ಲೇಖಕ: admin

ಮಡಿಕೇರಿ ಜು.13 NEWS DESK : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಮಾನವ ಅಭಿವೃದ್ದಿ ವರದಿ-2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ದಿ ಯೋಜನೆ-2031 ರ ವರದಿಗಳನ್ನು ಸಿದ್ದಪಡಿಸುವ ಸಂಬಂಧ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಸೋಮವಾರ ಸುಧೀರ್ಘ ಚರ್ಚೆ ನಡೆಯಿತು.  ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೊಡಗು ಜಿಲ್ಲಾ ಪಂಚಾಯತ್ ಮಡಿಕೇರಿ ರವರಿಗೆ, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ತಾಂತ್ರಿಕ ಬೆಂಬಲ ಸಂಸ್ಥೆಯ ಸಂಯೋಜಕರು, ಸಹ ಸಂಯೋಜಕರಿಗೆ ನವೀನ್ ಎ.ಬಿ.ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ಅವರು ಸ್ವಾಗತ ಕೋರಿದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ ಯೋಜನಾ ಇಲಾಖೆಯ ನಿರ್ದೇಶನದಂತೆ ಈ ಬಾರಿ ಜಿಲ್ಲಾ ಯೋಜನಾ ಸಮಿತಿ ವತಿಯಿಂದ ಪ್ರಮುಖವಾಗಿ ಡಿಎಚ್‍ಡಿಆರ್-2025 ಹಾಗೂ ಐಎಸ್‍ಡಿಡಿಪಿ-2031 ರ ವರದಿಗಳನ್ನು ಸಿದ್ದಪಡಿಸಲು ಕ್ರಮವಹಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಗಾರ ಹಮ್ಮಿಕೊಂಡು ನಿಖರ…

Read More

ಮಡಿಕೇರಿ ಜು.13 NEWS DESK : ಮೂರ್ನಾಡು 33/11 ಕೆ.ವಿ ವಿದ್ಯುತ್ ವಿತರಣಾ ಉಪಕೇಂದ್ರದ ಕೇಂದ್ರದಿಂದ ಹೊರಹೊಮ್ಮುವ ಎಫ್3 ಮೂರ್ನಾಡು ಫೀಡರ್‍ನಲ್ಲಿ ಜುಲೈ, 14 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲ ಬಲವರ್ಧನೆ ಹಾಗೂ ಮಳೆಗಾಲ ಮುಂಜಾಗೃತಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮೂರ್ನಾಡು ಟೌನ್, ಕಿಗ್ಗಾಲು, ಮುತ್ತಾರ್‍ಮುಡಿ, ಬೇತ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.

Read More

ಮಡಿಕೇರಿ ಜು.13 NEWS DESK : ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಜಿಲ್ಲಾ ಮಟ್ಟದ ಫುಟ್‌ಬಾಲ್ ಟೂರ್ನಿಯಲ್ಲಿ ಕೊಡಗು ಜಿಲ್ಲಾ ತಂಡವು ಮತ್ತೊಂದು ಅದ್ಭುತ ಪ್ರದರ್ಶನ ನೀಡಿ ಮಂಡ್ಯ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿ ಸೆಮಿಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದೆ. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೊಡಗು ತಂಡವು ಮಂಡ್ಯ ತಂಡಕ್ಕೆ ಯಾವುದೇ ಅವಕಾಶ ನೀಡದೆ ಸಂಪೂರ್ಣ ಮೇಲುಗೈ ಸಾಧಿಸಿತು. ತಂಡದ ನಾಯಕ ವಿಜು ಮೊದಲ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ನಂತರ ದಿವಾಕರ್ ಮತ್ತು ಸಬಿತ್ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವನ್ನು ಮತ್ತಷ್ಟು ಭದ್ರಪಡಿಸಿದರು. ತಂಡದ ನಾಯಕ ವಿಜು ಅವರ ಸಮರ್ಥ ನಾಯಕತ್ವ, ಆಟಗಾರರ ಸಂಘಟಿತ ಪ್ರದರ್ಶನ ಹಾಗೂ ತರಬೇತಿ ಸಿಬ್ಬಂದಿಯ ಮಾರ್ಗದರ್ಶನದಿಂದ ಕೊಡಗು ತಂಡವು ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ತಂಡದ ಮುಖ್ಯ ಕೋಚ್ ಜಗದೀಶ್ ಪಾಣತಲೆ, ಸಹಾಯಕ ಕೋಚ್ ದೀಪು ಮಾಚ್ಚಯ್ಯ ಹಾಗೂ ತಂಡದ ವ್ಯವಸ್ಥಾಪಕ ದರ್ಶನ್ ಸುಕುಮಾರ್…

Read More

ಕುಶಾಲನಗರ, ಜು.12 NEWS DESK  : ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಪರಿಸರ ಪ್ರೇಮಿಯೂ ಆದ ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ‌ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಅವರಿಗೆ ಶಾಲೆಯಲ್ಲಿ ಎಸ್.ಡಿ.ಎಂ.ಸಿ., ಶಾಲಾ ಶಿಕ್ಷಕ ವೃಂದ, ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಅಭಿನಂದನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರೇಮಕುಮಾರ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. “ಪರಿಸರಕ್ಕಾಗಿ ನಾವು”- ಮಕ್ಕಳ ಪರಿಸರ ಸಂಭ್ರಮ: 2026 ದೊಂದಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿ ವೃಂದ, ವಿವಿಧ ಶಾಲಾ- ಕಾಲೇಜುಗಳು, ವಿವಿಧ ಸಂಘ- ಸಂಸ್ಥೆಗಳು ಸೇರಿದಂತೆ ಕೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಸಮಿತಿ , ಗ್ರಾಮಸ್ಥರು ಹಾಗೂ ನಾಗರಿಕರು ಜತೆಗೂಡಿ ಟಿ.ಜಿ.ಪ್ರೇಮಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಸೇವಾ ನಿವೃತ್ತಿ ಹೊಂದಿದ‌ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮ ಕುಮಾರ್ ಅವರಿಗೆ…

Read More

ಸುಂಟಿಕೊಪ್ಪ ಜು.13 NEWS DESK  : ಮಡಿಕೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸುಂಟಿಕೊಪ್ಪ ವಲಯದ ಗದ್ದೆಹಳ್ಳ ಒಕ್ಕೂಟದ ವತಿಯಿಂದ ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪರಿಸರವನ್ನು ಈಗಿನಿಂದಲೇ ಉಳಿಸಿದರೆ ಮಾತ್ರ ಮುಂದಿನ ಜನಾಂಗಕ್ಕಾಗಿ ಬೇಕಾಗಿದೆ. ಅದ್ದುದರಿಂದ ಪರಿಸರವನ್ನು ಉಳಿಸಿ ಬೆಳೆಸುವ ಬಗ್ಗೆ ತಿಳಿಸಿದರು. ಗಿಡ ನೆಡುವುದು ಒಂದು ದಿನಕ್ಕೆ ಸಿಮೀತವಾಗಬಾರದು ಅದರ ರಕ್ಷಣೆಯನ್ನು ಮಾಡುವುದರ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಶಾಲಾ ಶಿಕ್ಷಕ ಮಂಜುನಾಥ ಅವರು ಮಕ್ಕಳಿಗೆ ಪರಿಸರದ ಉಳಿವಿಗೆ ಮಕ್ಕಳು ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಸುಕುಮಾರ್, ಪಂಚಾಯಿತಿ ಮಾಜಿ ಸದಸ್ಯರುಗಳಾದ ಗೀತಾ, ಪಾರ್ವತಿ ಸೋಮಯ್ಯ, ಎಸ್‍ಡಿಎಂಸಿ ಅಧ್ಯಕ್ಷೆ ಬಲ್ಕಿಸ್…

Read More

ಕುಶಾಲನಗರ ಜು.13 NEWS DESK :  ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ  ಲೋಕಲ್ ಗವರ್ನಿಂಗ್ ಬೋರ್ಡ್ ಹಾಗೂ ಸಾಮಾನ್ಯ ಸಭೆ ನಡೆಯಿತು.  2026-27ನೇ ಸಾಲಿನ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾಗಿರುವ ಜೆಸಿ ರಂಗಸ್ವಾಮಿ, ರೋಟರಿ  ಅಧ್ಯಕ್ಷ  ಸಿ.ಎ. ರುದ್ರೇಶ್ ಪಟೇಲ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕ  ಟಿ.ಜಿ. ಪ್ರೇಮ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೆಸಿಐ ವಲಯ-14ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಜೆಸಿಐ ಕುಶಾಲನಗರ ಕಾವೇರಿಗೆ ಲಭಿಸಿದ “ಔಟ್‌ಸ್ಟ್ಯಾಂಡಿಂಗ್ ಅಧ್ಯಕ್ಷ” ಪ್ರಶಸ್ತಿಯನ್ನು ಅಧ್ಯಕ್ಷ  ಶ್ರೀನಿವಾಸ್ ಬಿ. ಅವರಿಗೆ ಹಾಗೂ “ಔಟ್‌ಸ್ಟ್ಯಾಂಡಿಂಗ್ ಟ್ರೈನಿಂಗ್ ಎಲ್.ಒ.ಎಂ ಪ್ರಶಸ್ತಿಯ ಸಂಬಂಧ ಅಭಿನಂದಿಸಲಾಯಿತು. ಕುಶಾಲನಗರ  ಮಾಜಿ ಅಧ್ಯಕ್ಷರಾದ ಲೋಕೇಶ್ ಸಾಗರ್, ರಜನಿಕಾಂತ್ ಎಂ.ಜೆ., ಪ್ರಶಾಂತ್ ಕೆ.ಡಿ., ಜಗದೀಶ್ ಬಿ., ತೇಜ ದಿನೇಶ್, ಜೆಸಿಐ ಶನಿವಾರಸಂತೆ  ಅಧ್ಯಕ್ಷ ರವಿ ಸಿ. ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷ ಶ್ರೀನಿವಾಸ್ ಬಿ. ವಹಿಸಿದ್ದರು.

Read More

ಕುಶಾಲನಗರ ಜು.13 NEWS DESK :  ಕುಶಾಲನಗರ ಇನ್ನರ್ ವೀಲ್ ಕ್ಲಬ್ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೀತಾಲಕ್ಷ್ಮಿ ಆಯ್ಕೆಯಾಗಿದ್ದಾರೆ.  2026-27ನೇ ಅವಧಿಯ ನೂತನ ತಂಡದ ಪದಗ್ರಹಣ ಸಮಾರಂಭ ನಡೆಯಿತು. ಮಾಜಿ ಅಧ್ಯಕ್ಷರಾದ ಅಶ್ವಿನಿ ರೈ ಅವರು ಪ್ರಮಾಣವಚನ ಬೋಧಿಸಿದರು.  ನೂತನ ಸಾಲಿನ ಕಾರ್ಯದರ್ಶಿಯಾಗಿ ಶಾಲಿನಿ ನರೇಂದ್ರ, ಖಜಾಂಚಿ ಕುಸುಮ ನಟೇಶ ಮತ್ತು ಜಾಸ್ಮಿನ್ ಪ್ರಕಾಶ್, ಚಿತ್ರ ರಮೇಶ್ ಅಧಿಕಾರ ವಹಿಸಿಕೊಂಡರು.  ಡಿ ಚೆನ್ನಮ್ಮ ಶಾಲೆಯ ಮೂರು ವಿದ್ಯಾರ್ಥಿಗಳಿಗೆ ಹಾರ್ದಿಕ ಸಹಾಯದ ಜೊತೆಗೆ ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇನ್ನರ್ ವೀಲ್ ಲೋಪಮುದ್ರ ಪತ್ರಿಕೆಯನ್ನು ರೋಟರಿ ಅಧ್ಯಕ್ಷ ರುದ್ರೇಶ್ ಪಟೇಲ್ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರು ಸಮಿತಿಯ ಸದಸ್ಯರು ಇದ್ದರು.

Read More

ಮಡಿಕೇರಿ ಜು.12 NEWS DESK : ಗಾನ ಕೋಗಿಲೆ ಎಸ್ .ಜಾನಕಿಯವರು ಕೊಡಗಿನಲ್ಲಿಯೂ ಕೆಲವು ದಿನಗಳನ್ನು ಕಳೆದಿದ್ದರು. ಕಾವೇರಿ ನದಿಯ ಉಗಮತಾಣ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲು ಜಾನಕಿ ಅವರು ಕೊಡಗಿಗೆ ಬಂದಿದ್ದರು. ಮಡಿಕೇರಿಯಲ್ಲಿ ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘದ ಸಂಘಟನಾ ಕಾಯ೯ದಶಿ೯ ಎ.ಕೆ.ಜೀವನ್ ಅವರ  ತೋಟದ ಮನೆಯಲ್ಲಿ 2015 ರ ಏಪ್ರಿಲ್ ನಲ್ಲಿ  8 ದಿನಗಳನ್ನು ಕಳೆದಿದ್ದ ಎಸ್.ಜಾನಕಿ ಅವರು ಇಲ್ಲಿದ್ದಷ್ಟು ದಿನ ವಿವಿಧ ಹಾಡುಗಳನ್ನು ಹೇಳುತ್ತಿದ್ದರಂತೆ.  ಕೊಡಗಿನ   ಸುಂದರ ನಿಸಗ೯ದ ಮಡಿಲಲ್ಲಿ ಆ ಸರಸ್ವತಿಯ ಗಾನಾರಾಧನೆಯಲ್ಲಿ ತೊಡಗಿರುವುದು ನನ್ನ ಭಾಗ್ಯ ಎಂಬ ಅವರ ಹೇಳಿಕೆಯನ್ನು ಎಂದು ಜೀವನ್ ಸ್ಮರಿಸಿಕೊಂಡರು. ಕನ್ನಡ ನಾಡಿನ ಜೀವನದಿ.. ಕಾವೇರಿ   ಬಗ್ಗೆ ನಾನೇನೋ ಅನೇಕ  ಹಾಡು ಹೇಳಿದ್ದೆೇನೆ. ಅವೆಲ್ಲವೂ  ಬಹಳ ಜನಪ್ರಿಯವೂ ಆಯಿತು. ಆದರೆ, ಇಂಥ ಮಹಾಮಾತೆಯ ಬಗೆಗಿನ   ಹಾಡು ಹೇಳಿದ ಮೇಲೆ ಆ ಮಹಾಮಾತೆ ಕಾವೇರಿ ಸನ್ನಿಧಿಯನ್ನು  ದಶ೯ನ ಮಾಡದಿದ್ದರೆ ಹೇಗೆ ಎಂದು ತಲಕಾರೇರಿಗೆ ಭೇಟಿ…

Read More

ಮಡಿಕೇರಿ ಜು.13 NEWS DESK : ಕೊಡಗು ಜಿಲ್ಲೆಗೆ ನವ ಮಂಗಳೂರು ಬಂದರು ಸಂಸ್ಥೆಯಿಂದ ಶಾಶ್ವತವಾದ ಜನೋಪಯೋಗಿ ಯೋಜನೆಯನ್ನು ಜಾರಿಗೊಳಿಸಲು ಬದ್ದ ಎಂದು ಸಂಸ್ಥೆಯ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಭರವಸೆ ನೀಡಿದ್ದಾರೆ. ಮಡಿಕೇರಿಗೆ ಭೇಟಿ ನೀಡಿದ್ದ ಸುಶೀಲ್ ಕುಮಾರ್ ಸಿಂಗ್ ಅವರನ್ನು ತಾಜ್ ವಿವಾಂತ ರೆಸಾಟ್೯ನಲ್ಲಿ ಭೇಟಿ ಮಾಡಿದ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮಸ್೯ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್  ನೇತೃತ್ವದ ನಿಯೋಗವು ವಿವಿಧ ಬೇಡಿಕೆಗಳ ಪ್ರಸ್ತಾವನೆ ಸಲ್ಲಿಸಿತು. ಜಿಲ್ಲಾ ಚೇಂಬರ್ ಆಫ್ ಕಾಮಸ್೯ನ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಈ ಸಂದಭ೯ ಪ್ರಸ್ತಾವನೆ ಸಲ್ಲಿಸಿ, ಕೊಡಗು ಜಿಲ್ಲೆಯಿಂದ ಬಹುತೇಕ ಕಾಫಿ ವಹಿವಾಟು ನವ ಮಂಗಳೂರು ಬಂದರಿನ ಮೂಲಕ ಆಗುತ್ತಿದೆ. ನವಮಂಗಳೂರಿನ ಆಥಿ೯ಕ ಲಾಭಕ್ಕೂ ಕೊಡಗಿನಿಂದ ಸರಬರಾಜಾಗುತ್ತಿರುವ ಕಾಫಿ ಪರೋಕ್ಷವಾಗಿ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ನವಮಂಗಳೂರು ಬಂದರು ಟ್ರಸ್ಟ್ ನಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಬಳಸಿ ಕೊಡಗು ಜಿಲ್ಲೆಯಲ್ಲಿ ಜನರಿಗೆ ಪ್ರಯೋಜನವಾಗುವಂಥ ಶಾಶ್ವತ ಯೋಜನೆಯನ್ನು ಜಾರಿಗೊಳಿಸುವಂತೆ ಕೋರಿದರು. ಈ ಪ್ರಸ್ತಾವನೆಗೆ…

Read More

ಮಡಿಕೇರಿ ಜು.13 NEWS DESK : 2026-2027ನೇ ಸಾಲಿನ ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಹಾಗೂ  ತರಗತಿ ಪ್ರತಿನಿಧಿಗಳ ಚುನಾವಣೆ ನಡೆಯಿತು. ಪ್ರತಿ ತರಗತಿಯಿಂದ ತಲಾ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.  ಪ್ರಥಮ ಕಲಾ ವಿಭಾಗದಿಂದ ಅಭಿಜಿತ್ ಹೆಚ್.ಎನ್. ಮತ್ತು ನವ್ಯ ಹೆಚ್. ಜಿ.,ದ್ವಿತೀಯ ಕಲಾ ವಿಭಾಗದಿಂದ ವೇದಾಂತ್ ಪೂವಯ್ಯ ಎಂ. ಟಿ ಮತ್ತು ಪ್ರಜ್ಞಾ. ಪಿ.ಸಿ., ಪ್ರಥಮ ವಾಣಿಜ್ಯ ವಿಭಾಗದಿಂದ ದ್ವಿತೀಯ ವಾಣಿಜ್ಯ ವಿಭಾಗದಿಂದ  ಸಂಜು ಪಿ.ಟಿ ಮತ್ತು ಕಾವ್ಯ ವೈ.ಎಸ್. ಪ್ರಥಮ ವಿಜ್ಞಾನ ವಿಭಾಗದಿಂದ ಮೊಹಮ್ಮದ್ ಹಿಷನ್ ಕೆ.ಎಸ್ ಮತ್ತು ಫ್ಲೆವಿಯ ಅಗ್ನಿಸ್ ಸಿ.ಫ್. ದ್ವಿತೀಯ ವಿಜ್ಞಾನ ವಿಭಾಗದಿಂದ ರಕ್ಷಿತಾ ಎಂ.ಎ ನಂತರ ನಡೆದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾವ್ಯ ವೈ.ಎಸ್.ದ್ವಿತೀಯ ವಾಣಿಜ್ಯ ವಿಭಾಗ, ಜಂಟಿ ಕಾರ್ಯದರ್ಶಿಗಳಾಗಿ ಸಂಜು ಪಿ. ಟಿ. ದ್ವಿತೀಯ ವಾಣಿಜ್ಯ ವಿಭಾಗ ಮತ್ತು ರಕ್ಷಿತಾ ಎಂ.ಎ.ದ್ವಿತೀಯ ವಿಜ್ಞಾನ ವಿಭಾಗ ಇವರು ಅವಿರೋಧವಾಗಿ ಆಯ್ಕೆಯಾದರು.…

Read More