ಲೇಖಕ: admin

ಸುಂಟಿಕೊಪ್ಪ ಜ.31 NEWS DESK : ಸುಂಟಿಕೊಪ್ಪದ ಮಿಡ್‍ಸಿಟಿ ವತಿಯಿಂದ 3ನೇ ವರ್ಷದ ರಾಷ್ಟ್ರ ಮಟ್ಟದ 5 ಮಂದಿ ಆಟಗಾರರ ಫುಟ್ಬಾಲ್ ಪಂದ್ಯಾವಳಿಗೆ ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎ.ಲೋಕೇಶ್‍ಕುಮಾರ್ ಅವರು ಚಾಲನೆ ನೀಡಿದರು. ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ  ಆಯೋಜಿತಗೊಂಡಿರುವ 3 ದಿನಗಳ ಕಾಲದ ಹೊನಲು ಬೆಳಕಿನ ರಾಷ್ಟ್ರಮಟ್ಟದ ಫುಟ್ಬಾಲ್ ಒದೆಯುವ ಮೂಲಕ ಚಾಲನೆ ನೀಡಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್.ಸುನಿಲ್‍ಕುಮಾರ್, ಕಡಗಾದಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ, ಬ್ಲೂಬಾಯ್ಸ್ ಯುವಕ ಸಂಘದ ವ್ಯವಸ್ಥಾಪಕ ಟಿ.ಯು.ಪ್ರಸನ್ನ ಮಿಡ್‍ಸಿಟಿ ಸಂಘದ ಹಮೀದ್ ಸೇರಿದಂತೆ ಹಾಜರಿದ್ದರು.  ಈ ಪಂದ್ಯಾವಳಿಯಲ್ಲಿ 32 ತಂಡಗಳು ನೋಂದಾವಣಿಗೊಂಡಿದೆ. ಉದ್ಘಾಟನಾ ಪಂದ್ಯಾವಳಿಯು ಗೋವಾ ಮತ್ತು ಮಿಡ್‍ಸಿಟಿ ಜೂನಿಯರ್ ತಂಡಗಳ ನಡುವೆ ನಡೆಯಿತು.

Read More

ಸುಂಟಿಕೊಪ್ಪ ಜ.31 NEWS DESK : ಕೊಡಗು ಜಿಲ್ಲಾ ಮರ ಕೆಲಸ ಹಾಗೂ ತಲೆ ಹೊರೆ ಸಂಘದ 2026-27ನೇ ಸಾಲಿನ ಅಧ್ಯಕ್ಷರಾಗಿ ಆರ್.ಕೆ.ಹರೀಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ.ಕುಟ್ಟಪ್ಪ ಅವರುಗಳನ್ನು ಪುನರಾಯ್ಕೆ ಮಾಡಲಾಯಿತು. ಸಂಘದ ಕಚೇರಿ ಆವರಣದಲ್ಲಿ ನಡೆಸಲಾದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ರಮೇಶ್, ಸಹಕಾರ್ಯದರ್ಶಿಯಾಗಿ ಕೆ.ವಿಜಯ್, ಖಜಾಂಚಿಯಾಗಿ ಅಜೀತ್‍ಕುಮಾರ್, ಗೌರವ ಅಧ್ಯಕ್ಷರಾಗಿ ಟಿ.ಪಿ.ಮುತ್ತಯ್ಯ, ಸಮಿತಿ ಸದಸ್ಯರುಗಳಾಗಿ ಸತೀಶ, ಕುಂಞಕುಟ್ಟಿ, ರಾಧಕೃಷ್ಣ, ಬಾಪ್ಪುಟಿ, ಮುಸ್ತಾಫ, ಹಾಗೂ ಅಮನ್ ಅವರುಗಳನ್ನು ಆಯ್ಕೆಗೊಳಿಸಲಾಯಿತು.

Read More

ವಿರಾಜಪೇಟೆ ಜ.31 NEWS DESK : ಪಯ್ಯವೂರು ಕಿರಾಥಮೂರ್ತಿಯ ಪ್ರತಿನಿಧಿ ಎಂದು ಪರಿಗಣಿಸಲಾದ ಕೊಮರಥಚ್ಚನ್, ಕೊಡಗು ಮತ್ತು ಕೇರಳೀಯರು ಜಂಟಿಯಾಗಿ ಆಯೋಜಿಸುವ ಪಯ್ಯಾವೂರು ಶಿವ ಕ್ಷೇತ್ರದ ಊಟು ಉತ್ಸವಕ್ಕಾಗಿ ಕೊಡಗಿನ ಪ್ರಮುಖ ಪೂರ್ವಜರ ಮನೆಗಳಿಗೆ ಕೇರಳದ ಪಯ್ಯಾವೂರು ದೇವಾಲಯದಿಂದ ಕಾಲ್ನಡಿಗೆಯಲ್ಲಿ ಹೊರಟು ಕೊಡಗಿಗೆ ತಲುಪಿದ್ದಾರೆ. ಪಯ್ಯವೂರಪ್ಪನ ಊಟು ಉತ್ಸವದ ಉದ್ಘಾಟನಾ ಸಮಾರಂಭ “ಊಟುರೈಚ್ ಪೋಕಲ್” ಮಕರ ಮಾಸದ 15 ರಂದು ಪ್ರಾರಂಭವಾಯಿತು.  ಕೋಮರಥಚ್ಚನ್ ಮಕರಂ 15 ರಂದು ಅವರು “ಕಚಿಲ” ಎಂಬ ವಿಶೇಷ ಆಚರಣೆಗಳನ್ನು ಮಾಡಿದ ನಂತರ, “ಕಡುತಿಲ” ಎಂಬ ವಿಶೇಷ ಪವಿತ್ರ ಆಯುಧವನ್ನು ಸ್ವೀಕರಿಸಿ, ದೇವಾಲಯದಲ್ಲಿ ಬೆಳಗ್ಗಿನ ಜಾವ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ ಬಳಿಕ ವಿಶೇಷ ಛತ್ರಿಯನ್ನು ತೆಗೆದುಕೊಂಡು ಪೂರ್ವಕ್ಕೆ ಇರುವ ಕೊಡಗಿನ ಅರಣ್ಯದ ಕಡೆಗೆ ಹೆಜ್ಜೆ ಹಾಕಿದರು. ಕೋಮರಥಚ್ಚನ್ ಕೇರಳದ ಗಡಿಯಲ್ಲಿರುವ ಕಾಂಜಿರಕೊಲ್ಲಿಯಲ್ಲಿರುವ ಉಡುಂಬಾ ನದಿಯನ್ನು ದಾಟಿ, ಕಾಡಿನ ಮೂಲಕ ಕಾಲ್ನಡಿಗೆಯಲ್ಲಿ ಕಡಿದಾದ ಪರ್ವತವನ್ನು ಹತ್ತಿ ಕೊಡಗಿಗೆ ಆಗಮಿಸಿದರು. ಮೊದಲ ದಿನ, ಅವರು ಸಂಜೆ…

Read More

ವಿರಾಜಪೇಟೆ ಜ.31 NEWS DESK :  ಹೆಗ್ಗಳ ಗ್ರಾಮದಲ್ಲಿರುವ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು. ಮೂರು ದಿವಸಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಹೋತ್ಸವವು ತೆರೆ ಕಂಡಿತು. ಮೊದಲ ದಿವಸ ಮಹಾಪೂಜೆ, ಪ್ರಸಾದ ಶುದ್ದಿ ಕ್ರಿಯೆಗಳು, ಆಚಾರ್ಯವರಣಂ ಸೇವೆಗಳು ನಡೆದವು. ಎರಡನೆಯ ದಿನದಂದು ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಬೆಳಿಗ್ಗೆ ಮಹಾ ಗಣಪತಿ ಹೋಮ, ಉಷಾ ಪೂಜೆ, ಕಲಶಾಭಿಷೇಕ, ಉಷಾ ಪೂಜೆ, ಬ್ರಹ್ಮ ಕಳಸ ಪೂಜೆ, ಪರಿಕಳಸ ಸೇವೆಗಳನ್ನು ನೆರವೇರಿಸಿ ಧ್ವಜಾರೋಹಣವನ್ನು ಮಾಡಲಾಯಿತು. ಮಧ್ಯಾಹ್ನ ಮಹಾಪೂಜೆ ಜರುಗಿತು. ಸಂಜೆ ಆದಿವಾಸ ಹೋಮ, ದೀಪಾರಾಧನೆ, ಕಲಶಾದಿವಸಂ ಸೇವೆಯು ನಡೆಯಿತು. ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಸಂಪ್ರದಾಯದಂತೆ ಆಡಳಿತ ಮಂಡಳಿಯವರು ತೆರಳಿ ಮಹಾಗಣಪತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಎಡಮಕ್ಕಿ ಸಾರ್ವಜನಿಕ ಮೈದಾನದಿಂದ ತಾಲಪೊಲಿ ಮೆರವಣಿಗೆಯು ನಡೆಯಿತು. ಭಕ್ತಾದಿಗಳು ಹೂವುಗಳನ್ನು ತಟ್ಟೆಗಳಲ್ಲಿ ಹಿಡಿದುಕೊಂಡು ದೀಪಗಳನ್ನು ಬೆಳಗಿಸಿ ಮೆರವಣಿಗೆಯಲ್ಲಿ ಸಾಗಿದರು.…

Read More

ಮಡಿಕೇರಿ ಜ.31 NEWS DESK : ಮೈಸೂರು- ಕುಶಾಲನಗರ ನಡುವಿನ ಸುಮಾರು 87 ಕಿ.ಮೀ ಉದ್ದದ ರೈಲು ಮಾರ್ಗದ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಪೂರ್ಣಗೊಳಿಸಿದೆ. ಆದರೆ ಸಂಸದ ಯದುವೀರ್ ಒಡೆಯರ್ ಅವರು ಈ ವಿಚಾರದಲ್ಲಿ ರಾಜ್ಯ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಟೀಕಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರು- ಕುಶಾಲನಗರ ರೈಲು ಮಾರ್ಗದ ಯೋಜನೆ ಆರ್ಥಿಕವಾಗಿ ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ರೈಲ್ವೆ ಇಲಾಖೆ ಈ ಯೋಜನೆಯನ್ನು ಕೈಬಿಟ್ಟಿದೆ. ಆದರೆ ಸಂಸದರು ರಾಜ್ಯ ಸರಕಾರ ಭೂಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿಳಂಬ ಮಾಡಿರುವುದು ಕಾರಣವೆಂದು ಸುಳ್ಳು ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯದುವೀರ್ ಒಡೆಯರ್ ಅವರು ಸಂಸದರಾದ ನಂತರ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ. ರಾಜ್ಯದ ಒಟ್ಟು 236 ತಾಲ್ಲೂಕುಗಳಲ್ಲಿ ಕೊಡಗು ಜಿಲ್ಲೆಯ 5 ತಾಲ್ಲೂಕುಗಳು ಸೇರಿದಂತೆ 80 ತಾಲ್ಲೂಕುಗಳಿಗೆ ಇಂದಿಗೂ ರೈಲ್ವೆ ಮಾರ್ಗವಿಲ್ಲ ಎಂದರು. ಕರಕುಶಲ ಕರ್ಮಿಗಳಿಗೆ ಉತ್ತೇಜನ ನೀಡಲು ‘ಒಂದು…

Read More

ಕುಶಾಲನಗರ, ಜ.31 NEWS DESK : ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡ ತೋಳೂರು ಶೆಟ್ಟಳ್ಳಿ ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಕೆ.ಎನ್.ಪುಣ್ಯ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕೊಪ್ಪಳದಲ್ಲಿ ಫೆ.7 ಮತ್ತು 8 ರಂದು ನಡೆಯಲಿರುವ  ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಕೊಡಗು ಜಿಲ್ಲೆಯಿಂದ ಆಯ್ಕೆಗೊಂಡಿರುವ ವಿದ್ಯಾರ್ಥಿನಿ ಪುಣ್ಯಳನ್ನು ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಅಭಿನಂದಿಸಿ ಗೌರವಿಸಿದರು. ಈ ಸಂದರ್ಭ ಶಾಲಾ ಶಿಕ್ಷಕರು ಇದ್ದರು. ವಿದ್ಯಾರ್ಥಿನಿ ಪುಣ್ಯ, ಕುಶಾಲನಗರ ತಾಲ್ಲೂಕಿನ‌ ಕೂಡ್ಲೂರು ಗ್ರಾಮದ ಕೆ.ಎನ್.ನಾಗರಾಜ ಮತ್ತು ರಜನಿ ದಂಪತಿಯ ಪುತ್ರಿ.

Read More

ನಾಪೋಕ್ಲು ಜ.31 : NEWS DESK : ಸಂಪಾಜೆ ಗ್ರಾಮದ ಪೆಲ್ತಡ್ಕ, ಗೂನಡ್ಕದ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ರಾತ್ರಿ ವೇಳೆ ಕೃಷಿ ತೋಟಕ್ಕೆ ನುಗ್ಗಿ ಬೆಳೆಗಳನ್ನು ನಾಶ ಪಡಿಸಿದ ಘಟನೆ ಸಂಭವಿಸಿದೆ. ಗೂನಡ್ಕದ ಪ್ರಮೀಳ ಅವರ ಮನೆಯ ಮುಂಭಾಗದಲ್ಲಿ ಕಾಡಾನೆ ಹಿಂಡು ಕಾಣಿಸಿಕೊಂಡಿದೆ. ಭಯಗೊಂಡ ಮನೆಯವರು ಸಿಡಿಮದ್ದು ಸಿಡಿಸಿ(ಹೊಡಿಸಿ) ಆನೆಗಳನ್ನು ಓಡಿಸಿದ್ದಾರೆ. ನಂತರ ಕಾಡಾನೆ ಹಿಂಡು ತೋಟಕ್ಕೆ ನುಗ್ಗಿ, ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಹಾನಿಮಾಡಿದೆ. ಅಲ್ಲದೆ ಅಕ್ಕ ಪಕ್ಕದ ನಿವಾಸಿಗಳಾದ ಗಣೇಶ, ಜಗನ್ನಾಥ, ವಸಂತ, ಮನಮೋಹನ ಅವರ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿ ಮಾಡಿದೆ. ಕಾಡಾನೆ ದಾಂಧಲೆಯಿಂದ ಈ ವ್ಯಾಪ್ತಿಯ ಕೃಷಿಕರು ಆತಂಕಕ್ಕೆ ಒಳಗಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆನೆ ಹಾವಳಿಯನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಮತ್ತು ಹಾನಿಗೊಳಗಾದವರಿಗೆ ನಷ್ಟ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವರದಿ : ದುಗ್ಗಳ ಸದಾನಂದ. 

Read More

ನಾಪೋಕ್ಲು ಜ.31 NEWS DESK : ಕಕ್ಕಬ್ಬೆ ಕೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ ಚಂಡೀರ ಲೀಲಾವತಿ ಉತ್ತಪ್ಪ ಅವರನ್ನು ಬೀಳ್ಕೊಡಲಾಯಿತು. ಶಾಲಾ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಚಂಡೀರ ಲೀಲಾವತಿ ಉತ್ತಪ್ಪ ಅವರನ್ನು ಆಡಳಿತ ಮಂಡಳಿ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ ಶಾಲಾ ಪರವಾಗಿ ಸನ್ಮಾನಿಸಿ ಶುಭ ಹಾರೈಸಿದರು. ಈ ಸಂದರ್ಭ ಶಾಲಾ ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕ ವೃಂದ ಉಪಸ್ಥಿತರಿದ್ದರು. ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಕಕ್ಕಬ್ಬೆ ಕೇಂದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿ ಚಂಡೀರ ಲೀಲಾವತಿ ಉತ್ತಪ್ಪ 34 ವರ್ಷ ಸೇವೆಯನ್ನು ಸಲ್ಲಿಸಿದ್ದರು. ವರದಿ : ದುಗ್ಗಳ ಸದಾನಂದ.

Read More

ವಿರಾಜಪೇಟೆ ಜ.31 NEWS DESK : ವಿರಾಜಪೇಟೆ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆಯ ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಮತ್ತು ಸಂತ ಅನ್ನಮ್ಮ ಶಾಲೆ ಸಂಯುಕ್ತ ಆಶ್ರಯದಲ್ಲಿ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಮತ್ತು ಜಾಗೃತಿ ಜಾತ ನಡೆಯಿತು. ಸಂತ ಅನ್ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದ ಟಿನಾ ಪೆರ್ನಾಂಡಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ವಿರಾಜಪೇಟೆ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಟರಾಜ ಅವರು ಉದ್ಘಾಟಿಸಿ ಮಾತಾನಾಡಿ, ರಸ್ತೆಗಳು ನಮ್ಮ ಬದುಕಿನ ಭಾಗ. ನಾವು ಪ್ರತಿದಿನ ಮಾಡುವಂತಹ ಕೆಲಸ ಕಾರ್ಯಗಳನ್ನು ರಸ್ತೆಯಿಲ್ಲದೆ ಮಾಡಲು ಸಾಧ್ಯವಿಲ್ಲ. ನಮ್ಮ ಜೀವನದ ಭಾಗವಾಗಿರುವ ರಸ್ತೆಗಳನ್ನು ಹೇಗೆ ಉಪಯೋಗ ಮಾಡಬೇಕು, ಎಷ್ಟು ಮುಖ್ಯವಾಗಿ ನಾವು ನಮ್ಮ ಜೀವವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸುವ ಉದ್ದೇಶವೆ ಈ ಕಾರ್ಯಕ್ರಮದ ಮುಖ್ಯ ದ್ಯೇಯ ಎಂದು ಹೇಳಿದರು. ನನ್ನ ವೃತ್ತಿ ಬದುಕಿನಲ್ಲಿ ಹಲವಾರು ಅಪಘಾತ ಪ್ರಕರಣಗಳನ್ನು ನೋಡಿದ್ದೇನೆ, ಆದರೆ ಭಾರತ ದೇಶದಲ್ಲಿ ಅತ್ಯಂತ…

Read More

ಮಡಿಕೇರಿ ಜ.31 NEWS DESK :  ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ಮುಂದಿನ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡುವಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಸಚಿವರ ಗಮನ ಸೆಳೆದರು. ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೈಲ್ಡ್ ಲೈಫ್ ಸೆಂಚುರಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾಗೂ ಪುಷ್ಪಗಿರಿ – ಬೀದಳ್ಳಿ – ಸುಬ್ರಹ್ಮಣ್ಯದವರೆಗೆ ರಸ್ತೆ ನಿರ್ಮಾಣ, ಮಡಿಕೇರಿ ತಾಲ್ಲೂಕಿನ ಗಾಳಿಬೀಡು ವಣಚಲು – ಕಡಮಕಲ್ಲು ರಸ್ತೆ ನಿರ್ಮಾಣ ಹಾಗೂ ಮುಂದಿನ ಬಜೆಟ್ ಅನುದಾನ ಘೋಷಣೆ ಮಾಡುವ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದರು.

Read More