಿದರು. ಇಸ್ಲಾಂ ಧರ್ಮದಲ್ಲಿ ‘ವಿವಾಹ’ ಎನ್ನುವುದು ಶ್ರೇಷ್ಠ ಸತ್ಕರ್ಮವಾಗಿರುವುದಲ್ಲದೆ, ಇದೊಂದು ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಧಾರ್ಮಿಕ ಜವಾಬ್ದಾರಿಯೂ ಆಗಿದೆ. ಹೀಗಿದ್ದೂ ಪ್ರಸ್ತುತ ವಿವಾಹವೆನ್ನುವುದು ಅನಗತ್ಯ ಆಚರಣೆಗಳ ಆಡುಂಬೊಲವಾಗಿ,…
ಮಡಿಕೇರಿ ನ.7 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅವರು ತಿಳಿಸಿದ್ದಾರೆ. ಜಿಲ್ಲಾ ಪ್ರಚಾರ ಸಮಿತಿಯ ಉಪಾಧ್ಯಕ್ಷರುಗಳಾಗಿ ಮೋಹನ್ ಮೌರ್ಯ, ಬಾಚುಮಂಡ ಲವ ಚಿಣ್ಣಪ್ಪ, ಕೋಶಾಧಿಕಾರಿಯಾಗಿ ಎ.ಕೆ.ಹ್ಯಾರಿಸ್, ಜಿಲ್ಲಾ ಸಂಯೋಜಕರಾಗಿ ಹೆಚ್.ನಟೇಶ್ ಗೌಡ, ಕೇಟೋಳಿರ ಮೋಹನ್ ರಾಜ್, ಎಸ್.ಸಿ.ಶರತ್ ಶೇಖರ್, ಮತ್ರಂಡ ದಿಲ್ಲು, ಜಿಲ್ಲಾ ಜಂಟಿ ಸಂಯೋಜಕರಾಗಿ ಕೆ.ನಂಜುಂಡ ಸ್ವಾಮಿ, ಪುದಿಯನೆರವನ ರೇವತಿ ರಮೇಶ್, ಇಸಾಕ್ ಖಾನ್, ಪಂಕಜ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸದಾನಂದ ಬಂಗೇರ, ಜುಬೈರ್, ಹೆಚ್.ಡಿ.ಗಣೇಶ್, ಶಬರೀಶ್ ಶೆಟ್ಟಿ, ಪಿ.ಜಿ.ಶೇಖರ್, ರಾಫಿಕ್, ಬಾಲಚಂದ್ರ ನಾಯರ್, ಜಾನಕಿ ವೆಂಕಟೇಶ್, ಔರಂಗಜೇಬ್, ವಿ.ಎಸ್.ಸಾಜಿ ಹಾಗೂ ಜುಲೇಕಾಬಿ ನೇಮಕಗೊಂಡಿದ್ದಾರೆ. ಜಿಲ್ಲೆಯ ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ಶಿಫಾರಸ್ಸಿನಂತೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಆದೇಶ ಪತ್ರ ನೀಡಿದ್ದಾರೆ…
ಮಡಿಕೇರಿ ನ.7 NEWS DESK : ಗೋಣಿಕೊಪ್ಪದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಕಾಲೇಜಿ ನ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 400 ಮೀಟರ್ ಹರ್ಡಲ್ಸ್ ನಲ್ಲಿ ಖುಷಿ. ಕೆ.ಎಂ. ಪ್ರಥಮ ಮತ್ತು ಸಾಗರ್ ಟಿ.ಎಸ್. ದ್ವಿತೀಯ ಸ್ಥಾನ ಪಡೆದು ಕಲುಬುರ್ಗಿ ಯಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಲೋಕೇಶ್, ನಿಲಯ ಪಾಲಕರಾದ ಕೆ.ಕೆ.ದೀಪಕ್, ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಪಿ.ಪವನ್ ಸಾಗರ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ನ.7 NEWS DESK : ಪೊನ್ನಂಪೇಟೆ ತಾಲ್ಲೂಕಿನಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ನೀರಾವರಿ ನಿಗಮ ಅನುದಾನದಲ್ಲಿ ಕ್ಷೇತ್ರಾದ್ಯಂತ ಕೈಗೊಳ್ಳಬೇಕಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ಪಡೆದರು. ಈ ಸಂದರ್ಭ ತಾಲೂಕು ಬಗರ್ ಹುಕುಂ ಅಧ್ಯಕ್ಷರು ಅಣ್ಣಳಮಾಡ ಲಾಲಾ ಅಪ್ಪಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಅಣ್ಣೀರ ಹರೀಶ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸೋಮವಾರಪೇಟೆ ನ.7 NEWS DESK : ಜಿಲ್ಲೆಯ 3 ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. 5 ವರ್ಷ ಆಡಳಿತಾವಧಿ ಮುಗಿಸಿರುವ ಕುಶಾಲನಗರ ಹಾಗೂ ವಿರಾಜಪೇಟೆ ಪುರಸಭೆಗೆ ಉಪವಿಭಾಗಾಧಿಕಾರಿಗಳು, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ತಹಶೀಲ್ದಾರರನ್ನು 4/11/25 ರಿಂದ ಜಾರಿಗೆ ಬರುವಂತೆ ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಅದೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ರಾಜ್ಯದ ಒಟ್ಟು 53 ಪುರಸಭೆ, 42 ನಗರಸಭೆ ಹಾಗೂ 23 ಪಟ್ಟಣ ಪಂಚಾಯ್ತಿಯ ಆಡಳಿತಾವಧಿ ಮುಗಿದಿರುವ ಹಿನ್ನಲೆಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಮುಂದೆ ಸರ್ಕಾರ ವಾರ್ಡ್ವಿಂಗಡನೆ,ಮೀಸಲಾತಿ ನಿಗದಿಪಡಿಸ ಬೇಕಾಗಿರುವುದರಿಂದ ಮುಂದಿನ 4, 5 ತಿಂಗಳು ಆಡಳಿತಾಧಿಕಾರಿಗಳ ಆಡಳಿತನಡೆಯುವ ಸಾಧ್ಯತೆ ಇದೆ.
ಮಡಿಕೇರಿ ನ.7 NEWS DESK : ಪೊನ್ನಂಪೇಟೆಯ ನೂತನ ತಾಲ್ಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ಇತ್ತೀಚಿಗಷ್ಟೇ ನೂತನ ತಾಲೂಕು ಎಂದು ರಾಜ್ಯ ಸರ್ಕಾರ ಘೋಷಿಸಿದ ಬಳಿಕ, ಪೊನ್ನಂಪೇಟೆ ತಾಲೂಕಿನ ವಿವಿಧ ಆಡಳಿತ ಕಟ್ಟಡಗಳ ನಿರ್ಮಾಣ/ಮೇಲ್ದರ್ಜೆ ಕಾಮಗಾರಿಗಳಿಗೆ ಶಾಸಕರು ಸರಕಾರದಿಂದ 8 ಕೋಟಿ 60 ಲಕ್ಷ ಅನುದಾನ ಒದಗಿಸುತ್ತಿದ್ದಾರೆ. ಅದರಂತೆ ಕಂದಾಯ ಸಚಿವರೊಂದಿಗೆ ತಾಲೂಕು ಕಚೇರಿ ಕಟ್ಟಡಕ್ಕೆ ಶಿಲನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು. ಈ ಸಂದರ್ಭ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಪ್ರಶಾಂತ್ ಕಾಳಿಮಾಡ, ತಾಲೂಕು ಬಗರ್ ಹುಕುಂ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಉಪಾಧ್ಯಕ್ಷ ಅಲಿರ ರಶೀದ್, ಸದಸ್ಯರು, ಜಿಲ್ಲಾ ಮಟ್ಟದ…
ಮಡಿಕೇರಿ ನ.7 NEWS DESK : ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ನಲ್ಲಿ ನ.8 ರಿಂದ ಕರಿಮಣಿ ಮೇಳ ಆರಂಭಗೊಳ್ಳಲಿದ್ದು, ಈ ಆಫರ್ ತಮ್ಮ ಎಲ್ಲಾ ಮಳಿಗೆಗಳಾದ ಪುತ್ತೂರು, ಮೂಡಬಿದ್ರೆ, ಸುಳ್ಯ, ಕುಶಾಲನಗರ ಹಾಗೂ ಹಾಸನದಲ್ಲಿ ಲಭ್ಯವಿದೆ. ಸ್ಥಳೀಯವಾಗಿ ಕರಿಮಣಿ ಸರ ಎಂದು ಕರೆಯಲ್ಪಡುವ ಮಂಗಳಸೂತ್ರವು ಪ್ರತಿಯೊಂದು ವಿವಾಹಿತ ಮಹಿಳೆಯರು ದಾಂಪತ್ಯದ ಶಾಶ್ವತ ಬಂಧವನ್ನು ಸಂಕೇತಿಸಲು ಧರಿಸುವ ಹಾರವಾಗಿದೆ. ಈ ಸರಳವಾದ ಹಾರವು ಹಲವಾರು ದಶಕಗಳಿಂದ ಹಲವಾರು ರೂಪಗಳನ್ನು ಪಡೆದುಕೊಂಡಿದೆ. ಆದರೆ ಅದರ ಸಂಪ್ರದಾಯಗಳು ಮತ್ತು ಪ್ರಸ್ತುತತೆ ಒಂದೇ ಆಗಿವೆ. ಆದುದರಿಂದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ನ.8 ರಿಂದ ಕರಿಮಣಿ ಮೇಳವನ್ನು ಆಯೋಜಿಸಿದ್ದು, ಈ ಪ್ರಯುಕ್ತ ಹಳೆಯ ಚಿನ್ನ ಅಥವಾ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿ ಹಳೇ ಚಿನ್ನಕ್ಕೆ ಪ್ರತೀ ಗ್ರಾಂಗೆ ರೂ. 100 ಅಧಿಕ ದರ ಪಡೆಯಬಹುದು. ನಮ್ಮಲ್ಲಿ ಸುಮಾರು 1500ಕ್ಕೂ ಮಿಕ್ಕಿದ ಕರಿಮಣಿ ಸರಗಳ ವಿನೂತನ ಕಲೆಕ್ಷನ್ಗಳು ಉಡುಗೊರೆಗಳೊಂದಿಗೆ ಗ್ರಾಹಕರ ಆಯ್ಕೆಗೆ ತಕ್ಕಂತೆ…
ಮಡಿಕೇರಿ ನ.7 NEWS DESK : ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿರಾಜಪೇಟೆ ಕರ್ನಾಟಕ ಸಂಘದ ಶಾಲಾ ವಿಭಾಗ ಮತ್ತು ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸ್ಫರ್ಧೆಗಳನ್ನು ಆಯೋಜಿಸಿದ್ದರು. ಶಾಲಾ ವಿಭಾಗದಲ್ಲಿ ತ್ರಿವೇಣಿ ಆಂಗ್ಲ ಮಾಧ್ಯಮ ಸಂಸ್ಥೆಯ ಪ್ರಾಥಮಿಕ ವಿಭಾಗವು ನೃತ್ಯದಲ್ಲಿ ಪ್ರಥಮ ಬಹುಮಾನ, ಫ್ರೌಢಶಾಲಾ ಬಾಲಕಿಯರು ನೃತ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದರು. ಸಾರ್ವಜನಿಕ ವಿಭಾಗದಲ್ಲಿ ಸಂಸ್ಥೆಯ ಶಿಕ್ಷಕಿ ಆಶಾ, ಅಕ್ಕಮ್ಮ , ಕೊಡವ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದರೆ. ಮತ್ತೊಬ್ಬ ಶಿಕ್ಷಕಿ ಜ್ಯೋತಿ, ಕನ್ನಡ ಗಾಯನದಲ್ಲಿ ತೃತೀಯ ಸ್ಥಾನಗಳಿಸಿದರು.
ಮಡಿಕೇರಿ ನ.7 NEWS DESK : ಮರಗೋಡು ಎಸ್ ಕೆ ಎಫ್ ಸಿ ವತಿಯಿಂದ ಪ್ರಥಮ ಬಾರಿಗೆ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯವು ನ.8 ಮತ್ತು 9 ಮರಗೋಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಮೊಗೇರ ಜನಾಂಗದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿದ್ದು, ಒಟ್ಟು 7 ಮಾಲೀಕತ್ವದ 7 ತಂಡಗಳು ಪಾಲ್ಗೊಳ್ಳಲಿದೆ. ಮ್ಯಾಡ್ರಿಡ್ ಎಫ್ ಸಿ ಸುಂಟಿಕೊಪ್ಪ, ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ, ಎಂ ಎಫ್ ಸಿ ಅಮ್ಮತಿ, ಅಮೃತ ಮೊಗೇರ ಫ್ರೆಂಡ್ಸ್ ಸಿದ್ದಾಪುರ, ಸೋಕರ್ ಯುನೈಟೆಡ್ ಅಮ್ಮತಿ, ಭಗವತಿ ಹಾಲುಗುಂದ, ಎಸ್ ಕೆ ಎಫ್ ಸಿ ಮರಗೋಡು, ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಪಂದ್ಯ ಕೂಟದ ಚಾಂಪಿಯನ್ ತಂಡಕ್ಕೆ 44444 ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 22222 ನಗದು ಹಾಗೂ ಆಕರ್ಷಕ ಟ್ರೊಫಿ ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೊಫಿ ಹಾಗೆಯೇ ವೈಯಕ್ತಿಕ ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ. ಕ್ರೀಡಾ…






