ಮಡಿಕೇರಿ, NEWS DESK ಮಾ.2:-ಮಡಿಕೇರಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಭೂಮಿ ಪೂಜೆ ನೆರವೇರಿಸಿದರು. ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಆಟೋ ರಿಕ್ಷಾ ನಿಲ್ದಾಣ ಹಾಗೂ ಕಾವೇರಿ ಕಾರು ಚಾಲಕ ಮಾಲೀಕರ ಸಂಘದ ಕಾರು ನಿಲ್ದಾಣಗಳಿಗೆ 11 ಲಕ್ಷ ರೂ ವೆಚ್ಚದ ಸುಸಜ್ಜಿತ ಮೇಲ್ಚಾವಣಿ ಹಾಗೂ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ 16 ಲಕ್ಷ ರೂ ವೆಚ್ಚದ ಸುಸಜ್ಜಿತ ಶೌಚಾಲಯದೊಂದಿಗೆ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಕ್ಷೇತ್ರದ ಜನರ ಕೋರಿಕೆಯನ್ನು ಈಡೇರಿಸುವ ಜೊತೆಗೆ ಕ್ಷೇತ್ರದ ಜನರ ಒಳಿತಿಗಾಗಿ ಅಭಿವೃದ್ಧಿ ಕಾರ್ಯ ಮಾಡುವುದು ಜನಪ್ರತಿನಿಧಿಯ ಕರ್ತವ್ಯ ವಾಗಿದೆ. ಈ ನಿಟ್ಟಿನಲ್ಲಿ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾದ ಮಡಿಕೇರಿ ನಗರದ ಜನರ ಬವಣೆಯನ್ನು ಗಮನಿಸಿ ಈ ಎರಡು ಕಾಮಗಾರಿಗಳಿಗೆ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಲಾಗಿದೆ ಎಂದು…
ಲೇಖಕ: Lakshmish S K
ನವದೆಹಲಿ/ಮಸ್ಕತ್, ಮಾರ್ಚ್ 2, 2026: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಗೆ ಪ್ರತಿರೋಧ ಒಡ್ಡುತ್ತಿರುವ ಇರಾನ್, ಈಗ ಒಮನ್ ಕರಾವಳಿಯಲ್ಲೂ ತನ್ನ ಆಕ್ರಮಣಕಾರಿ ಮುಖ ಪ್ರದರ್ಶಿಸಿದೆ. ಇರಾನ್ನ ಮಾನವರಹಿತ ಡ್ರೋನ್ ಹಡಗು (Unmanned Drone Ship) ತೈಲ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಸ್ಫೋಟದಲ್ಲಿ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇದು ಪ್ರಸ್ತುತ ಸಂಘರ್ಷದಲ್ಲಿ ವರದಿಯಾದ ಮೊದಲ ಭಾರತೀಯ ಪ್ರಜೆಯ ಸಾವಾಗಿದೆ. ಘಟನೆಯ ಭೀಕರತೆ: ಎಂಜಿನ್ ಕೋಣೆಯಲ್ಲಿ ಸ್ಫೋಟ: ಇರಾನ್ನ ಆತ್ಮಹತ್ಯಾ ಡ್ರೋನ್ ಹಡಗು ನೇರವಾಗಿ ತೈಲ ಟ್ಯಾಂಕರ್ನ ಮುಖ್ಯ ಎಂಜಿನ್ ಕೋಣೆಗೆ ಅಪ್ಪಳಿಸಿದೆ. ಇದರಿಂದ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿದೆ. ಸಿಬ್ಬಂದಿ ವಿವರ: ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದರು. ಇವರಲ್ಲಿ 16 ಮಂದಿ ಭಾರತೀಯರು, ನಾಲ್ವರು ಬಾಂಗ್ಲಾದೇಶಿಯರು ಹಾಗೂ ಒಬ್ಬ ಉಕ್ರೇನಿಯನ್ ಪ್ರಜೆ ಇದ್ದರು. ರಕ್ಷಣಾ ಕಾರ್ಯಾಚರಣೆ: ಘಟನೆ ನಡೆದ ತಕ್ಷಣ ಪಕ್ಕದಲ್ಲೇ ಇದ್ದ ಪನಾಮ ಧ್ವಜದ ವ್ಯಾಪಾರಿ ಹಡಗು ರಕ್ಷಣೆಗೆ ಧಾವಿಸಿದ್ದು, ಬದುಕುಳಿದ…
ಕುವೈತ್ ಸಿಟಿ/ವಾಷಿಂಗ್ಟನ್, ಮಾರ್ಚ್ 2, 2026: ಇರಾನ್ ವಿರುದ್ಧದ ಯುದ್ಧದ ನಡುವೆಯೇ ಅಮೆರಿಕದ ಮಿಲಿಟರಿ ಪಡೆಗಳಿಗೆ ಆಘಾತಕಾರಿ ಘಟನೆಯೊಂದು ಎದುರಾಗಿದೆ. ತನ್ನದೇ ಮಿತ್ರ ರಾಷ್ಟ್ರವಾದ ಕುವೈತ್ನ ವಾಯು ರಕ್ಷಣಾ ವ್ಯವಸ್ಥೆಯು ಅಮೆರಿಕದ ಮೂರು ಎಫ್-15 (F-15E Strike Eagle) ಫೈಟರ್ ಜೆಟ್ಗಳನ್ನು ಆಕಸ್ಮಿಕವಾಗಿ ಹೊಡೆದುರುಳಿಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ದೃಢಪಡಿಸಿದೆ. ಘಟನೆಯ ವಿವರ: ಆಕಸ್ಮಿಕ ದಾಳಿ: ಮಾರ್ಚ್ 1ರಂದು ರಾತ್ರಿ 11:03ಕ್ಕೆ ‘ಆಪರೇಷನ್ ಎಪಿಕ್ ಫ್ಯೂರಿ’ ಅಡಿಯಲ್ಲಿ ಹಾರಾಟ ನಡೆಸುತ್ತಿದ್ದ ಅಮೆರಿಕದ ಜೆಟ್ಗಳನ್ನು ಶತ್ರು ವಿಮಾನಗಳೆಂದು ತಪ್ಪಾಗಿ ಭಾವಿಸಿದ ಕುವೈತ್ ಏರ್ ಡಿಫೆನ್ಸ್ ದಾಳಿ ನಡೆಸಿದೆ. ಪೈಲಟ್ಗಳು ಸುರಕ್ಷಿತ: ಅದೃಷ್ಟವಶಾತ್, ವಿಮಾನಗಳು ಪತನಗೊಳ್ಳುವ ಮುನ್ನವೇ ಪೈಲಟ್ಗಳು ಇಜೆಕ್ಟ್ (Eject) ಆಗಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕ ತಿಳಿಸಿದೆ. ಕುವೈತ್ ಒಪ್ಪಿಗೆ: ಕುವೈತ್ ಸರ್ಕಾರವು ಈ ಗಂಭೀರ ಪ್ರಮಾದವನ್ನು ಒಪ್ಪಿಕೊಂಡಿದ್ದು, ತನಿಖೆಗೆ ಆದೇಶಿಸಿದೆ. ಈ ಆಕಸ್ಮಿಕ ಘಟನೆಯ ಹೊರತಾಗಿಯೂ ಅಮೆರಿಕವು ಕಾರ್ಯಾಚರಣೆಯಲ್ಲಿ ಕುವೈತ್ ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದೆ. ಇರಾನ್ನ…
ಕುಶಾಲನಗರ, NEWS DESK: ಮಾ.02: ಕಾವೇರಿ ಕೇವಲ ನದಿಯಲ್ಲ. ಅದೊಂದು ಜನಕೋಟಿ ಹಾಗೂ ಜೀವ ರಾಶಿಯ ಪಾವನ ಗಂಗೆ. ನದಿಯನ್ನು ಸಂರಕ್ಷಿಸದೇ ನಿರ್ಲಕ್ಷ್ಯ ತೋರಿದರೆ ಸಂಸ್ಕ್ರತಿಯೇ ನಾಶವಾದಂತೆ ಎಂದು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಅಭಿಪ್ರಾಯಪಟ್ಟರು. ಸೋಮವಾರ ಕಣಿವೆಯ ಶ್ರೀ ರಾಮಲಿಂಗೇಶ್ವರ ಸನ್ನಿಧಿಯ ಕಾವೇರಿ ನದಿಗೆ ಹೆಬ್ಬಾಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾವೇರಿ ಆರತಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ನದಿಯನ್ನು ಪ್ರತಿಯೊಬ್ಬರು ಮನೆಯ ದೇವರ ಗುಡಿಯಂತೆ ಕಾಣಬೇಕು. ಹೆತ್ತ ತಾಯಿಯಂತೆ ಪೂಜಿಸಬೇಕು. ಕಲುಷಿತ ತ್ಯಾಜ್ಯಗಳನ್ನು ನದಿಗೆ ಬಿಸಾಕದ ಹಾಗೆ ಎಚ್ಚರಿಕೆ ವಹಿಸಬೇಕೆಂದು ಅವರು ಕೋರಿದರು. ಸಂಘದ ಕೂಡಿಗೆ ವಲಯದ ಮೇಲ್ವಿಚಾರಕ ಅಚ್ಯುತ, ಹೆಬ್ಬಾಲೆ ಸೇವಾ ಪ್ರತಿನಿಧಿ ಕಲ್ಪನಾ ಪ್ರಕಾಶ್, ಮಂಜುಳಾ ಮಹದೇವ್, ಪವಿತ್ರ, ವಿಶಾಲಾಕ್ಷಿ, ಕಮಲಮ್ಮ, ರೂಪ, ಸುಶ್ಮಿತಾ, ಸವಿತಾ ಇದ್ದರು.
ಮಡಿಕೇರಿ, NEWS DESK ಮಾ.2 : ಭಾಷೆ, ಬರಹ ಮತ್ತು ಭಾವನೆಗಳ ಸಮ್ಮಿಲನವೇ ಶಿಕ್ಷಣ. ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಶಾಲನಗರದ ನಿವೃತ್ತ ಚಿತ್ರಕಲಾ ಶಿಕ್ಷಕ ಯು.ಆರ್.ನಾಗೇಶ್ ಕುಮಾರ್ ತಿಳಿಸಿದ್ದಾರೆ. ಮೂರ್ನಾಡು ಪ್ರೌಢ ಶಾಲೆ ಮತ್ತು ರೋಟರಿ ಮಡಿಕೇರಿ ವುಡ್ಸ್ ನ ಸಂಯುಕ್ತಾಶ್ರಯದಲ್ಲಿ ನಡೆದ “ಕಲೆಯ ಮೂಲಕ ಕಲಿಕೆ” ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ರೋಟರಿ ಮಡಿಕೇರಿ ವುಡ್ಸ್ ಶಿಕ್ಷಣ ಸಂಸ್ಥೆಗಳೊಡನೆ ಕೈಜೋಡಿಸಿ ವಿದ್ಯಾರ್ಥಿಗಳ ವಿಕಸನಕ್ಕೆ ಪೂರಕವಾದ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಈ ರೀತಿಯ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯು.ಆರ್.ನಾಗೇಶ್ ಕುಮಾರ್ ಕರೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ವುಡ್ಸ್ ಅಧ್ಯಕ್ಷ ರೊ.ಕಿರಣ್ ಕುಂದರ್ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವ ಉದ್ದೇಶದಿಂದ ರೋಟರಿ ವುಡ್ಸ್ ಇಂತಹ ಹಲವಾರು ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು…
ಕುಶಾಲನಗರ, NEWS DESK ಮಾ.02: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ರವರ ಜನ್ಮಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಕರ್ನಾಟಕ ವಿಕಾಸ ರಂಗ ವಾಸವಿ ಕಲಾ ಮಂಡಳಿ ಸಹಕಾರದೊಂದಿಗೆ ಮಾಸದ ನೆನಪು, ಕವಿ ಸಾಹಿತಿಗಳ ಸ್ಮರಣೆ ಕಾರ್ಯಕ್ರಮವು ಕುಶಾಲನಗರ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಣಿವೆಯ ಸಾಹಿತಿ ಭಾರದ್ವಾಜ್ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕವಿತೆಯ ರಚನೆಯ ಲೋಕದಲ್ಲಿ ಪರಿಶ್ರಮ ಬಹುಮುಖ್ಯ. ಹಿರಿಯ ಕವಿಗಳ ಸಾಧನೆ ಮುಂದಿನ ಯುವಕರಿಗೆ ದಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬದುಕಿನ ಭಾವೈಕ್ಯತೆಯಲ್ಲಿ ಕವಿಗಳ ಪಾತ್ರ ಹಿರಿದು. ಪ್ರತಿಯೊಬ್ಬ ನಾಗರಿಕನು ಸಮಾಜದಲ್ಲಿ ಭಾವೈಕ್ಯತೆಯಿಂದ ಬದುಕಲು ನಮ್ಮ ಹಿರಿಯ ಕವಿಗಳು ತಮ್ಮ ಕೃತಿಗಳ ಮುಖಾಂತರ ಜಗತ್ತಿಗೆ ಉತ್ತಮ ಸಂದೇಶ ಕೊಟ್ಟು ಹೋಗಿದ್ದಾರೆ. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ, ಪ್ರೋ ಕೆ ಎಸ್ ನಿಸಾರ್ ಅಹಮದ್,ಜಿ ಎಸ್ ಸಿದ್ದಲಿಂಗಯ್ಯ,ಹಾಗೂ ಚಿ ಉದಯಶಂಕರ್ ರವರು ತಮ್ಮ ಉತ್ತಮ ಕವನಗಳ ಮುಖಾಂತರ…
ಕುಶಾಲನಗರ, NEWS DESK ಮಾ.02: ಕುಶಾಲನಗರದ ಎಸ್ ಎಲ್ ಎನ್ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯ ಸುವಣ೯ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್ ಅರವಿಂದ್ ಕೆಲವು ದೊಡ್ಡ ಸಂಗತಿಗಳು ಕ್ಲೀಷೆಯಾಗುವ ಈ ಕಾಲಘಟ್ಟದಲ್ಲಿ ಸಣ್ಣ ಚಿಂತನೆಗಳೇ ದೊಡ್ಡ ಪರಿಣಾಮ ಬೀರಬಲ್ಲವಾಗಿದೆ. ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿದ್ದೇ ಆದಲ್ಲಿ ಅದ್ಬುತ ಯಶಸ್ಸು ಖಂಡಿತಾ ಸಾಧ್ಯವಿದೆ, ಯಾವುದೇ ಕೆಲಸ ಮಾಡುವ ಮುನ್ನ ನಿಮ್ಮ ಕೆಲಸವನ್ನು ಜಗತ್ತು ಗಮನಿಸುತ್ತಿರುತ್ತದೆ ಎಂದುಕೊಂಡು ಮಾಡಿದಾಗ ಕೆಲಸ ಸುಲಭಸಾಧ್ಯವಾಗುತ್ತದೆ ಎಂದರು. ಸಾಮಾಜಿಕ ಸೇವೆ ಮೂಲಕ ಕುಶಾಲನಗರ ರೋಟರಿ ಸಂಸ್ಥೆಯು 50 ವಷ೯ಗಳನ್ನು ಕಳೆದಿರುವುದು ಗಮನಾಹ೯ವಾಗಿದೆ ಎಂದು ಶ್ಲಾಘಿಸಿದ ರಮೇಶ್ ಅರವಿಂದ್ ಖ್ಯಾತ ಕಲಾವಿದರು ಮೊದಲಿನಂತೆ ವಷ೯ಗಟ್ಟಲೆ ವಾರಗಟ್ಟಲೆ ಸೂಪರ್ ಸ್ಟಾರ್ ಗಳಾಗಿ ಮುಂದುವರೆಯುವ ಕಾಲದ ಬದಲಾಗಿ ಸೂಪರ್ ಸ್ಟಾರ್ ಗಿರಿ ಗಂಟೆಗೆ ಸೀಮಿತವಾಗುವ ಕಾಲದಲ್ಲಿ ನಾವಿದ್ದೇವೆ . ಆದರೆ ರೋಟರಿ ಸಂಸ್ಥೆಯು ಕೈಗೊಳ್ಲುವ ಸೇವಾ ಕಾಯ೯ ಸಮಾಜದಲ್ಲಿ 50 ವಷಾ೯ನುಗಟ್ಟಲೆ ಕಾಲ ರೋಟರಿಯನ್ನು ಸೂಪರ್ ಸ್ಟಾರ್ ಆಗಿಯೇ ಇರುವಂತೆ…
ಮಡಿಕೇರಿ, NEWS DESK ಮಾ.02 : ಕಡಗದಾಳು ಮಂಡಲ ವ್ಯಾಪ್ತಿಯ ಹಿಂದು ಸಂಗಮ ಕಾರ್ಯಕ್ರಮ ಭಾನುವಾರ ವೈಭವದಿಂದ ಜರುಗಿತು. ಸುತ್ತಮುತ್ತಲ ಗ್ರಾಮಗಳ ಸಾವಿರಾರು ಹಿಂದುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರುಗು ಹೆಚ್ಚಿಸಿದರು. ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ವರ್ಣರಂಜಿತ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ರಚಿಸಲಾಗಿದ್ದ ಶ್ರೀ ವಿನಾಯಕ ವಸತಿ ಕತ್ತಲೆಕಾಡು-ಜೇನುಕೊಲ್ಲಿ, ಶೌರ್ಯ ವಸತಿ ಕಡಗದಾಳು, ಶಿವಾಜಿ ವಸತಿ ನೀರುಕೊಲ್ಲಿ, ಪರಶುರಾಮ ವಸತಿ ಬೋಯಿಕೇರಿ ಸದಸ್ಯರುಗಳು ತಮ್ಮ ಗ್ರಾಮಗಳಿಂದ ಮೆರವಣಿಗೆ ಮೂಲಕ ಕಡಗದಾಳು ಶಾಲೆ ಆವರಣಕ್ಕೆ ಆಗಮಿಸಿದರು. ಬಳಿಕ ಸ್ಥಳೀಯ ಶಾಲೆ ಆವರಣದಿಂದ ಸಾಮೂಹಿಕ ಶೋಭಾಯಾತ್ರೆ ಆರಂಭವಾಗಿ ತುರ್ಕರಟ್ಟಿವರೆಗೆ ಸಾಗಿ ಮರಳಿ ಶಾಲೆ ಆವರಣದಲ್ಲಿ ಸಂಪನ್ನಗೊಂಡಿತು. ಭಾರತ ಮಾತೆಯ ಬೃಹತ್ ಚಿತ್ರಪಟ, ವಿವಿಧ ಕಲಾಕೃತಿಗಳು, ಭಜನೆ, ಕುಣಿತ ಭಜನೆ ತಂಡಗಳು, ಸಾಂಪ್ರದಾಯಿಕ ವಾಲಗ, ಚಂಡೆ ಮೇಳ, ಐತಿಹಾಸಿಕ ವ್ಯಕ್ತಿಗಳು, ದೇವರುಗಳ ವೇಷ ಧರಿಸಿದ ಮಕ್ಕಳು ಮೆರವಣಿಗೆಗೆ ವಿಶೇಷ ಮೆರುಗು ತುಂಬಿದರು. ಮೆರವಣಿಗೆಯಲ್ಲಿ ಹಿಂದುತ್ವದ ಪರವಾದ ಜಯಘೋಷ ಮೊಳಗಿತು. ಪುರುಷರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಧಿರಿಸಿನಲ್ಲಿ…
ಮಡಿಕೇರಿ, NEWS DESK ಮಾಚ್೯ 2 – ರೋಟರಿ ಜಿಲ್ಲೆ 3181 ನ ರೋಟರ್ಯಾಕ್ಟ್ ಕ್ಲಬ್ ಗಳ ಮುಂದಿನ ಸಾಲಿನ ಪ್ರತಿನಿಧಿಯಾಗಿ ಕೊಡಗಿನ ಶ್ರೀರಕ್ಷಾ ಪ್ರಬಾಕರ್ ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ನಡೆದ ರೋಟರ್ಯಾಕ್ಟ್ ನ 56 ಕ್ಲಬ್ ಗಳ ಪ್ರತಿನಿಧಿಯ ಚುನಾವಣೆಯಲ್ಲಿ ಶ್ರೀರಕ್ಷಾ ಅತ್ಯಧಿಕ ಮತ ಗಳಿಸಿ ಜಿಲ್ಲಾ ರೋಟರ್ಯಾಕ್ಟ್ನ 11 ನೇ ಪ್ರತಿನಿಧಿಯಾಗಿ ವಿಜಯಿಯಾದರು. ಮೂಲತ ನಾಪೋಕ್ಲು ಗ್ರಾಮದ ಪತ್ರಕತ೯ ಪಿ.ವಿ. ಪ್ರಭಾಕರ್ – ಅಶ್ವಿನಿ ದಂಪತಿ ಪುತ್ರಿಯಾದ ಶ್ರೀರಕ್ಷಾ, ಮೂನಾ೯ಡುವಿನಲ್ಲಿ ಮಡಿಕೇರಿ ರೋಟರಿ ವುಡ್ಸ್ ಸಂಸ್ಥೆಯು 4 ವಷ೯ಗಳ ಹಿಂದೆ ಪ್ರಾರಂಭಿಸಿದ್ದ ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷೆಯಾಗಿ ಅನೇಕ ಸಾಮಾಜಿಕ ಸೇವಾ ಕಾಯ೯ಗಳ ಮೂಲಕ ಜಿಲ್ಲಾ ರೋಟರ್ಯಾಕ್ಟ್ ಪ್ರಶಸ್ತಿಯನ್ನೂ ಪಡೆದಿದ್ದರು.ಪ್ರಸ್ತುತ, ಮೈಸೂರಿನ ಕಾವೇರಿ ಸ್ಕೂಲ್ ನಲ್ಲಿ ಉಪನ್ಯಾಸಕಿಯಾಗಿರುವ ಶ್ರೀರಕ್ಷಾ ಪ್ರಭಾಕರ್, 2026-27 ನೇ ಸಾಲಿಗೆ 4 ಕಂದಾಯ ಜಿಲ್ಲೆಗಳಿಗೆ ಸೇರಿದ 56 ರೋಟರ್ಯಾಕ್ಟ್ ಕ್ಲಬ್ ಗಳ ಪ್ರತಿನಿಧಿಯಾಗಿ ಕಾಯ೯ನಿವ೯ಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಿಂದ ಜಿಲ್ಲಾ ರೋಟರ್ಯಾಕ್ಟ್ ಗೆ ಪ್ರತಿನಿಧಿಯೋವ೯ರ…
ಮಡಿಕೇರಿ, NEWS DESK ಮಾಚ್೯ 2 – ಕೊಡಗು ಮೂಲದ ಯುವ ಮೋಟರ್ ರ್ಯಾಲಿ ಪಟು ಅಭಿನ್ ರೈ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಹ್ಯಾಟ್ರಿಕ್ ಚಾಂಪಿಯನ್ ಆದ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ ಫೆ.27 ರಿಂದ ಮಾಚ್೯ 1 ರವರೆಗೆ ಆಯೋಜಿತ ನ್ಯಾಷನಲ್ ಮೋಟರ್ ರ್ಯಾಲಿ ಸ್ಪಧೆ೯ಯಲ್ಲಿ ಅಭಿನ್ ರೈ ಗಣನೀಯ ಸಾಧನೆ ತೋರಿದ್ದು, 371 ಕಿ.ಮೀ. ಅಂತರದ ರ್ಯಾಲಿಯಲ್ಲಿ ಭಾರತದಾದ್ಯಂತಲಿನ 32 ಸ್ಪಧಿ೯ಗಳು ಪಾಲ್ಗೊಂಡಿದ್ದರು. ಈ ಸ್ಪಧೆ೯ಯ ಸವ೯ ವಿಭಾಗಗಳಲ್ಲಿ ಅಭಿನ್ 10 ನೇ ಸ್ಥಾನ ಗಳಿಸಿದ್ದು, ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ವಿಭಾಗದಲ್ಲಿ ಎರಡನೇ ಮತ್ತುು ಜೂನಿಯರ್ ಇಂಡಿಯನ್ ನ್ಯಾಷನಲ್ ರ್ಯಾಲಿ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಮೂರನೇ ಬಾರಿಗೆ ಅಭಿನ್ ರೈ, ಇಂಡಿಯನ್ ನ್ಯಾಷನಲ್ ರ್ಯಾಲಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಅಭಿನ್ ರೈ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಮೇಕೇರಿ ಮೂಲದ ರತ್ನಾಕರ್ ರೈ ಮತ್ತು ನಮಿತಾ ರೈ ಅವರ ಪುತ್ರರಾಗಿದ್ದಾರೆ. ಚಿಕ್ಕಮಗಳೂರಿನ…






