ಚೆಟ್ಟಳ್ಳಿ ಜ.9 : ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಎರಡನೇ ವರ್ಷದ ನೂರೊಕ್ಕ ನಾಡ್ ಒತ್ತೊರ್ಮೆ ಕೂಟವು ಸಾಂಪ್ರದಾಯಿಕ ಆಚರಣೆಯೊಂದಿಗೆ ಸಂಭ್ರಮದಿಂದ ನಡೆಯಿತು.
ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ದೇವರ ನೆಲೆಯಲ್ಲಿ ದೀಪ ಬೆಳಗಿದರು. ಸಾಂಪ್ರದಾಯಿಕ ಉಡುಪು ತೊಟ್ಟಪುರುಷರು ದುಡಿಕೊಟ್ಟು ಹಾಡಿನೊಂದಿಗೆ ದೇವರ ನೆಲೆಗೆ ಬಂದು ಅಕ್ಕಿ ಹಾಕಿ ಸರ್ವರಿಗೂ ಒಳಿತಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭ ನಿವೃತ್ತ ವಾಯುಸೇನಾಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ ಮಾತನಾಡಿ, ನೂರೊಕ್ಕ ನಾಡಿಗೆ ಒಳಪಡುವ ಚೆಟ್ಟಳ್ಳಿ ಕೊಡವ ಸಮಾಜ ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಏಳಿಗೆಯನ್ನು ಪಡೆಯಲೆಂದು ಬೇಡಿಕೊಂಡರು.
ಹಿರಿಯ ಸದಸ್ಯೆ ಐಚೆಟ್ಟೀರ ಚೋಂದಮ್ಮ ಚೆಟ್ಟಳ್ಳಿ ಕೊಡವ ಸಮಾಜಕ್ಕೆ ಎರಡು ಕುತ್ತುದೀಪವನ್ನು ಉದಾರವಾಗಿ ನೀಡಿದರು.
ಮಹಿಳೆಯರ ಉಮ್ಮತಾಟ್, ಪುರುಷರ ಬೊಳಕಾಟ್, ತಾಲಿಪಾಟ್ ಹಾಗೂ ಕೊಡವ ಹಾಡುಗಾರಿಗೆ ನೆರವೇರಿತು. ನಂತರ ದಂಪತಿಗಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡಾಕೂಟಗಳು ನಡೆದವು.
ಕಾರ್ಯಕ್ರಮದ ಅಂಗವಾಗಿ ದೇವರ ನೆಲೆಯಲ್ಲಿ ಮೀದಿನೀರಿಟ್ಟು ತಂಬುಟ್ಟ್ ಹಾಗೂ ವಿಶೇಷ ಬೋಜನವನ್ನು ಸವಿದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಒಗ್ಗಟ್ಟಿನ ಬಲ ಇದ್ದಾಗ ಮಾತ್ರ ಕೊಡವ ಜನಾಂಗ ಉಳಿಯಲು ಸಾಧ್ಯ, ಊರಿನವರ ಸಹಕಾರದಿಂದ ಚೆಟ್ಟಳ್ಳಿ ಕೊಡವ ಸಮಾಜ ಪ್ರಾರಂಭಗೊಳಿದ್ದು, ಮುಂದೆ ಇದೇ ಸಹಕಾರ ಇದ್ದರೆ ಚೆಟ್ಟಳ್ಳಿ ಕೊಡವ ಸಮಾಜ ಇನ್ನಷ್ಟು ಅಭಿವೃದ್ಧಿ ಪತದಲ್ಲಿ ಸಾಗಲು ಸಾಧ್ಯವಾಗುವುದೆಂದರು.
ಹಿರಿಯರಾದ ಐಚೆಟ್ಟೀರ ಚೋಂದಮ್ಮ, ಸಮಾಜದ ಉಪಾಧ್ಯಕ್ಷರಾದ ಐಚೆಟ್ಟಿರ ಸುನಿತಮಾಚಯ್ಯ, ಕಾರ್ಯ ದರ್ಶಿ ಪುತ್ತರಿರ ಕರುಣ್ ಕಾಳಯ್ಯ, ನಿರ್ದೇಶಕರಾದ ಬಿದ್ದಂಡಮಾದಯ್ಯ, ಜಂಟಿಕಾರ್ಯದರ್ಶಿ ಮುಳ್ಳಂಡ ಶೋಭಚಂಗಪ್ಪ, ನಿರ್ದೇಶಕರುಗಳಾದ ಪುತ್ತರಿರ ಕಾಶಿ ಸುಬ್ಬಯ್ಯ, ಬಟ್ಟೀರ ರಕ್ಷು ಕಾಳಪ್ಪ, ಐಚೆಟ್ಟೀರ ಮಾಚಯ್ಯ, ಕೆಚೆಟ್ಟೀರ ರತಿಕಾರ್ಯಪ್ಪ, ಕಡೇಮಡ ವಿನ್ಸಿ, ಅಡಿಕೇರ ಶಾಂತಿಜಯ ಹಾಜರಿದ್ದರು.
ಪುತ್ತರಿರ ಸೀತಮ್ಮ ಮೊಣ್ಣಪ್ಪ ಪ್ರಾರ್ಥಿಸಿದರು, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ವಂದಿಸಿದರು. ವಿಜೇತರಿಗೆ ಬಹುಮಾನವಿತರಿಸಲಾಯಿತು.









