Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ‘ಶಾರ್ಟ್ ರೇಂಜ್ ರೈಫಲ್ ಫೈರಿಂಗ್ ರೇಂಜ್’ ಉದ್ಘಾಟನೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ*
  • *ಬಾಳೆಲೆ-ನಲ್ಲೂರು : ಮೇ 5 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಉಳ್ಳಿಯಡ ಎಂ. ಪೂವಯ್ಯ ಅವರಿಗೆ ಸನ್ಮಾನ*
  • *ನಾಪೋಕ್ಲು : ಮಹಿಳೆಯರು ಸ್ವಾವಲಂಬಿಗಳಾಗಿ : ವನಜಾಕ್ಷಿ ರೇಣುಕೇಶ್*
  • *ವಿರಾಜಪೇಟೆಯಲ್ಲಿ ಸಂಭ್ರಮದಿಂದ ನಡೆದ ವಿಶು ಕಣಿ ಪೂಜೆ ಹಾಗೂ ಗ್ರಾಮೀಣ ಕ್ರೀಡಾಕೂಟ*
  • *ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ* 
  • *ಕೊಡಗು : ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ : ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಶ್ರಮಿಸಿ, ಜೊತೆಗೆ ಅಧಿಕಾರ ನಡೆಸಿ : ಗಣ್ಯರ ಅಭಿಮತ*
  • *ಗೋಣಿಕೊಪ್ಪ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಡಾ.ಮಂಡೆಪಂಡ ಆಶಿಕ್ ಚಂಗಪ್ಪ ಆಯ್ಕೆ* 
  • *ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗಿನಿಂದ ಯುವ ಆಟಗಾರರನ್ನು ಹೊರತಂದ ಲೆ.ಕರ್ನಲ್ ಅಯ್ಯುಡ ಗಣಪತಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗಿನಿಂದ ಯುವ ಆಟಗಾರರನ್ನು ಹೊರತಂದ ಲೆ.ಕರ್ನಲ್ ಅಯ್ಯುಡ ಗಣಪತಿ*

ಸೆಪ್ಟೆಂಬರ್ 9, 20243 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

NEWS DESK :: ಕೊಡಗಿನಲ್ಲಿ ಹುಟ್ಟಿದವರಿಗೆ 3 ಗುಣಗಳು ರಕ್ತಗತವಾಗಿಯೇ ಬಂದಿರುತ್ತವೆ. ಇದರಲ್ಲಿ ಮೊದಲನೆಯದು ಸೈನ್ಯ, ಎರಡನೆಯದು ಹಾಕಿ ಹಾಗೂ ಮೂರನೆಯದು ಮದ್ಯಪಾನ. ಇದರಲ್ಲಿ ಮದ್ಯಪಾನವನ್ನು ದೂರವಿಟ್ಟು ಉಳಿದ ಎರಡರ ಮೇಲೆ ನಮ್ಮ ಗಮನವಿದ್ದರೆ ನಾವು ಅದನ್ನು ಸಾಧಿಸಬಹುದು ಎಂದು ನುಡಿಯುತ್ತಾರೆ ಅಯ್ಯುಡ ಗಣಪತಿಯವರು. ದಿವಂಗತ ಅಯ್ಯುಡ ಈರಪ್ಪ ಹಾಗೂ ಗೌರಮ್ಮ ದಂಪತಿಯರ ಪುತ್ರನಾಗಿ ಗಣಪತಿಯವರು ಬೆಟ್ಟಗೇರಿಯಲ್ಲಿ ಜನಿಸುತ್ತಾರೆ. ಇವರ ತಂದೆ ಈರಪ್ಪ ಕೊಡಗಿನ ಪ್ರಥಮ ಮಾಸ್ಟರ್ ಟೈಲರ್ ಎಂದೇ ಪ್ರಸಿದ್ಧರಾಗಿದ್ದರು.
ಶಿಕ್ಷಣ ::  ಸೆಂಟ್ರಲ್ ಹೈ ಸ್ಕೂಲ್ ಮಡಿಕೇರಿಯಲ್ಲಿ ಶಿಕ್ಷಣ ಪಡೆದರು. ಓದುತ್ತಿರುವಾಗಲೇ ಕ್ರಿಕೆಟ್ ಹಾಗೂ ಅಥ್ಲೆಟಿಕ್ಸ್ ಚಾಂಪಿಯನ್ ಆಗಿದ್ದರು. 400 ಮೀಟರ್ ಓಟದಲ್ಲಿ ಚಾಂಪಿಯನ್ ಆಗಿದ್ದರು. ಇವರು ಕೊಡಗಿನ ಮಿಲ್ಕಾ ಸಿಂಗ್ ಎಂದೆ ಪ್ರಸಿದ್ಧಿ ಪಡೆದಿದ್ದರು ಅಂದಿನ ಭಾರತದ ಖ್ಯಾತ ತರಬೇತುದಾರರಾದ ಡಾ.ಕೋದಂಡ ಮುತ್ತಯ್ಯ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಶಹಭಾಶ್ ಎನಿಸಿಕೊಂಡರು. ಎನ್‌.ಸಿ.ಸಿ ಯ ಜೂನಿಯರ್ ಡಿವಿಜನ್ ಕೆಡೆಟ್ ಆಗಿ ದಿವಂಗತ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಂದ ಬೆಳ್ಳಿಯ ಪದಕ ಪಡೆದ ಕೀರ್ತಿ ಇವರದು.
ಸೈನ್ಯಕ್ಕೆ ಸೇರ್ಪಡೆ ::  ಗಪ್ಪು ಅವರು 1966 ರಲ್ಲಿ ಕೋರ್ ಆಫ್ ಸಿಗ್ನಲ್ಸ್ ಸೇರ್ಪಡೆಗೊಂಡರು. 1974ರಲ್ಲಿ ಡೆಹ್ರಾಡೂನ್ ನಲ್ಲಿರುವ I.M.A ಯ ಲ್ಯೂಟಿನೆಂಟ್ ಆಗಿ ಬಡ್ತಿ ಪಡೆದರು. ಅಲ್ಲಿ ಅತ್ಯುತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿ ಚಿನ್ನದ ಪದಕ ಪಡೆದುಕೊಂಡರು. ತದನಂತರ A.S.C ಗೆ ಸೇರಿದರು.
ಕೊಡಗಿನಿಂದ ಸೈನ್ಯಕ್ಕೆ ಯುವ ಆಟಗಾರರು ::  1976ರಲ್ಲಿ ಗಪ್ಪು ಅವರನ್ನು ಬೆಂಗಳೂರಿನಲ್ಲಿರುವ A.S.C ಗೆ ವರ್ಗಾವಣೆ ಮಾಡಲಾಗುತ್ತದೆ. ಇಲ್ಲಿ ಇವರೆಗೆ ಒಂದು ಉತ್ತಮ ಹಾಕಿ ತಂಡವನ್ನು ರಚಿಸುವಂತೆ ನಿರ್ದೇಶನ ನೀಡಲಾಗುತ್ತದೆ. ಈ ತಂಡವನ್ನು ಕಟ್ಟಲು ಗಪ್ಪು ಅವರು ಕೊಡಗಿಗೆ ಬಂದು 3 ಹಾಕಿ ಶಿಬಿರಗಳನ್ನು ಆಯೋಜಿಸಿ, 22 ಯುವ ಆಟಗಾರರನ್ನು ಜಾತಿ-ಮತ-ಭೇದವಿಲ್ಲದೆ A.S.C ಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಮಾರ್ಗದರ್ಶನದಲ್ಲೇ ಕಠಿಣ ತರಬೇತಿಯನ್ನು ಸಹ ನೀಡುತ್ತಾರೆ. ಈ ತಂಡವು ಕರ್ನಾಟಕ ರಾಜ್ಯ ಹಾಕಿ ಪಂದ್ಯಾಟದಲ್ಲಿ ಮೂರು ಡಿವಿಜನ್ ನಲ್ಲೂ ಚಾಂಪಿಯನ್ ಹಾಕಿ ಹೊರಹೊಮ್ಮುತ್ತಾರೆ. ನಂತರದ ದಿನಗಳಲ್ಲಿ ಸೂಪರ್ ಡಿವಿಜನ್ ನಲ್ಲೂ ಕೂಡ ತಮ್ಮ ಪ್ರಾಬಲ್ಯತೆಯನ್ನು ಮೆರೆಯುತ್ತಾರೆ. ಗಣಪತಿ ಅವರನ್ನು ಜಲಂಧರರಿಗೆ ನಂತರದ ದಿನಗಳಲ್ಲಿ ವಾಪಸು ಕರೆಸಿಕೊಳ್ಳಲಾಗುತ್ತದೆ. ಅಲ್ಲಿ ಒಲಂಪಿಯನ್ ಬಲ್ಬೀರ್ ಸಿಂಗ್ ಅವರು ತರಬೇತಿ ನೀಡುತ್ತಿದ್ದ ತಂಡವನ್ನು ಇವರ ಸುಪರ್ದಿಗೆ ವಹಿಸಲಾಗುತ್ತದೆ. ಇವರಿಂದ ತರಬೇತಿ ಪಡೆದ A.S.C ಜಲಂಧರ್ ತಂಡವು, 22 ಪ್ರಥಮ ಶ್ರೇಣಿಯ ಹಾಕಿ ಪಂದ್ಯಾಟಗಳನ್ನು ರಾಷ್ಟ್ರದಾದ್ಯಂತ ಗೆಲ್ಲುತ್ತವೆ. ಇದರಲ್ಲಿ ಹೆಸರುವಾಸಿಯಾದ ಬೇಟನ್ ಕಪ್, ಶಾಸ್ತ್ರಿ ಗೋಲ್ಡ್ ಕಪ್, ಸುರ್ಜಿತ್ ಸಿಂಗ್ ಪಂದ್ಯಾವಳಿ ಹಾಗೂ ಬಾಂಬೆ ಗೋಲ್ಡ್ ಕಪ್ ಅನ್ನು ಕೂಡ ಗೆಲ್ಲುತ್ತಾರೆ.
42 ಆಟಗಾರರನ್ನು ಕೊಡಗಿನಿಂದ ಜೊತೆಗೂಡಿಸಿದ ಕೀರ್ತಿ ::  1996 ರಲ್ಲಿ ಅವರ ಬೆಟಾಲಿಯನ್ ನ ಕಮಾಂಡಿಂಗ್ ಅಧಿಕಾರಿಯಾಗಿ ಹಲವಾರು ಅತ್ಯುತ್ತಮ ಹಾಕಿ ಆಟಗಾರರನ್ನು ತಯಾರು ಮಾಡಿದರು. ಅವರಲ್ಲಿ ವರ್ಲ್ಡ್ ಕಪರ್ ಕೂತಂಡ ಕೆ ಪೂಣಚ್ಚ, ಭಾರತ ತಂಡದ ತರಬೇತಿದಾರ ಬೊಳ್ಳೇಪಂಡ ಜೆ ಕಾರ್ಯಪ್ಪ, ಭಾರತದ ಆಯ್ಕೆ ಶಿಬಿರದ ಮೇಚಂಡ ಟಿ ಪೂವಯ್ಯ, ಸರ್ವಿಸಸ್ ಆಟಗಾರ ಅಂಜಪರುವಂಡ ದೀಪು ತಿಮ್ಮಯ್ಯ ಹಾಗೂ ಅದ್ಭುತ ಗೋಲ್ ಕೀಪರ್ ಚೌಕಿಮನೆ ತಿಮ್ಮಯ್ಯ. ಇವರಲ್ಲದೆ ಕೆ.ಜೆ.ಕುಟ್ಟಪ್ಪ, ಸಿ.ಪಿ.ಸುನಿಲ್, ಕೆ.ಟಿ.ಬೆಳ್ಳಿಯಪ್ಪ, ಸುರೇಶ್ ಬಾಬು, ಶ್ರೀನಿವಾಸ್, ಕೆ.ಬಿ.ಗಣಪತಿ, ಕೆ.ಎಂ.ಬೆಳ್ಳಿಯಪ್ಪ, ಪಿ.ಎಂ.ಸುನಿಲ್, ಬಿ.ಜಿ.ಸೋಮಯ್ಯ, ಸಿ.ಸಿ.ತಿಮಯ್ಯ, ಸಿ.ಅಯ್ಯಣ್ಣ, ಪಿ.ಅಚ್ಚಪ್ಪ, ಸಿ.ಯು.ಪೊನ್ನಪ್ಪ, ಎಂ.ಲಕ್ಷ್ಮಣ್ ಹಾಗೂ ಐ.ಪಿ.ಪೂವಯ್ಯ ಇಂತಹ ಸರ್ವಿಸಸ್, ಕಮಾಂಡ್ ಹಾಗೂ ಭಾರತದ ಆಯ್ಕೆ ಶಿಬಿರಗಳಿಗೆ ಆಡಿದಂತಹ ಅದ್ಭುತ ಆಟಗಾರರನ್ನು ಸೃಷ್ಟಿಸಿದ ಕೀರ್ತಿ ಇವರದು. ಹೀಗೆ ಕೊಡಗಿನಿಂದ 42 ಆಟಗಾರರನ್ನು ಜೊತೆಗೂಡಿಸಿ ಇವರ ಸುಪರ್ದಿಯಲ್ಲಿ ಆಡಿಸಿದ ಕೀರ್ತಿ ಇವರದು.
ಕುಟುಂಬವೇ ಕ್ರೀಡಾಪಟು ::  ಗಪ್ಪು ಅವರ ತಮ್ಮ ವೇಣು ಉತ್ತಪ್ಪ ಅವರು ಕೊಡಗಿನ ಮೊದಲ ಅಂತರಾಷ್ಟ್ರೀಯ ಹಾಕಿ ತೀರ್ಪುಗಾರ ಹಾಗೂ ಅವರ ಮಗ ರಾಬಿನ್ ಉತ್ತಪ್ಪ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ. ಇವರಗಳ ಯಶಸ್ಸನ್ನು ಗಣಪತಿಯವರು ಸಂಭ್ರಮಿಸಿದರು.
ಕೊಡವ ಸಂಪ್ರದಾಯ ::  ತಮ್ಮ ಊರಿನಲ್ಲಿ ಏನೇ ಕಷ್ಟ ಬಂದರೂ ಸಹಾಯ ಹಸ್ತ ನೀಡಲು ಪ್ರಥಮವಾಗಿ ಕೊಡವಕೇರಿಯನ್ನು ಸ್ಥಾಪಿಸಿದರು. ಈಗ ಈ ಕೇರಿಯು ಎಲ್ಲಾ ಕಡೆಯೂ ಪಸರಿಸಿದೆ.
ಅದ್ಭುತ ಮೈಕಟ್ಟು ::  ಗಣಪತಿಯವರು 6 ಅಡಿ ಎತ್ತರ, ಗಾಂಭೀರ್ಯವುಳ್ಳ ಮೀಸೆ ಹಾಗೂ ಬಹಳ ಸ್ನೇಹಮಯಿ ವ್ಯಕ್ತಿತ್ವ ಉಳ್ಳವರು. ಪ್ರಸ್ತುತ ಸುಂಟಿಕೊಪ್ಪದ ನಾಕೂರಿನಲ್ಲಿ ಇವರ ಪತ್ನಿ ಬೀನಾ(ತಾಮನೆ ಬಾಳೆಯಡ) ಅವರೊಂದಿಗೆ ವಿಶ್ರಾಂತಿ ಜೀವನವನ್ನು ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಮಗಳು ಪೂಜಾ ಸೈನ್ಯಾಧಿಕಾರಿಯನ್ನು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಗ ಧ್ಯಾನ್ ಸುಬ್ಬಯ್ಯ ಸಿಡ್ನಿಯಲ್ಲಿ ನೆಲೆಸಿದ್ದಾರೆ.
ಗಣಪತಿಯವರ ಅನಿಸಿಕೆ ::  ಹಾಕಿ ಆಟಗಾರರು ಹಾಕಿಯಿಂದ ಜೀವನವನ್ನು ರೂಪಿಸಿಕೊಂಡು ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ ಸೇವೆಯು ಹಾಕಿಗೂ ಹಾಗೂ ಕೊಡಗಿಗೂ ಅತ್ಯವಶ್ಯಕ. ಅವರು ತಮ್ಮ ಕೈಲಾದ ಸಹಾಯವನ್ನು ಯುವ ಪೀಳಿಗೆಗೆ ಮಾಡಲೇಬೇಕು. ಶಂಕರ್ ಸ್ವಾಮಿಯವರ ಗರಡಿಯಲ್ಲಿ ಪಳಗಿದ ಗಣಪತಿಯವರು, ಸೈನ್ಯದಿಂದ ನಿವೃತ್ತಿ ಪಡೆದ ನಂತರ ಮಡಿಕೇರಿಯಲ್ಲಿರುವ ಮ್ಯಾನ್ಸ್ ಕಾಂಪೌಂಡ್ ನಲ್ಲಿ ಕಿರಿಯ ಆಟಗಾರರಿಗೆ 9 ವರ್ಷಗಳ ಕಾಲ ಹಾಕಿ ತರಬೇತಿಯನ್ನು ನೀಡುತ್ತಾರೆ. ಇವರು ಒಳ್ಳೆಯ ಗಾಲ್ಫ್ ಆಟಗಾರರು ಕೂಡ ಹೌದು. ಕೇವಲ ಬೆರಳಣಿಕೆಯಷ್ಟು ವ್ಯಕ್ತಿಗಳು ಮಾತ್ರ ಕ್ರೀಡೆಯಲ್ಲಿ ಇವರಂತೆ ಕೊಡಗಿಗೆ ಗೌರವ ಹಾಗೂ ಹೆಸರು ತರಲು ಸಾಧ್ಯ. ಇವರಿಗೆ ಭಗವಂತನು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ.

ಕ್ರೀಡಾ ವಿಶ್ಲೇಷಣೆ :: ಚೆಪ್ಪುಡೀರ ಕಾರ್ಯಪ್ಪ  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ‘ಶಾರ್ಟ್ ರೇಂಜ್ ರೈಫಲ್ ಫೈರಿಂಗ್ ರೇಂಜ್’ ಉದ್ಘಾಟನೆ*

ಮೇ 5, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ*

ಮೇ 5, 2026

*ಬಾಳೆಲೆ-ನಲ್ಲೂರು : ಮೇ 5 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 4, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ*

ಮೇ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 5 NEWS DESK : ಮಡಿಕೇರಿ ನಗರದ ಹೊರವಲಯದ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ…

*ಬಾಳೆಲೆ-ನಲ್ಲೂರು : ಮೇ 5 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 4, 2026

*ಉಳ್ಳಿಯಡ ಎಂ. ಪೂವಯ್ಯ ಅವರಿಗೆ ಸನ್ಮಾನ*

ಮೇ 4, 2026

*ನಾಪೋಕ್ಲು : ಮಹಿಳೆಯರು ಸ್ವಾವಲಂಬಿಗಳಾಗಿ : ವನಜಾಕ್ಷಿ ರೇಣುಕೇಶ್*

ಮೇ 4, 2026

*ವಿರಾಜಪೇಟೆಯಲ್ಲಿ ಸಂಭ್ರಮದಿಂದ ನಡೆದ ವಿಶು ಕಣಿ ಪೂಜೆ ಹಾಗೂ ಗ್ರಾಮೀಣ ಕ್ರೀಡಾಕೂಟ*

ಮೇ 4, 2026

*ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ* 

ಮೇ 4, 2026

*ಕೊಡಗು : ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ : ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಶ್ರಮಿಸಿ, ಜೊತೆಗೆ ಅಧಿಕಾರ ನಡೆಸಿ : ಗಣ್ಯರ ಅಭಿಮತ*

ಮೇ 4, 2026

*ಗೋಣಿಕೊಪ್ಪ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಡಾ.ಮಂಡೆಪಂಡ ಆಶಿಕ್ ಚಂಗಪ್ಪ ಆಯ್ಕೆ* 

ಮೇ 4, 2026

*ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು*

ಮೇ 4, 2026

*ಗೋಣಿಕೊಪ್ಪಲುವಿನಲ್ಲಿ ನಗರ ಬಿಜೆಪಿ, ಶಕ್ತಿ ಕೇಂದ್ರದಿಂದ ಸಂಭ್ರಮಾಚರಣೆ*

ಮೇ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.