ವಿರಾಜಪೇಟೆ ಜ.11 : ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್. ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರವು ದಿಡ್ಡಳಿಯ ಚೆನ್ನಂಗಿ ಬಸವನಹಳ್ಳಿಯ ಸರಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ‘ಕಾಡುಹಕ್ಕಿ ಗೂಡು’ ಕಾರ್ಯಕ್ರಮದಡಿಯಲ್ಲಿ ಸಮೀಪದ ಗಿರಿಜನ ಹಾಡಿಯ ಮನೆಯೊಂದರಲ್ಲಿ ಸಂವಾದ ಕಾರ್ಯಕ್ರಮ ಜರುಗಿತು.
ಗಿರಿಜನ ಹಾಡಿಯ ಶಾಂತಮ್ಮ ಎಂಬವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಊರಿನ ಬುಡಕಟ್ಟು ಜನಾಂಗದ ಮುಖಂಡರಾದ ಅಪ್ಪಾಜಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿ ಶಿಬಿರಾರ್ಥಿಗಳಿಗೆ ಬುಡಕಟ್ಟು ಜನರ ಜೀವನ ಪದ್ಧತಿ, ಆಹಾರ ಕ್ರಮಗಳು, ಸಂಪ್ರದಾಯಗಳು, ಪದ್ಧತಿ ಪರಂಪರೆ, ಇತಿಹಾಸ, ಜೀವನ ಪದ್ಧತಿ, ಹಬ್ಬಗಳ ಆಚರಣಾ ವಿಧಾನಗಳನ್ನ ಸಂಪೂರ್ಣವಾಗಿ ವಿವರಿಸಿ ಬುಡಕಟ್ಟು ಜನರ ಸಮಸ್ಯೆಗಳನ್ನು ತಿಳಿಸಿಕೊಟ್ಟರು.
ಈ ಸಂದರ್ಭ ಎನ್.ಎಸ್.ಎಸ್. ಅಧಿಕಾರಿಗಳಾದ ಅರ್ಜುನ್ ಎಚ್. ಆರ್., ಉಪನ್ಯಾಸಕರಾದ ಬಿ. ಎನ್. ಶಾಂತಿಭೂಷಣ್, ಬಸವನಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಸಿದ್ದಲಿಂಗ ಶೆಟ್ಟಿ, ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.













