Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮದೆಮಹೇಶ್ವರ ವಿದ್ಯಾಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ*
  • ಸಂಸ್ಥೆಯ ಬೆಳವಣಿಗೆ ಸಿಬ್ಬಂದಿಗಳ ನಿಷ್ಠಾವಂತ ಸೇವೆ ಮುಖ್ಯ : ಎಂ.ಎಸ್.ಮುತ್ತಣ್ಣ
  • *ನಿಶಾನಿ ಮೇಲೇರಿ ಸಂಭ್ರಮಿಸಿದ ಚಿಣ್ಣರು*
  • *ಬಿಳಿಗೇರಿ ಶ್ರೀ ಅರ್ಧನಾರೀಶ್ವರ ದೇಗುಲದ ವಾರ್ಷಿಕ ಉತ್ಸವ : ಪೂಜಾ ಕಾರ್ಯಗಳೊಂದಿಗೆ ಉತ್ಸವಕ್ಕೆ ಚಾಲನೆ*
  • *ಕ್ಷೇತ್ರ ಪುನರ್ ವಿಂಗಡಣೆಯ ಹಿಂದೆ ಕೇಂದ್ರದ ದುರುದ್ದೇಶವಿದೆ : ಎಂ.ಲಕ್ಷ್ಮಣ್ ಟೀಕೆ*
  • *ಜಿಸಿಎಲ್ ಕ್ರಿಕೆಟ್ ಪಂದ್ಯಾವಳಿಯ 6ನೇ ಆವೃತ್ತಿ : ಬಿಡ್ಡಿಂಗ್ ಪ್ರಕ್ರಿಯೆ*
  • *ಮೇ 1 ಕ್ಕೆ ಬಂಟರ ಭವನಕ್ಕೆ ಶಂಕು ಸ್ಥಾಪನೆ : ರೂ.15 ಕೋಟಿಯ ಯೋಜನೆ*
  • *ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬ್ಯಾರಿ ಮೊದಲ ಸಾಹಿತ್ಯ ಸಮ್ಮೇಳನ : ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ : ಸ್ಪೀಕರ್ ಯು.ಟಿ.ಖಾದರ್*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.29 ರಂದು ನಡೆಯುವ ಪುರುಷರ ಹಾಗೂ ಮಹಿಳೆಯರ ಸೆಮಿಫೈನಲ್ ಪಂದ್ಯಗಳು*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.28 ರಂದು ನಡೆದ ಪುರುಷರ ಕ್ವಾರ್ಟರ್ ಫೈನಲ್ಸ್ ನಲ್ಲಿ ಗೆಲುವು ಸಾಧಿಸಿದ ತಂಡಗಳು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ನಾಪೋಕ್ಲು : ಕುಂಡ್ಯೋಳಂಡ ಕುಟುಂಬದ ಸಾಧನೆ ಶ್ಲಾಘನೀಯ : ಲೆ.ಕ. ಸುಬ್ರಮಣಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ನಾಪೋಕ್ಲು : ಕುಂಡ್ಯೋಳಂಡ ಕುಟುಂಬದ ಸಾಧನೆ ಶ್ಲಾಘನೀಯ : ಲೆ.ಕ. ಸುಬ್ರಮಣಿ*

ಮೇ 16, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 16 NEWS DESK : 24ನೇ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸುವುದರ ಮೂಲಕ ಕುಂಡ್ಯೋಳಂಡ ಕುಟುಂಬಸ್ಥರು ಗಮನಾರ್ಹ ಸಾಧನೆ ಮಾಡಿದ್ದಾರೆ. ದೇಶದ ಯಾವುದೇ ಮೂಲೆಗೆ ತೆರಳಿದರೂ ಹಾಕಿ ಉತ್ಸವದ ಮಾತು ಕೇಳಿ ಬರುತ್ತಿದೆ. ಹಾಕಿ ಉತ್ಸವದ ಮೂಲಕ ಗಿನ್ನಿಸ್ ದಾಖಲೆಗೆ ಸೇರ್ಪಡೆ ಮಾಡಲು ಕಾರಣಕರ್ತರಾದ ಕುಂಡ್ಯೋಳಂಡ ಕುಟುಂಬಸ್ಥರ ಕಾರ್ಯ ಶ್ಲಾಘನೀಯ ಎಂದು ಒಲಂಪಿಯನ್, ಲೆಫ್ಟಿನಲ್ ಕರ್ನಲ್ ಬಾಳೆಯಡ ಸುಬ್ರಮಣಿ ಹೇಳಿದರು.
ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಕುಟುಂಬಸ್ಥರ ಐನ್ ಮನೆಯಲ್ಲಿ ಆಯೋಜಿಸಲಾಗಿದ್ದ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಗೆ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕುಂಡ್ಯೋಳಂಡ ಕುಟುಂಬ ಸಣ್ಣ ಕುಟುಂಬವಾದರೂ ಅವರ ಸಾಧನೆ ದೊಡ್ಡದು. ದೇಶ ವಿದೇಶಗಳಲ್ಲಿ ಕೌಟುಂಬಿಕ ಹಾಕಿಯ ಖ್ಯಾತಿ ಹಬ್ಬಿರುವುದು ಶ್ಲಾಘನೀಯ ಎಂದರು.
ರಾಷ್ಟ್ರೀಯ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳನ್ನು ಜೊತೆಗೂಡಿಸಿ ಹಾಕಿ ಕೂರ್ಗ್, ಹಾಕಿ ಕರ್ನಾಟಕ, ಹಾಕಿ ಇಂಡಿಯಾ ಸೇರಿದಂತೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವಂತಹ ಕಾರ್ಯ ಮಾಡಿದ ಕುಂಡ್ಯೋಳಂಡ ಕುಟುಂಬಸ್ಥರ ಕಾರ್ಯ ಶ್ಲಾಘನೀಯ. ಇದು ಮುಂದೆ ಹಾಕಿ ಉತ್ಸವ ಆಯೋಜಿಸಲಿರುವ ಕುಟುಂಬಗಳಿಗೂ ಮಾರ್ಗದರ್ಶಿ ಎಂದರು.
ಕೊಡಗಿನ ಹಾಕಿಗೆ ಕುಟುಂಬದ ಕೊಡುಗೆ ಬಹಳಷ್ಟು ಸಂತಸ ತಂದಿದೆ. ಹಲವು ರಾತ್ರಿಗಳು ನಿದ್ರೆಗೆಟ್ಟು ಶ್ರಮಿಸಿದ ಈ ಕುಟುಂಬಕ್ಕೆ ಹಾಕಿ ಪಟುಗಳು ಐನ್ ಮನೆಗೆ ಬಂದು ಗೌರವವನ್ನು ಸಲ್ಲಿಸಿದ್ದಾರೆ. ಕುಂಡ್ಯೋಳಂಡ ಕುಟುಂಬವು ಕೊಡಗಿನ ಹಾಕಿಗೆ ದಾರಿದೀಪವಾಗಿದ್ದು, ಇತರ ಕುಟುಂಬಗಳು ಇದೇ ರೀತಿ ಕೈಹಿಡಿದು ಕೊಡಗಿನ ಹಾಕಿಯನ್ನು ಮುನ್ನಡೆಸಲಿ ಎಂದರು.
ಹಾಕಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ ಮಾತನಾಡಿ, ಹಾಕಿ ಉತ್ಸವ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದದ್ದು ಇಡೀ ಕೊಡವ ಜನಾಂಗಕ್ಕೆ ಸಿಕ್ಕ ಗೌರವ. ಇದು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ಹಾಕಿ ಉತ್ಸವದ ಸಂಚಾಲಕ ದಿನೇಶ್ ಮಾತನಾಡಿ, ಉತ್ಸವದ ಯಶಸ್ವಿಗೆ ಸಹಕರಿಸಿದ ಎಲ್ಲರನ್ನು ನೆನಪಿಸಿಕೊಂಡ ಅವರು ಅಭಿನಂದಿಸಿದರು.
ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಿ ಇತ್ತೀಚೆಗೆ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಂಡ್ಯೋಳಂಡ ಕುಟುಂಬದವರಿಗೆ ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಹಾಕಿ ಆಟಗಾರರು ಶುಭ ಹಾರೈಸಿ, ಕುಂಡ್ಯೋಳಂಡ ಕುಟುಂಬದ ಐನ್ ಮನೆಯಲ್ಲಿ ಕುಟುಂಬದವರಿಗೆ ಗೌರವವನ್ನು ಸಲ್ಲಿಸಿದರು. ಕುಟುಂಬದ ಪಟ್ಟೇದಾರ ಸುಬ್ಬಯ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭ ವಿಶ್ವಕಪ್ ಆಟಗಾರ ಕೂತಂಡ ಪೂಣಚ್ಚ, ಅಂತರಾಷ್ಟ್ರೀಯ ಹಾಕಿ ಆಟಗಾರ ಚಂದಪಂಡ ಪ್ರಿನ್ಸ್ ಕರುಂಬಯ್ಯ, ಅಂತರಾಷ್ಟ್ರೀಯ ಹಾಕಿ ಆಟಗಾರರಾದ ಕರಿನೆರವಂಡ ಸೋಮಣ್ಣ, ಕುಲ್ಲೆಟೀರ ಉತ್ತಯ್ಯ, ರಾಷ್ಟ್ರೀಯಹಾಕಿ ಆಟಗಾರರಾದ ಅರೆಯಡ ರವಿ ಅಯ್ಯಪ್ಪ, ಕರ್ತಮಾಡ ರಿಕ್ಕಿ ಗಣಪತಿ, ಕನ್ನಂಬೀರ ಪ್ರವೀಣ್, ಅಂಜಪರವಂಡ ಕಾರ್ಯಪ್ಪ, ಅಂತರಾಷ್ಟ್ರೀಯ ತರಬೇತಿದಾರ ಬೊಳ್ಳೇಪಂಡ ಜೆ.ಕಾರ್ಯಪ್ಪ ಪಾಲ್ಗೊಂಡು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶುಭ ಕೋರಿದರು.
ಹಾಕಿ ಉತ್ಸವ ನಡೆಸಿ ಗಿನ್ನಿಸ್ ದಾಖಲೆ ನಿರ್ಮಿಸಿದ ಕುಟುಂಬದ ಪರವಾಗಿ ಪಟ್ಟೆದಾರ ಸುಬ್ಬಯ್ಯ ಅವರಿಗೆ ಹಾಕಿಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ವಿಶೇಷ ಶೋ ಹಾಕಿ ಸ್ಟಿಕ್ ನೀಡಿ ಶಾಲು ಹೊದೆಸಿ ಫಲ ತಾಂಬೂಲ ನೀಡಿ ಗೌರವ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಹೇಮಾ ಪೂವಣ್ಣ ಪ್ರಾರ್ಥಿಸಿದರು, ರಮೇಶ್ ಮುದ್ದಯ್ಯ ಸ್ವಾಗತಿಸಿದರು. ವಿಶು ಪೂವಯ್ಯ ಅತಿಥಿಗಳನ್ನು ಪರಿಚಯಿಸಿದರು. ದಿನೇಶ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಮುತ್ತಪ್ಪ ವಂದಿಸಿದರು.

ವರದಿ : ದುಗ್ಗಳ ಸದಾನಂದ  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮದೆಮಹೇಶ್ವರ ವಿದ್ಯಾಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ*

ಏಪ್ರಿಲ್ 28, 2026

ಸಂಸ್ಥೆಯ ಬೆಳವಣಿಗೆ ಸಿಬ್ಬಂದಿಗಳ ನಿಷ್ಠಾವಂತ ಸೇವೆ ಮುಖ್ಯ : ಎಂ.ಎಸ್.ಮುತ್ತಣ್ಣ

ಏಪ್ರಿಲ್ 28, 2026

*ನಿಶಾನಿ ಮೇಲೇರಿ ಸಂಭ್ರಮಿಸಿದ ಚಿಣ್ಣರು*

ಏಪ್ರಿಲ್ 28, 2026

ಸಂಸ್ಥೆಯ ಬೆಳವಣಿಗೆ ಸಿಬ್ಬಂದಿಗಳ ನಿಷ್ಠಾವಂತ ಸೇವೆ ಮುಖ್ಯ : ಎಂ.ಎಸ್.ಮುತ್ತಣ್ಣ

ಏಪ್ರಿಲ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.28 NEWS DESK : ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಾ ಮುಂದಕ್ಕೆ ಸಾಗಲು ಅಲ್ಲಿನ ಸಿಬ್ಬಂದಿಗಳ ನಿಷ್ಠಾವಂತ…

*ನಿಶಾನಿ ಮೇಲೇರಿ ಸಂಭ್ರಮಿಸಿದ ಚಿಣ್ಣರು*

ಏಪ್ರಿಲ್ 28, 2026

*ಬಿಳಿಗೇರಿ ಶ್ರೀ ಅರ್ಧನಾರೀಶ್ವರ ದೇಗುಲದ ವಾರ್ಷಿಕ ಉತ್ಸವ : ಪೂಜಾ ಕಾರ್ಯಗಳೊಂದಿಗೆ ಉತ್ಸವಕ್ಕೆ ಚಾಲನೆ*

ಏಪ್ರಿಲ್ 28, 2026

*ಕ್ಷೇತ್ರ ಪುನರ್ ವಿಂಗಡಣೆಯ ಹಿಂದೆ ಕೇಂದ್ರದ ದುರುದ್ದೇಶವಿದೆ : ಎಂ.ಲಕ್ಷ್ಮಣ್ ಟೀಕೆ*

ಏಪ್ರಿಲ್ 28, 2026

*ಜಿಸಿಎಲ್ ಕ್ರಿಕೆಟ್ ಪಂದ್ಯಾವಳಿಯ 6ನೇ ಆವೃತ್ತಿ : ಬಿಡ್ಡಿಂಗ್ ಪ್ರಕ್ರಿಯೆ*

ಏಪ್ರಿಲ್ 28, 2026

*ಮೇ 1 ಕ್ಕೆ ಬಂಟರ ಭವನಕ್ಕೆ ಶಂಕು ಸ್ಥಾಪನೆ : ರೂ.15 ಕೋಟಿಯ ಯೋಜನೆ*

ಏಪ್ರಿಲ್ 28, 2026

*ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬ್ಯಾರಿ ಮೊದಲ ಸಾಹಿತ್ಯ ಸಮ್ಮೇಳನ : ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ : ಸ್ಪೀಕರ್ ಯು.ಟಿ.ಖಾದರ್*

ಏಪ್ರಿಲ್ 28, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.29 ರಂದು ನಡೆಯುವ ಪುರುಷರ ಹಾಗೂ ಮಹಿಳೆಯರ ಸೆಮಿಫೈನಲ್ ಪಂದ್ಯಗಳು*

ಏಪ್ರಿಲ್ 28, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.28 ರಂದು ನಡೆದ ಪುರುಷರ ಕ್ವಾರ್ಟರ್ ಫೈನಲ್ಸ್ ನಲ್ಲಿ ಗೆಲುವು ಸಾಧಿಸಿದ ತಂಡಗಳು*

ಏಪ್ರಿಲ್ 28, 2026

*ಕಾಡಾನೆ ದಾಳಿಗೆ ಹಸು ಬಲಿ*

ಏಪ್ರಿಲ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.