Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
  • *ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*
  • *ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*
  • *ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*
  • *ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*
  • *‘ಜಂತು ಹುಳು ರಹಿತ ಮಕ್ಕಳು – ಆರೋಗ್ಯವಂತ ಮಕ್ಕಳು’ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ*
  • *ಫೆ.14 ರಂದು ಕೊಡವ ಭವನ ಉದ್ಘಾಟನೆ*
  • *ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*
  • *ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*
  • *104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಆಹಾರ ಅಗಿಯಿರಿ ಆರೋಗ್ಯ ಪಡೆಯಿರಿ*
ರೋಗ ಮುಕ್ತ

*ಆಹಾರ ಅಗಿಯಿರಿ ಆರೋಗ್ಯ ಪಡೆಯಿರಿ*

February 6, 20243 Mins Read
Share
Facebook Twitter LinkedIn Pinterest WhatsApp Email

ಸುಲಲಿತ ಜೀರ್ಣಕ್ರಿಯೆ ಹಾಗೂ ಆಹಾರದ ಪೋಷಕಾಂಶಗಳ ಹೀರುವಿಕೆ ಆಹಾರ ಅಗಿಯುವಿಕೆಯಿಂದಲೇ ಪ್ರಾರಂಭ. ಹಾಗಾಗಿ ಚೆನ್ನಾಗಿ ಅಗಿಯುವಿಕೆ ಆಹಾರ ಜೀರ್ಣಕ್ರಿಯೆಯಲ್ಲಿ ಮೊದಲ ಅಂಶ ಹಾಗೂ ನಮ್ಮ ಆರೋಗ್ಯ ನಿರ್ಧರಿಸುವ ಅಂಶವೂ ಆಗಿದೆ.

ಚೆನ್ನಾಗಿ ಅಗಿಯುವುದರಿಂದ ಆಗುವ ಪ್ರಯೋಜನಗಳೇನು?
ಹೆಚ್ಚು ಪೋಷಕಾಂಶ ಹೀರುವಿಕೆ ಹಾಗೂ ಶಕ್ತಿಯ ಪ್ರಮಾಣ ಉಳಿತಾಯ- ಅಗಿಯುವಿಕೆ ಆಹಾರದ ದೊಡ್ಡ ತುಣುಕುಗಳನ್ನು ಸಣ್ಣ ಸಣ್ಣ ಕಣಗಳಾಗಿ ವಿಭಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಯ ಕಿಣ್ವಗಳು ಮತ್ತು ಜಠರಾಮ್ಲದ ಕಾರ್ಯನಿರ್ವಹಣೆ ಸುಲಭವಾಗಿ ಆಗಿ ಜೀರ್ಣಕ್ರಿಯೆ ಚುರುಕಾಗುತ್ತದೆ ಮತ್ತು ಕಡಿಮೆ ಶಕ್ತಿ ವ್ಯಯವಾಗುತ್ತದೆ. ನಮ್ಮ ಶರೀರದಲ್ಲಿ ಅತ್ಯಂತ ಹೆಚ್ಚಿನ ಶಕ್ತಿ ವ್ಯಯವಾಗುವ ಕ್ರಿಯೆಯಾದ ಜೀರ್ಣಕ್ರಿಯೆಗೆ ನಾವು ಅಗಿದು ಅಗಿದು ತಿಂದು ಸಹಾಯ ಮಾಡಿದಾಗ ಶಕ್ತಿಯ ವ್ಯಯವನ್ನು ಉಳಿಸಬಹುದಲ್ಲವೇ? ಇದಲ್ಲದೆ ಅಗಿ ಯುವಿಕೆಯು ಸಾಲಾಗಿ, ಸಲೀಸಾಗಿ ಗ್ರಂಥಿಗಳಿಂದ ಆಮ್ಲ ಹಾಗೂ ಕಿಣ್ವಗಳ ಉತ್ಪಾದನೆಯನ್ನು ಪ್ರಚೋದಿಸುತ್ತವೆ.

ಶರೀರದ ಸಮತೂಕ ಕಾಯ್ದುಕೊಳ್ಳುವಿಕೆ- ಸಾಮಾನ್ಯವಾಗಿ ಆಹಾರ ಸೇವನೆಯ ಹೊತ್ತಿನಲ್ಲಿ ನಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎನ್ನುವ ಸಂದೇಶ ರವಾನೆಯಾಗಲು ಕನಿಷ್ಟ 20 ನಿಮಿಷಗಳಾದರೂ ಬೇಕು. ಆದರೆ ಚೆನ್ನಾಗಿ ಅಗಿದು ತಿನ್ನುವುದರಿಂದ ಮೆದುಳಿಗೆ ಬೇಗನೇ ಹೆಚ್ಚು ಸಂದೇಶಗಳು ರವಾನೆಯಾಗಿ ಕಡಿಮೆ ತಿನ್ನುವ ಹಾಗೆ ಪ್ರಚೋದನೆಯಾಗುತ್ತದೆ. ಹಾಗಾಗಿ ನಿಧಾನವಾಗಿ ಅಗಿದು ತಿಂದಾಗ ಮಾಮೂಲಿ ಸೇವನೆಗಿಂತ ಶೇಕಡಾ 10 ರಷ್ಟು ಕಡಿಮೆ ಆಹಾರ ಸೇವನೆ ಬೇಕಾಗುವುದು ಸಾಬೀತಾಗಿದೆ. ಆದ್ದರಿಂದ ಅನವಶ್ಯಕ ಆಹಾರ ಸೇವನೆಯಿಂದ ಆಹಾರ ಉಳಿತಾಯದ ಜೊತೆಗೆ ಅತಿ ಆಹಾರ ಸೇವನೆಯಿಂದ ಉಂಟಾಗುವ ಬೊಜ್ಜು, ಸಿಹಿಮೂತ್ರ ರೋಗ ಇನ್ನಿತರ ಅನೇಕ ರೋಗಗಳು ಬರದಂತೆ ತಡೆಯುತ್ತವೆ.

ಆಹಾರವು ಚೆನ್ನಾಗಿ ಅಗಿಯುವುದರಿಂದ ಲಾಲಾರಸದೊಡನೆ ಹೆಚ್ಚೆಚ್ಚು ಬೆರೆತು ನಂತರ ಅನ್ನನಾಳದಲ್ಲಿ ಚಲಿಸುವ ಕ್ರಿಯೆ ಸುಲಭವಾಗುತ್ತದೆ. ಆಹಾರ ನುಣ್ಣಗೂಆಗಿ ಜೀರ್ಣಕ್ರಿಯೆ ಉತ್ತೇಜನೆಗೊಂಡು ಹೊಟ್ಟೆ ಕರಳುಗಳು ಹಾಗೂ ಇತರ ಅಂಗಗಳ ಮೇಲೂ ಪರಿಣಾಮ ಬೀರಿ ಸಹಜ ಸುಲಲಿತ ಜೀರ್ಣ ಕ್ರಿಯೆಯನ್ನುಂಟು ಮಾಡುತ್ತದೆ. ದೈಹಿಕ, ಮಾನಸಿಕ ಉಲ್ಲಾಸವನ್ನು ನೀಡುತ್ತದೆ. ಸಣ್ಣ ಕರುಳಿನಿಂದ ಪೋಷಕಾಂಶಗಳು ಹೀರುವಿಕೆಯೂ ಚೆನ್ನಾಗಿ ಆಗುತ್ತದೆ. ಜೀರ್ಣಕ್ರಿಯೆ ಸುಲಭ, ಸರಳವಾದಾಗ ಶಕ್ತಿಯ ವ್ಯಯ ಕಡಿಮೆಯಾಗಿ ಶಕ್ತಿ ಉಳಿತಾಯವಾಗುತ್ತದೆ.

* ಹಲ್ಲು ಮತ್ತು ಒಸಡುಗಳು ಆಹಾರ ಚೆನ್ನಾಗಿ ಅಗಿಯುದರಿಂದ ಗಟ್ಟಿಯಾಗುತ್ತವೆ ಮತ್ತು ಅಗಿಯುವುದರಿಂದ ಲಾಲರಸವು (ಸಲೈವಾ) ಹೆಚ್ಚು ಉತ್ಪತ್ತಿಯಾಗಿ ಅದರಲ್ಲಿರುವ ಲೈಸೋಜೈಮ್ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ. ಅದರಲ್ಲಿರುವ ನೈಟ್ರಿಕ್ ಆಕ್ಸೈಡ್ ಕೂಡ ಆಂಟಿಸೆಪ್ಟಿಕ್ ಗುಣವನ್ನು ಹೊಂದಿದ್ದು ಇವೆಲ್ಲವೂ ದಂತಕ್ಷಯ ಹಾಗೂ ದಂತಕುಳಿಗಳಿಂದ ರಕ್ಷಣೆ ನೀಡಿ ಅಗಿಯುವುದರಿಂದ ಉತ್ತಮ ದಂತಾರೋಗ್ಯ ನಮ್ಮದಾಗುತ್ತದೆ. ಅದಕ್ಕೆ ಮ್ಯಾಕ್ ಫಾಡಲ್ ಹೇಳಿದ್ದು ‘ನೀವು ನಿಮ್ಮ ಆಹಾರವನ್ನು ಅಗಿಯಿರಿ ನಿಮ್ಮ ಹೊಟ್ಟೆಯೊಳಗೆ ಹಲ್ಲಿಲ್ಲ’ ಎಂದು ( Chew your food, your stomach has no teeth).

* ಆಹಾರ ಅಗಿಯದೇ ಇದ್ದರೆ ದೊಡ್ಡ ತುಣುಕುಗಳನ್ನು ನುಂಗಿದಾಗ ದೊಡ್ಡ ಕರುಳಿನಲ್ಲಿ ಉಂಟಾಗುವ ಬ್ಯಾಕ್ಟೀರಿಯಾಗಳ ಹೆಚ್ಚಿದ ಚಟುವಟಿಕೆಯಿಂದ ಅಜೀರ್ಣ, ಗ್ಯಾಸ್ ಸಮಸ್ಯೆ, ಹೊಟ್ಟೆಯುಬ್ಬರ, ಬೇಧಿ, ಹೊಟ್ಟೆನೋವು, ಮಲಬದ್ಧತೆ ಮುಂತಾದ ಸಮಸೈಗಳು ಹೆಚ್ಚಾಗುತ್ತದೆ. ಮಲಬದ್ಧತೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ.

* ಆಹಾರವನ್ನು ನಿಧಾನವಾಗಿ ಅಗಿಯುವುದರಿಂದ ಹಂತ ಹಂತವಾಗಿ ಅನುಭವಿಸಿ ಸವಿಯನ್ನು ಸವಿಯಬಹುದು. ಅದನ್ನೇ ಮ್ಯಾಕ್ ಮಿಕಲ್ ಎನ್ನುವವರು ಹೇಳಿದ್ದು ‘ನಿಮ್ಮ ಆಹಾರವನ್ನು ಸವಿಯಿರಿ ಹೊಟ್ಟೆಯಲ್ಲಿ ರುಚಿಯ ಮೊಗ್ಗುಗಳಿಲ’ `Taste your food, your stomach has no taste buds’.

* ಇಂದು ಆಹಾರದ ಕಲಬೆರೆಕೆ ಎಲ್ಲೆಡೆ ಹೆಚ್ಚಿರುವುದರಿಂದ ಕಲಬೆರೆಕೆಯ ವಿಷವನ್ನು ಚೆನ್ನಾಗಿ ಅಗಿಯುವುದರಿಂದ ಗುರುತಿಸಬಹುದು.

* ಆಹಾರ ಜೀರ್ಣಕ್ರಿಯೆಗೆ ಅತ್ಯಗತ್ಯವಾದ ನೀರಿನ ಪ್ರಮಾಣವನ್ನು ಚೆನ್ನಾಗಿ ಅಗಿಯುವುದರ ಮೂಲಕ ಕಾಯ್ದುಕೊಳ್ಳಬಹುದು.

* ಅಗಿಯುವಿಕೆಯಿಂದ ಲಾಲಾರಸ ಹೆಚ್ಚುವುದರ ಜೊತೆಗೆ ಪ್ಯಾರೋಟಿಡ್ ಗ್ರಂಥಿಗಳಿಂದ ಉತ್ಪಾದನೆ ಯಾಗುವ ಪ್ಯಾರೋಟಿನ್ ಹಾರ್ಮೊನುಗಳ ಸ್ವಲ್ಪ ಭಾಗ ಬಾಯಿ ಮೂಲಕ ಲಿಂಪ್ ಸೆಲ್ಸ್‌ನಿಂದ ಹೀರಲ್ಪಟ್ಟು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ ಶರೀರವನ್ನು ಚೈತನ್ಯ ಶೀಲವಾಗಿ ಮಾಡುತ್ತದೆ. ಹೀಗೆ ವಯಸ್ಕರೂ ಅಗಿಯುವುದರಿಂದ ಯುವ ಚೈತನ್ಯ ಪಡೆಯಬಹುದು .ಅಲ್ಲದೆ ಸೊಂಕು ತಡೆಗಟ್ಟುವ ಬಿಳಿರಕ್ತಕಣಗಳು (ಟಿ-ಸೆಲ್ಸ್) ಹೆಚ್ಚಾಗುತ್ತದೆ. ಅಗಿಯುವುದರಿಂದ ಶರೀರ ಸ್ನೇಹಿ ಬ್ಯಾಕ್ಟೀರಿಯಾಗಳು ಹೆಚ್ಚಿರುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಂಡು ಆಟೋಇಮ್ಯುನ್ ಕಾಯಿಲೆ ಬರುವುದು ಕಡಿಮೆ ಆಗುತ್ತವೆ.

ಅಗಿಯುವುದು ಹೇಗೆ?
ಆಹಾರ ಅಗಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದಾಗ ಹೇಗೆ ಅಗಿಯುವುದೆಂದು ತಿಳಿಯಲೇಬೇಕಾಗಿದೆ.
* ಆಹಾರವನ್ನು ಒಮ್ಮೆಲೇ ಬಾಯಿಗೆ ತುರುಕಬೇಡಿ
* ಸಣ್ಣ ಸಣ್ಣ ತಂಡುಗಳಿಂದ ಪ್ರಾರಂಭಿಸಿ ನಂತರ ನಿಧಾನವಾಗಿ ಅಗಿದು ಅಗಿದು ತಿನ್ನಿರಿ
* ಮೆತ್ತಗಿನ ಆಹಾರವನ್ನು ಹಣ್ಣು ತರಕಾರಿಗಳನ್ನು 8 ರಿಂದ 10 ಬಾರಿ ಅಗೆಯಬೇಕು.
* ಗಟ್ಟಿ ಆಹಾರವಾದರೆ 25ರಿಂದ 30 ಬಾರಿ ಅಗಿಯಿರಿ.
* ನಿಧಾನವಾಗಿ ಅಗಿದು ಆಹಾರವನ್ನು ನೀರನ್ನಾಗಿ ಮಾಡಿ. ನಿಧಾನವಾಗಿ ನುಂಗಿ ಚೆನ್ನಾಗಿ ಅಗಿದು ನುಂಗಿದ ಮೇಲೆ ಇನ್ನೊಂದು ತುಂಡು ಆಹಾರವನ್ನು ಸೇವಿಸಿ. ಇಡೀ ಜೀರ್ಣಾಂಗವ್ಯೂಹದ ಕ್ರಿಯೆ ಸುಲಿಲಿತವಾಗಿ ನಡೆದು ಹೋಗುವುದು. ಅದಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿಯೂ ‘ಘನಾಹಾರವನ್ನು ಕುಡಿಯಿರಿ, ದ್ರವಾಹಾರವನ್ನು ತಿನ್ನಿರಿ’ (drink the solid and eat the liquid) ಎಂದು ಹೇಳಿದ ಹರ್ಬರ್ಟ್ ಫಿಲ್ಟನ್‌ನ ಮಾತನ್ನು ಸಮರ್ಥಿಸಿರುವುದು.
* ಹೀಗೆ ಅಗಿದು ಅಗಿದು ತಿಂದಾಗ ಶೇಕಡಾ 75ರಷ್ಟು ಜೀರ್ಣಕ್ರಿಯೆಯ ತೊಂದರೆಗಳು ಕಡಿಮೆಯಾಗುತ್ತದೆ.
* ಹೀಗೆ ಕನಿಷ್ಟ ಊಟ ತಿಂಡಿಗೆ 20–25 ನಿಮಿಷಗಳನ್ನಾದರೂ ಅಗಿಯಲು ವ್ಯಯ ಮಾಡಿದರೆ ಜೊತೆಗೆ ಟಿ.ವಿ ನೋಡುತ್ತಾ, ವೃತ್ತ ಪತ್ರಿಕೆ, ನಿಯತಕಾಲಿಕೆಗಳನ್ನು ಓದುತ್ತಾ, ನಡೆದಾಡುತ್ತಾ ತಿನ್ನದೇ, ತಿನ್ನುವ ಆಹಾರದ ಮೇಲೆ ಗಮನವಿಟ್ಟು, ನುಣ್ಣಗೆ ಅಗಿದು ನುಂಗಿದರೆ ನೀವು ಸಂಪೂರ್ಣ ಆರೋಗ್ಯವಾಗಿ, ಆನಂದಮಯವಾಗಿ ಇರಬಹುದಲ್ಲವೇ.

ಮೂಲ :ಪ್ರಜಾವಾಣಿ 

ಕೃಪೆ : ವಿಕಾಸ್ ಪೀಡಿಯ 

Share. Facebook Twitter Pinterest LinkedIn Tumblr Email WhatsApp
Previous Article*ಕೇಂದ್ರ ಸರ್ಕಾರದಿಂದ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಬಿಡುಗಡೆ : ಕೆಜಿ ಗೆ ರೂ.29*
Next Article *ಕೆಪಿ ಬಾಣೆ ಸರ್ಕಾರಿ ಶಾಲೆಯಲ್ಲಿ ನೂತನ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ : ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ  ಪ್ರಮುಖ : ಶಾಸಕ ಎ.ಎಸ್.ಪೊನ್ನಣ್ಣ*  

Related Posts

*ವಿಟಮಿನ್ ಬಿ12 : ಆರೋಗ್ಯಕ್ಕೆ ಮುಖ್ಯವಾದ ಪೋಷಕಾಂಶ : ಡಾ.ಕೆ.ಬಿ.ಸೂರ್ಯಕುಮಾರ್*

January 2, 2026

*ವಿಟಮಿನ್ ಡಿ3 : ಆರೋಗ್ಯಕ್ಕೆ ಅಗತ್ಯವಾದ ಸೂರ್ಯ ರಶ್ಮಿ ವಿಟಮಿನ್ : ಡಾ.ಬಿ.ಸೂರ್ಯ ಕುಮಾರ್*

December 11, 2025

*ಚಳಿಗಾಲದಲ್ಲಿ ದೇಹದ ತೂಕ ಇಳಿಸುವ ಸಿಂಪಲ್ ಟಿಪ್ಸ್*

December 9, 2025

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026

ಮಡಿಕೇರಿ,  NEWS DESK ಫೆ.10:-ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಹಲವು ಕಾಯಕ ಶರಣರು ವರ್ಣ ವ್ಯವಸ್ಥೆ,…

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

*ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*

February 10, 2026

*ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*

February 10, 2026

*ಫೆ.14 ರಂದು ಕೊಡವ ಭವನ ಉದ್ಘಾಟನೆ*

February 10, 2026

*ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*

February 10, 2026

*ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*

February 10, 2026

*104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*

February 10, 2026

*ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ*

February 10, 2026

*ಫೆ.15ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ : ಏಪ್ರಿಲ್ ನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.