ಮಡಿಕೇರಿ ಅ.23 NEWS DESK : ಮಡಿಕೇರಿ ನಗರಸಭಾ ನಿಧಿಯಿಂದ ಗೌಳಿಬೀದಿಯ ಕಂಚಿಕಾಮಾಕ್ಷಿ ಬಳಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆ ಹಾಗೂ ಕೋದಂಡರಾಮ ದೇವಾಲಯದ ಬಳಿ ನಿರ್ಮಿಸಿರುವ ಡಾಂಬರು ರಸ್ತೆಯನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಮಡಿಕೇರಿ ನಗರ ರಸ್ತೆಗಳು ಗುಂಡಿಮಯವಾಗಿದ್ದು, ಕೆಲವು ರಸ್ತೆಗಳ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಮಡಿಕೇರಿ ನಗರದ ಎಲ್ಲಾ ರಸ್ತೆಯ ಕಾಮಗಾರಿ ಕೈಗೊಳ್ಳಲು ಮುಂದಾಗಲಾಗಿದೆ ಎಂದರು. ನಂತರ ತಾತ್ಕಾಲಿಕ ಕೋಳಿ ಅಂಗಡಿ ವೀಕ್ಷಣೆ ಮಾಡಿದರು. ಚರಂಡಿ ಸರಿಪಡಿಸುವಂತೆ ನಗರಸಭಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್, ಸದಸ್ಯರಾದ ಆರ್.ಪಿ.ಚಂದ್ರಶೇಖರ್, ಮಿನಾಜ್ ಪ್ರವೀಣ್, ಬ್ಲಾಕ್ ಅಧ್ಯಕ್ಷ ಹಂಸ, ನಗರಸಭೆ ಮಾಜಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಜಗದೀಶ್, ಪೌರಾಯುಕ್ತ ಹೆಚ್.ಆರ್.ರಮೇಶ್, ಎಂಜಿನಿಯರ್ ಸತೀಶ್, ಪ್ರಮುಖರಾದ ಯಾಖುಬ್, ಸದಾ ಮುದ್ದಪ್ಪ, ಪ್ರಕಾಶ್ ಆಚಾರ್ಯ, ವಿ.ಜಿ.ಮೋಹನ್,ಎಂ.ಎ.ಫಾರೂಕ್ , ಗಿರೀಶ್, ಕಲಿಲ್ ಭಾಷಾ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.
ಲೇಖಕ: admin
ಸುಂಟಿಕೊಪ್ಪ ಅ.23 NEWS DESK : ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಪೂರ್ವಬಾವಿ ಸಭೆ ನಡೆಯಿತು. ಸುಂಟಿಕೊಪ್ಪದ ದ್ವಾರಕ ಸಭಾಂಗಣದಲ್ಲಿ ಹೋಬಳಿ ಕ.ಸಾ.ಪ.ಅಧ್ಯಕ್ಷ ಪಿ.ಎಫ್.ಸಭಾಸ್ಟೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಕನ್ನಡ ವೃತ್ತ ಸ್ಥಾಪನೆಗೆ ಕಾರ್ಯನಿರ್ವಹಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕ್ಲಾಡಿಯಸ್ ಲೋಬೋ ಅವರನ್ನು ಮತ್ತು ಕನ್ನಡ ಪರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸಿರುವ ಜಾಹಿದ್ ಅಹ್ಮದ್ ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಮುಖ್ಯ ಭಾಷಣಕಾರರನ್ನು ಆಹ್ವಾನಿಸುವ ಚರ್ಚೆ ನಡೆಯಿತು. ಕುಶಾಲನಗರ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ ನ.11 ರಂದು ಕುಶಾಲನಗರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ 5 ಸಹಸ್ರ ಮಂದಿಯಿಂದ ಏಕಕಂಠದಿಂದ ಏಕಕಾಲದಲ್ಲಿ ಕನ್ನಡನಾಡಗೀತೆ, ರೈತಗೀತೆ ಮತ್ತು ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಗೀತಾ ಗಾಯನದ ಕುರಿತು ಮಾಹಿತಿಯನ್ನು ನೀಡಿದರು. ಸುವರ್ಣ…
ಮಡಿಕೇರಿ ಅ.23 NEWS DESK : ಕೊಡಗು ಜಿಲ್ಲೆಯ ಚುಟುಕು ಕವಿ ಹಾ.ತಿ.ಜಯಪ್ರಕಾಶ್ ವಿರಚಿತ ಚುಟುಕು ಕವಿತೆಗಳ ಹನಿ ಎಂಬ ಸಂಕಲನ ಅ.27 ರಂದು ಲೋಕಾಪ೯ಣೆಯಾಗಲಿದ್ದು, ನಾಡಿನ ಹೆಸರಾಂತ ಕವಿ, ಸಾಹಿತಿ ಡಾ. ಬಿ.ಆರ್.ಲಕ್ಷ್ಮಣರಾವ್ ಹನಿಯನ್ನು ಲೋಕಾಪ೯ಣೆಗೊಳಿಸಲಿದ್ದಾರೆ. ಕುಶಾಲನಗರದಲ್ಲಿನ ಹಾ.ತಿ ಜಯಪ್ರಕಾಶ್ ಅವರ ನಿವಾಸ ವರವರದ ದಲ್ಲಿ ಬೆಳಗ್ಗೆ 10.30 ಗಂಟೆಗೆ ಹನಿ ಕೖತಿಯ ಲೋಕಾಪ೯ಣೆ ಕಾಯ೯ಕ್ರಮ ನಡೆಯಲಿದ್ದು, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾ ಅಧ್ಯಕ್ಷ ಟಿ.ಪಿ.ರಮೇಶ್, ಸಾಹಿತಿ ನಾಗೇಶ್ ಕಾಲೂರು ಪಾಲ್ಗೊಳ್ಳಲಿದ್ದಾರೆ. 160 ಚುಟುಕಗಳು ಹನಿ ಸಂಕಲನದಲ್ಲಿದೆ ಎಂದು ಪ್ರಕಾಶಕರಾದ ಅನಿಲ್ ಹೆಚ್. ಟಿ. ಮಾಹಿತಿ ನೀಡಿದ್ದಾರೆ.
ಮಡಿಕೇರಿ ಅ.23 NEWS DESK : ಕೊಡಗು ಪತ್ರಿಕಾ ಭವನ ಟ್ರಸ್ಟ್ ನ 23ನೇ ವಾರ್ಷಿಕೋತ್ಸವ ನ.8 ರಂದು ನಡೆಯಲಿದ್ದು, ಇದರ ಪ್ರಯುಕ್ತ ನ.3 ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬಸ್ಥರಿಗೆ ಒಳಾಂಗಣ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್ ಸಿಂಗಲ್ಸ್ ಮತ್ತು ಡಬಲ್ಸ್, ಕೇರಂ ಸಿಂಗಲ್ಸ್, ಡಬಲ್ಸ್ ಮತ್ತು ಚೆಸ್ ಪಂದ್ಯಾವಳಿ ನಡೆಯಲಿದೆ. ಚೆಸ್ ಪಂದ್ಯಾವಳಿಯನ್ನು 15 ವರ್ಷ ವಯೋಮಿತಿಯ ಒಳಗಿನ ಮತ್ತು ಅದಕ್ಕೆ ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ನಡೆಸಲಾಗುತ್ತದೆ. ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವವರು ದಯವಿಟ್ಟು ಚೆಸ್ ಬೋರ್ಡ್ ತರಬೇಕೆಂದು ಟ್ರಸ್ಟ್ ನ ಪ್ರಧಾಮ ಕಾರ್ಯದರ್ಶಿ ಎಸ್.ಜಿ.ಉಮೇಶ್ ಮನವಿ ಮಾಡಿದ್ದಾರೆ. ಟಿಟಿ, ಕೇರಂ, ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವವರು ವ್ಯವಸ್ಥಾಪಕರು, ಪತ್ರಿಕಾ ಭವನ ಮೊ.8970565856 ಇವರನ್ನು ಸಂಪರ್ಕಿಸಬಹುದು.
ಮೈಸೂರು ಅ.23 NEWS DESK : ಕುಶಾಲನಗರ ತಾಲ್ಲೂಕಿನ ಕಣಿವೆ ಗ್ರಾಮದ ಖ್ಯಾತ ಕಾದಂಬರಿಕಾರ ಭಾರದ್ವಾಜ ಕೆ.ಆನಂದತೀರ್ಥ ಅವರೊಡನೆ ‘ಕನ್ನಡ ಓದುಗರ ಒಕ್ಕೂಟ 2012 ಮೈಸೂರು’ ಸಂಸ್ಥೆಯಿಂದ ಸಂವಾದ ಕಾರ್ಯಕ್ರಮ ನಡೆಯಿತು. ತಿಂಗಳಿಗೊಂದು ಕನ್ನಡ ಪುಸ್ತಕ ಓದಿ ಆ ಕುರಿತು 2012ರಿಂದ ಚರ್ಚೆ, ಸಂವಾದ ನಡೆಸುತ್ತಾ ಬರುತ್ತಿರುವ ಮೈಸೂರಿನ ಮಹಿಳಾ ಸಾಹಿತ್ಯ ಓದುಗರ ಒಕ್ಕೂಟ ಈ ಬಾರಿ ಕಾಳಿದಾಸ ರಸ್ತೆಯ ‘ಅನ್ ಬಾಂಡ್ ಎಸ್ಕೆಪ್ ರೂಂ’ ಸಭಾಂಗಣದಲ್ಲಿ ಭಾರದ್ವಾಜ ಆನಂದ ತೀರ್ಥ ಅವರ ‘ವೀರಲೋಕ’ ಪ್ರಕಾಶನದಿಂದ ಮರುಮುದ್ರಣ ಕಂಡಿರುವ ‘ಕ್ರಮಣ’ ಕಾದಂಬರಿ ಕುರಿತು ಸಂವಾದ ನಡೆಸಿದರು. ಈ ಸಂದರ್ಭ ಕಾದಂಬರಿ ಕುರಿತು ಓದುಗರು ತಮ್ಮ ಅಭಿಪ್ರಾಯ ಹಂಚಿಕೊಂಡರಲ್ಲದೆ ಕಾದಂಬರಿಯ ರಚನೆ ಕುರಿತು ಲೇಖನದೊಂದಿಗೆ ಚರ್ಚಿಸಿ, ಮಾತುಕತೆ ನಡೆಸಿದರು. ಕಾದಂಬರಿ ರಚನೆಯ ಕ್ರಮದ ಕುರಿತು ಓದುಗರೊಬ್ಬರ ಪ್ರಶ್ನೆಗೆ ಉತ್ತರಿಸಿದ ಭಾರದ್ವಾಜರು ‘ಕಾದಂಬರಿಯ ವಿಷಯ ಸಹಜವಾಗಿ ಬರಹಗಾರನಿಗೆ ದಕ್ಕಿದ ಅನುಭವ ಆಗಿದ್ದಲ್ಲಿ ಅದು ಓದುಗರನ್ನು ಹೆಚ್ಚು ತಲುಪಲು ಸಾಧ್ಯ ಅಂದರು. ಯಾವುದೇ ಪೂರ್ವಾಪರ ಹಾಗೂ…
ಮಡಿಕೇರಿ ಅ.23 NEWS DESK : ಮಡಿಕೇರಿಯಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ವಿರಾಜಪೇಟೆಯ ಜೈ ಭಾರತ ಸೇನಾ ತರಬೇತಿ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಪಾಲ್ಗೊಂಡು ಅಗ್ನಿಪಥ್ ಸೇವೆಗೆ ಆಯ್ಕೆಯಾಗಿದ್ದಾರೆ. ಬಿಟ್ಟಂಗಾಲ ಗ್ರಾಮದ ರಾಜಪ್ಪ ಮತ್ತು ಧನಲಕ್ಷ್ಮಿ ದಂಪತಿಯ ಪುತ್ರ ಎ.ಆರ್.ಯೋಗೇಶ್, ಮಹಾರಾಷ್ಟ್ರದ ಆರ್ಮಡ್ ಕೋರ್ ಜನರಲ್ ಡ್ಯೂಟಿಗೆ, ಅಮ್ಮತ್ತಿ ಗ್ರಾಮದ ಮುರುಳಿ ಹಾಗೂ ಮಾದೇವಿ ದಂಪತಿಯ ಪುತ್ರ ಎಂ.ಎಂ.ಪ್ರತಾಪ್ ಹೈದರಾಬಾದ್ ನ ಆಟ್ಲರಿ ವಿಭಾಗಕ್ಕೆ, ಮಾದಾಪುರದ ವಿನೋದ್ ಕುಮಾರ್ ಹಾಗೂ ಪ್ರೇಮಾ ದಂಪತಿಯ ಪುತ್ರ ಎಸ್.ವಿ.ವರುಣ್ ಮಧ್ಯ ಪ್ರದೇಶ ಇನ್ಫೆಂಟ್ರೀ ವಿಭಾಗ ಹಾಗೂ ಮೂರ್ನಾಡಿನ ದಿ.ಲವ ಅಪ್ಪಣ್ಣ ಹಾಗೂ ಜಯ ಬೊಳ್ಳಮ್ಮ ದಂಪತಿಯ ಪುತ್ರ ಪಿ.ಎಲ್. ಸುಬ್ರಮಣಿ ಬೆಂಗಳೂರು ಎಂ.ಇ.ಜಿ ನಲ್ಲಿ ಅಗ್ನಿಪಥ್ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದಾರೆ. ಇವರು ನಿವೃತ್ತ ಸೇನಾನಿ ಕೆ.ಬಿ.ಲವ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.
ಗೋಣಿಕೊಪ್ಪ ಅ.23 NEWS DESK : ಪೊನ್ನಂಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಕಿರಿಯಮಾಡ ರಾಜ್ ಕುಶಾಲಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ವಿನೋದ್ ಮೂಡಗದ್ದೆ, ಉಪಾಧ್ಯಕ್ಷರಾಗಿ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಖಜಾಂಚಿಯಾಗಿ ಐನಂಡ ಬೋಪಣ್ಣ, ಸಹ ಕಾರ್ಯದರ್ಶಿ ಎಸ್.ಎಸ್.ಶೈಲೇಂದ್ರ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಕೆ.ಅರುಣ್ ಕುಮಾರ್, ನಿರ್ದೇಶಕರಾಗಿ ಟಿ.ಎನ್.ಗೋವಿಂದಪ್ಪ, ಟಿ.ಎಲ್.ಶ್ರೀನಿವಾಸ್, ಸಿ.ಡಿ.ಚಂಪಾ, ಎಸ್.ಎಲ್. ಶಿವಣ್ಣ, ವಿಜು ಆಯ್ಕೆಯಾದರು. ಪೊನ್ನಂಪೇಟೆಯ ಗೋಲ್ಡನ್ ಗೇಟ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಮುರುಳೀಧರ್, ಜಿಲ್ಲಾ ಉಪಾಧ್ಯಕ್ಷ ಜಿ.ವಿ.ರವಿಕುಮಾರ್, ಸಂಘಟನಾ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಜಿಲ್ಲಾ ಸಂಘದ ಸಲಹೆಗಾರ ಶ್ರೀಧರ್ ನೆಲ್ಲಿತ್ತಾಯ, ಜಿಲ್ಲಾ ಸಂಘ ನಿರ್ದೇಶಕ ಪ್ರವೀಣ್ ಟಿ.ಜೆ. ಹಾಗೂ ವೀರಾಜಪೇಟೆ ತಾಲ್ಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ಸಮ್ಮುಖದಲ್ಲಿ ಪೊನ್ನಂಪೇಟೆ ತಾಲ್ಲೂಕು ನೂತನ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮಡಿಕೇರಿ ಅ.23 NEWS DESK : ಸಂಪಾಜೆ ಗ್ರಾಮಕ್ಕೆ ರಾಜ್ಯ ವನ್ಯ ಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಸಂಪಾಜೆ ಗ್ರಾ.ಪಂ ಸಭಾಭವನದಲ್ಲಿ ಗ್ರಾಮಸ್ಥರಿಂದ ವನ್ಯ ಜೀವಿಗಳ ಹಾವಳಿ, ನೆಟ್ ವರ್ಕ್, ಹಾಗೂ ವಿದ್ಯುತ್ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಕೆ ಅಹ ವಾಲು ಸ್ವೀಕಾರ ಮಾಡಿದರು. ಗ್ರಾಮಸ್ಥರಾದ ಸೂರಜ್ ಹೊಸೂರು, ಬಿ.ಎ ಗಣಪತಿ, ಗಿರೀಶ್ ಹೊಸೂರು ಮತ್ತಿತರರು ಮಾತನಾಡಿ, ಸಂಪಾಜೆ, ಪೊಾಜೆ, ಚೆಂಬು ಗ್ರಾಮಸ್ಥರು ಆನೆ, ಮಂಗ, ವನ್ಯ ಪ್ರಾಣಿಗಳ ಹಾವಳಿಯಿಂದ ಅನುಭವಿಸುತ್ತಿರುವ ಸಮಸ್ಯೆ ಹಾಗೂ ವಿದ್ಯುತ್, ನೆಟ್ವರ್ಕ್ ಹಾಗೂ ಇತರ ಮೂಲಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಈ ಸಂದರ್ಭ ಮಾತನಾಡಿದ ಸಂಕೇತ ಪೂವಯ್ಯ, ಈ ಎಲ್ಲಾ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಅರಿವು ಇದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕರ ಅವಿರತ ಶ್ರಮ ಹಾಗೂ ಪ್ರಯತ್ನಗಳನ್ನು ಸಭೆಗೆ ವಿವರಿಸಿದರು. ಸಂಪಾಜೆ ಗ್ರಾ.ಪಂ…
ಮಡಿಕೇರಿ ಅ.23 NEWS DESK : ಹಾತೂರು ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವಿಶ್ವ ಶಾಂತಿಗಾಗಿ ಲೇಖನಿ ಅಭಿಯಾನ ಕಾರ್ಯಕ್ರಮ ನಡೆಯಿತು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಾಲಿನಿ ಹಾಗೂ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಜೆ.ಮಹದೇವ್ ಲೇಖನಿ ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಶಿಕ್ಷಕಿ ಬಿ.ಎ0.ವನಜಾಕ್ಷಿ, ಸುನಿತಾ, ಪ್ರಾಥಮಿಕ ಶಾಲೆಯ ಶಿಕ್ಷಕಿ ತೆರೆಝಾ, ಭಾರತಿ ಹಾಜರಿದ್ದರು. ಲೇಖನಿ ಅಭಿಯಾನದ ಸಂಚಾಲಕಿ ಕೆ.ಟಿ.ವಾತ್ಸಲ್ಯ ಪೇಪರ್ ನಿಂದ ಲೇಖನಿ ತಯಾರಿಸುವ ಕುರಿತು ಹಾಗೂ 25 ಅಂಶ ಒಳಗೊಂಡ ಲೇಖನಿ ಮಹತ್ವ ಕುರಿತು ವಿದ್ಯಾರ್ಥಿ ಗಳಿಗೆ ಮಾಹಿತಿ ತಿಳಿಸಿದರು.
ಮಡಿಕೇರಿ ಅ.23 NEWS DESK : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿಯ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧೀ ತತ್ವ ಸಿದ್ದಾಂತಗಳ ಮಹತ್ವದ ಬಗ್ಗೆ ವಿಶ್ಲೇಷಿಸಿ ಪ್ರಬಂಧ ಬರೆಯಲು ಅನುವಾಗುವಂಎ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಬಂಧಗಳನ್ನು ಬರೆದು ಅ.31 ರೊಳಗೆ kstaessay.kannada@gmail.com and kstaessay.english@gmail.com ಗೆ ಕಳುಹಿಸಿಕೊಡಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನ.12 ರಂದು ಅಕಾಡೆಮಿಯಿಂದ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಥಳದಲ್ಲೇ ಪ್ರಬಂಧವನ್ನು ಬರೆಯಬೇಕಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಚಂದ್ರಶೇಖರಮೂರ್ತಿ ಎಸ್. ಮೊ.ಸಂ.9686449019/ 9686919019 ಮತ್ತು 080-29721550 ನ್ನು ಅಥವಾ ಅಕಾಡೆಮಿಯ ವೆಬ್ಸೈಟ್ www.kstacademy.in ನ್ನು ವೀಕ್ಷಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ.ರಮೇಶ್ ತಿಳಿಸಿದ್ದಾರೆ.






